ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಹೇ ನೀರೆ
ಹೇ ನೀರೆ ನಿನ್ನದೆಂಥ ಗುಣ!
ಬಾನಿಂದ ಹಾರುವಾಗ
ಬಣ್ಣವಿಲ್ಲದೆ ಬಂದೆ
ನೆಲ ಮುಟ್ಟಿ ಮಿಲನಗೊಂಡು
ನೀ ರಂಗು ಪಡೆದೆ
ಕಲ್ಲು ಮಣ್ಣಿನ ಹಾದಿ ಪಕ್ಕದಲಿ
ಮನೆ ಕಟ್ಟಿ ಮಲಗಿದೆ
ಹಳ್ಳ ಮುಚಿ ಕೆರೆಯ ತುಂಬಿ
ಹಸಿರ ನೆನೆಸಿ ಓಡಿದೆ
ಸಾಲು ಹಾಸು ತಂತಿ ಮೇಲೆ
ಮುತ್ತಿನ ತೋರಣ ಕಟ್ಟಿದೆ
ಎಲ್ಲ ಜನರು ಸೂರಿಗಾಗಿ
ಓಡುವಂತೆ ಮಾಡಿದೆ
ಮುಗ್ಧ ಮನಸು ಆಚೆ ನಿಂತು
ಹಾಡಿ ಕುಣಿದು ನಲಿಯಿತೆ
- Read more about ಹೇ ನೀರೆ
- Log in or register to post comments
ಸಂಗಾತಿ
ಮುಸುಕಿದ ಮಬ್ಬಿನಲಿ ಬೀಸುತಿದೆ ತಂಗಾಳಿ,
ಹುಚ್ಚೆದ್ದ ಮನಕಿಲ್ಲಿ ಇಡುತಲಿದೆ ಕಚಗುಳಿ,
ಮನಸಲ್ಲಿ ನೂರಾರು ಭಾವನೆಗಳರಲಿ,
ಏಕಾಂತವೆ ತುಂಬಿದೆ, ನೀನಿಲ್ಲದೆ ಸಂಗಾತಿ.
ಕಾಮನ ಬಿಲ್ಲೇರಿ ಆಡುವ ಬಾ ಜೋಕಾಲಿ,
ಕಟ್ಟುವ ಮನೆಯೊಂದ ಮೋಡಗಳ ಮರೆಯಲ್ಲಿ,
ಆಗಸದ ತುಂಬೆಲ್ಲ ಕುಣಿಯೋಣ ಹಾಡುತಲಿ,
ಒಣ ಆಸೆಯೇ ತುಂಬಿಹೊಯ್ತು, ನೀನಿಲ್ಲದೆ ಸಂಗಾತಿ.
- Read more about ಸಂಗಾತಿ
- Log in or register to post comments
ಮೌನ
ತೆರದ ತುಂಬು ಅರವಿಂದದಲಿ,
ಮೊಗ್ಗು ಹೊವಾಗುವ ಹಾಗೆ,
ತುಟಿಗಳೆರಡು ಹಾರ ಹೊಸೆದು,
ನಿಘಂಟನ್ನೇ ಬರಿದು ಮಾಡುವ ಹಾಗೆ,
ಮಾತನಾಡಿತು ನಿನ್ನ ಮೌನ.
ಮುಳುಗು ಸೂರ್ಯನೆಡೆಗಿನ ನಯನ,
ನೆನಪುಗಳ ಸಂಗ್ರಹಿಸುವ ಹಾಗೆ,
ಒಮ್ಮೊಮ್ಮೆ ಆಟವಾಡುವ ರೆಪ್ಪೆ,
ಒಳಗೆ ಏನೋ ಬಚ್ಚಿಡುವ ಹಾಗೆ,
ಮಾತನಾಡಿತು ನಿನ್ನ ಮೌನ.
ಅಂಗಯ್ಯಿಯ ಅಂಗಳದಲ್ಲಿ ಮಲಗಿದ ಕೆನ್ನೆ,
- Read more about ಮೌನ
- Log in or register to post comments
'ರೀ’ ಅನ್ನುವ ಒಂದೇ ಸ್ವರ
ಸರಸರನೆ ಸರಾಗವಾಗಿ
ಸ್ವರಗಳ ಜೋಡಿಸಿ
ರಾಗವ ಹಾಡುವ
ಭಾರೀ ಹಾಡುಗಾರ
ಅವಳ ’ರೀ’ ಎಂಬ
ಒಂದು ಸ್ವರದ ಹಿಂದಿನ
ನೂರು ಭಾವಗಳ
ಅರಿಯದೇ ತಿಣುಕಿದನಂತೆ!
-ಹಂಸಾನಂದಿ
- Read more about 'ರೀ’ ಅನ್ನುವ ಒಂದೇ ಸ್ವರ
- 5 comments
- Log in or register to post comments
ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
ಪ್ರಕಾಶ್ ಶೆಟ್ಟಿ ಪಂಚ್: ಕನ್ನಡದ ಹೊಸ ನಗೆಪತ್ರಿಕೆ ಬಿಡುಗಡೆ
-------------------------------------------------------------------------
ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
ಆಹಾರ ಹುಡುಕಿಕೊಂಡು ನಾಡಿಗೆ ಬಂದ ಮೂರು ಕರಡಿಗಳು ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಾಗಡಿ ತಾಲ್ಲೂಕು ದೊಡ್ಡೇರಿ ಗ್ರಾಮದಲ್ಲಿ ಜರುಗಿರುವುದಾಗಿ ಮಾಧ್ಯಮಗಳಲ್ಲಿ ಇಂದು ಅತ್ಯಂತ ಚಿಕ್ಕ ಸುದ್ದಿಯಾಗಿ ವರದಿಯಾಗಿದೆ. ಚಿಕ್ಕದಾದರೂ ಕರಡಿ ಬಗ್ಗೆ ಕಳಕಳಿಯಿಂದ ಕೆಲ ಮಾಧ್ಯಮಗಳಾದರೂ ಜವಾಬ್ದಾರಿಯಿಂದ ಸುದ್ದಿ ಮಾಡಿವೆ ಎಂಬುದೇ ಸಮಾಧಾನ.
ಸ್ಥಳೀಯರ ಪ್ರಕಾರ ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದ ಮೂರು ಕರಡಿಗಳು ಗ್ರಾಮದ ಹೊರವಲಯದಲ್ಲಿದ್ದ ಬಾವಿಗೆ ಕತ್ತಲಲ್ಲಿ ಆಕಸ್ಮಿಕವಾಗಿ ಬಿದ್ದು ಸತ್ತಿವೆ. ದನ ಕಾಯಲು ಆ ಪ್ರದೇಶಕ್ಕೆ ಹೋಗಿದ್ದ ಗ್ರಾಮದ ಕೆಲವರು ಬಾವಿಯಿಂದ ಬರುತ್ತಿದ್ದ ದುರ್ವಾಸನೆಯನ್ನು ಪತ್ತೆ ಹಚ್ಚಿ, ಕರಡಿಗಳು ಮೃತಪಟ್ಟಿರುವುದನ್ನು ಗುರುತಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ಕರಡಿಗಳು ಸತ್ತು ೩ ದಿನಗಳಾಗಿವೆ ಎಂದು ಶಂಕಿಸಲಾಗಿದೆ.
ಸುಮಾರು ನಾಲ್ಕು ವರ್ಷಗಳ ಕೆಳಗೆ ಇರಬಹುದು. ಪ್ರಜಾವಾಣಿ ದಿನಪತ್ರಿಕೆಯ ‘ಕರ್ನಾಟಕ ದರ್ಶನ’ ಪುರವಣಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ನಾಗೇಶ ಹೆಗ್ಗಡೆ (ನನ್ನ ವೃತ್ತಿ ಹಾಗು ವಿದ್ಯಾ ಗುರುಗಳು ಎಂದು ಸೂಚ್ಯವಾಗಿ ಹೇಳಬಹುದು) ನನ್ನಂತಹ ನೂರಾರು ಬರಹಗಾರರಿಗೆ ಜೀವದಾಯಿಯಾಗಿದ್ದರು. ಬಹುಶ: ನನ್ನ ಜಾಯಮಾನದ ಒಂದು ಪೀಳಿಗೆಯನ್ನೇ ಕಟ್ಟುತ್ತ ಹರ್ಷಿಸಿದ ಮಹನೀಯ ಅವರು. ಹಾಗೆ ಅವರು ಕೊಟ್ಟ ಕೆಲ ‘ಅಸೈನ್ ಮೆಂಟ್’ ಗಳಲ್ಲಿ ಧರೋಜಿ ಕರಡಿ ಧಾಮದ ಭೇಟಿಯೂ ಸೇರಿದೆ. ಆ ಅನುಭವ ಹಾಗು ಅವರು ತಿದ್ದಿ, ಪೋಷಿಸಿದ ನುಡಿಚಿತ್ರದಲ್ಲಿ ಅಗಾಧವಾದ ಅವರ (ನನ್ನದಲ್ಲ!) ಕರಡಿ ಪ್ರೀತಿ ವ್ಯಕ್ತವಾಗಿದೆ.
ತರುಣ, ತಱುಣ
ತರುಣ (ಸಂಸ್ಕೃತ)= ಯುವಕ, ಪ್ರಾಯದ ಹುಡುಗ
ತಱುಣ(ಕನ್ನಡ)= ತುಸು ಹೊತ್ತಿನ ಮೇಲೆ (immediately after), ತಱುವಾಯ
ಉದಾಹರಣೆಗೆ: ನೀನು ನಮ್ಮ ಮನೆಗೆ ಬಂದು ಹೋದ ತಱುಣದಲ್ಲೆ ಆತನನ್ನು ಭೇಟಿ ಆದೆ.
- Read more about ತರುಣ, ತಱುಣ
- 1 comment
- Log in or register to post comments
ರಾಜಕೀಯ ಹಾಗೂ ಇನ್ನಿತರ ವಿಷಯ ಸಂಬಂದಿ ವಿಷಯಗಳಿಗೆ ಮಾಡುವ ಮುಷ್ಕರ/ಸಮಾರಂಭಗಳಿಗೆ ಬೆಂಗಳೂರಿನ ಜನ ಪರಿತಪಿಸಬೇಕೆ? ಬೇರೆ ಏನಾದರೂ ವ್ಯವಸ್ಥೆ ಮಾಡಬೇಕೆ?
ಸ್ನೇಹಿತರೆ ,
ನಿಮಗೆ ಗೊತ್ತಿರುವ ಹಾಗೇ ಮೊನ್ನೆ ಹೋದ ಸೋಮವಾರ ಬೆಂಗಳೂರಿನಲ್ಲಿ ತಡ ರಾತ್ರಿವರೆಗೆ ಟ್ರಾಫಿಕ್ ಜಾಮ್ ಆಗಿದ್ದು ಯಾರು ಇನ್ನು ಮುಂದೆ ಅಸ್ತು ಸುಲಭವಾಗಿ ಮರೆಯಲು ಸಾದ್ಯವಿಲ್ಲ.
ನೀನೇ ಹೇಳಿ ನೋಡೊಮ್ಮೆ..
ನಿನ್ನ ಕಣ್ತಪ್ಪಿಸಿ ನೋಡುತಿರುವ ಆ ಕಂಗಳು
ನಿನ್ನಿಂದಲೇ ನಾಚಿ ಬಿದ್ದಿಹ ಗಲ್ಲದ ಗುಳಿಯು
ಅರಿಯದೇ ಮೂಡಿಹ ಆ ಮುಗುಳ್ನಗೆಯೂ ನಿನಗಾಗಿ
ತಡವೇಕೆ
ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ
ಜೊತೆಯಲಿ ನೀನಿರುವಾಗ ಪಡುವ ಸಂತಸ
ನೀನಾಡಿದ ಮಾತಿನಿಂದ ಮೂಡಲು ಉಲ್ಲಾಸ
ಎಲ್ಲ ಆನಂದಗಳು ನಿನ್ನಿಂದಲೇ ಎಂದಾಗ
ತಡವೇಕೆ
ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ
- Read more about ನೀನೇ ಹೇಳಿ ನೋಡೊಮ್ಮೆ..
- Log in or register to post comments