ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಾಬ್ರಿ ಮಸೀದಿ, ಇತಿಹಾಸ ಹಾಗೂ ರಾಷ್ಟ್ರೀಯ ಭಾವೈಕ್ಯತೆ

ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು!


 


ಈ ನಡುವೆ ಒಂದು ತಲೆಮಾರು ಸಂದಿದೆ. ಇಂದಿನ ಪೀಳಿಗೆಗೆ ಈ ವಿಷಯದಲ್ಲಿ ಅಷ್ಟೇನೂ ಆಸಕ್ತಿಯಿಲ್ಲದಿರಬಹುದು. ಇರಲೂ ಬೇಕಾಗಿಲ್ಲ ಎಂಬುದು ನನ್ನ ಅನಿಸಿಕೆ. ಎರಡು ದಶಕಗಳ ಹಿಂದೆ ದೇಶದಲ್ಲಿ ತಾಂಡವವಾಡುತ್ತಿದ್ದ ನಿರುದ್ಯೋಗ, ವಸತಿ, ಶಿಕ್ಷಣ ಮೊದಲಾದ ಸಮಸ್ಯೆಗಳು ಇಂದು ತಕ್ಕಮಟ್ಟಿಗೆ ಇಳಿಮುಖವಾಗಿವೆ (ಕನಿಷ್ಟ ಪಟ್ಟಣಗಳಲ್ಲಿ). ಮಾಹಿತಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ ಇಂದಿನ ಯುವಜನತೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವಕಾಶಗಳು ಹೆಚ್ಚಾಗಿರುವುದರಿಂದ ಕೆಲವು ಭಾವನಾತ್ಮಕ ವಿಷಯಗಳಿಗೆ "ಅಗತ್ಯ"ಕ್ಕಿಂತಲೂ ಹೆಚ್ಚು ಸ್ಪಂದಿಸಲು ಸಮಯವಿಲ್ಲ. ಇದರಲ್ಲಿ ನನಗೆ ತಪ್ಪೇನೂ ಕಂಡುಬರುವುದಿಲ್ಲ. ಈದನ್ನು ಅವರು ಮುಕ್ತವಾಗಿ ಹೇಳಿಕೊಂಡರೆ ಅವರಿಗೆ ಜೀವನದಲ್ಲಿ ಅನುಭವ ಸಾಲದೆಂದೋ ಅಥವಾ ಇತಿಹಾಸವನ್ನು ಕಡ್ಡಾಯವಾಗಿ ಓದಬೇಕೆಂದೋ ಉಪದೇಶಗಳು ಢಾಳಾಗಿ ಸಿಗುತ್ತವೆ!

ವಿಚಾರ-ವಿ(ಮಾ)ನಿಮಯ ಭಾಗ - ೨

ಭಾಗ - ೨


ಯಥಾಪ್ರಕಾರ ಇಂದೂ ವಾಕಿಂಗ್ ಹೊರಟರು ರಾಯರು.


ನಮಸ್ಕಾರ ರಾಮರಾಯರಿಗೆ,
ಗುಡ್ ಮಾರ್ನಿಂಗ್ ಎಂದರು ಶೆಟ್ಟರು


ಎಲ್ಲಿ ನಮ್ಮ ದೊರೆಸಾಮಿಗಳು.


ಎಲ್ಲೋ ಚಳಯಾಗಿ ಬೆಚ್ಚಗೆ ಇನ್ನೂ ಮಲಗಿರಬೇಕು.  ವಯಸ್ಸಾಯ್ತಲ್ಲ ಎಂದರು ರಾಮರಾಯರು.


ರೀ ಸುಮ್ನೆ ಏನೇನೋ ಹೇಳ್ಬೇಡಿ, ಅವರಿನ್ನು ನಿಮ್ಮಷ್ಟು ಮುದುಕರಾಗಿಲ್ಲ , ೬೮ ಅಷ್ಟೆ.  ನಿನ್ನೆ ಸಂಜೆ ಸಿಕ್ಕಿದ್ರು.  ಯಾಕೋ ಸ್ವಲ್ಪ ಜ್ವರ ಬಂದ ಹಾಗಿದೆ.
ಆಸ್ಪತ್ರೆಗೆ ಹೋಗಬೇಕು ಅಂತಿದ್ರು.   


ಪಾಪ ಇನ್ನೇನು, ಇಬ್ಬರು ಮಕ್ಕಳು,  ಇದೇ ಊರಲ್ಲಿ ಇದ್ರೊ,  ದೊರೆಸಾಮಿಗಳು ಆಸ್ತಿ ಅಂತ ಸ್ವಂತ ಮನೆ ಮಾಡಿಲ್ಲ ಅಂತ ಬೇರೆ ಹೋದರು.
ಈಗ ಪೆನಷನ್, LIC ಹಣ ಇಟ್ಕೊಂಡು ಖಾಯಿಲೆ  ಹೆಂಡತಿನೂ ನೋಡಿಕೊಂಡಿದ್ದಾರೆ. ಎಂದರು ರಾಮರಾಯರು.


ಅಲ್ಲಾರಿ ಸ್ವಂತ ಮನೆಗೂ, ಇವರ್ ಜ್ವರಕ್ಕೊ ಎನ್ರೀ ಸಂಭಂದ.  ಆಂದರು ಶೆಟ್ಟರು.

ನಾಯಿಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯ

  ಇದೇ ದಿನಾಂಕ ಐದರಂದು ಮಂಗಳವಾರ ಅಶೋಕ್ ಖೇಣಿಯ ಜನ್ಮದಿನಾಚರಣೆಯ ಅಂಗವಾಗಿ ದಾವಣಗೆರೆಯಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ’ಭಾರತ ವಾಹನ ಚಾಲಕರ ಟ್ರೇಡ್ ಯೂನಿಯನ್’ ಮತ್ತು ’ವಿಶ್ವ ಕನ್ನಡಿಗರ ಕಣ್ಮಣಿ ಅಶೋಕ್ ಖೇಣಿ ಸೇನಾ’ ಎಂಬೆರಡು ಸಂಘಟನೆಗಳು ಈ ಕುರಿತು ಪತ್ರಿಕಾ ಜಾಹಿರಾತನ್ನು ನೀಡಿವೆ. ತಾನು ವಿಶ್ವ ಕನ್ನಡಿಗರ ಕಣ್ಮಣಿಯೆಂದು ಸ್ವಯಂ ಖೇಣಿಯೇ ನಿರ್ಧರಿಸಿಕೊಂಡಂತಿದೆ!

ಮೌನ ರಾಗ

ಮೌನ ರಾಗ

ಹಾಗೆ ಸುಮ್ಮನೆ ಗೀಚಿದ ಗೀತೆಗಳು ಹಲವು
ಹೇಳಲಾಗದೆ ಉಳಿದ ಭಾವ ಹಲವು
೬ ಸವಸ್ತರ  ಕಳೆದವು,ಮಾತು ನನ್ನಲೇ ಉಳಿದಿತ್ತು
ಅಂದು ಪ್ರಸ್ತಾವಿಸ ಬೇಕೆಂದೇ ಫೋನಾಯಿಸಲು
ಎನ್ಗಜೆ ದ್ವನಿ ಯೊಂದೇ ಉತ್ತರಿಸಿತು


ರಾತ್ರಿ ನಿದ್ದೆ  ಬಹು ಹೊತ್ತು ಬಾರದಿರಲು
"ಇಂದು ಬೇಡ ಈಗ ತಡ ವಾಗಿಹುದು" ಮನದೊಳಗೆ
ಕನಸ ದಾರಿ ಹಿಡಿಯಲು ಹೊದ್ದು ಕೊಂಡೆ ಅದೇ ಹೊದಿಕೆ
ನನ್ನ ತಳಮಳಕ್ಕೆ ದಿಂಬಿನ ಸಾಂತ್ವನವು ಇತ್ತು


ಆರಕ್ಕೆ ಎದ್ದೆ, ಫೋನಾಯಿಸಿದೆ
ನಿದ್ದೆ ಕಣ್ಣಲ್ಲಿ ಗುನುಗಿದಳು ಆ ನನ್ನ ನಲ್ಲೆ
ಸಂಜೆ ಮಾತಾಡುವ ಎನ್ನುತ್ತಾ ಫೋನ್ ಇಟ್ಟಳು
ಮಾತು ಹಂಗೆ ಉಳಿದಿತ್ತು ನನ್ನೊಳಗೆ

ಯೋಚಿಸಲೊ೦ದಿಷ್ಟು... ೧೧

೧. “ಕ್ರಾ೦ತಿ“ ಎ೦ದರೆ “ಪ್ರಗತಿ“ . “ಪ್ರಗತಿ“ ಎ೦ದರೆ “ಭವಿಷ್ಯ“.


೨. ರಾಜರು “ನೀತಿಗಳು“ ಎನ್ನುತ್ತಾ ಸರ್ವಾಧಿಕಾರಿಗಳಾದರೆ, ಪ್ರಜೆಗಳು “ತತ್ವಗಳು“ ಎನ್ನುತ್ತಾ ಕ್ರಾ೦ತಿ ಮಾಡುತ್ತಾರೆ!


೩. ಒಳ್ಳೆಯ ಗುಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದರೆ ಅದೇ ಕೆಟ್ಟ ಗುಣವಾಗುತ್ತದೆ!


೪. ಪ್ರತಿಯೊ೦ದು ಸಮೂಹವೂ ತಾನು ಆಚರಿಸಲಾಗದ ಆದರ್ಶಗಳನ್ನೇ, ಅನ್ಯರಿಗೆ ಆನುಸರಿಸಲು ಪ್ರಚಾರ ಮಾಡುತ್ತವೆ!


೫. ವಿವೇಕಿಗಳು ಗಾದೆಗಳನ್ನು ಸೃಷ್ಟಿಸಿದರೆ,ಅವಿವೇಕಿಗಳು ಅವನ್ನು ಪುನರುಚ್ಚರಿಸುತ್ತಾರೆ!


೬. ಕಲಿಯುವ ಅಪೇಕ್ಷೆ ಇದ್ದಲ್ಲಿ,ವಾದ ವಿವಾದಗಳು,ಬರವಣಿಗೆ ಹಾಗೂ ಭಿನ್ನಾಭಿಪ್ರಾಯಗಳು ಸಹಜವೇ! ಒಳ್ಳೆಯವರ ಅಭಿಪ್ರಾಯ ವೆ೦ದರೆ ಅದು ಸೃಷ್ಟಿಯಾಗುತ್ತಿರುವ “ತಿಳುವಳಿಕೆ“ ಎ೦ದರ್ಥ!


೭. ಅ೦ತಸ್ತು ಮತ್ತು ಜಾತಿ ಯಾವುದೇ ಆಗಿರಲಿ, ಉತ್ತಮ ಸ೦ಸ್ಕಾರವು ಜಾತಿಯಿ೦ದ ಬರದೆ,ಮಗುವಿದ್ದಾಗಲೇ ಅ೦ತಹ ವಾತಾ ವರಣವನ್ನು ಸೃಷ್ಟಿಸುವುದರಿ೦ದ ಬರುತ್ತದೆ.


೮. ಅರ್ಧ ಕಲಿತವನಿಗೆ ಅಬ್ಬರ ಹೆಚ್ಚು!

ಕಾಸ್ಟ್ ಅವೆ (CAST AWAY)

ಕಾಸ್ಟ್ ಅವೆ (CAST AWAY)...೯೦ರ‍ ದಶಕದಲ್ಲಿ ತೆರೆಕಂಡ ಈ ಚಿತ್ರ ನನಗೆ ಬಹಳ ಅಚ್ಚುಮೆಚ್ಚು...


ನಾನು ಆಂಗ್ಲ ಚಿತ್ರಗಳನ್ನು ನೋಡುತ್ತಿದ್ದದ್ದು ಬಹಳ ವಿರಳ. ಒಮ್ಮೆ ರವಿ ಬೆಳಗೆರೆ ಯವರ ಹಾಯ್ ಬೆಂಗಳೂರಿನ


ಖಾಸ್ ಬಾತ್ ಅಂಕಣದಲ್ಲಿ ರವಿಯವರು ಈ ಚಿತ್ರದ ಬಗ್ಗೆ ವಿಶ್ಲೇಷಿಸಿದ್ದರು..ಅದನ್ನು ಓದಿದ ಮೇಲೆ ಕುತೂಹಲದಿಂದ


ಈ ಚಿತ್ರದ ಡಿ.ವಿ.ಡಿ ಯನ್ನು ತಂದು ನೋಡಿದೆ.


 


ಚಿತ್ರದಲ್ಲಿ ನಾಯಕ "ಫೆಡೆಕ್ಸ್" ಕೊರಿಯರ್ ಕಂಪನಿಯಲ್ಲಿ ನೌಕರಿಯಲ್ಲಿರುತ್ತಾನೆ. ಒಮ್ಮೆ ಸರಕು ಸಾಗಣೆ ವಿಮಾನದಲ್ಲಿ


ಹೊರಟಿದ್ದಾಗ ವಿಮಾನ್ ದುರಂತಕ್ಕೀಡಾಗಿ ವಿಮಾನ ಸಮುದ್ರದಲ್ಲಿ ಬಿದ್ದು ಹೋಗುತ್ತದೆ. ನಾಯಕನ ಹೊರತಾಗಿ ಬೇರೆ


ಯಾರು ಉಳಿಯುವುದಿಲ್ಲ.. ನಾಯಕ ಹಾಗು ಹೀಗು ಮಾಡಿ ಒಂದು ದ್ವೀಪಕ್ಕೆ ಬಂದು ಬೀಳುತ್ತಾನೆ. ಆ ದ್ವೀಪವೋ


ನಿರ್ಮಾನುಷವಾದ ದ್ವೀಪ.


 

ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) - ೨

ಭಗತ್ ಸಿ೦ಗ್: ಪ೦ಡಿತ್ ಇದೇನಾಗಿಹೋಯ್ತು ಲಾಲಾ ಲಜಪರ್ ರಾಯ್ ರ೦ಥ ಹಿರಿಯರ ಕೊಲೆಯನ್ನು ಮಹಾತ್ಮರು ತೀವ್ರಾವಾಗಿ ಖ೦ಡಿಸಲೇ ಇಲ್ಲ. ಬದಲಾಗಿ ಕೇವಲ ಸಾಮಾನ್ಯ ವಿಷಾದವೊ೦ದನ್ನು ಸೂಚಿಸಿ ತಮ್ಮ ಮೌನಕ್ಕೆ ಶರಣಾಗಿಬಿಟ್ಟರಲ್ಲ. ಸ್ವತ೦ತ್ರ್ಯಕ್ಕಾಗಿ ಅವರಿಗಿ೦ತ ಲಾಲಾ ಹೆಚ್ಚು ಹೋರಾಡಿದ್ದರಲ್ಲವೇ. ಅವರಿಗೆ ಸಿಗಬೇಕಾದ ಮರ್ಯಾದೆಯೇ ಸಿಗಲಿಲ್ಲ. ಇದೆ೦ಥಾ ಅನ್ಯಾಯ. ಇದಕ್ಕೆ ಸೇಡು ತೀರಿಸಿಕೊಳ್ಳಲೇ ಬೇಕು.


ಅಜಾದ್ : ನಾನೂ ಅದರ ಬಗ್ಗೆಯೇ ಯೋಚಿಸುತ್ತಿರುವೆ. ಆದರೆ ಮಾಹಾತ್ಮರಿಗೆ ಯಾವ ಮಾತನ್ನೂ ಹೇಳುವುದೂ ಬೇಡ. ಅವರು ನಮ್ಮ ಪಾಲಿಗೆ ಇದ್ದು ಇಲ್ಲದ೦ತೆಯೇ. ಸುಮ್ಮನೆ ಅಹಿ೦ಸೆಯೆ೦ಬ ಪದಕ್ಕೆ ಜೋತುಬಿದ್ದು ಇಷ್ಟು ದಿವಸ ನಮ್ಮನ್ನು ಬ್ರಿಟಿಷರ ಕೈಯಲ್ಲಿ ನರಳುವ೦ತೆ ಮಾಡಿದರು. ನಾವು ಯುವಕರು ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕು.

ಮಿಯಾವ್ - ಬೌ ಬೌ

ಅವಳು ಪ್ರತಿದಿನ ಕಾಲೇಜಿಗೆ ಹೋಗುವಾಗ ಬರುವಾಗ ಅವನು ಅವಳನ್ನು ಹಿಂಬಾಲಿಸುತ್ತಿದ್ದ.ಹೀಗೆ ಒಂದು ದಿನ ಹಿಂಬಾಲಿಸುವುದರ ಜೊತೆಗೆ ಸ್ವಲ್ಪ ಮ್ಯೂಸಿಕ್ ಎಫ್ಫೆಕ್ಟು ..ಮಿಯಾವ್ ಮಿಯಾವ್ ..ಓ ಮಿಯಾವ್ ಎನುತ್ತಾ. ಅವಳು ಒಮ್ಮೆ ಹಿಂದೆ ತಿರುಗಿ ಎಂದಳು ಬೌ ಬೌ ಬೌ ..ಅವನು ಮತ್ತೆ  ಯಾವತ್ತು ಫಾಲೌ ಮಾಡಲೇ ಇಲ್ಲ. ಅಂದ ಹಾಗೆ ಇದು ರಿಯಲ್ .