ನೀರ ನಿಶ್ಚಿಂತೆಗೆ ನೂರಾರು ಕೈಗಳು
ಮೊನ್ನೆ ಮಾರ್ಚ್ ೧೫ ರ ಭಾನುವಾರ ನೀರ ಚಿಂತಕರ ಚಾವಡಿ. ವಿವಿಧ ವಯೋಮಾನ ಮತ್ತು ವರ್ಗಗಳ ಸಮ್ಮಿಶ್ರ ಗುಂಪಿನ ಜಮಾವಣೆ. ಇಡೀ ದಿನ ತುಮಕೂರು ಜಿಲ್ಲೆಯ ನೀರ ಸಮಸ್ಯೆಗಳ ಚರ್ಚೆ, ಪ್ರಶ್ನೋತ್ತರ, ಕಾರ್ಯಯೋಜನೆ, ಅಂತರ್ಜಾಲ ಬಳಕೆ ಮೂಲಕ ಪರಿಹಾರ ಹುಡುಕುವತ್ತ ಚಿಂತನೆ.
ಪರಿಸರ ಚಿಂತಕ ಸಿ.ಯತಿರಾಜುರವರ ನೀರು ಮತ್ತು ಇತರ ಸಂಪನ್ಮೂಲಗಳು ಎದುರಿಸುತ್ತಿರುವ ಸಮಸ್ಯೆಗಳ ವಿಶ್ಲೇಷಣೆಯಿಂದ ಪ್ರಾರಂಭವಾದ ಕಾರ್ಯಕ್ರಮ ಪಂಜಾಬ್ನ ಸಂತರೊಬ್ಬರ ನದಿ ಪುನರುಜ್ಜೀವನದ ಯಶೋಗಾಥೆಯ ಸಾಕ್ಷ್ಯಚಿತ್ರ ಪ್ರದರ್ಶನದೊಂದಿಗೆ ಅರ್ಥಪೂರ್ಣವಾಗಿ ಮುಕ್ತಾಯವಾಯಿತು.
“ಇಂಟರ್ನೆಟ್ ಒಂದು ಅಧ್ಬುತ ಜ್ಞಾನದ ಭಂಡಾರ. ಬೇರೆ ಮಾಧ್ಯಮಗಳಿಗಿಂತ ಸರಳ, ಸುಲಭ. ಕ್ಷಣಾರ್ಧದಲ್ಲಿ ವಿಶ್ವದ ಎಲ್ಲ ಮೂಲೆಗಳಿಗೂ ತಲುಪಬಹುದಾದ ಏಕೈಕ ಮಾಧ್ಯಮ” ಎಂದು ಮಾತಿಗಾರಂಭಿಸಿದ ವಸಂತ ಕಜೆ ಅಂತರ್ಜಾಲ ಎಷ್ಟು ಉಪಯುಕ್ತ ಎಂಬುದನ್ನು ವಿವರಿಸಿದರು. ಅದು ಬೆಳೆಯುತ್ತಿರುವ ವೇಗದ ಬಗ್ಗೆ ಗಮನ ಸೆಳೆದರು.
- Read more about ನೀರ ನಿಶ್ಚಿಂತೆಗೆ ನೂರಾರು ಕೈಗಳು
- Log in or register to post comments