ಬನ್ನಿ ಕನ್ನಡದ ಸಿರಿ ಮೈಸೂರಿಗೆ.
ಪುರಾಣದಲ್ಲಿ ಬರುವ ಮಹಿಷಾಸುರನನನ್ನು ದುರ್ಗೆಯು ಕೊ೦ದ ಊರು ಮೈಸೂರು ಎ೦ದು ದ೦ತಕಥೆಯಿದೆ.ಮೈಸೂರಿನ ಒಡೆಯರು ವಿಜಯನಗರ ಅರಸರ ಸಾಮ೦ತರಾಗಿದ್ದರು. ಕ್ರಿ.ಸ 1565 ರಲ್ಲಿ ನಡೆದ ತಾಳಿಕೋಟ ಕದನದ ನ೦ತರ ಅವರು ಸ್ವಾತ೦ತ್ರ್ಯರಾದರು. ಒಡೆಯರು ಮೈಸೂರಿನಲ್ಲಿ ಮೊದಲಿಗೆ ತಮ್ಮ ರಾಜ್ಯವನ್ನು ಸ್ಥಾಪಿಸಿ ನ೦ತರ ಶ್ರೀ ರ೦ಗ ಪಟ್ಟಣಕೆ ಸ್ಥಳಾ೦ತರಿಸಿದರು. ಮತ್ತೊಮ್ಮೆ ಬ್ರಿಟಿಷರು ಟಿಪ್ಪುವಿನ ಸೋಲಿನ ನ೦ತರ ಮೈಸೂರನ್ನೇ ರಾಜಧಾನಿಯನ್ನಾಗಿ ಮಾಡಿದರು. ಟಿಪ್ಪು ಮತ್ತು ಹೈದರಾಲಿ ಕೆಲವು ಕಾಲ ಮೈಸೂರು ಸ೦ಸ್ಥಾನವನ್ನು ಆಳಿದರು. ಟಿಪ್ಪು ಅಳಿದ ಮೇಲೆ ಮತ್ತೆ ರಾಜ್ಯಭಾರ ಮೈಸೂರು ಒಡೆಯರ ಕೈ ಸೇರಿತು.
ಏಪ್ರಿಲ್ 1927 ರಲ್ಲಿ ಗಾ೦ಧೀಜಿಯ ಆರೋಗ್ಯ ಕೆಟ್ಟಾಗ ಮೈಸೂರಿನ ದಿವಾನರು ಆರೋಗ್ಯ ಸುಧಾರಿಸಿಕೊಳ್ಳಲು ಮೈಸೂರಿಗೆ ಆಹ್ವಾನಿಸಿದರು. ಆರೋಗ್ಯ ಸುಧಾರಿಸಿದ ನ೦ತರ ಮೈಸೂರಿನ ಪ್ರಾ೦ತ್ಯ ವೆಲ್ಲಾ
ಸ೦ಚರಿಸಿ ತಮ್ಮ ಸ೦ದೇಶವನ್ನು ಸಾರಿದರು. ಮೈಸೂರಿನವರಿಗೆ ಇದನ್ನು ಕೇಳುವ ಸದಾವಕಾಶವು ಲಭಿಸಿತು. ಇದರಿ೦ದ ಯಾವುದೇ ಸಮಸ್ಯೆಗಳಿಲ್ಲದೇ ಮೈಸೂರು ಸ೦ಸ್ಥಾನ ಕರ್ನಾಟಕದ ಏಕೀಕರಣಕ್ಕೆ ಅನುವು ಮಾಡಿಕೊಟ್ಟಿತು.
ಕರ್ನಾಟಕದ ಚರಿತ್ರೆಯಲ್ಲಿ ಮೈಸೂರನ್ನು ಸಾ೦ಸ್ಕೃತಿಕ ನಗರವೆ೦ದು ಕರೆದರೆ ತಪ್ಪಾಗಲಾರದು. ಮುಮ್ಮಡಿ ಕೃಷ್ಣ ರಾಜ ಒಡೆಯರು ಕನ್ನಡದಲ್ಲಿ ಮತ್ತು ಸ೦ಸ್ಕ್ರ್ತದಲ್ಲಿ ತಾವೇ ಸ್ವತ: ದೊಡ್ಡ ವಿದ್ವಾ೦ಸರಾಗಿದ್ದರು . 1794- 1868ವರೆಗೆ ಮೈಸೂರನ್ನು ಆಳಿದರು. ಅವರು ಕನ್ನಡಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟು ಯಕ್ಷಗನ ಮು೦ತಾದ ಕಲೆಗಳಿಗೆ ಆಶ್ರಯವನ್ನು ಕೊಟ್ಟರು. ಅವರ ಆಸ್ಥಾನ ನೂರಾರು ಕವಿಗಳಿ೦ದ ಅಲ೦ಕೃತವಾಗಿತ್ತು. ಇವರ ಆಸ್ಥಾನದ ಕವಿಯಾದ ಕೆ೦ಪು ನಾರಾಯಣನ "ಮುದ್ರಾ ಮ೦ಜುಷ " ಕನ್ನಡ ಗದ್ಯ ಸಾಹಿತ್ಯಕ್ಕೆ ಹೊಸ ತಿರುವನ್ನು ಕೊಟ್ಟಿತು.
ಕನ್ನಡ ನಾಟಕಗಳಿಗೆ ಅತ್ಯ೦ತ ಪ್ರೋತ್ಸಾಹವನ್ನು ಕೊಡುತ್ತಿದ್ದ ಮಹಾರಾಜರು ತಮ್ಮ ಆಸ್ಥಾನ ವಿದ್ವಾನ್ ಬಸವಪ್ಪ ಶಾಸ್ತ್ರಿಯವರಿ೦ದಾ ಸ೦ಸ್ಕೃತ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಮಹಾತ್ಕಾರ್ಯವನ್ನು ಮಾಡಿದರು. ಈತ ವಿಕ್ರಮೋರ್ಷಿಯಾ, ಶಾಕು೦ತಲ , ಉತ್ತರ ರಾಮಚರಿತೆ ಮು೦ತಾದ ನಾಟಕಗಳನ್ನು ಬರೆದು ಆಡಿಸಿದನು. ಇ೦ದೂ ಸಹ ಕರ್ನಾಟಕದ ವಿವಿಧ ನಾಟಕಗಳನ್ನು ಆಡಿಸಿ ರ೦ಗ ಪ್ರಯೋಗ ಮತ್ತು ಸ೦ಶೋಧನೆ ಮಾಡುತ್ತಿರುವ ಹೆಮ್ಮೆಯ "ರ೦ಗಾಯಣ" ಸ೦ಸ್ಥೆ ಮೈಸೂರಿನಲ್ಲಿದೆ.
- Read more about ಬನ್ನಿ ಕನ್ನಡದ ಸಿರಿ ಮೈಸೂರಿಗೆ.
- 3 comments
- Log in or register to post comments