ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ನಾನೊಮ್ಮೆ ಮದುರೈಯ ನಮ್ಮೊಂದು ಕಂಪನಿಗೆ ಹೋದಾಗ ಅಲ್ಲೊಬ್ಬ ಹಿರಿಯ ಅಧಿಕಾರಿಗಳು ಬಲು ಒಲವಿನಿಂದ ತಾವಿದ್ದ ಹಾಸನದ ದಿನಗಳನ್ನು ನೆನೆಸಿಕೊಂಡರು. ಆಹಾ ಎಂಥಾ ಸವಿನೆನಪುಗಳು ಅವು, ಆ ದೇಶದ ನೆನಪುಗಳು ಎಂದು. ಆ ಗದ್ದೆ ಬಯಲು ಸೀಮೆಯ ಕಾಳು ಕಡ್ಡಿ ಪೈರು ಪಚ್ಚೆ ಕಾಯಿ ಪಲ್ಲೆಗಳನ್ನು, ಜನರನ್ನು.

ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)

ಮನೆಯಲ್ಲಿ ಒಂದೇ ತರಹದ ಆದುಗೆ ಊಟ ಮಾಡಿ ಬೇಸರವಾದಾಗ ರುಚಿ ಹೆಚ್ಚಿಸಲು ಪುರುಷರು ತಮ್ಮ ಪತ್ನಿಗೆ(ಮದುವೆಯಾಗಿದ್ದರೆ) ಇದನ್ನು ತೋರಿಸದೇ ಹೊಸ ರುಚಿಗಳನ್ನು ಮಾಡಿ ನೋಡಬಹುದು.
ಪೇಪರ್ ದೋಸೆ
ಬೇಕಾಗುವ ಸಾಮಾನು : ೪-೫ ಹಳೆಯ ದಿನಪತ್ರಿಕೆಗಳು, ೧ ಪಾವು ಉದ್ದಿನಬೇಳೆ. ೧ ಚಿಟಿಕೆ ಅಡುಗೆ ಸೋಡಾ, ರುಚಿಗೆ ತಕ್ಕಷ್ಟೇ ಉಪ್ಪು.

ಗಜಲ್

ಗಜಲ್
ಬದುಕು ಬಣ್ಣವಾಗಿಸಲು ಕರೆದೆ ನೀ ನಡೆದೆ ದೂರ
ಪ್ರೇಮದ ಸಿಂಚನವ ಕೋರಿದೆ ನೀ ನಡೆದೆ ದೂರ

ಬಡತನವನೆ ಹಾಸಿ ಹೊದ್ದು ಒಲವಿನೊರತೆಯ ಕುಡಿದು
ಜಕ್ಕವಕ್ಕಿಗಳಾಗಲು ಬೇಡಿದೆ ನೀ ನಡೆದೆ ದೂರ

ಪ್ರೀತಿಗಾಗಿ ಹಂಬಲಿಸಿ ಮಣ್ಣದವರೆಷ್ಟೋ
ಆದರೂ ನಿನ್ನ ಜೊತೆ ಬಯಸಿದೆ ನೀ ನಡೆದೆ ದೂರ

ನಾನೀಗ ಏಕಾಂಗಿ, ಭಗ್ನ ಹೃದಯಿ, ನಿನ್ನ ಪದ

ಕ್ರುಶ್ಣಾನೀ ಬ್ಯಾಗನೆ ಬಾರೋ

ಕ್ರುಶ್ಣಾನೀ ಬ್ಯಾಗನೆ ಬಾರೋ
ಶ್ರೀ ಡಿ ಎನ್ ಶಂಕರ ಭಟ್ಟರವರು ಹೊಸದಾಗಿ ಕನ್ನಡ ವ್ಯಾಕರಣವನ್ನು ಬರೆದಿದ್ದಾರೆ. ಇದರಲ್ಲಿ ಯಾವ ಮಹಾಪ್ರಾಣಗಳಿಲ್ಲ-ಎಂಬುದು ಇದರ ಹೆಗ್ಗಳಿಕೆ. ಇವರು ಹಾಗೂ ಇವರಿಂದ ಪ್ರಭಾವಿತರಾದವರು, ಕನ್ನಡವು ಸಂಸ್ಕೃತೀ ಕರಣ ಹೊಂದಿದೆ(ಬೃಷ್ಠಗೊಂಡಿದೆ?) ಎಂದು ಇದನ್ನು ಶುದ್ಧೀಕರಿಸವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಸ್ವಲ್ಪನಗಿ

ಗೆಳೆತನ‌
ನೀನು "ರಮ್"ನಷ್ಟೇ ಬಲಿಷ್ಠ, "ವೈನ್" ನಷ್ಟೇ ಉತ್ತಮ, "ಬೀರ್"ನಷ್ಟೇ ತಂಪು, "ವಿಸ್ಕಿ" ಯ‌ಷ್ಟೇ ಅದ್ಬುತ, ನಿನ್ನ ಗೆಳೆಯತನದಲ್ಲಿ ಇದೆಲ್ಲವೂ ಒಟ್ಟಾಗಿ ಇರೋದ್ರಿಂದ ನಾನು ಯಾವತ್ತೂ ಟೈಟ್ ಆಗಿರ್ತೀನಿ!

:) :)

ಹೆದರಬೇಡ‌
ಹುಡುಗನೊಬ್ಬ ಹುಡುಗಿಗೆ ಅವರಸರದಲ್ಲಿ ಮುತ್ತು ಕೊಡ್ತಿದ್ದ
ಹುಡುಗಿ: ಯಾಕೆ ಅವಸರ‌
ಹುಡುಗ: ನಿನ್ನ ಲವರ್ ಬಂದ್ರೆ ?

ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

(ವೇಶ್ಯಾವಾಟಿಕೆ ಎಷ್ಟರಮಟ್ಟಿಗೆ ಸಾಮಾಜಿಕವಾಗಿ ಒಪ್ಪಲರ್ಹ, ಎಂಬುದನ್ನು ಮತ್ತೊಂದು ಲೇಖನದಲ್ಲಿ ಚರ್ಚಿಸಿದರಾಯಿತು. ಈ ಲೇಖನ, ಕೇವಲ acceptable prostitution ಬಗ್ಗೆ ಮಾತನಾಡುತ್ತದೆ.)

ಅನುಭವವನ್ನು ಕಾದಂಬರಿಯಲ್ಲಿ ತುಂಬಲು ಶಿವರಾಮ ಕಾರಂತರು ಮಾಡಿದ ಮತ್ತೊಂದು ಪ್ರಯತ್ನವೇ “ಮೈ ಮನಗಳ ಸುಳಿಯಲ್ಲಿ”. ಎಂದಿನಂತೆ ಕಾರಂತರು, ಕಥೆಯನ್ನು ಹೇಳುತ್ತ ಹೋಗುತ್ತಾರೆ. ಅವರ narrationನಲ್ಲಿ ಓದುಗನನ್ನು ಸೆಳೆದೆ ಹಿಡಿಯಬೇಕೆಂಬ ಹಂಬಲವಿಲ್ಲ. ಕಾದಂಬರಿಯನ್ನು ಅರ್ಧಕ್ಕೆ ನಿಲ್ಲಿಸಿ ಎದ್ದರೆ, ಎನೋ ಕಳೆದುಕೊಂಡೆ ಎನ್ನುವಂತಹ ಚಡಪಡಿಕೆ ಮೂಡಿಸುವದಿಲ್ಲ. ಆದರೆ, ಕಥೆಯನ್ನು ಹೇಳಿದಂತೆಲ್ಲ, ಕೇಳುವ ತಾಳ್ಮೆಯನ್ನು ಸೃಷ್ಟಿಸುತ್ತಾರೆ. ಇದು ಪಕ್ಷಪಾತ ರಹಿತ ಸಾಹಿತ್ಯಕ್ಕಿರಬೇಕಾದ ಮಹತ್ವದ ಲಕ್ಷಣ (ಇದು ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವದಿಲ್ಲ. ಹೀಗಾಗಿ, ಅವರನ್ನು ನಿಷ್ಪಕ್ಷಪಾತ ಸಾಹಿತಿ ಎಂದು ನಾನು ಹೇಳಲಾರೆ.)

ಕಾರಂತರ ಎಲ್ಲ ಕಾದಂಬರಿಗಳನ್ನು ಗಮನಿಸಿದಾಗ, ಅವರು ಎಲ್ಲ ಪಾತ್ರಗಳನ್ನೂ ಅದರ ಸಾಮಾನ್ಯ ಪರಿಧಿಯಲ್ಲಿಯೇ ನಿಲ್ಲಿಸಿ ಅದಕ್ಕೆ ತೂಕ ತುಂಬುತ್ತಾರೆ. ಪಾತ್ರ ಬಣ್ಣ ಹಚ್ಚಿದಕ್ಷಣ ತನ್ನ ಎಲ್ಲ ಸಾಮಾನ್ಯ ಗುಣಗಳನ್ನು ಕಳೆದುಕೊಂಡು ಒಂದು ಹಂತ ಎತ್ತರಕ್ಕೆ ಹೋಗಲಾರದು.ಹಾಗೆ ಹೋಗಬಾರದು ಕೂಡ (ಹಾಗೇನಾದರೂ ಆದರೆ, ಪಾತ್ರಗಳು ತಮ್ಮ ನೈಜತೆಯನ್ನು ಕಳೆದುಕೊಂಡು, ಢೋಂಗಿಯಾಗಿಬಿಡುತ್ತವೆ. ಓದುಗನಿಗೆ ಒಂದು fairy tailನ ಅನುಭವ ಕೊಡುತ್ತವೆ. ಅಲ್ಲದೇ, ಅಲ್ಲಿ ಬರುವ “values and ethics” impractical ಆಗಿರುವ ಸಾಧ್ಯತೆ ಹೆಚ್ಚು).

ಮರಳಿ ಬರಲಿ ಬಾಲ್ಯ

 ತಾವು ದೊಡ್ಡವರಾಗುತ್ತಾ ತಾವು ಸ್ವತಂತ್ರರು ತಮಗೆ ಇಷ್ಟ ಬಂದಂತೆ ತಾವು ನಡೆದುಕೊಳ್ಳಬಹುದು ಎಂದುಕೊಳ್ಳುತ್ತೇವೆ. ಆದರೆ ನಿಜವಾಗಲು ಅವರು ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ. ಬಾಲ್ಯದ ದಿನಗಳಲ್ಲಿ ಇದ್ದ ಸ್ವತಂತ್ರತೆ, ಉಲ್ಲಾಸ, ಸಂತೋಷವನ್ನು ದೊಡ್ಡವರಾಗುತ್ತಾ ಕಳೆದುಕೊಳ್ಳುತ್ತೇವೆ.

ಇಂಬಕ್ಕ

( ನನ್ನೀ ಪುಟ್ಟ ಕತೆಯನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ’ತರಂಗ’ ವಾರಪತ್ರಿಕೆಗೆ ಧನ್ಯವಾದಗಳು.)
"ತೇಜು ಇನ್ನ ಬೇಕಾದ್ರೆ ಎದ್ಕಳ್ಲಕ್ಕೇ ಮನೆ ಹತ್ರ ಬಂತು, ಇನ್ನು ಮನಿಗ್ಹೋಗೆ ಮಲ್ಗಲಕ್ಕೂ‌" ಎಂಬ ಅಪ್ಪನ ಎಚ್ಚರಿಸುವಿಕೆಯಿಂದಲೇ ನನಗರಿವಾದದ್ದು ನಾನಿರುವುದು ಕಾರಿನಲ್ಲಿ ಎಂದು. ಪ್ರಯಾಸದಿಂದ ಕಣ್ಣು ಬಿಟ್ಟು ವಾಚ್ ನೋಡಿದರೆ ಗಂಟೆ ಆರು ಆಗಿತ್ತು. ಮಧ್ಯಾಹ್ನ ಒಂದು ಗಂಟೆಗೇ ಮಂಗಳೂರಿನಿಂದ ಹೊರಟಿದ್ದರೂ ಶಿರಸಿ ಮುಟ್ಟುವಾಗ ಐದು ತಾಸು ಬೇಕಾಯಿತೇ ಎಂದು ಆಶ್ಚರ್ಯವಾಯಿತು. ಅಷ್ಟೂ ಹೊತ್ತು ಒಂದೇ ಭಂಗಿಯಲ್ಲಿ ಕುಳಿತಿದ್ದರಿಂದ ಮೈಯನ್ನೆಲ್ಲಾ ಒಂದು ತರಹ ಜಡತ್ವ ತುಂಬಿದಂತಾಗಿತ್ತು. ಅದನ್ನು ನೀಗಿಸಲು ಕಾರಿನ ಕಿಟಿಗಿ ಗಾಜನ್ನು ತೆಗೆದೆ,ಕೂಡಲೇ ಘಟ್ಟದ ತಂಪಾದ ಮುಸ್ಸಂಜೆ ಗಾಳಿ ರೊಯ್ಯನೆ ತೂರಿ ಬಂದು ಮೈ ಮನವನ್ನೆಲ್ಲಾ ಉಲ್ಲಾಸಗೊಳಿಸಿತು. ಆಗಲೇ ಕಾರು ಮನೆಯ ದಣಪೆಯ ಮುಂದೆ ನಿಂತಾಗಿತ್ತು.