ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾನು ಯಾವ ಕಾಲದಲ್ಲಿ ಇದ್ದೇನೆ...!?

ಕೆಲವೊಂದು ಅಭ್ಯಾಸಗಳು ಬಾಲ್ಯದಿಂದಲೇ ಬರಬೇಕು. ಓದುವುದು, ಬರೆಯುವುದು, ಸಂಗೀತ, ನೃತ್ಯ, ಆಟೋಟಗಳ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಇದ್ದರೆ ಚೆನ್ನ. ನಡುವೆ ಅವನ್ನು ರೂಢಿಸಿಕೊಳ್ಳುವುದು ಕಷ್ಟ.

"ಕಿರುಬ"ನ ಕಿತಾಪತಿ

ಈಶ್ವರಪ್ಪನವರಿಗೆ ಖಂಡಿತಾ ಬುದ್ದಿ ಭ್ರಮಣೆಯಾಗಿದೆ. ಇತ್ತೀಚೆಗೆ ಉಡುಪಿಯಲ್ಲಿ ನೀಡಿರುವ ಹೇಳಿಕೆ ಕುರುಬ ಜನಾಂಗದವರನ್ನು ತಲೆತಗ್ಗಿಸುವಂತಾಗಿದೆ. ಕುರುಬ ಜಾತಿಯನ್ನು ಇವರನ್ನೇನು ಗುತ್ತಿಗೆ ಪಡೆದಿರುವರೇನೋ ಎಂಬ ಶಂಕೆ ಹಲವರಲ್ಲಿ ವ್ಯಕ್ತವಾಗಿದೆ.

ಹರಿ ಸ್ಮರಣೆ ಮಾಡೋ ನಿರಂತರ!

ರಾಮ ಅಂತೊಬನಿದ್ದ. ಹುಂ. ಅವನ ಹೆಂಡತಿ ಸೀತೆ. ಹುಂ. ಹುಂ.
ಅಪ್ಪನ ಮಾತಿಗೆ ಪಂಚವಟೀ ದಡದಲ್ಲಿರುವಾಗ ರಾವಣ ಅವಳ ಕದ್ದ.
ನಿದ್ದೆ ಬರಲಮ್ಮನ ಕಥೆಯ ಹುಂಗುಟ್ಟುತಿಂತು ಕೇಳುತಿರುವ ಹರಿಯ
"ಲಕ್ಷ್ಮಣಾ ಬಿಲ್ಲೆಲ್ಲಿ ನನಬಿಲ್ಲು" ಎಂಬಾವೇಶದ ಮಾತೆಮ್ಮ ಕಾಯಲಿಂದು

 

ಸಂಸ್ಕೃತ ಮೂಲ:

ತಲೆನೋವು

ಇಂದು ಸಂಜೆ ಕಛೇರಿಯಿಂದ ಮನೆಗೆ ಹೊರಟಾಗ ಮಳೆ ಬರುತ್ತಿತ್ತು... ಕಾರಿನಲ್ಲಿ ಆಫೀಸ್ ಗೆ ಹೋಗಿದ್ದರಿಂದ ಮಳೆಯಲ್ಲಿ ನೆನೆಯದೆಯೇ ಮನೆಗೆ ಬಂದೆ... ಮನೆಗೆ ಬಂದ ಕೂಡಲೇ ಅಮ್ಮ "ಏನೋ, ಈ ದಿನ ಇಷ್ಟು ಬೇಗ ಮನೆಗೆ ಬಂದೆ? ಅದಕ್ಕೇ ಅನ್ಸುತ್ತೆ ಮಳೆ ಬರ್ತಾ ಇದೆ" ಅಂತ ಹೇಳಿ ನಕ್ಕರು. ನಾನು "ಹಾಗೇನಿಲ್ಲ, ಸ್ವಲ್ಪ ತಲೆ ನೋವು. ಅದಕ್ಕೆ ಬೇಗ ಬಂದೆ. ಬಿಸಿ ಬಿಸಿ ಸ್ಟ್ರಾಂಗ್ ಕಾಫಿ ಕೊಡು.

ಮರಗಳು ಧರೆಗೆ ಉರುಳುವುದೋ? ಹಸಿರು ಕಂಗಳಿಸುವುದೋ??

ಕಳೆದ ಕೆಲವು ದಿನಗಳಿಂದ, ಮೇಖ್ರಿ ವೃತ್ತದಿಂದ ಟಿ.ವಿ.ಗೋಪುರಕ್ಕೆ ಮುಟ್ಟುವ ದಾರಿಯನ್ನು ಅಗಲಿಸುವ ಕೆಲಸ ಶುರು ಮಾಡಿದ್ದಾರೆ ಎಂದು ಕಾಣುತ್ತದೆ. ಇಲ್ಲಿಯವರೆಗೂ, ರಸ್ತೆಯ ಪಕ್ಕದ ಜಾಗದಲ್ಲಿ ಪಾದಚಾರಿಗಳಿಗೆಂದು ಸುಮಾರು ಅಗಲವಾದ ಜಾಗವನ್ನೇ ಬಿಟ್ಟಿದ್ದರು.

ಚಂದ್ರಮೌಳೇಶ್ವರ ದೇವಾಲಯ - ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಗೆಳೆಯ ಗಿರೀಶ ಭಟ್ಟನೊಂದಿಗೆ ಉಣಕಲ್ ಗ್ರಾಮ ತಲುಪಿ ಚಂದ್ರಮೌಳೇಶ್ವರ ದೇವಾಲಯ ಹುಡುಕಾಡತೊಡಗಿದೆ. ಸಂದಿಗೊಂದಿಯಲ್ಲೆಲ್ಲಾ ನುಗ್ಗಿದರೂ ದೇವಾಲಯದ ಸುಳಿವಿಲ್ಲ. ಸ್ಥಳೀಯರಲ್ಲಿ ಕೇಳಿದರೆ ’ಇಲ್ಲೇ ಐತಲ್ರೀ....’ ಎನ್ನುತ್ತಾ ಕೈ ತೋರಿಸುತ್ತಿದ್ದರೇ ವಿನ: ನಮಗೆ ದೇವಾಲಯ ಕಾಣಿಸುತ್ತಿರಲಿಲ್ಲ. ಆ ಮಟ್ಟಕ್ಕೆ ಈ ದೇವಾಲಯನ್ನು ಒತ್ತುವರಿಯ ಸಮಸ್ಯೆ ಕಾಡುತ್ತಿದೆ. ನಾಲ್ಕು ದ್ವಾರಗಳ ಈ ದೇವಾಲಯಕ್ಕೆ ನಾಲ್ಕು ಕಡೆಯಿಂದಲೂ ರಸ್ತೆಗಳಿದ್ದವಂತೆ. ಆದರೆ ಈಗ ಒಂದು ಮಾತ್ರ ಉಳಿದಿದ್ದು ಉಳಿದ ೩ ರಸ್ತೆಗಳು ಮಾಯ. ಈ ಮಟ್ಟದ ಒತ್ತುವರಿ ಮತ್ತು ಸ್ಥಳೀಯರಿಗೆ ದೇವಾಲಯದ ಬಗ್ಗೆ ಇರುವ ಅಸಡ್ಡೆಯ ನಡುವೆಯೂ ಭಾರತೀಯ ಪುರಾತತ್ವ ಇಲಾಖೆ ದೇವಾಲಯವನ್ನು ಕಾಪಾಡಿಕೊಂಡು ಬಂದಿರುವುದೇ ಸೋಜಿಗದ ವಿಷಯ.

ಶಿರಾಡಿ ಘಾಟ್ ಎಂಬ ನರಕದ ದಾರಿ.

ಮೊನ್ನೆ ಗೆಳೆಯರೊಂದಿಗೆ ಧರ್ಮಸ್ಥಳಕ್ಕೆ ಶಿರಾಡಿ ಮಾರ್ಗದಲ್ಲಿ ಹೋಗಿದ್ದೆ. ಸರಕಾರದ ಹೇತ್ಲಾಂಡಿತನಕ್ಕೆ ಉದಾಹರಣೆಯಂತಿದೆ ಅಲ್ಲಿನ ರಸ್ತೆ. ಟಾರ್ ಹಾಳಾಗೆ ಹೋಗ್ಲಿ ರಸ್ತೇನೆ ಇಲ್ಲದಿದ್ದ್ರೆ ಹೆಂಗ್ರಿ ಪ್ರಯಾಣ ಮಾಡೋದು. ರಾಷ್ಟ್ರದ ಪ್ರಮುಖ ಹೆದ್ದಾರಿಗಳಲ್ಲಿ ಅದು ಒಂದು. ಪ್ರತಿ ನಿತ್ಯ ಸಾವಿರರು ವಾಹನಗಳು ಆ ಮಾರ್ಗವಾಗಿ ಚಲಿಸುತ್ತೆ.