ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಿಱಿ ಮತ್ತು ಕಿರಿ

ಕನ್ನಡದಲ್ಲಿ ಕಿಱಿ ಮತ್ತು ಕಿರಿ ಎರಡು ಅರ್ಥಗಳಲ್ಲಿ ಬಳಕೆಯಾಗುತ್ತದೆ. ಕಿಱ್ಱು=ಚಿಕ್ಕ(ಸಣ್ಣ). ಕಿರಿ=ನಗು (ಕ್ರಿಯಾಪದ) ಸಾಮಾನ್ಯವಾಗಿ ಎದಡನೆಯ ಕಿರಿಯನ್ನು ಹಲ್ಲುಕಿರಿ ಎಂದು ಸೇರಿಸಿ ಹೇೞುತ್ತೇವೆ. ತಮಿೞಿನಲ್ಲ್ಲೂ ಚಿಱು=ಚಿಕ್ಕ(ಸಣ್ಣ) ಚಿರಿ=ನಗು

ಪಾರು

ಪಾರ್‍, ಪಾರು, ಹಾರು (ಕ್ರಿಯಾಪದ) [ತಮಿಳು, ಮಲಯಾಳ: ಪಾರ್‍]
೧. ನೋಡು; ಅವಲೋಕಿಸು ೨. (ಸಮಯವನ್ನು) ಎದುರುನೋಡು; ನಿರೀಕ್ಷಿಸು; ಪ್ರತೀಕ್ಷಿಸು ೩. ಬಯಸು; ಅಪೇಕ್ಷಿಸು; ಹಾರೈಸು ೪. ವಿಚಾರಮಾಡು; ಯೋಚಿಸು; ಆಲೋಚನೆ ಮಾಡು
(ಪಾರುಪತ್ಯ = ಮೇಲ್ವಿಚಾರಣೆ, ಉಸ್ತುವಾರಿ; ಪಾರುವೀಳೆಯ = ದರ್ಶನವನ್ನು ಮಾಡಿದವರಿಗೆ ಕೊಡುವ ಗೌರವತಾಂಬೂಲ)

ಪಾರು, ಹಾರು (ನಾಮಪದ)

ರಾಜರಲ್ಲೊಬ್ಬ ರತ್ನ

ಜುಲೈ ೧೮, ೨೦೦೮.

ಜಯಚಾಮರಾಜೇಂದ್ರ ಒಡೆಯರು ಬದುಕಿದ್ದಿದ್ದರೆ, ಅವರು ಇಂದು ತಮ್ಮ ತೊಂಬತ್ತನೇ ವರ್ಷಕ್ಕೆ ಕಾಲಿಡುತ್ತಿದ್ದರು.

ಮೈಸೂರಿನ ಕೊನೆಯ ಅರಸರಾಗಿದ್ದ ಅವರು, ಕರ್ನಾಟಕ ಸಂಗೀತದಲ್ಲೂ, ಪಾಶ್ಚಾತ್ಯ ಸಂಗೀತದಲ್ಲೂ ಪ್ರವೀಣರಾಗಿದ್ದರು ಎನ್ನುವ ವಿಷಯ ಗೊತ್ತಿತ್ತೇ ನಿಮಗೆ?

ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

ರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್‌ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.

ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

ಪುಸ್ತಕದ ಲೇಖಕ/ಕವಿಯ ಹೆಸರು
ಜಯಂತ ಕಾಯ್ಕಿಣಿ

ರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್‌ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.

ಕುಡುಕರ ರಾಜ್ಯ

ಕಳ್ಳಭಟ್ಟಿಯೋ-ಸಾಚಾಭಟ್ಟಿಯೋ ಕುಡಿತ ಕೆಟ್ಟ ಚಟ.
ಕಳ್ಳಭಟ್ಟಿ ಕುಡಿದು ಒಟ್ಟೊಟ್ಟಿಗೆ ಜನ ಸತ್ತಾಗ-
ಸರಕಾರ ಅಲ್ಲಾಡುತ್ತದೆ,
ವಿರೋಧ ಪಕ್ಷ ಕಣ್ಣೀರು ಸುರಿಸುತ್ತದೆ,
ಅಬಕಾರಿ/ಪೋಲೀಸ್ ಇಲಾಖೆ ಚುರುಕಾಗುತ್ತದೆ,
ಒಂದೆರಡು ರೈಡ್-ಒಂದೆರಡು ಎರೆಸ್ಟ್, ಮುಗಿಯಿತು. ಪುನಃ ಮಾಮೂಲ್..

ಸಾರಾಯಿ ನಿಲ್ಲಿಸಿದರೆಂದು ಈ ಸರಕಾರವನ್ನು ಹೊಗಳಿದಿರಿ. ಹಳ್ಳಿಗರೆಲ್ಲಾ ಕುಡುಕರಲ್ಲ.

ಆಸೆ

ಆಸೆಗಳು ಬೇರುಗಳು
ಯಾಕಾಗಬೇಕು ಎಲೆಗಳು
ಕೇಳುತ್ತದೆ ಬೇರು ನೆಲೆ
ತನ್ನತನ ಬೆಳೆಸಲು
ಉಳಿಸಲು ಫಲಿಸಲು
ಭದ್ರ,ಸುಭದ್ರ
ಎಲೆ.....?
ಎಲೆಗೆ ನೆಲೆ ಕಾಂಡ
ಅಂಟಿಕೊಂಡಿರುವಷ್ಟು ಹೊತ್ತು
ನಂತರ?
ಗಾಳಿಯ ಸಾಥಿ
ಗಾಳಿಯ ಸವಾರಿಯಲ್ಲಿ
ವಿಶ್ವ ಪರ್ಯಟನೆ
ಕಂಡಷ್ಟೆ ಜಗತ್ತು
ದಿಗ್ಭ್ರಮೆ!
ಕೊನೆಗೆ
ಯಾವುದೊ ತಿಪ್ಪೆಗುಂಡಿ
ಮುಂದೊಮ್ಮೆ ಕಳೆತು
ನೆಲಕ್ಕೆ ಹೊಲಕ್ಕೆ ಗೊಬ್ಬರ