ಪೆದ್ದುಗುಂಡನ ರಗಳೆ - ೩
ನಭದ ಆಳೆತ್ತರ ಉದ್ದಗಲಗಳುಂಟೆ
ಅರಿವಿನ ಹರವು ಅದಕೆ ದುಪ್ಪಟ್ಟು
ಕಲಿಕೆ ಪಥ ಅಂತ್ಯವಿಲ್ಲದ ಪಯಣ
ಜ್ಞಾನದಾಹ ಚಿರಕಾಲ - ಪೆದ್ದುಗುಂಡ
- Read more about ಪೆದ್ದುಗುಂಡನ ರಗಳೆ - ೩
- Log in or register to post comments
ನಭದ ಆಳೆತ್ತರ ಉದ್ದಗಲಗಳುಂಟೆ
ಅರಿವಿನ ಹರವು ಅದಕೆ ದುಪ್ಪಟ್ಟು
ಕಲಿಕೆ ಪಥ ಅಂತ್ಯವಿಲ್ಲದ ಪಯಣ
ಜ್ಞಾನದಾಹ ಚಿರಕಾಲ - ಪೆದ್ದುಗುಂಡ
ಒಂದೊಮ್ಮೆ ಎಲ್ಲೆಡೆ ಬೆಳಕ ಕುಡಿಮಿಂಚು,
ತಾಮಸದ ಕರಿ ನೆರಳ ಸರಿಯಿತು ಸಂಚು.
ಕತ್ತಲೆಯ ಸುಖಭೂತ ನರಳಿ ಬಸವಳಿಯೆ,
ದೀಪ ಜ್ಯೋತಿ ಅರಳಿತು - ಪೆದ್ದುಗುಂಡ
ಸುಖ ಸುಪ್ಪತ್ತಿನೊಳಾಡುವರಂ ಕಂಡು
ಕರುಬುವ ಮಂದಿ ಕಷ್ಟಕೋಟಲೆ
ರಹಿತ ಸಗ್ಗ ಘೋರವೆಂದುಲಿವರು
ಪಾಪವದಲ್ಲ ಪುಣ್ಯವೋ - ಪೆದ್ದುಗುಂಡ
ಕಣ್ತುಂಬಿ ಬರುತ್ತದೆ....!
ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು ಸ್ಪಷ್ಟಗೊಳಿಸಿಕೊಳ್ಳಬೇಕೋ? ಗೊತ್ತಿಲ್ಲ. ಹಾಗೆ ಮಾಡದಿದ್ದಾಗ ಎಷ್ಟೋ ಬಾರಿ ಸಾಗುವ ದಾರಿ ಬೇರೆ ಹಾದಿಯನ್ನು ಹಿಡಿಯುತ್ತದೆ ಏನೋ ? ಅದೂ ಗೊತ್ತಿಲ್ಲ.
ರಾಜು ಅನಂತಸ್ವಾಮಿ ಇಂಥದೇ ಗೊಂದಲದಲ್ಲಿ ಸಿಕ್ಕಿದ್ದರೋ ಏನೋ ಅದೂ ಗೊತ್ತಿಲ್ಲ. ರಾಜು ಅನಂತಸ್ವಾಮಿ, ನಮ್ಮೊಳಗೆ ಹುದುಗಿಕೊಂಡ ಹಾಡು. ಹೇಗೆ , ಹಲವು ಹಿರಿಯ ತಲೆಮಾರುಗಳನ್ನು ಮೈಸೂರು ಅನಂತಸ್ವಾಮಿ ಆವರಿಸಿಕೊಂಡಿದ್ದರೋ, ರಾಜು ಸಹ ಕಿರಿಯ ತಲೆಮಾರುಗಳನ್ನು ಆವರಿಸಿಕೊಳ್ಳಬಹುದಾದ ಹಾಡು. ಭಾವಗೀತೆಗಳಲ್ಲಿನ ಭಾವಕ್ಕೆ ದನಿ ತುಂಬಿ ಹೋದವರು ಮೈಸೂರು ಅನಂತಸ್ವಾಮಿ. ಹಾಗೆಯೇ ಹೋಗಲಿಲ್ಲ, ಆ ದನಿಯನ್ನು ನಮ್ಮಲ್ಲಿಯೇ ಬಿಟ್ಟು ಹೋದರು. ರಾಜೂ ಸಹ ಅದನ್ನೇ ಮಾಡಿದ್ದಾರೆ. ಇಲ್ಲಿಯೇ ಕಾಡುವ ದನಿಯನ್ನು ಬಿಟ್ಟು ಬರೀ ಕಂಠವನ್ನು ಹೊತ್ತು ಹೋಗಿದ್ದಾರೆ.
ಅಪ್ಪಟ ಕರ್ನಾಟಕದ ನೆಲವಾದ ಬೆಳಗಾವಿಯಲ್ಲಿ ಮೊನ್ನೆ ಕ.ರ.ವೇ ಯವರು ಪಾಲಿಕೆ ಕಟ್ಟಡದ ಮೇಲೆ ಕನ್ನಡದ ಬಾವುಟ ಹಾರಿಸಲು ಹೋಗಿ ಲಾಠಿ ಏಟು ತಿನ್ನಬೇಕಾಯಿತು.. ಅವರು ಮಾಡಿದ ತಪ್ಪಾದರೂ ಏನು? ನಮ್ಮ ನೆಲದಲ್ಲಿ ನಮ್ಮ ಬಾವುಟ ಹಚ್ಚುವುದು ತಪ್ಪೇ???? ನೀವೇ ಹೇಳಿ.... :( ಕನ್ನಡ ಬಾವುಟ ಇಲ್ಲಿ ಯಾವಾಗ ಹಾರುವುದೋ.......??
ಶ್ರೀನಿವಾಸ
ಬೆಳಗಾವಿ
ಉಜ್ಜಯನಿಯ ಮಹಾಕಾಳೇಶ್ವರ.
ಎಲ್ಲಿದೆ?
ಮಧ್ಯಪ್ರದೇಶದ ಕ್ಷಿಪ್ರಾ ನದಿಯ ದಂಡೆಯ ಮೇಲಿದೆ.
ಇದು ಪುರಾಣಗಳಲ್ಲಿ ಅವಂತಿಕಾ ನಗರಿ ಎಂದು ವರ್ಣಿತವಾಗಿತ್ತು.
ಇದನ್ನು ಭೂಮಿಯ ನಾಭಿ ಎಂದೂ ವರ್ಣಿಸಲಾಗಿದೆ.
ಶ್ರೀ ಕೃಷ್ಣ-ಬಲರಾಮ-ಸುಧಾಮರು ಇಲ್ಲಿ ವಿದ್ಯಾಭ್ಯಾಸ ಮಾಡಿದರಂತೆ.
ಪ್ರಸಿದ್ಧವಾದ ವಿಕ್ರಮಾದಿತ್ಯನ ಸಿಂಹಾಸನ ಇಲ್ಲಿಯೇ ಇತ್ತು ಎಂದು ಪ್ರತೀತಿ.
ಉಜ್ಜಯನಿಹಲವಾರು ಬಂಗಾರದ ಕಲಶಗಳನ್ನು ಹೊಂದಿರುವ ದೇಗುಲಗಳನ್ನು ಹೊಂದಿರುವುದರಿಂದ "ಸ್ವರ್ಣ ಶೃಂಗ" ಎಂದೂ ಪ್ರಸಿದ್ಧವಾಗಿದೆ.
ಬಹಳ ಹಿಂದೆ ಇಲ್ಲಿ ಅನೇಕ ವೇದಾಧ್ಯಯನ ಸಂಪನ್ನ ಶಿವ ಭಕ್ತರಿದ್ದರಂತೆ.
ಅವರಲ್ಲಿ ವೇದ ಪ್ರಿಯನೆಂಬುವನು ತನ್ನ ನಾಲ್ಕು ಪುತ್ರರೊಂದಿಗೆ ಶಿವ ಕೈಂಕರ್ಯದಲ್ಲಿ ತೊಡಗಿದ್ದನಂತೆ. ಹೀಗಿರುಬಾಗ, ದೂಷಣನೆಂಬ ರಾಕ್ಷಸನು ತನ್ನ ದುಷ್ಟ ಶಕ್ತಿಯೊಂದಿಗೆ ಇವರ ಮೇಲೆರಗ್ಲು ಶಿವಪೂಜಾ ನಿರತರಾದ್ದ ತನ್ನ ಭಕ್ತರನ್ನು ಕಾಪಡಲು ಶಿವನು ಲಿಂಗಾಕಾರದಿಂದ ಮಹಾಕಾಳನಾಗಿ ಹೊರಬಂದು ರಾಕ್ಷಸ ಸಂಹಾರ ಮಾಡಿದನಂತೆ.
ಕೊನೆಗೆ ಭಕ್ತರ ವಿನಂತಿ ಮೇರೆಗೆ ಅದೇ ಆಕಾರದಲ್ಲಿ ಜ್ಯೋತಿರ್ಮಯನಾಗಿ ನಿಂತನಂತೆ.
ನನಗೆ ಸಂಪದ ಸ್ನೇಹ ಮಿಲನದ ಸಂತೋಷವನ್ನ ಕವನ ರೂಪದಲಿ ಬರೆದಿದ್ದೆನೆ ಚೆನ್ನಾಗಿದ್ದರೆ ಸಂತೋಷ ಪಡಿ ಇಲ್ಲದಿದ್ದರೆ ದಯವಿಟ್ಟು ಬೈಯಾಬ್ಯಾಡಿ
ಬೆಂಗಳೂರಿನ ಕನ್ನಿಂಗಮ್ ರೋಡ್ ನಲ್ಲಿ
ಇದ್ದದ್ದು ಒಂದು ಅದುವೆ
Centre for Internet and Society ಯಲ್ಲಿ
ಸಂಪದ ಸ್ನೇಹ ಮಿಲನಕಾಗಿ ಸೇರಿದೆವು ನಾವೆಲ್ಲರಲ್ಲಿ
ಎಲ್ಲರಿಗೂ ಸಂತೋಷವೂ ಸಡಗರವೂ ತುಂಬಿತಲ್ಲಿ
ಅಲ್ಲೆಲ್ಲರೂ ಹಂಚಿಕೊಂಡರಲ್ಲಿ
ಪ್ರಿಯೆ ಮಾಡಿಕೊಳ್ಳೋಣವೆ ನಾವು
ಹೃದಯಗಳ ವಿನಿಮಯ
ನಿರೂಪಿಸೋಣವೇ ಹೇಗೆ ಮಾಡುವುದೆಂದು
ಮದುವೆಯ ಉಳಿತಾಯ
ಇನ್ನೂ ಸಿಕ್ಕಿಲ್ಲ ಉಳಿತಾಯಕ್ಕೆ :(
ನಿಮ್ಮ ಅಭಿಮಾನದ ಹುಡ್ಗ
ಅರವಿಂದ್
ಕೆನೆ ಹಾಲಿನ ಬೆಣ್ಣೆ ಮುದ್ದೆ
ಮೈಗೆಲ್ಲಾ ಹಚ್ಚಿಕೊಂಡು
ಚಿನ್ನಾರಿಯ ಚಿತ್ತಾರವನು
ಸುತ್ತಲು ಬರೆದುಕೊಂಡು
ಕಡಲಲೆಯ ಸೆಳೆಯುವಂಥ
ಶಕ್ತಿಯನು ತುಂಬಿಕೊಂಡು
ಎಟುಕದೆ ಮೇಲಿದ್ದರು
ದೃಷ್ಟಿಬೊಟ್ಟು ನಿನಗ್ಯಾಕೋ!
ಅಪ್ಸರೆಗೆ ಅಸೂಯೆ ತರುವ
ಚೆಲುವೆಲ್ಲಾ ತುಂಬಿದ್ದರೂ
ಉದ್ಯಾನದ ಕೊಳವೊಂದು
ಕನ್ನಡಿಯ ಹಿಡಿದಿದ್ದರು
ಚಕೋರಿಯು ನಿನಗೆಂದೇ
ಕಾದು ಕುಳಿತಿದ್ದರು
ಲವರ್ಸು ಪಾರ್ಕು
ನಮ್ಮೂರು ಬೆಂಗಳೂರು
ಅದಕ್ಕೇನು ಕಮ್ಮಿ, ಸುಮ್ಮನೆ
ಎಂದಾದರೊಮ್ಮೆ ವೆಲ್ ಕಮ್ಮು,
ಕ್ಯೆದಿಗಳೇ ಕಟ್ಟಿದ ವಿಧಾನಸೌಧ,
ಎದುರಿಗೇ ನ್ಯಾಯ ನೀಡುವ ಕೆಂಪು ಸೌಧ,
ಲಾಲ್ ಬಾಗಿನ ಸಸ್ಯಕಾಶಿ ಸೌಗಂಧ