ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

A Bicycle in Bettalli - ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಿಂದ ಆಯ್ದ ಭಾಗದ ಇಂಗ್ಲಿಶ್ ಅನುವಾದ

Gutthi was equally fascinated by two things: Jeevarathnaiah – the Christian priest’s ‘beesekal riding’ as well as by his magnificent teaching of such riding skills to Devaiah Gowda – the oldest son of Bettalli Kallaiah Gowda. In order to watch this splendid riding show, though Gutthi decided to move towards Bettalli, upon later thoughts, he decided to visit his holeya quarters first.

ಅಳಿಲು

ಪುಟ್ಟ ಕುಂಚ ಎತ್ತಿ ಹಿಡಿದು
ಅಲ್ಲಿ, ಇಲ್ಲಿ, ಎಲ್ಲ ಜಿಗಿದು
ಕಾಯಿಚೂರು ಹೆಕ್ಕಿ ಹಿಡಿದು
ತಿನ್ನುತಿದೆ ಅಳಿಲು ಮರಿ

ಸುತ್ತ ಮುತ್ತ ಕಳ್ಳ ನೋಟ
ನಡುವೆ ಒಮ್ಮೆ ತಿನ್ನುವಾಟ
ನೋಡಲಿಕ್ಕೆ ಬಹಳ ಚೋಟ
ಕಾಣುತಿದೆ ಅಳಿಲುಮರಿ

ಕನ್ನಡದಲ್ಲಿ DOS Commands

ನಾನು ಮೊದಲ ಬಾರಿಗೆ BAT FILE ನಿಂದ ಪ್ರಚೋದಿತನಾಗಿ ತಯಾರಿಸಿದ ಕನ್ನಡ command ಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.

create batch files containing following strings.

copy con hosa.bat
@ copy con %1

copy con alisu.bat
@ if not exist %1 echo KADATHA %1 ILLA
@ if exist %1 del %1

copy con bari.bat
@ if not exist %1 echo KADATHA %1 ILLA
@ if exist %1 type %1

copy con oresu.bat
@ cls
Example: To create a new file type command HOSA FILE_NAME

ಹೇಗಿದೆ ಹೊಸ ಕನ್ನಡ ಕಮಾಂಡ್ ಗಳು

ಬಶೀರ್ ಕೊಡಗು

ಚಂದಿರನ ನೋಡಿದವ

ಡರ್ಶು ಸಹಜ ಜೀವನ ನಡೆಸುವ ಸಾಮಾನ್ಯ ಮನುಷ್ಯ. ಅವನನ್ನು ಕಳ್ಳನೆಂದೂ, ಕೆಟ್ಟವನೆಂದೂ ಓರೆಗಣ್ಣಿನಲ್ಲಿ ನೋಡುವವರೇ ಹೆಚ್ಚು. ಇವ ಕಾಡಿನಲ್ಲಿ ಬೇಟೆಯಾಡುತ್ತ, ಅಲೆಯುತ್ತ ಜೀವನ ಸಾಗಿಸುವವ. ಒಂದು ದಿನ ಇವನನ್ನು ಭೇಟಿ ಮಾಡುವವರಲ್ಲಿ ಸರ್ವೇ ತಂಡದ ಮುಖ್ಯಸ್ಥ ಸರಕಾರದ ಆಫೀಸರ್ ಕೂಡ ಇರುತ್ತಾನೆ. ಅವನು ಡರ್ಶುವಿನಲ್ಲೂ ವಿಶಿಷ್ಟವಾದ ಗುಣವೊಂದನ್ನು ಕಾಣುತ್ತಾನೆ. ಆದರೆ ಅದು ಉಳಿದವರಿಗೆ ಬಯಲಾಗುವುದು ಡರ್ಶು ಅವರೊಂದಿಗೆ ತನಗಿರುವ ಕಾಡಿನ ಮೂಲೆ ಮೂಲೆಯ ಪರಿಚಯವನ್ನು ಹಂಚಿಕೊಳ್ಳುತ್ತ ಕಷ್ಟ ಸುಖಗಳಲ್ಲಿ ಭಾಗಿಯಾದ ಮೇಲೇನೆ. ಡರ್ಶು ಏನೂ ಬಯಸದೆ, ಕೊನೆಗೆ ಬರಬಹುದು ಎಂದೂ ಆಲೋಚಿಸದ ಒಂದು ಕೋವಿಗಾಗಿ ಎಲ್ಲ ಕೆಲಸ ಮಾಡುವುದು ಈಗಿನ ನಮ್ಮ urban ಜಗತ್ತಿಗೆ ಪರಿಚಯವೇ ಇಲ್ಲದ ಗುಣ. ಅದೆಲ್ಲ ಇರಲಿ, ಸರ್ವೇ ಉದ್ದಕ್ಕೂ ಜೊತೆ ನೀಡಿದ ಡರ್ಶು ಹೊಸ ಕೋವಿ ಹಿಡಿದು ಒಮ್ಮೆ ಕಾಡಿನಲ್ಲಿ ಬೇರೇನೋ ಹೊಡೆಯಲು ಹೋಗಿ ಹುಲಿಯೊಂದನ್ನು ಹೊಡೆದುಬಿಡುತ್ತಾನೆ. ಹುಲಿ ಹೊಡೆದಿದ್ದೇನೆಂದು ತಿಳಿದ ಕೂಡಲೆ ಅವನಲ್ಲಿ ಖಿನ್ನತೆ ಆವರಿಸಿಬಿಡುತ್ತದೆ.

ಏನು ಬೇಟೆಯಾಡಿದರೂ ಹುಲಿಯನ್ನು ಹೊಡೆಯಬಾರದು, ಹುಲಿ ಹೊಡೆದರೆ ಅದು ಪಾಪ ಎನ್ನುವ ನಂಬಿಕೆ ಅವನದು. ಕೊನೆಗೆ ಪಾಪ ಮಾಡಿದೆನೆಂಬ ಅದೇ ಕೊರಗು ಜೀವನದಲ್ಲಿನ ಆಸೆ ಹೋಗಿಸಿಬಿಡುತ್ತದೆ. ಕಾಡಿಗೆ ಹೋದರೆ ಹುಲಿರಾಯ ಬಿಡನು, ಊರ ಮನೆಯ ಜೀವನ ಒಗ್ಗದು. ಕೊನೆಗೊಂದು ದಿನ ಹೊಸ ಕೋವಿ ಹಿಡಿದು ಕಾಡಿನೆಡೆಗೆ ಹೊರಟ ಇವನು ಮತ್ತೆ ಕಾಣಿಸುವುದಿಲ್ಲ, ಅವನು ತೆಗೆದುಕೊಂಡು ಹೋದ ಕೋವಿ ಮಾತ್ರ ಪೋಲಿಸರಿಗೆ ಸಿಗುತ್ತದೆ.

ಇಲಿನಾಯ್ ರಾಜ್ಯದ, ವಿಲ್ಮೆಟ್ಟೆ, ಹಳ್ಳಿಯ ಬಳಿಯಲ್ಲಿರುವ 'ಬಹಾಯಿ ಪ್ರಾರ್ಥನಾಮಂದಿರ'

ನಾವು, (ನನ್ನ ತಮ್ಮ, ಅವರಮಗಳು, ರಜನಿ, ನನ್ನಮಗ ಪ್ರಕಾಶ್) ಚಿಕಾಗೋನಗರದ ’ಅಕ್ಕ ಕನ್ನಡವಿಶ್ವಸಮ್ಮೇಳನ,’ ವನ್ನು ಮುಗಿಸಿದ ನಂತರ ಅಲ್ಲಿನ ಹತ್ತಿರದ ಪ್ರದೇಶಗಳಲ್ಲಿ ಅಡ್ಡಾಡಿಕೊಂತ ನೋಡುತ್ತಾ ಹೋದೆವು. ಎಷ್ಟೋ ಪ್ರದೇಶಗಳು ನಮ್ಮಮನಸ್ಸನ್ನು ಸೂರೆಗೊಂಡವು. ಅವುಗಳಲ್ಲಿ ’ಮಿಚಿಗನ್ ಮಹಾಸರೋವರ’, ’ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿ’, ’ಸಿಯರ್ಸ್ ಗಗನಚುಂಬಿ ಕಟ್ಟಡ’, ಕೊನೆಯಲ್ಲಿ ’ಬಹಾಯಿ ಮಂದಿರ,’ ! ಅವುಗಳ ವಿವರಗಳನ್ನು ಸಂದರ್ಭೋಚಿತವಾಗಿ ತಿಳಿಸುತ್ತಾಹೋಗುತ್ತೇನೆ

ಅಮೆರಿಕದ ಇಲಿನಾಯ್ ರಾಜ್ಯದ ’ವಿಲ್ಮೆಟ್ಟೆ,’ ನಲ್ಲಿ ನಿರ್ಮಿಸಲ್ಪಟ್ಟ ’ಕಮಲದಮೊಗ್ಗಿನಾಕಾರದ ಬಹಾಯಿ ಮಂದಿರ,’ ವನ್ನು, ೩೦ ವರ್ಷಗಳ ಪರಿಶ್ರಮದಿಂದ ೧೯೫೩ ರಲ್ಲಿ ಮುಗಿಸಲಾಗಿ ಜನತೆಗೆ ಅರ್ಪಣೆಮಾಡಲಾಯಿತು. ವಿಲ್ಮೆಟ್ಟೆ, ಕುಕ್ ಕೌಂಟಿಯಲ್ಲಿರುವ ಪುಟ್ಟ ಊರು. ಇದು ಇಲಿನಾಯ್ ರಾಜ್ಯದ ಚಿಕಾಗೋನಗರದ ಉತ್ತರದಲ್ಲಿದೆ. ಇದಕ್ಕೆ ಹತ್ತಿರದಲ್ಲಿ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯವಿದೆ. ಅಲ್ಲದೆ ಇದು ಮಿಚಿಗನ್ ಮಹಾಸರೋವರಕ್ಕೆ ತೀರಾಸಮೀಪದಲ್ಲಿದೆ.ತಮ್ಮಪ್ರಾರ್ಥನೆಗಳನ್ನು ಮೌನವಾಗಿ ಹೇಳಲು ಹಾಗೂ ಭಗವಂತನನ್ನು ಧ್ಯಾನಿಸಲು ಆರಾಧನಾಮಂದಿರದಲ್ಲಿ ಪ್ರತಿಯೊಬ್ಬನಾಗರಿಕನಿಗೂ ಸ್ವಾತಂತ್ರವಿದೆ. ಇದಕ್ಕೆ ಜಾತಿ, ಮತ, ಧರ್ಮ, ದೇಶ, ಲಿಂಗ, ಬಡವ-ಬಲ್ಲಿದರ ಬೇಲಿಯಿಲ್ಲ. ಇನ್ನುಳಿದ ಬಹಾಯಿಮಂದಿರಗಳು, ನವದೆಹಲಿ, ಪನಾಮನಗರ, ಕಂಪಾಲ, ಫ್ರಾಂಕ್ ಫರ್ಟ್, ಸಿಡ್ನಿ ಹಾಗೂ ಏಪಿಯದಲ್ಲಿವೆ. ಫ್ರೆಂಚ್ ಕೆನಡಾದ ಕಟ್ಟಡಶಿಲ್ಪಿ, 'ಲೂಯಿಸ್ ಬೊರ್ಜೀಸ್ ' ರವರಿಂದ ಕಟ್ಟಲ್ಪಟ್ಟಿತು. ಈ ಸುಂದರ ಬಹಾಯಿ ಪ್ರಾರ್ಥನಾಮಂದಿರ, ಬಿಳಿಕಾಂಕ್ರೀಟ್ ಹಾಗೂ ಅಮೃತಶಿಲೆಗಳಸಮಯೋಚಿತ ಬಳಕೆಯಿಂದ ನಿರ್ಮಿಸಲಾಗಿದೆ. ಹತ್ತಿರದಲ್ಲಿ ವಾಸವಾಗಿದ್ದವರ ಪೈಕಿ ಪ್ರಖ್ಯಾತ ದಿವಂಗತ ಹಾಲಿವುಡ್ ನಟ, ’ಚಾರ್ಲ್ಟನ್ ಹೇಸ್ಟನ್,’ ರವರು ಪ್ರಮುಖರು.

ಪದಬೆಳಗು: ೩: ಸಜ್ಜನ

ಸಜ್ಜನ ಅನ್ನುವ ಮಾತಿಗೆ ‘ಹೆಂಡತಿ' ಎಂಬ ಅರ್ಥವಿದೆ!

ಇದು ತಿಳಿದದ್ದು ಡಾ. ಎಲ್. ಬಸವರಾಜು ಅವರು ಸಂಪಾದಿಸಿರುವ ಸರಳ ಪಂಪಭಾರತವನ್ನು ಬಳಸಿಕೊಂಡು
ಇತ್ತೀಚೆಗೆ ರಂಗಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೊಡನೆ ಚರ್ಚಿಸುತ್ತಿರುವಾಗ.

ಪಂಪಭಾರತದ ಒಂಬತ್ತನೆಯ ಆಶ್ವಾಸದ ೪೬ನೆಯ ಪದ್ಯದಲ್ಲಿ ಅದು ಸಜ್ಜನ ಎಂಬ ಪದ ಬಳಕೆಯಾಗಿದೆ.
ಅದಕ್ಕೆ ಬಸವರಾಜು ಅವರು ಹೆಂಡತಿ ಅನ್ನುವ ಅರ್ಥ ನೀಡಿದ್ದಾರೆ, ಆ ಪ್ರಸಂಗಕ್ಕೆ ಅದು
ಹೊಂದಿಕೊಳ್ಳುತ್ತದೆ.

ಪದ್ಯ ಹೀಗಿದೆ [ಓದಿಕೊಳ್ಳಲು ಅನುಕೂಲವಾಗುವಂತೆ ಸಾಲುಗಳನ್ನು ವಿಂಗಡಿಸಿ, ಪದಗಳನ್ನು ಬೇರೆ
ಮಾಡಿ ಕೊಟ್ಟಿದೆ. ಮೂಲದಲ್ಲಿ ಇದು ಉತ್ಪಲಮಾಲಾ ವೃತ್ತ]

ಭಾಗಮನ್ ಆಸೆವಟ್ಟು ಅಳಿಪಿ ಬೇೞ್ಪುದು ನಿನ್ನಯ ಕಲ್ತ ವಿದ್ಯೆ

ನೀನ್ ಆಗಳುಮ್ ಅಣ್ಣ ಬೇಡಿದಪೆ

ಏನೇ ಆಗಿದ್ರೂ ಬಂದ...

ಪೆಟ್ರೋಲ್ ಬೆಲೆಯೇರಿದ್ರೂ...
ಸಿಕ್ಕಾಪಟ್ಟೆ ಟ್ರಾಫಿಕ್ ಜ್ಯಾಮಿದ್ರೂ...
ಅತಿವೃಷ್ಟಿ-ಅನಾವೃಷ್ಟಿ ಕಾಲಿಗೆ ತೊಡರಿಕೊಂಡಿದ್ರೂ...
ಭಷ್ಟಾಚಾರ-ಭಯೋತ್ಪಾದನೆಯ ಕಾರ್ಮುಗಿಲು
ದಟ್ಟನೆ ಆವರಿಸಿದ್ರೂ...
ಐಟಿ-ಬಿಟಿ ಸೀಟಿ ಹೊಡೆಯುತ್ತಿದ್ರೂ...
ಮನಸ್ಸಿನ ನೆಮ್ಮದಿ ಕಾಣೆಯಾಗಿದ್ರೂ...
ಸ್ಥಿತಿ-ಗತಿಗಳ ಗೊಡವೆಗೆ ಮಣಿಯದೆ
ತಪ್ಪದೆ ಹೊರಬರುವ ಕವನದಂತೆ