ಬಾಬ್ರಿ ಮಸೀದಿ, ಇತಿಹಾಸ ಹಾಗೂ ರಾಷ್ಟ್ರೀಯ ಭಾವೈಕ್ಯತೆ
ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು!
ಈ ನಡುವೆ ಒಂದು ತಲೆಮಾರು ಸಂದಿದೆ. ಇಂದಿನ ಪೀಳಿಗೆಗೆ ಈ ವಿಷಯದಲ್ಲಿ ಅಷ್ಟೇನೂ ಆಸಕ್ತಿಯಿಲ್ಲದಿರಬಹುದು. ಇರಲೂ ಬೇಕಾಗಿಲ್ಲ ಎಂಬುದು ನನ್ನ ಅನಿಸಿಕೆ. ಎರಡು ದಶಕಗಳ ಹಿಂದೆ ದೇಶದಲ್ಲಿ ತಾಂಡವವಾಡುತ್ತಿದ್ದ ನಿರುದ್ಯೋಗ, ವಸತಿ, ಶಿಕ್ಷಣ ಮೊದಲಾದ ಸಮಸ್ಯೆಗಳು ಇಂದು ತಕ್ಕಮಟ್ಟಿಗೆ ಇಳಿಮುಖವಾಗಿವೆ (ಕನಿಷ್ಟ ಪಟ್ಟಣಗಳಲ್ಲಿ). ಮಾಹಿತಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ ಇಂದಿನ ಯುವಜನತೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವಕಾಶಗಳು ಹೆಚ್ಚಾಗಿರುವುದರಿಂದ ಕೆಲವು ಭಾವನಾತ್ಮಕ ವಿಷಯಗಳಿಗೆ "ಅಗತ್ಯ"ಕ್ಕಿಂತಲೂ ಹೆಚ್ಚು ಸ್ಪಂದಿಸಲು ಸಮಯವಿಲ್ಲ. ಇದರಲ್ಲಿ ನನಗೆ ತಪ್ಪೇನೂ ಕಂಡುಬರುವುದಿಲ್ಲ. ಈದನ್ನು ಅವರು ಮುಕ್ತವಾಗಿ ಹೇಳಿಕೊಂಡರೆ ಅವರಿಗೆ ಜೀವನದಲ್ಲಿ ಅನುಭವ ಸಾಲದೆಂದೋ ಅಥವಾ ಇತಿಹಾಸವನ್ನು ಕಡ್ಡಾಯವಾಗಿ ಓದಬೇಕೆಂದೋ ಉಪದೇಶಗಳು ಢಾಳಾಗಿ ಸಿಗುತ್ತವೆ!
- Read more about ಬಾಬ್ರಿ ಮಸೀದಿ, ಇತಿಹಾಸ ಹಾಗೂ ರಾಷ್ಟ್ರೀಯ ಭಾವೈಕ್ಯತೆ
- 1 comment
- Log in or register to post comments