ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಕರ್ಣಾಟಕ ಭಾಗವತ’ ಗ್ರಂಥದ ಬಿಡುಗಡೆ ಸಮಾರಂಭ -ಮೊದಲು ಮೈಸೂರು, ಬೆಂಗಳೂರು, ಧಾರವಾಡ, ಕೊನೆಗೆ ಶಿವಮೊಗ್ಗೆಯಲ್ಲಿ !

1. ಮೈಸೂರಿನಲ್ಲಿ ಮೊಟ್ಟಮೊದಲ ಸಮಾರಂಭ. 'ರಾಜೆಂದ್ರವಿಲಾಸ್ ಸಭಾಂಗಣ. (೨೭ ನೆಯ ಜೂನ್ ೨೦೦೮, ಶುಕ್ರವಾರ ಸಾಯಂಕಾಲ ೬ ಘಂಟೆಗೆ)

ಅಧ್ಯಕ್ಷರು : ಶ್ರೀ. ಶ್ರೀ. ಸುತ್ತೂರು ಶಿವರಾತ್ರೀಶ್ವರ ಸ್ವಾಮೀಜಿಯವರು.

ಪುಸ್ತಕವನ್ನು ಬಿಡುಗಡೆಮಾಡುವವರು : ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ, ಡಾ.ವಿವೇಕ್ ರೈ ರವರು.

ಪರಿಚಯ ಭಾಷಣ : ಡಾ. ಹೊಳಲ್ಕೆರೆ ಚಂದ್ರಶೇಖರ್ .

ನೆನಪುಗಳ ಸುರುಳಿ ಬಿಚ್ಚಿ . . .

ಹೀಗೇ ಸುಮ್ಮನೆ, ಓರ್ಕುಟ್ ನಲ್ಲಿ ಸುತ್ತು ಹಾಕ್ತಾ ಇದ್ದೆ. ಹಳೆಯ ಸ್ನೇಹಿತರು ... ಸಿಕ್ಕ ಹಾಗೇ ಹಳೆಯ ನೆನಪುಗಳು ಬಿಚ್ಚಿಕೊಂಡವು. ಓರ್ಕುಟ್ ನ ಒಂದು ಸೈಟ್ನಲ್ಲಿ ಸೈಂಟ್ ಆನ್ಸ್ ಹೈ ಸ್ಕೂಲ್ ನ ಕಮ್ಯುನಿಟಿ ಲಿಂಕ್ ಸಿಕ್ತು. ಅದ್ರಲ್ಲಿ ಯಾರೋ" ನಿಮ್ಮ ಫೇವರಿಟ್ ಟೀಚರ್ ಯಾರು " ಅಂತ ಪ್ರಶ್ನೆ ಕೇಳಿದ್ದ್ರು. ಸಂಧ್ಯಾ ಮಿಸ್, ಕಾರ್ಮ್ ಲೀಟಾ ಮಿಸ್, ಡೋರಿನ್ ಮಿಸ್ ... ಹೀಗೇ ಹಲವು ಹೆಸರುಗಳು ಕಂಡವು.

ನಾನು ಶಾಲೆ ಕಲಿತದ್ದು , ಮಂಗಳೂರಿನ ಸೈಂಟ್ ಆನ್ಸ್ ಕನ್ನಡ ಪೈಮರಿ ಶಾಲೆಯಲ್ಲಿ. ಆದ್ರೆ ನನಗೆ ಹೈಸ್ಕೂಲಿನ ಎಲ್ಲ ಟೀಚರ್ಸ್ ಪರಿಚಯ. ಯಾಕಂದ್ರೆ, ನನ್ನ ಅಪ್ಪ ಸೈಂಟ್ ಆನ್ಸ್ ಹೈಸ್ಕೂಲಿನಲ್ಲಿ ಟೀಚರ್ ಆಗಿದ್ರು. . ನಾನು ಮತ್ತು ನನ್ನ ತಮ್ಮ ಮಧ್ಯಾಹ್ನ ಅಪ್ಪನ ಸ್ಟಾಫ್ ರೂಮ್ಗೆ ಊಟ ಮಾಡಲು ಹೋಗ್ತಾ ಇದ್ದೆವಲ್ಲಾ, ಹಾಗಾಗಿ ಎಲ್ಲ ಟೀಚರ್ಸ್ ನಂಗೆ ಗೊತ್ತಿದ್ರು. ಹಾಗೇ ಓರ್ಕುಟ್ ನಲ್ಲಿ ನನ್ನ ಪ್ರೈಮರಿ ಶಾಲೆಯ ಲಿಂಕ್ ಸಿಗುತ್ತಾ ಅಂತ ಹುಡುಕಿದೆ. ಉ ಹೂಂ. ಇಲ್ಲ. ಆದ್ರೆ. ಅದೇ ನೆಪ ಆಯ್ತು.

ಹಾಗೇ ಕೂತು, ನನ್ನ ಹಳೆಯ ಟೀಚರ್ಸ್ ಗಳ ನೆನಪು ಮಾಡ್ದೆ. ನಾವು ಚಿಕ್ಕವರಿರುವಾಗ, ಟೀಚರ್ ಗಳ ಹೆಸರು ನಮಗೆ ಗೊತ್ತೇ ಇರಲಿಲ್ಲ. ಒಂದನೇ ಕ್ಲಾಸ್ ಟೀಚರ್ , ಎರಡನೇ ಕ್ಲಾಸ್ ಟೀಚರ್ , ಮೂರನೇ ಕ್ಲಾಸ್ ಟೀಚರ್ , ನಾಲ್ಕನೇ ಕ್ಲಾಸ್ ಟೀಚರ್ .... ಹೀಗೆ. ಯಾವಾಗ ಟೀಚರ್ ಗಳ ಹೆಸರು ನನಗೆ ಗೊತ್ತಾಯ್ತು ಅಂತ ನೆನಪಾಗ್ತಾ ಇಲ್ಲ. ಗ್ರೇಸಿ ಟೀಚರ್, ಲೀಟಾ ಟೀಚರ್, ಮೇರಿ ಟೀಚರ್ ... ಅಂತ ಅವರ ಹೆಸರುಗಳು. ಆದರೆ, ಅವರ ಹೆಸರು ಗಳೊಂದಿಗೆ ಅವರ ಮುಖಗಳು ತಳಕು ಹಾಕುವುದೇ ಇಲ್ಲ. ಒಂದನೇ ಕ್ಲಾಸ್ ಟೀಚರ್ ಅಂತ ಹೇಳಿದ ಕೂಡಲೇ, ಟೀಚರ್ ನೆನಪಾಗ್ತಾರೆ. ಶಾಲೆಯ ದಿನಗಳೆಲ್ಲ ಕಣ್ಮುಂದೆ ಓಡಾಡ್ತವೆ.

ಶ್ರೀಬಸವೇಶ್ವರರ ವಚನಗಳು-3

****ಜಾತಿ ಪದ್ಧತಿ 'ಸಲ್ಲ' ಎಂದ ಬಸವಣ್ಣ****

ಎಲ್ಲ ಕೆಲಸಗಳೂ ಸಮವೇ. ಕಾಯಕದಲ್ಲಿ ಮೇಲು-ಕೀಳು ಎಂಬುದಿಲ್ಲ. ಜಗದಲಿ ಕಿವಿಯಿಂದ ಹುಟ್ಟಿದವರಾರು ಇಲ್ಲ..
ಹೀಗಿರುವಾಗ ಉಚ್ಚನೀಚ ಭಾವನೆಗಳು ಸಲ್ಲ. ಬಸವಣ್ಣನವರು ವ್ಯಕ್ತಿಯ ಶ್ರೇಷ್ಟತೆ
ನಿರ್ಣಯ ಆಗುವುದು ಹುಟ್ಟಿದ ಜಾತಿಯಿಂದಲ್ಲ ಬದುಕುವ ರೀತಿಯಿಂದ ಎಂದು ಈ ವಚನದಲ್ಲಿ ಮಾರ್ಮಿಕವಾಗಿ
ತಿಳಿಸಿದ್ದಾರೆ.

ಸೀತೆಯ, ಭೂಮಿಜಾತೆಯ

ಮೊನ್ನೆ ತಾನೇ ಅನಿವಾಸಿ ಅವರು ದಾಸರ ಪದದಲ್ಲಿ ಹೆಣ್ಣಿನ ಚಿತ್ರಣ ಸರಿಯಾಗಿಲ್ಲ ಅನ್ನುವ ಬರಹವೊಂದನ್ನು ಹಾಕಿದ್ದರು. ಅದನ್ನು ಓದುತ್ತಾ ನನಗೂ ಸ್ವಲ್ಪ ಯೋಚನೆ ಹತ್ತಿತು. ಒಂದು ವಿಧದಲ್ಲಿ ನೋಡಿದರೆ, ಹಿಂದಿನ ಕಾವ್ಯನಾಟಕಗಳಲ್ಲಿ ಹೆಚ್ಚು ನಾಯಕ ಪಾತ್ರ ಪ್ರಧಾನವೇ. ಮೂಲದ ವ್ಯಾಸ ಭಾರತದಲ್ಲಿ ಹೇಗೋ ಗೊತ್ತಿಲ್ಲ, ಆದರೆ ಕುಮಾರವ್ಯಾಸನ ಕನ್ನಡ ಭಾರತದಲ್ಲಂತೂ ಅಂತಹ ಮುಖ್ಯವಾದ ದ್ರೌಪದಿಯ ಪಾತ್ರಕ್ಕೇ ಹೆಚ್ಚಿ ನ್ಯಾಯ ದೊರೆತಿಲ್ಲ ಎಂದು ನನ್ನ ಅಭಿಪ್ರಾಯ. ಸೀತೆ ದ್ರೌಪದಿಯರಂತಹ ಪಾತ್ರಗಳು ದು:ಖವನ್ನು ಅನುಭವಿಸಲೇ ಹುಟ್ಟಿದ ಹಾಗೆ ಕಾಣುತ್ತವೆ. ಈ ಇಬ್ಬರಿಗೂ ಉದ್ದನೆ ಕೂದಲಿತ್ತೆಂಬ ನಂಬಿಕೆ ಇರುವುದರಿಂದ, ಜಡೆಗೆ ಕತ್ತರಿ ಹಾಕದ ಹಿಂದಿನ ಕಾಲದವರು ಹೆಣ್ಣುಮಕ್ಕಳಿಗೆ ಉದ್ದ ಕೂದಲಿದ್ದರೆ ಸೀತೆಯಂತೆ, ದ್ರೌಪದಿಯಂತೆ ಕಷ್ಟ ಅನುಭವಿಸುವಳೋ ಎಂದು ಯೋಚನೆ ಮಾಡುತ್ತಿದ್ದರು.

ಅದಿರಲಿ. ಮೊನ್ನೆ ಸೀತೆಯ ಮೇಲೆ ವಿಜಯದಾಸರು ಬರೆದ ಒಂದು ರಚನೆಯನ್ನು ಮೊದಲಬಾರಿಗೆ ಕೇಳಿದೆ. ಹೆಚ್ಚಾಗಿ ಹರಿದಾಸರು ವಿಠಲನ ಮೇಲೆ, ಇಲ್ಲದಿದ್ದರೆ ರಾಮ ಕೃಷ್ಣನ ಮೇಲೆ ಬರೆದವರು. ಸೀತೆಯನ್ನು ಕೇಂದ್ರವಾಗಿಟ್ಟುಕೊಳ್ಳುವಂತಹ ಹಾಡುಗಳು ಕಡಿಮೆಯೇ. ಸರಳವಾಗಿದ್ದೂ ಸುಂದರವಾದ ಈ ಹಾಡು ನನಗೆ ಬಹಳ ಹಿಡಿಸಿತು. ಅದಕ್ಕೇ ಇಲ್ಲಿ ಬರೆಯುತ್ತಿದ್ದೇನೆ.

ನಮ್ಮ ಮಗುವಿಗೊಂದು ಹೆಸರಿಡಿ

ಆತ್ಮೀಯ ಸಂಪದಿಗರಿಗೆಲ್ಲಾ ನನ್ನ ನಮಸ್ಕಾರಗಳು..................
ಈಗ ನಿಮ್ಮೊಂದಿಗೆ ನನ್ನ ಸಂತೋಷ ಹಂಚಿಕೊಳ್ಳುವ ಸಮಯ.
ನಮ್ಮ ಜೀವನದಲ್ಲಿ ಮತ್ತೊಂದು ಜೀವ ಸೇರ್ಪಡೆಯಾಯಿತು.
ನಾನು ಮತ್ತೊಂದು ಹೆಣ್ಣು ಮಗುವಿನ ತಂದೆಯಾದೆ.
ತಾಯಿ ಮತ್ತು ಮಗು ಆರೊಗ್ಯವಾಗಿದ್ದಾರೆ.
ಈಗ ಬಂತು ಸಮಸ್ಯೆ "ಮಗುವಿಗೊಂದು ಹೆಸರು".

ಮುಂದಿನ ದಾರಿ

ಕರಿಹೈದರ ಕವನದಿಂದ:

ಮತ್ತೊಂದು ದಿನ ಮತ್ತೊಂದು ಹಾಡು
ಭಾರವೆನಿಸಿತು ಮನ ಮತ್ತದೇ ಪಾಡು

ಹತ್ತಿಳಿಯಿತು ಎಲ್ಲಿಂದೆಲ್ಲಿಗೆ
ಅದೃಷ್ಟ
ಪಾದರಸದಂತೆ ಹೊತ್ತಿನೊಡನಾಡಟದಲಿ
ಉಳಿಯಬಾರದೆ ಕೊಂಚ
ಮಿಗಲಿಲ್ಲ ಒಂದಿನಿತು ಹರಿದರಿದು ಸೋರಿ

ಕೊನೆಯಿರದ ತೊರೆಯಾಯ್ತು
ಸಮಯ
ಆಲೋಚನೆಯು ಹುತ್ತ ಇರುವೆಗಳ
ಬಯಲಾಯ್ತು ಜೀವನ

ಕನಸು ಭವಿಷ್ಯ ಸೂಚಕವೇ?

ನನಗೆ ಸುಮಾರು ಐದು ವರ್ಷದ ಹಿಂದೆ ಸತತವಾಗಿ ಒಂದು ಹದಿನೈದು ದಿನ ಕನಸೊಂದು ಬೀಳುತ್ತಲೇ ಇತ್ತು.
ಆ ಕನಸು ಹೀಗಿತ್ತು

ಮಡಿವಾಳ ಪೋಲಿಸ್ ಸ್ಟೇಷನ್ ಎದುರುಗಡೆ ಮಸೀದಿಯೊಂದಿದೆ
ನಾನು ಯಾವುದೋ ಕಾರಣಕ್ಕೆ ಆ ಮಸೀದಿಯ ಒಳಗಡೆ ಹೋಗುತ್ತೇನೆ

ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ

ಚಕ್ರವತ್ಪರಿವರ್ತಂತೇ ದು:ಖಾನಿ ಚ ಸುಖಾನಿ ಚ ಅನ್ನೋದು ಸಂಸ್ಕೃತದ ಪ್ರಸಿದ್ಧ ಮಾತು. ಅಂದರೆ, ಸೋವು ನಲಿವುಗಳೆರಡೂ ಚಕ್ರದಂತೆ ಮತ್ತೆ ಮತ್ತೆ ತಿರುಗಿ ತಿರುಗಿ ಮರಳಿ ಮರಳಿ ಬರುತ್ತಿರುತ್ತವೆ ಎಂದರ್ಥ. ಚಕ್ರದಂತೆ ಬರೋದು ಬರೀ ಸುಖದು:ಖಗಳು ಮಾತ್ರ ಅಲ್ಲ ಅನ್ನೋದು ಮಾತ್ರ, ಚಿಕ್ಕ ಮಕ್ಕಳಿಗೂ ಗೊತ್ತಿರೋ ಸಂಗತಿ. ಹಗಲು ರಾತ್ರಿಯ ಚಕ್ರಕ್ಕಿಂತ ಬೇಕೇ ಮರಳಿ ಮರಳಿ ಸುತ್ತುವ ಚಕ್ರ? ಅದೇ ರೀತಿ ಆಕಾಶದಲ್ಲಿ ಇನ್ನೊಂದು ಕಾಲಕಾಲಕ್ಕೆ ಮರಳಿ ಬರೋ ಚಕ್ರ ಇದೆ - ಆದರೆ ಇದು ಸಾಧಾರಣವಾಗಿ ಎಲ್ಲರಿಗೂ ತಿಳಿದಿರಲ್ಲ, ಅಷ್ಟೇ. ಇದೇ ಗ್ರಹಣ ಚಕ್ರ (Saros cycle- ಸೆರಾಸ್ ಚಕ್ರ. ಇದಕ್ಕೆ ನಮ್ಮ ದೇಶದಲ್ಲಿ, ನಮ್ಮ ಭಾಷೇಲಿ ಬೇರೆ ಹೆಸರಿದೆಯೋ ಇಲ್ಲವೋ ತಿಳಿಯದು. ಅದಕ್ಕೆ ಅರ್ಥ ಗೊತ್ತಾಗೋ ಹಾಗೆ ಗ್ರಹಣಚಕ್ರ ಅನ್ನೋ ಭಾವಾನುವಾದವನ್ನು ಮಾಡಿದೀನಿ. ತಪ್ಪಿದ್ದ್ರೆ ತಿದ್ದಿ! ತಿದ್ಕೋತೀನಿ.)

ಕೆಲವು ದಿನದ ಮೊದಲು ರಾಹು-ಕೇತು ಕಾಟ ಅಂತ ಸ್ವಲ್ಪ ಗಳಹಿದ್ದೆ.ಮತ್ತೆ ಇವತ್ತು ಅದನ್ನ ಮುಂದುವರ್ಸೋಣ ಅಂತ ..ಅಲ್ಲದೆ, ಗ್ರಹಣಚಕ್ರ ಅರ್ಥ ಆಗ್ಬೇಕಾರೆ ರಾಹು ಕೇತು ವಿಷ್ಯ ಸ್ಪಷ್ಟ ಆಗ್ಬೇಕು ಮೊದಲು.

ನಮಗೆಲ್ಲ ಸೂರ್ಯನ ಸುತ್ತ ಭೂಮಿ ಸುತ್ತೋದೂ, ಭೂಮಿ ಸುತ್ತ ಚಂದ್ರ ಸುತ್ತೋದೂ ಗೊತ್ತೇ ಇದೆ. ಆ ಮೇಲೆ, ಒಂದು ಕಾಕತಾಳೀಯವಾದ ಒಂದು ವಿಚಾರದಿಂದ ಗ್ರಹಣಗಳನ್ನು ನಾವು ನೋಡ್ತೀವಿ. ಅದೇನಂದ್ರೆ, ನಮಗೆ ಭೂಮಿಯಿಂದ ನೋಡೋವಾಗ ಸೂರ್ಯನ ಗಾತ್ರವೂ, ಚಂದ್ರನ ಗಾತ್ರವೂ ಸರಿಸುಮಾರು ಒಂದೇ. ಚಂದ್ರನಿಗಿಂದ ಸೂರ್ಯ ಸುಮಾರು ನಾನೂರರಷ್ಟು ದೊಡ್ಡವ್ನು. ಹಾಗೇ ಸುಮಾರು ನಾನೂರರಷ್ಟು ಹೆಚ್ಚು ದೂರ್ದಲ್ಲೂ ಇದಾನೆ. ಅದಕ್ಕೆ ನಮ್ಗೆ ಅಪರೂಪಕ್ಕಾದ್ರೂ ಪೂರ್ಣ ಸೂರ್ಯಗ್ರಹಣ ಕಾಣ್ಸುತ್ತೆ. ಹತ್ತು, ಇಪ್ಪತ್ತು ಚಂದ್ರಗಳಿರೋ ಗುರು, ಶನಿಗಳ ಮೇಲೆ ಈ ರೀತಿ ಗ್ರಹಣಗಳು ಕಾಣೋಲ್ಲ. ಗ್ರಹಣ ಸಾಧ್ಯವಾಗೋಕೆ ಬೇಕಾದ ಇನ್ನೊಂದು ವಿಷಯಏನೂಂದ್ರೆ, ಭೂಮಿ ಸೂರ್ಯನ ಸುತ್ತ ಸುತ್ತೋ ಪಾತಳೀನೂ,ಚಂದ್ರ ಭೂಮಿ ಸುತ್ತ ಸುತ್ತೋ ಸಮಪಾತಳೀನೂ ಸುಮಾರಾಗಿ ಒಂದೇ. ಹಾಗಾಗಿ, ಒಂದೊಂದು ಸಲ ಸೂರ್ಯ ಭೂಮಿ ನಡುವೆ ಚಂದ್ರನೂ, ಕೆಲವೊಮ್ಮೆ ಸೂರ್ಯ ಚಂದ್ರ ನಡುವೆ ಭೂಮಿಯೂ ಬರತ್ತೆ. ಆಗ ಒಂದರ ನೆರಳು ಒಂದರ ಮೇಲೆ ಬಿದ್ದು ಗ್ರಹಣ ಆಗತ್ತೆ. ಇದು ಬಿಡಿ, ಚಿಕ್ಚಿಕ್ ಮಕ್ಕಳ್ಗೂ ಗೊತ್ತಿರೋ ವಿಷ್ಯ.