ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?

ಮೊನ್ನೆ ಯಾವುದೋ ದೆವ್ವದ ಕನ್ನಡ ಫಿಲ್ಮ ಟಿ.ವಿ.ಲಿ ಬರ್ತಿತ್ತು
ಯಾವ ಸಿನಿಮಾ ಅಂತ ಗೊತ್ತಿಲ್ಲ ಯಾರು ಮಾಡಿದ್ರು ಹೇಗಿತ್ತು ಅನ್ನೊದನ್ನ ಹೇಳ್ದೆ ಇರೋದೆ ವಾಸಿ ಅಷ್ಟು ಕೆಟ್ಟದಿತ್ತು

ಆದ್ರೆ ನನ್ನ ಕುತೂಹಲ ಕೆರಳಿಸಿದ್ದು ಒಂದು ಅಂಶ
ಒಂದೆಡೆ ಬಿಳಿಸೀರೆ ಉಟ್ಟ ಹೆಣ್ಣು ನಾನು ಆತ್ಮ ಅಂತಾಳೆ
ಇನ್ನೊಂದೆಡೆ ಜೇನ್ಸ್ ತೊಟ್ಟ ಅದೇ ಹೆಣ್ಣು ನಾನು ಭೂತ

ಎಣ್ಮಯ ಎಂದರೆ ಯಾರು

ನೆನ್ನೆ ಚಂದನದಲ್ಲಿ ಥಟ್ಟಂತ ಹೇಳಿ ಕಾರ್ಯಕ್ರಮ ಬರುತ್ತಿತು
ಅಲ್ಲಿ ಒಂದು
ಎಣ್ಮಯ ಎಂಬ ಮಾತಿತ್ತು
ನಂತರ ನಿರೂಪಕರು
ಎಣ್ಮಯ ಎಂದರೆ
ಶಿವನ ಹೆಸರು
ಎಂಟು ಮೈಯ್ಯುಳ್ಳವನು ಎಂದು ವಿವರಿಸಿದರು
ಶಿವನಿಗೆ ಎಂಟು ಮೈ ಎಂಬ ಕಲ್ಪನೆಯೇ ನನ್ಗೆ ಹೊಸದು

ತಿಳಿದವರು ಹಿನ್ನೆಲೆ ವಿವರಿಸುವಿರಾ

ತಂಗಿಗಾಗಿ

ಹತ್ತು ದಿನಗಳು ಅದೃಷ್ಟ ಹತ್ತಿತ್ತು ಬೆನ್ನು,
ಸಂತೋಷವಾಗಿತ್ತು ಸಿಕ್ಕಷ್ಟು ಕುಡಿಕೆ ಹೊನ್ನು,
ಪರಿಚಯವಾದಳು ತಂಗಿ ವನಿತಾ, ನನ್ನ ಪ್ರೀತಿಯ ವನ್ನು.

ಏಳೆಂಟು ದಿನಗಳಲ್ಲಿ ಆಗಿತ್ತು ಬೆಟ್ಟಿ
ಮನದ ಸಹೋದರಿ ಸ್ಥಾನದಲ್ಲವಳು ಗಟ್ಟಿ,
ಅವಳೇ ತಂಗಿ ಶ್ರೀದೇವಿ, ನನ್ನ ಪ್ರೀತಿಯ ಪುಟ್ಟಿ.

ನನ್ನ ಕೈಗೆ ಹಾಕಿದ ರಕ್ಷಾ ಬಂಧನ,
ಶೋಭಿಸಿಲ್ಲ ಕೇವಲ ನನ್ನ ಕೈಯನ್ನ,

ಕುಡಿಯುವ ನೀರನ್ನು ಕ್ಲೋ'ರಿನ್'ನಿಂದ ತೊಳೆಯಬಹುದೇ?

“ ಈ ದಿನದ ನ್ಯೂಸ್-
ವಿದ್ಯಾರ್ಥಿಗಳು ಅಸ್ವಸ್ಥ

ತುಮಕೂರಿನ ನಗರಸಭೆ ನೀರು ಶುದ್ಧೀಕರಣಗೊಳಿಸಲು ತಂದಿಟ್ಟಿದ್ದ ಕ್ಲೋರಿನ್ ಅನಿಲಟ್ಯಾಂಕ್ ಸೋರಿ ಅದನ್ನು ಸೇವಿಸಿದ ೩೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ನಿಜಸ್ಥಿತಿ ಮರೆಮಾಚುವ ಹೆಮ್ಮೆಯ ಸಂಗತಿ

ಬೆಳಗಾಗಿ ನ್ಯೂಸ್ ಓದೋವಾಗ ಒಂದು [:http://www.ibnlive.com/news/emergency-pill-for-west-pharma-giant-indias-arrives/67029-7.html|ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆಯ] ವೆಬ್ಸೈಟಿನ ಸುದ್ದಿಯೊಂದು ಹೀಗಿತ್ತು:

"India is emerging as a destination for high value R&D alongside the lower value manufacturing and clinical trial work for western pharmaceutical giants, says a study by US based academic Vivek Wadhwa."

"ಕ್ಲಿನಿಕಲ್ ಟ್ರಯಲ್" ನಡೆಸಲು ಭಾರತ ದೇಶ ನೆಲೆಯಾಗಿರುವುದು "emerging" ಅಥವ "high value" ಅನ್ನೋ ಪದಗಳ ಜೊತೆ ಮೂಡುವುದೇ ಸರಿಯಿಲ್ಲ. ಒಂದೊಮ್ಮೆ ಮೂಡಿದರೆ 'ಎಮರ್ಜಿಂಗ್' ಮತ್ತು 'ಹೈ ವ್ಯಾಲ್ಯೂ' ಎನ್ನುವುದು ಯಾರಿಗೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ! ಭಾರತ ಹೀಗೊಂದು "ಕ್ಲಿನಿಕಲ್ ಟ್ರಯಲ್" ಅಥವ ಹೊಂದಿಕೊಂಡಂತೆ "R&D" ನೆಲೆಯಾಗಿರುವುದು ಇಲ್ಲಿ ದುಡ್ಡು ಕೊಟ್ಟು ಪ್ರಯೋಗಗಳಿಗೆ ಬೇಕಾದುದನ್ನೆಲ್ಲವನ್ನೂ ಹೆಚ್ಚಿನ ತಲೆನೋವಿಲ್ಲದೆ ರೆಡಿಮಾಡಬಹುದಾಗಿರುವುದರಿಂದ ಅಷ್ಟೆ. ಪ್ರಯೋಗಕ್ಕೆ ಒಪ್ಪುವ ಬಡ ಪೇಶೆಂಟುಗಳು ಸಿಗುತ್ತಾರೆ. ಏನು ನಡೆಯುತ್ತಿದ್ದರೂ ಹೆಚ್ಚು ತಲೆಕೆಡಿಸಿಕೊಳ್ಳದ ತಲೆಕೆಡಿಸಿಕೊಳ್ಳಬೇಕಾದವರು ಸಿಗುತ್ತಾರೆ. ತಮ್ಮ ಸ್ವಾರ್ಥಕ್ಕೆ ಯಾವುದೋ ಹೊಸ ಡ್ರಗ್ಗುಗಳನ್ನ ಏನೂ ಹಿಂಜರಿಕೆಯಿಲ್ಲದೇ ಬರೆದುಕೊಡುವ ಡಾಕ್ಟರರು ಸಿಗುತ್ತಾರೆ. ಡ್ರಗ್ ಕಂಪೆನಿಗಳ ಲಾಬಿ ಅಲ್ಲಿಲ್ಲಿ ಹೊರಬಂದ ದನಿಯನ್ನು ಹತ್ತಿಕ್ಕುವಷ್ಟು ಕ್ಷಮತೆಯುಳ್ಳದ್ದಾಗಿದೆ. ಹೀಗಿರುವಾಗ ಭಾರತದಲ್ಲಿ ಇವೆಲ್ಲ ನಡೆಯುತ್ತಿರುವುದು ಆಶ್ಚರ್ಯದ ಸಂಗತಿಯಲ್ಲ.

ಹಣತೆಯ ದಾರಿ

ಹತ್ತಿ ಉರಿಯುತಿರಲಿ ಹಣತೆ
ವಿಷಬೀಜದ ಬಸಿರ ಬೆಳಾಕಾಗಿಸಿ,
ಮನದುಗಡ ಗುಡ್ಡಗಳನೇರಿ ಬರಲಿ,
ಕೆಲ ಕಾಲ್ದರಿಯಲಿ ತಪ್ಪಿ ಕಣಿವೆಯ ಸೇರೆ
ಮಿಂಚಂತೆ ಮೀರಿ ಬರಲಿ,
ಮತ್ತೇರು ಹಾದಿಯ ತೋರಲಿ.
ಸವೆದ ದಾರಿಯಲಿ ನೆಳಲ ಹುಡಕದಂತೆ
ಕತ್ತಲೆಯೂ ತುಂಬುತಾ ಇರಲಿ.

ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ

ಮುಜರಾಯಿ ಇಲಾಖೆಯಿಂದ ಹೊರಡಿಸಿದ ಆದೇಶ ವಿವಾದವೆದ್ದು ಈಗ ಆದೇಶವನ್ನೇ ಹಿಂಪಡೆಯಲಾಗಿದೆ.

ಯಡಿಯೂರಪ್ಪನವರ ಹೆಸರಿನಲ್ಲಿ ಅರ್ಚನೆ ಮಾಡಿದ್ದರೆ ಏನು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರಲಿಲ್ಲ. ಆದರೂ ಏಕೆ ವಿವಾದವೆಬ್ಬಿಸಿದರು?

ಹಿಂದೆ ರಾಜ ಮಹಾರಾಜರುಗಳ ಕಾಲದಲ್ಲಿ ಹೀಗೆಯೇ ನಡೆಸಲಾಗುತ್ತಿತ್ತು. ಈಗ ಏಕೆ ಇದಕ್ಕೆ ಗೊಣಗಾಟ?