ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

ಕೆಲವು ದಿನಗಳ ಹಿಂದೆ ಸಿಂಧು ಭೈರವಿ ರಾಗದ ಬಗ್ಗೆ ಒಂದು ಅಸಂಬದ್ಧ ಪೀಠಿಕೆ ಬರೆದಿದ್ದೆ. ನಂತರ, ಕೇಳಿಸಬಹುದಾದ ಕೆಲವು ಒಳ್ಳೆ ಉದಾಹರಣೆಗಳಿಗೆ ಹುಡುಕುತ್ತಿದ್ದೆ. ನಾನು ಹುಡುಕುತ್ತಿದ್ದ ಕೆಲವು ಉತ್ತಮ ಗೀತೆಗಳು ಸಿಕ್ಕಲಿಲ್ಲವಾದ್ದರಿಂದ ಏನು ಮಾಡಲೆಂದು ಯೋಚಿಸುತ್ತಿದ್ದಾಗ, ನೋಡಿಸಿ-ಕೇಳಿಸುವ ಇನ್ನೊಂದಷ್ಟು ಹಾಡುಗಳು ದೊರೆತವು. ಸರಿ ಮತ್ತೆ, ತಡವೇಕೆ?

ಸಿಂಧುಭೈರವಿ ಅನ್ನುವುದು ದಕ್ಷಿಣಾದಿ(ಕರ್ನಾಟಕ) ಹಾಗೂ ಉತ್ತರಾದಿ(ಹಿಂದೂಸ್ತಾನಿ)ಸಂಗೀತ ಎರಡರಲ್ಲೂ ಪ್ರಚಾರದಲ್ಲಿರುವ ರಾಗ. ಹಿಂದೂಸ್ತಾನಿ ಪದ್ಧತಿಯಲ್ಲಿ ಇದಕ್ಕೆ ಭೈರವಿ ಎಂದರೆ, ಕರ್ನಾಟಕ ಸಂಗೀತದಲ್ಲಿ ಸಿಂಧೂಭೈರವಿ ಎನ್ನುತ್ತಾರೆ. ಕರ್ನಾಟಕ ಸಂಗೀತಕ್ಕೆ ಇದು ಹಿಂದೂಸ್ತಾನಿಯಿಂದಲೇ ಬಂದಿದೆ ಎನ್ನುವುದನ್ನು ನೀವು ಈ ಬರಹದಲ್ಲಿ ಕೊಟ್ಟಿರುವ ಕೆಲವು ಉದಾಹರಣೆಗಳನ್ನು ಕೇಳಿದಾಗ ನಿಮಗೆ ಅರಿವಾಗುತ್ತೆ. ಈ ಬರಹದ ಮಟ್ಟಿಗೆ, ನಾನು ಭೈರವಿ ಎಂದಾಗಲೂ, ಸಿಂಧೂಭೈರವಿ ಎಂದಾಗಲೂ ಒಂದೇ ರಾಗದ ಬಗ್ಗೆಯೇ ಹೇಳುತ್ತಿದ್ದೇನೆ ಎಂದುಕೊಳ್ಳಿ. (ಕರ್ನಾಟಕ ಸಂಗೀತದಲ್ಲಿ ಬೇರೊಂದು ಭೈರವಿ ಇದೆ - ಅದೂ ಒಂದು ಮಹಾನ್ ರಾಗವೇ. ಅದರ ವಿಷಯ ಈಗ ಬೇಡ.)

ಹೀಗೊಂದು ಊರು !

ಸಾಮಾನ್ಯವಾಗಿ ನಮ್ಮ ಹಳ್ಳಿಗಳು ಅಂದ್ರೆ ಟಾರ್ ಇಲ್ಲದ ರಸ್ತೆಗಳು,, ಗಲ್ಲಿ ಗಲ್ಲಿಗಳಲ್ಲಿ ತಿಪ್ಪೆಗುಂಡಿಗಳು.., ಆಲದ ಮರದ ಕೆಳಗೆ ಕಾಡು ಹರಟೆ ಹೊಡೆಯುತ್ತ ಕೂತ ಯುವ ಜನರು, ಅಧೋಗತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹಂಚು ಹಾರಿ ಹೋಗಿರುವ, ಪಾಳು ಬಿದ್ದ ಶಾಲಾ ಕಟ್ಟಡಗಳು.. ಈ ನೋಟ ಕರ್ನಾಟಕದಾಂದ್ಯಂತ ಹಳ್ಳಿಗಳಲ್ಲಿ ಕಂಡು ಬರುವ ಸರ್ವೇಸಾಮಾನ್ಯ ದ್ರುಶ್ಯ,,.. ಆದ್ರೆ ಇಲ್ಲೊಂದು ಹಳ್ಳಿ ಇಡಿ ನಾಡಿಗೆ ಮಾದರಿ ಎನ್ನುವಂತದ್ದು...

ಈ ಹಳ್ಳಿಯ ಹೆಸರು ಬಡಗಂಡಿ,, ಇರೋದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನಲ್ಲಿ.. ಇ ಊರಲ್ಲೆಲ್ಲೂ ಕೊಳಚೆಯನ್ನುವ ಮಾತೆ ಇಲ್ಲ,, ರಸ್ತೆಗಳೆಲ್ಲ ಶುಭ್ರ,, ಊರಿನಲ್ಲೆ ಒಳ್ಳೆಯ ಭದ್ರವಾದ ಕಟ್ಟಡವುಳ್ಳ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಎಲ್ಲಾ ಪ್ರಾಥಮಿಕ ಸೌಲಭ್ಯ ವುಳ್ಳ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ,, ಇದೆಲ್ಲಕಿಂತ ಹೆಚ್ಚಾಗಿ,, ಇ ಊರಲ್ಲಿ ದುರ್ಬಿನ್ ಹಾಕೊಂಡ್ ಹುಡುಕಿದ್ರು ಒಬ್ಬೆ ಒಬ್ಬ ನಿರುದ್ಯೋಗಿ ಕಣ್ಣಿಗೆ ಕಾಣಲ್ಲ.. !! ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿಡ್ಬೆಡಿ...ಇದೆಲ್ಲವು ಸಾಧ್ಯವಾದದ್ದು ಇಲ್ಲಿನ ಒಬ್ಬೆ ಒಬ್ಬ ವ್ಯಕಿಯಿಂದ,, ಅವರೆ ವಿಧಾನ ಪರಿಷತ್ ಸದಸ್ಯ ಎಸ್. ಆರ್‍. ಪಾಟೀಲ ರಿಂದ. ಇದೇ ಊರಿನಲ್ಲಿ ಹುಟ್ಟಿ ಬೆಳೆದ ಪಾಟೀಲರು ತಮ್ಮ ಹುಟ್ಟೂರಿನ ಋಣ ತೀರಿಸಿದ್ದು ಹೀಗೆ. ಬಾಗಲಕೋಟೆ, ಬೆಳಗಾವಿ, ಬಿಜಾಪುರ ಪ್ರಾಂತ್ಯದಲ್ಲಿ ರೈತರ ಮುಖ್ಯ ಬೆಳೆ ಕಬ್ಬು. ಬೆಳೆದ ಕಬ್ಬನ್ನು ನುರಿಸಲು ಮಹಾರಾಷ್ಟ್ರ ಕ್ಕೆ ಹೋಗುತ್ತಿದ್ದೆ ಜನರ ಬವಣೆ ನಿವಾರಿಸಲು, ಪಾಟೀಲ-ರ ನೇತ್ರತ್ವದಲ್ಲಿ ಅಸ್ತಿತ್ವಕ್ಕೆ ಬಂದಿದ್ದೆ ಬೀಳಗಿ ಶುಗರ್ ಮಿಲ್ಸ್. ಬಡಗಂಡಿಯ ಹೆಚ್ಚಿನ ಯುವಕರು ಇ ಕಾರ್ಖಾನೆಯಲ್ಲೆ ಕೆಲಸ ಮಾಡುತ್ತಾರೆ. ಇಷ್ಟಕ್ಕೆ ನಿಲ್ಲದೆ ಪಾಟೀಲರು ಊರಿನಲ್ಲಿ ಔದ್ಯೊಗಿಕ ತರಬೇತಿ ಕೇಂದ್ರವೊಂದನ್ನು (ಐ.ಟಿ.ಐ) ತೆರೆದು ಅಲ್ಲಿನ ಯುವಕರಿಗೆ ಉದ್ಯೊಗವಕಾಶ ಹೆಚ್ಚುಸುವಲ್ಲಿ ಸಹಾಯ ಮಾಡಿದ್ದಾರೆ. ಗ್ರಾಮದ ನೈರ್ಮಲ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲೂ ಪಾಟೀಲರು ಯಶಸ್ವಿಯಾಗಿದ್ದಾರೆ. ಇಷ್ಟೆಲ್ಲ ಆದರೂ ಎಲೆ ಮರೆಯ ಕಾಯಿಯಂತೆ ತಮ್ಮ ಕಾಯಕವನ್ನು ಮುಂದುವರಿಸಿರುವ ಎಸ್. ಆರ್‍. ಪಾಟೀಲರು ಅಭಿನಂದನೀಯರು...

ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ?

ನಮ್ಮ ಕನ್ನಡದಲ್ಲಿ ನೋಡಿ ಚಿಕ್ಕಪುಟ್ಟ ಅಂಶಗಳಿಗೆ ಸರಳವಾದ ಮತ್ತು ಹೆಚ್ಚು ಅರ್ತವತ್ತಾದ ಒರೆಗಳಿವೆ. ಈ ಎತ್ತು/ಗೂಳಿ ಯ ಬೆನ್ನ ಮೇಲೆ ಉಬ್ಬಿರುವುದನ್ನ ನಾವು ನೋಡಿರುತ್ತೇವೆ. ಹಸುಗಳಿಗೆ ಇದು ಇರುವುದಿಲ್ಲ.
ಹಿಣಿ = ಎತ್ತಿನ ಹೆಗಲು

ನಯಸೇನನ ಸಲೀಸಾದ ಸಾಲುಗಳು -ಬಿಡಿ ೧೦- ಸೊಡರು ಮತ್ತು ಕಿಚ್ಚು

ಸೊಡರುಂ ಕಿರ್ಚಾಕಿರ್ಚುಂ
ಗಡ ಕಿರ್ಚಂತೆರಡುಮೆಸೆವ ನಂಟರ್ತನಗಾ
ದೊಡೆ ಗಾಳಿ ಮಸಗಿ ಸೊಡರಂ
ಕಿಡಿಸುವವೊಲ್ ಕಿರ್ಚನೇಕೆ ಕಿಡಿಸದೊ ಮುನಿಸಿಂ

ಗಮನಿಕೆಗಳು:

ನೀ...

ನೀ ಬಿಟ್ಟುಹೋದರೂ
ಮತ್ತೆ ಬಂದು ಕಾಡುತಿರುವೆ ನೆನಪುಗಳಾಗಿ
ನೀ ಬಾಡಿಹೋದರೂ
ತುಂಬುತಿರುವೆ ಬಣ್ಣವನು ಅರಳುವ ಈ ಹೂವಿಗಾಗಿ
ನೀ ಕಾಣದಿದ್ದರೂ
ಕಣ್ಣೊಳಗೆ ಬಂದು ಅವಿತು ಬೆಳಕಾಗಿರುವೆ
ನೀ ಇರದಿದ್ದರೂ
ಇರುವಿಕೆಯ ಅನಿಸನ್ನು ಮನಕ್ಕೆ ತಟ್ಟುತಿರುವೆ
ನೀ ಎಲ್ಲೂ ಹೋಗಿಲ್ಲ
ನನ್ನಲ್ಲೆ ಇರುವೆ ನನ್ನೊಳಗೆ ಒಂದಾಗಿ, ನನ್ನ ಬಲವಾಗಿ

ಜೋಕ್ಸ್

ಹೀಗೊಂದು ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ

ವಿವಾಹ ಮಹೋತ್ಸವ ಆಹ್ವಾನ ಪತ್ರಿಕಾ

ಕೊತ್ತೊಂಬರಿ ತಾಲ್ಲೂಕು ಹುಣಸೇಕಾಯಿ ಹೋಬಳಿ ಹೀರೇಕಾಯಿ ಗ್ರಾಮದ ಶ್ರೀಮತಿ ಮತ್ತು ಶ್ರೀ ಪಡವಲಕಾಯಿ ಮತ್ತು ಮೆಣಸಿನಕಾಯಿ ತಾಲ್ಲೂಕು ಸೌತೇಕಾಯಿ ಹೋಬಳಿ

ಕವನಗಳು

ಕನಸುಗಳೆಲ್ಲ ಕರಗಿಹೋದವು ನಿನ್ನ ಹಿಂದೆಯೇ ನಲ್ಲೆ
ಉಳಿದೆಲ್ಲ ನೆನಪುಗಳು ಅಳುಕುತಿವೆ ಈಗ ಎದೆಯ ತುಂಬಿ

ಹಗಲಲ್ಲಿ ನಿನ್ನ ಕಾಣುವಾಸೆ
ಇರುಳಲ್ಲಿ ನಿನ್ನ ಮುದ್ದಿಸುವಾಸೆ
ನೀ ಎದುರಿಗಿದ್ದಾಗ ಆಸೆಯೆಲ್ಲಾ ನಿರಾಸೆ

ಎನ್ನ ಮನದ ನಲ್ಲೆ ನೀನು
ನೀನಿರೆ ನಾನು ಜೀವನದಲ್ಲಿ ಬೇಡೆನು ಏನನ್ನೂ

ಈ ಜನರಲ್ಲಿ ದಿನಕ್ಕೆ ಒಂದೊಂದು ತರಹದ ಮುಖವಾಡ
ಅದು ಮೇಕಪ್ ನ ಪವಾಡ

ನಾವೆಲ್ಲಾ ಆಫ್ರಿಕಾದಿಂದ ಬಂದವರೇ?

ಸುಧಾ , ಮೇ ೧ರ ಸಂಚಿಕೆಯಲ್ಲಿ "ಮಾನವ ಇತಿಹಾಸದ ’ಸಾಂಗ್ ಲೈನ್ಸ್’" ಎಂಬ ಮುಖಪುಟ ಲೇಖನ ಪ್ರಕಟವಾಗಿದೆ.
ಇದರಲ್ಲಿ ಲೇಖಕರು ( ಲಕ್ಷ್ಮೀಪತಿ ಕೋಲಾರ) ಆಫ್ರಿಕಾದ ಬುಡಕಟ್ಟುಗಳಿಗೂ ದಕ್ಚಿಣ ಭಾರತಕ್ಕೂ , ಆಸ್ಟ್ರೇಲಿಯಾದ ಆದಿವಾಸಿಗಳಿಗೂ ಇರಬಹುದಾದ ಪುರಾತನ ನಂಟಿನ ಬಗ್ಯೆ ಬರೆದಿದ್ದಾರೆ.

ಕನ್ನಡದವರಿಗಾದ ಅವಮಾನ

ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡುಗಾರಿಕೆಯ ಕಾರ್ಯಕ್ರಮ ಸಿಡ್ನಿಯಲ್ಲಿ ಇತ್ತೀಚೆಗೆ ನಡೆಯಿತು. ನಾನು ಹೋಗಲಿಲ್ಲ. ಹೋಗಬೇಕು ಅನಿಸಲಿಲ್ಲ.

ತುಂಬಾ ಇಂಪಾಗಿ ಹಾಡಬಲ್ಲ ಎಸ್.ಪಿಯ ಹಲವಾರು ವರ್ಷಗಳ "ಟ್ರೇನ್ಡ್" ದನಿಯಾಗಲಿ, ತೀಡಿತೀಡಿ ನುಣುಪಾದ "ಕಲ್ಚರ್ಡ್" ದನಿಯಾಗಲಿ ನನ್ನಲ್ಲಿ ಉತ್ಸಾಹ ಕೆರಳಿಸುತ್ತಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಇಂಡಿಯಾದ ಹಲವಾರು ಜನಪ್ರಿಯ ಹಾಡುಗಾರರ ತೊಂದರೆ ಇದು ಅನಿಸುತ್ತದೆ. ಇರಲಿ ಅದು ಮತ್ತಾವಾಗಲಾದರೂ ಬೇರೆಯಾಗಿಯೇ ಯೋಚಸಲು ಇಟ್ಟುಕೊಳ್ಳುತ್ತೇನೆ.