ಗಾಂಧಿ ಜಯಂತಿ ಕಥಾಸ್ಪರ್ಧೆ...
[ಈ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಅದು ಇಲ್ಲಿದೆ.]
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದು ಮೂರು ತಿಂಗಳಾಗುತ್ತ ಬಂದಿದೆ. ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಮತ್ತೆ ಐದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ! ಬಹುಶಃ ಇನ್ನು ಏಳೆಂಟು ತಿಂಗಳಿನಲ್ಲಿ ಇಡೀ ದೇಶವೆ ಲೋಕಸಭೆಗೆ ತನ್ನ ಪ್ರತಿನಿಧಿಗಳನ್ನು ಚುನಾಯಿಸಲಿದೆ. ಈ ಚುನಾವಣೆಗಳಲ್ಲಿ ನಿಜವಾಗಲೂ ಆಗುವುದು ಏನು, ಜನರ ಮನಸ್ಥಿತಿ ಹೇಗೆ ವರ್ತಿಸುತ್ತದೆ, ಪ್ರಜಾಪ್ರಭುತ್ವ ಯಾವಯಾವ ಹಂತದಲ್ಲಿ ಹೇಗೆ ಬದಲಾಗುತ್ತದೆ, ಇತ್ಯಾದಿಗಳೆಲ್ಲ ಚುನಾವಣಾ ರಾಜಕೀಯವನ್ನು ಬಲ್ಲವರಿಗೆ ಚೆನ್ನಾಗಿ ಗೊತ್ತಿರುವ ಸಂಗತಿಯೆ. ಆದರೆ ಮಿಕ್ಕ ಬಹುಪಾಲು ಜನರಿಗೆ ಇವು ಅಷ್ಟಾಗಿ ಗೊತ್ತಾಗುವುದಿಲ್ಲ. ಯಾಕೆಂದರೆ ಅವರು ಓದುವ ಪತ್ರಿಕಾ ವರದಿಗಳಿಗೆ ಅಥವ ಟಿವಿ ಕಾರ್ಯಕ್ರಮಗಳಿಗೆ ಅವುಗಳದೇ ಆದ ಮಿತಿಯಿದೆ. ಈ ವರದಿಗಳು ಸರಳೀಕರಣಗೊಂಡು, ಸಾಮಾನ್ಯೀಕರಿಸಿಕೊಂಡು ಇರುತ್ತವೆ. ಆದರೆ ಒಂದು ಸಿನೆಮಾಗೆ ಆಗಲಿ, ಅಥವ ಒಂದು ಕತೆ-ಕಾದಂಬರಿಗೆ ಆಗಲಿ ಆ ಮಿತಿ ಇರುವುದಿಲ್ಲ. ಅವುಗಳ ಶಕ್ತಿ ಅವು ಯಾವುದೇ ಸಿದ್ಧಸೂತ್ರಗಳ ಹಂಗಿಲ್ಲದೆ, ಸಂಪಾದಕನ ಅಥವ ಒಂದು ಪತ್ರಿಕೆಯ ಅಥವ ಒಂದು ಮ್ಯಾನೇಜ್ಮೆಂಟಿನ ಧ್ಯೇಯಧೋರಣೆಯ ಹಂಗಿಲ್ಲದೆ ಸ್ವತಂತ್ರವಾಗಿ, ಸೃಜನಾತ್ಮಕವಾಗಿ ವಾಸ್ತವವನ್ನು ಕಟ್ಟಿಕೊಡುವುದರಲ್ಲಿ ಇರುತ್ತದೆ. ಹಾಗಾಗಿಯೆ ನಾನು ಹಾಲಿವುಡ್ನ ಅನೇಕ ನಿಜಜೀವಿತದ ಘಟನೆಗಳನ್ನು ಆಧರಿಸಿದ ಸಿನೆಮಾಗಳ
- Read more about ಗಾಂಧಿ ಜಯಂತಿ ಕಥಾಸ್ಪರ್ಧೆ...
- 1 comment
- Log in or register to post comments