ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೋಕಾಕ ಪ್ರವಾಸ...

ವಿನೋದನ ಮದುವೆ

ವಿನೋದ weds ರೀನಾ

ದಿನಾಂಕ: ೪-೧೨-೨೦೦೭

ಸ್ಥಳ: ಸಮುದಾಯ ಭವನ, ಗೋಕಾಕ

ಗುಂಪು-೧: ನಾಗರಾಜ, ಸಂಧ್ಯಾ(ಶ್ರೀಮತಿ ನಾಗರಾಜ), ರಾಘು, ಶರತ್, ಪ್ರವೀಣ(ಟಿಂಕು) ಮತ್ತು ನಾನು(ಅನಿಲ್).

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ|| ಗುರುಲಿಂಗ ಕಾಪ್ಸೆ ಅವರ ಸಂದರ್ಶನ (ವೀಡಿಯೊ)

ನಾನು ಭಾರತದಲ್ಲಿದ್ದಾಗ ಸಾಹಿತ್ಯ ಸಮಾರಂಭಗಳಿಗೆ ಹೋಗಬೇಕು, ಸಾಹಿತಿಗಳ ಮಾತು ಕೇಳಬೇಕು ಅಂತ ಬಹಳ ಆಸೆ ಇತ್ತು. ಆದರೆ ಇಂತಹ ಕಾರ್ಯಕ್ರಮಗಳೆಲ್ಲ ನನ್ನ ಗಮನಕ್ಕೆ ಬರುತ್ತಿದ್ದುದು ಮಾರನೆ ದಿನ ವಾರ್ತಾಪತ್ರಿಕೆಗಳಲ್ಲಿ ವರದಿ ಓದಿದಾಗ.

ವೈನ್ -ದ್ರಾಕ್ಷಾಸವ

ಇಂದ್ರಾದಿ ದೇವತೆಗಳು ವೈನ್(ಸೋಮರಸ) ಕುಡಿಯುತ್ತಿದ್ದರು.
ಮುಸಲ್ಮಾನ್ ರಾಜರ ಆಳ್ವಿಕೆಗೆ ಮೊದಲು ಅಲ್ಲಲ್ಲಿ ಮದಿರಾಲಯಗಳು ಇದ್ದವು.

ಈಗ ಕರ್ನಾಟಕ ಸರಕಾರ ರಾಜ್ಯಾದ್ಯಂತ wine tavern ಸುರುಮಾಡಲು ಕೇವಲ ೧೦೦೦ ರೂಪಾಯಿ ಫೀಸ್ ತೆಗೆದುಕೊಂಡು ಪರ್ಮಿಟ್ ಕೊಡುವುದು. ಅಗತ್ಯ ಡಾಕ್ಯುಮೆಂಟ್‌ಗಳ ಜತೆ ೫೦೦೦ ರೂ. ಕೊಟ್ಟರೆ ವೈನ್ ತಯಾರಿಕೆಗೂ ಅವಕಾಶವಿದೆ.

ವಿಜ್ಞಾನವೇ, ದೇವರನ್ನು ಹುಡುಕಿಕೊಡು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 24, 2008 ರ ಸಂಚಿಕೆಯಲ್ಲಿನ ಲೇಖನ.)

ಅಮೆರಿಕ ಸರಿಯಾಗಿ 50 ವರ್ಷಗಳ ಹಿಂದೆ (1958) ಭೂಮಿಯ ಕಕ್ಷೆಯನ್ನು ದಾಟಿ ಹೋಗುವಂತಹ ರಾಕೆಟ್ ಉಡಾಯಿಸಿದ್ದು. ಕೃತಕ ಉಪಗ್ರಹವೊಂದು ಚಂದ್ರನನ್ನು ಸುತ್ತು ಹಾಕಿ ಬರುವುದು ಆ ಉಡಾವಣೆಯ ಗುರಿಯಾಗಿತ್ತು. ಆದರೆ ಉಡಾಯಿಸಿದ 77 ಸೆಕೆಂಡುಗಳಲ್ಲಿ, ಭೂಮಿಗಿಂತ ಕೇವಲ 16 ಕಿ.ಮಿ. ಮೇಲೆ ಆ ರಾಕೆಟ್ ಸ್ಫೋಟವಾಗಿ, ಮೊದಲ ಪ್ರಯತ್ನದಲ್ಲೆ ಸೋಲಾಗಿತ್ತು. ಆದರೂ, ಸೋವಿಯತ್ ರಷ್ಯಾಕ್ಕೆ ಸೋಲಬಾರದೆಂಬ ಪೈಪೋಟಿಯಲ್ಲಿ ಅವರು ಮುಂದಿನ ಒಂದೇ ವರ್ಷದಲ್ಲಿ ಮತ್ತೆ ಐದು ಸಲ ಪ್ರಯತ್ನಿಸಿದರು. ಆದರೆ ರಷ್ಯಾದ ರಾಕೆಟ್ 1959 ರಲ್ಲೆ ಚಂದ್ರನನ್ನು ಸುತ್ತಿ ಬಂತು. ಅಮೆರಿಕಕ್ಕೆ ಮೊದಲ ಯಶಸ್ಸು ಸಿಕ್ಕಿದ್ದು 1964 ರಲ್ಲಿ. ಅದಾದ ಕೆಲವೆ ತಿಂಗಳುಗಳಲ್ಲಿ (1965) ರಷ್ಯಾ ಮೊದಲ ಬಾರಿಗೆ ತನ್ನ ರೊಬೊಟ್ ಅನ್ನು ಚಂದ್ರನ ಮೇಲೆಯೆ ಇಳಿಸಿತು. ನಾಲ್ಕು ತಿಂಗಳ ನಂತರ ಅಮೆರಿಕವೂ ಅದನ್ನು ಸಾಧಿಸಿತು. ಆಮೇಲೆ ಆರಂಭವಾಗಿದ್ದು ಚಂದ್ರನ ಮೇಲೆ ಮನುಷ್ಯನನ್ನೆ ಇಳಿಸುವ ರೇಸು. 1968 ರ ಕೊನೆಯಲ್ಲಿ ಮೊದಲ ಬಾರಿಗೆ ಮನುಷ್ಯ

ಅಡಿಗ ಮತ್ತೆ ಪ್ರಶಸ್ತಿ

ಅರವಿಂದ ಅಡಿಗರಿಗೆ ಬ್ರೂಕರ್ ಪ್ರಶಸ್ತಿ ಸಿಕ್ಕಿದ ಸುದ್ದಿ - ನಮ್ಮ ಮನೆಯ ಹುಡುಗನಿಗೆ ಸಿಕ್ಕಿದಷ್ಟು ಖುಷಿಯಾಯಿತು. ಭಲೇ, ಅಡಿಗರೇ, ನಿಮಗೆ ಅಭಿನಂದನೆಗಳು. ನೆನಪು ಹಿಂದಕ್ಕೆ ನೆಗೆಯಿತು- ಎಂಬತ್ತರ ದಶಕದಲ್ಲಿ ಅಡಿಗರ ಅಣ್ಣ ನಂತರ ಈ ತಮ್ಮ SSLC ಯಲ್ಲಿ ರಾಜ್ಯಕ್ಕೆ ಪ್ರಥಮರಾಗಿ ಗಮನ ಸೆಳೆದದ್ದು ಇನ್ನೂ ಹಸಿರಾಗಿದೆ. ಅಡಿಗರ ತಂದೆ ಡಾ.ಮಾಧವ ಅಡಿಗ ನನ್ನ ತಂದೆಗೆ ಪ್ರಾಸ್ಟೇಟ್ ಶಸ್ತ್ರ ಚಿಕಿತ್ಸೆ ಯನ್ನು ಫಾದರ್ಮುಲ್ಲರ್ ಆಸ್ಪತ್ರೆಯಲ್ಲಿ ಮಾಡಿದ್ದು ನೆನಪಾಗುತ್ತದೆ. ಆ ಬಳಿಕ ಅವರು ಆಸ್ಟ್ರೇಲಿಯಾಕ್ಕೆ ತೆರಳಿದರು; ತಂದೆ ಹೊಸ ವೈದ್ಯರನ್ನು ಹುಡುಕಬೇಕಾಯಿತು. ತಂದೆಯೊಡನೆ ಇಲ್ಲಿಂದ ಆಸ್ಟ್ರೇಲಿಯಾಕ್ಕೆ ತೆರಳಿದ ಕನ್ನಡ ತರುಣ ಪ್ರತಿಭೆ ಇದೀಗ ಸಾಹಿತ್ಯ ಲೋಕದ ಮೂಲಕ ಮತ್ತೆ ಬಂದಿದ್ದಾರೆ. ಪತ್ರಿಕೆಯಲ್ಲಿ ನಾನು ಓದಿದೆ ಇತ್ತೀಚೆಗೆ ಅಡಿಗರು ಮಂಗಳೂರಿಗೆ ಬಂದಾಗ ಅವರ ಶಿಕ್ಷಕಕರೊಬ್ಬರು ಉಪೇಕ್ಷೆಯಿಂದ ಹೇಳಿದರಂತೆ ಅಷ್ಟೆಲ್ಲ ಹುಷಾರಿದ್ದ ನೀನು ಡಾಕ್ಟರ್, ಎಂಜನೀಯರ್ ಆಗುವ ಬದಲಿಗೆ ಯಾಕೆ ಪತ್ರಕರ್ತನಾಗಿದ್ದಿ? ಈ ಹೇಳಿಕೆ ಎಲ್ಲವನ್ನು ಹೇಳುತ್ತದೆಂದು ನನಗನ್ನಿಸುತ್ತದೆ. ಇದು ಆ ಶಿಕ್ಷಕರ ತಪ್ಪಲ್ಲ. ನಮ್ಮ ಹೆಹ್ಚಿನವರು ಅದೇ ಹಾದಿಯಲ್ಲೇ ಆಲೋಚಿಸುತ್ತಿದ್ದಾರೆ. ಅಡಿಗ ಡಾಕ್ಟರ್ , ಎಂಜನೀಯರ್ ಹೊರತಾದದ್ದು ಇನ್ನೂ ಎಷ್ಟೋ ಇದೆ ಎಂದು ನಾವು ಯಾಕೆ ಆಲೋಚಿಸುವುದಿಲ್ಲ ಎನ್ನುವುದೇ ಭೌತವಿಜ್ಞಾನ ಅಧ್ಯಾಪಕನಾದ ನನಗೆ ಬಲು ಅಚ್ಚರಿಯಾಗುತ್ತದೆ. ಕಥೆ, ಕವನ, ಸಾಹಿತ್ಯ, ನಾಟಕ ಇವೆಲ್ಲವೂ ನಮಗೆ ನಮ್ಮ ಜೀವನದ ಆನಂದಕ್ಕೆ ಅತೀ ಅಗತ್ಯ. ಅಡಿಗರು ಅದನ್ನು ನಮಗೆ ತೋರಿಸಿಕೊಟಿದ್ದಾರೆ. ಎಷ್ಟು ಅಡಿಗರು ಮರೆಯಾಗಿರಬಹುದು ಎಲ್ಲರನ್ನು ವಿಜ್ಞಾನ ಆ ಮೂಲಕ ಎಂಜನೀಯರ್, ಡಾಕ್ಟರ್ ಸೃಷ್ಟಿಸಿ ಹಣದ ಥೈಲಿಯನ್ನು ಬಾಚುವ ಹುನ್ನಾರದಲ್ಲಿ. ಅಡಿಗರಿಂದಾದಾರೂ ಹೀಗೂ ಸಾಧ್ಯ ಎನ್ನುವ ಮನವರಿಕೆ - ಜ್ಜಾನೋದಯವಾಗಲಿ ಎಂಬ ಹಾರೈಕೆ. ಅಡಿಗರಿಗೆ ಮತ್ತೊಮ್ಮೆ ಅಭಿನಂದನೆಗಳು.

ಎಲೆ

ಹೊಂಬೆಳಕಿನ ಚಾದರದಲಿ ಕಂಗೊಳಿಸುತ
ಬಿಸಿಲ ಬೇಗೆಯ ನುಂಗುತ
ಆಶ್ರಿತ ಜೀವಕೆ ನೆರಳಿನ ಸಿಂಚನ

ವಸಂತದಲಿ ಚಿಗುರು
ಮುಂಗಾರಿನಲಿ ಹಚ್ಚ ಹಸಿರು
ಶೀತಲದಲಿ ಇದರ ಕೊನೆಯುಸಿರು

ಭೂತಾಯಿ ಉಟ್ಟ ಹಸಿರಿನ ಸೀರೆಯ ನೂಲು
ಒಡಲ ತುಂಬ ನರ ನಾಡಿಗಳ ಕವಲು
ರವಿಚಂದ್ರರಿಗೂ ಹರಿತ್ತಿನ ಹೊನಲು

ಉಣಬಡಿಸುತ ಸಸ್ಯಕೆ ಪ್ರಾಣಾನ್ನ
ಹಳೆ ಬೇರು ಕೊಂಬೆಗಳಿಗೆ ನವಚೈತನ್ಯ
ಮಂಜಿನ ಹನಿಗಳ ಮೈದಾನ

ಡಾ| ಕೆ.ಎಸ್. ಆಚಾರ್ಯರ ಮಹಾಭಾರತದ ಭೀಷ್ಮ. ೨

ಬೀಷ್ಮ ಎಡವಿದ್ದು ಏಲ್ಲೆಲ್ಲಿ? ಅಂಧನೃಪನನ್ನು ಹಾದಿಗೆ ತರಲು ಅಸಮರ್ಥನಾದುದು. ಅರಗಿನ ಮನೆಯ ಸುಳಿವನ್ನು ಅರಿಯದೆ ಹೋದುದು. ಕೌರವರು ದ್ರೌಪದಿಯ ಸೀರೆಯನ್ನು ಸೆಳೆವಾಗ ಅವಳ ಮಾನ ರಕ್ಷಿಸಲು ಅಸಮರ್ಥನಾದುದು ಮಾತ್ರವಲ್ಲ ಹಾಗೆ ನಡೆಯುವ ಸಮಯದಲ್ಲಿ ಅಲ್ಲೆ ಇದ್ದುಕೊಂಡು ಮೌನವಾಗಿದ್ದದ್ದು.

ಅನರ್ಥ ಕೋಶ


ಅಖಂಡ-ಮಾಂಸ ಖಂಡಗಳಿಲ್ಲದ ಜೀವಿಗಳು. ಉದಾ: ಬ್ಯಾಕ್ಟೀರಿಯಾ, ಅಮೀಬಾ, ವೈರಸ್ ಮುಂ.
ಅಗಣಿತ-ಗಣಿತವಲ್ಲದ ಇತರ ವಿಷಯಗಳು. ಉದಾ: ಕನ್ನಡ, ಇಂಗ್ಲೀಷ ಮುಂ.
ಅಜಗಜಾಂತರ-ಸಾಮಾನ್ಯರಿಗೂ, ರಾಜಕಾರಣಿಗಳಿಗೂ ಇರುವ ವ್ಯತ್ಯಾಸ.
ಅಣ್ನ-ತಮ್ಮನ ವಿರುದ್ಧ ಪದ
ಅತ್ತಿಗೆ-ನಾದಿನಿಯ ವಿರುದ್ಧ ಪದ
ಅಧಿಕಾರ-ಜಂಭದ ಹುದ್ದೆ
ಅನಿಲ-ಅಜೀರ್ಣ ವಾಯು(ಇದನ್ನೇ ವೈದ್ಯರು ಗ್ಯಾಸ್ ಟ್ರಬಲ್ ಎನ್ನುವರು

ಗಜಲ್-2

ಗಜಲ್

ಮಧುಶಾಲೆಗೆ ಹೋದರೂ ನಿನ್ನವೇ ನೆನಪುಗಳು ಕೊಂಚ ಮಧುವ ತಾ ಸಾಕಿ
ಕುಡಿದು ತೂರಾಡಿದರೂ ನಿನ್ನವೇ ಕನಸುಗಳು ಕೊಂಚ ಮಧುವ ತಾ ಸಾಕಿ

ಇರುಳು ನೆಲವನ್ನೆಲ್ಲ ಗಾಢವಾಗಿ ಕವಿದಿದೆ ಜಗವೆಲ್ಲ ಮಲಗಿದರೂ
ಆಗಸದಲಿ ಮಿನುಗುತಿವೆ ನಿನ್ನವೇ ಕಣ್ಣುಗಳು ಕೊಂಚ ಮಧುವ ತಾ ಸಾಕಿ

ಬುವಿಯಲ್ಲಿ ನಿನ್ನ ಪ್ರೀತಿಯ ಅಳೆಯಹೋದರೆ ದಾರಿಹೋಕರೆಲ್ಲ ನಗುವರು