ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್

ಪ್ರತಿನಿತ್ಯ ಆಗೊಮ್ಮೆ ಈಗೊಮ್ಮೆ, ಅದ್ಯಾವುದೋ ಬಾಂಬ್ ಬ್ಲಾಸ್ಟ್ ಆದಾಗ, ಮತ್ತೇನೋ ಆದಾಗ, "ಛೆ, ಈ ಜಗತ್ತು ಬದಲಾಗಬೇಕು, ನಾವುಗಳು ಇದನ್ನು ಬದಲಾಯಿಸಬೇಕು" ಅನ್ನಿಸಿದ್ದಿದೆಯೋ?
ಅಂತರ್ಜಾಲ ಜಗತ್ತನ್ನು ಸಂಪೂರ್ಣ ಬದಲಾಯಿಸಿಬಿಟ್ಟಿರುವ ಗೂಗಲ್ ಕಂಪೆನಿ ಈಗ ಹೀಗೆ ಅನ್ನಿಸುವವರಿಗೆ ಮಣೆ ಹಾಕಲಿದೆಯಂತೆ.

ಹಿನ್ನೆಲೆ:
ಗೂಗಲ್ ತನ್ನ ಹತ್ತನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದೆ. ಈ ಸಮಯದಲ್ಲಿ "Don't be evil" ಎಂದು ಹೊರಟ ಇದೇ ಕಂಪೆನಿ ಖಳನಾಯಕನಂತೆ ನಡೆದುಕೊಂಡು ಸ್ವತಃ evil ಆದ ಇತ್ತೀಚೆಗಿನ ಹಲವು ದೃಷ್ಟಾಂತಗಳ ನಡುವೆ ದುಡ್ಡು ಮಾಡಿತು, ಸಮಾಜ ಸೇವೆ ಮಾಡಿಲ್ಲ ಎಂಬ ಟೀಕೆ ಕೇಳಿಬಂದಿರುವುದು ಇವರ ಕಿವಿಗೂ ಬಿದ್ದಂತಿದೆ ಎಂಬುದು ಹಲವು ವರದಿಗಳ ಅಂಬೋಣ.
ಅದೇನೆ ಇರಲಿ, ಗೂಗಲ್ ಎಂದಿನಂತೆ ಹೆಚ್ಚಿನ ಕೆಲಸ ತಾನು ಮಾಡದೆ ಉಳಿದವರಿಗೆ ಮಾಡಲು ಬಿಟ್ಟು ಅದಕ್ಕೆ ಹಣಕಾಸಿನ ಸಹಾಯ ಮಾಡುವ ಜವಾಬ್ದಾರಿ ಹೊತ್ತಿಕೊಂಡಿದೆ. ಇದೇ ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್ (Project 10100).

ಮತ್ತೊಂದು ಭಾನುವಾರ

ಬೆಂಗಳೂರಲ್ಲಿ ಎಂತಹ ಒಳ್ಳೇ ಹೋಟೆಲಿನಲ್ಲಿ ಚ್ಯಾಟ್ಸ್ ತಿಂದರೂ ಸ್ವಲ್ಪ ದಿನಗಳಲ್ಲೇ sore throat ಗ್ಯಾರಂಟಿ. ಈ ವಾರ ಎರಡು ಮೂರು ಬಾರಿ ಸ್ನೇಹಿತರೊಂದಿಗೆ ಚ್ಯಾಟ್ಸ್ ಪ್ರೋಗ್ರಾಮ್ ಇಟ್ಟುಕೊಂಡದ್ದರಿಂದ ವಾರಾಂತ್ಯ ಬರುವಷ್ಟರಲ್ಲೇ ನೆಗಡಿ, ಜ್ವರ ಶುರು. ಮೊನ್ನೆ ರಾತ್ರಿಯೇ ಅನಿಸಿತ್ತು... ಮುಂದೆರಡು ದಿನ ಕಷ್ಟ ಆಗಬಹುದೆಂದು.

ಎಂದೂ ಬೇಗ ಏಳದವ ಇವತ್ತು ಮುಂಜಾನೆ ಎದ್ದು ಅತ್ತ ದೆಹಲಿಯಲ್ಲಾದ ಬಾಂಬ್ ಸ್ಪೋಟದ ಬಗ್ಗೆ ವಿವಿಧ ಸುದ್ದಿ ಮಾಧ್ಯಮಗಳ ವರದಿ ಓದುತ್ತಿದ್ದೆ. ನಡುನಡುವೆ ಉಪ್ಪುನೀರು gargle ಮಾಡೋದು, pillsಉ ಟಾನಿಕ್ಕು ಪಕ್ಕದಲ್ಲಿಟ್ಟುಕೊಂಡ ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳಲು ಬೇಸರವಾದಾಗ ಸ್ವತಃ ಧೂಳು ಹಿಡಿದುಕೊಂಡಿದ್ದ ವ್ಯಾಕ್ಯೂಮ್ ಹಿಡಿದು ಕಸ ಹೊಡೆದದ್ದು. ಹೊರಗೆ ಹೋಟೆಲಿನಲ್ಲಿ ತಿಂದದ್ದಕ್ಕೆ ಇವೆಲ್ಲದರ ನಡುವೆ ನನಗೇ ನಾನೇ ಬೈದುಕೊಂಡದ್ದು.

ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ’ಮಾನೋ ರೇಲ್ ” ನ ಅಗತ್ಯತೆ !

ಮೊದ-ಮೊದಲು ಫ್ರಾಂಕ್ಫರ್ಟ್ ವಿಮಾನ ನಿಲ್ದಾಣವನ್ನು ಕಂಡಾಗ ಆಗುವ ಅನುಭವ, ಅದೆಷ್ಟು ಪುಟಾಣಿ ನಿಲ್ದಾಣ ಎಂಬ ಭಾವನೆಬರುತ್ತದೆ. ಅಮೆರಿಕದ ಭಾರಿ-ಭಾರಿ ನಿಲ್ದಾಣಗಳನ್ನು ಕಂಡಾಗ, ಫ್ರಾಂಕ್ಫರ್ಟ್ ವಿಮಾನ ನಿಲ್ದಾಣ, ಹಾಗೆ ಅನ್ನಿಸುವುದು ಸಹಜ. ನಿಜವಾಗಿ ನಮ್ಮ ಮುಂಬೈ ಮುಂತಾದ ನಿಲ್ದಾಣಗಳಿಗಿಂತ ಅದು ದೊಡ್ಡದೇ. ಸೌಕರ್ಯಗಳಿಗೆ ಹೇಳಿಮಾಡಿಸಿದಂತಿದೆ.

ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು .... ಹಾಡು ಬರೆದದ್ದು ಯಾರು ? ಪೂರ್ಣಪಾಠ ಗೊತ್ತಿದೆಯೇ?

ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು ....
ನನಗೆ ನೆನಪಿರುವ ಲೈನುಗಳು ಹೀಗಿವೆ

ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು
ಮರಳು ಮನೆಗಳ ಕಟ್ಟಿ ಆಟವಾಡಿದ ದಿವಸ
ನೆನಪಿದೆಯೇ?
ನೆನಪಿದೆಯೇ ನಿನಗೆ , ಗೆಳತಿ ನೆನಪಿದೆಯೇ ನಿನಗೇ?
.

.
.
.
.
ಅಂದು ಹರಿದಾ ಹೊಳೆ ಇಂದು ಕೂಡ ಹರಿಯುತಿದೆ.
ನಾನಿಲ್ಲಿ ನೀನಲ್ಲಿ ..........

ಅಮೇರಿಕಾದ ಬ್ಯಾ೦ಕುಗಳು ಮಾಯ ಯಾಕ್ ಆಗ್ತಿವೇ ?

ಬ೦ಡವಾಳ ಷಾಹಿ ಪದ್ದತಿಯನ್ನೇ ತನ್ನ ಜೀವ ನಾಡಿ ಅ೦ದು ಎಲ್ಲಾ ದೇಶಗಳಿಗೂ ಈ ನೀತಿಯನ್ನು ರಫ್ತು ಮಾಡಿದ ಅಮೇರಿಕಾ ತಾನೇ ಈ ವರ್ಸ್ದಾಗೆ ಮುಳುಗಿ ಹೋಗುವ೦ತೆ ಕಾಣಿಸ್ತಿದೆ. ಅದೇನೋ ಮನೆ ಭೋಗ್ಯಕ್ಕೆ ಕೊಟ್ಟು ಯಾರು ಸಾಲ ತೀರಿಸಿಲ್ಲವ೦ತೆ. ಅದಕ್ಕೆ ಅಲ್ಲಿನ ಬ್ಯಾ೦ಕುಗಳು ನಷ್ಟ ಅನುಭವಿಸಲಾಗದೇ ಮುಚ್ಚಿ ಹೋದವ೦ತೆ. AIG ಅನ್ನೋ Insurance company ಗೆ insurance

’ಸೀಗಲ್ ’ ಗಳಿಗೂ ಮಿಚಿಗನ್ ಸರೋವರ ಅತಿ-ಪ್ರಿಯ !

ಈ ಚಿತ್ರ ತೆಗೆಯಲು ನಾನು ಸ್ವಲ್ಪ ಸರ್ಕಸ್ ಮಾಡಬೇಕಾಯಿತು. ಎಷ್ಟೇ ಆಗಲಿ ಪಕ್ಷಿಗಳು ಯಾವದೇಶದಲ್ಲಿದ್ದರೂ ಅವು ಪಕ್ಷಿಗಳೇ ! ಆದರೆ ಸೀಗಲ್ ಪಕ್ಷಿಗಳು ನಮ್ಮಲ್ಲಿ ಕಡಿಮೆಯೆಂದು ನನ್ನ ಅನಿಸಿಕೆ. ಅಥವಾ ಚೆನ್ನೈನಲ್ಲಿದ್ದರೂ ಇರಬಹುದು. ಮುಂಬೈನಲ್ಲಿ ಇದ್ದಂತಿಲ್ಲ.

ಕುಹೂ ಕುಹೂ ಕೋಗಿಲೆ ಹಾಡಿತಲ್ಲ ಈಗಲೇ

    ಮ್ಮೆ ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಪುಸ್ತಕ ಓದುತ್ತಿದ್ದಾಗ ಒಂದು ಅರ್ಧ ಪುಟದ ಸಣ್ಣ ಕಥೆ ಓದಿದೆ. ತುಂಬಾ ಚೆನ್ನಾಗಿದೆ ಎನ್ನಿಸಿತು. ಅದನ್ನು ನಾಟಕ ರೂಪಕ್ಕೆ ಇಳಿಸಿ  ಒಂದು ಮತ್ತು ಎರಡನೆಯ ತರಗತಿ ಮಕ್ಕಳಿಂದ ಮಾಡಿಸಿದಾಗ ಅವುಗಳ ಮುದ್ದು ಮಾತಿನ ನಾಟಕ ನೋಡಲು ಮೋಜೆನಿಸಿತು. ಈ ಕಥೆ ಕೋಗಿಲೆಯೊಂದು ಹಾಡು ಹೇಳುವುದನ್ನು ಕಲಿತ ಬಗೆಯದು. ಹಂಸ, ಕೊಕ್ಕರೆ, ನವಿಲು, ಗಿಣಿ ಎಲ್ಲವೂ ಅಹಂಕಾರದಲ್ಲಿ ಇದಕ್ಕೆ ಹಾಡು ಹೇಳಿಕೊಡಲು ನಿರಾಕರಿಸುತ್ತವೆ. ಆಗ ಪ್ರಕೃತಿ ಮಾತೆ ಅಳುತ್ತಾ ಕುಳಿತಿದ್ದ ಕೋಗಿಲೆಗೆ ತಾನೇ ಹಾಡು ಹೇಳಿಕೊಟ್ಟು ಸಂತಸಪಡಿಸಿದಳು ಎಂಬ ಒಂದು ಸಣ್ಣ ಕಥೆ ಅದು. ನಾನು ಸ್ವಲ್ಪ ಬದಲಾವಣೆಗಳನ್ನು ಮಾಡಿ ಹಂಸ ಹಾಗೂ ಕೊಕ್ಕರೆಯನ್ನು ಇರುವ ಸ್ವಲ್ಪ ಪ್ರತಿಭೆಗೆ, ತಮ್ಮ ರೂಪಿಗೆ ಜಂಬದಿ ಮೆರೆಯುವವರ ಪ್ರತಿನಿಧಿಗಳಾಗಿಸಿ, ನವಿಲು ಮತ್ತು ಗಿಣಿಗಳನ್ನು ತಮ್ಮ ಮಿತಿ ತಿಳಿದು ತಮ್ಮ ಪ್ರತಿಭೆಯ ಬಗ್ಗೆ ಅರಿವಿರುವ ಸ್ನೇಹಜೀವಿಗಳ ಪ್ರತಿನಿಧಿಗಳಾಗಿಸಿ ನಾಟಕ ರೂಪಿಸಿದೆ. ಕೊನೆಗೆ ಪ್ರಕೃತಿ ಮಾತೆಯ ಸನಿಹದಲ್ಲೇ ಕೋಗಿಲೆ ಸಂಗೀತ ಕಲಿತು ಕೊಳ್ಳುತ್ತದೆ. ಈ ನಾಟಕವನ್ನು ನಿಮ್ಮ ಮುಂದಿಡುವ ಮನಸ್ಸಾಯಿತು.  ಇನ್ನು ನಾಟಕ “ಕುಹೂ ಕುಹೂ ಕೋಗಿಲೆ ಹಾಡಿತಲ್ಲ ಈಗಲೇ”:

ಅಂಬಿಗರ ಚೌಡಯ್ಯನ ವಚನ

ದೊಡ್ಡ ದೊಡ್ಡ ಚಿಂದಿಶೆತ್ತಿಗಳ ಕಂಡರೆ
ಅಡ್ಡಗಟ್ಟಿ ಶರಣಾರ್ಥಿಯೆಂಬುರಯ್ಯ
ನಿಜ ಶರಣನು ಹೋಗಿ ಶರಣೆಂದರೆ
ನೊಡದವರ ಹಾಗೆ ಅಡ್ಡ ಮೋರೆಯನ್ನಿಟ್ಟುಕೊಂಡು ಹೋಗುವ
ಗೊಡ್ಡುಮೂಳರಿಗೆ ದುಡ್ಡೇ ಪ್ರಾಣವಾಯಿತಲ್ಲಪ್ಪಾ ದೇವಾ
ಇಂತಿರ್ಪ ದುಡ್ಡಿಸ್ತರ ದೊಡ್ಡಿಸ್ತಿಕಿಯ ಕುರುಹನರಿತು
ಮೊಳಪಾದ ಹೊಡೆದು ನಗುತಿದ್ದ ನಮ್ಮ ಅಂಬಿಗರ ಚೌದಯ್ಯ.

ಲೈಫ್ ಇನ್ ಮೆಟ್ರೋ…

ಚೆನ್ನೈನಲ್ಲಿ ಒಂದು ವರ್ಷ ದುಡಿದು ಇದೀಗ ಬೆಂಗಳೂರಿಗೆ ಬಂದಿದ್ದೇನೆ. ಅಲ್ಲಿನ ಉರಿಬಿಸಿಲಿಗೆ ಬೆವರು ಸುರಿಸಿ, ಸದ್ಯ ಬೆಂಗಳೂರಿನ ಚುಮು ಚುಮು ಚಳಿಗೆ ಮನಸಂತೂ ಪುಳಕಿತಗೊಂಡಿದೆ. ಆದ್ರೆ ಈ ಟ್ರಾಫಿಕ್ ಜಾಮ್ ನಲ್ಲಂತೂ ಮನಸ್ಸು ಬೇಜಾರಾಗಿ ಬಿಟ್ಟಿದೆ ಮಾರಾಯ್ರೆ. ಏನು ಮಾಡಲಿ? ಅದನ್ನಂತೂ ಯಾರಿಗೂ ತಪ್ಪಿಸಲು ಸಾಧ್ಯವಿಲ್ಲವಲ್ಲಾ …

ಈ ಟ್ರಾಫಿಕ್ ಜಾಮ್ ನಲ್ಲಿ ಒದ್ದಾಡುತ್ತಾ ಇರುವಾಗ ಚೆನ್ನೈ ಮೆಟ್ರೋ ರೈಲಿನ ಯಾತ್ರೆ ಮನಸ್ಸಲ್ಲಿ ಮೂಡಿಬರುತ್ತದೆ. ಅಲ್ಲಿ ಒಂದು ವರ್ಷ ಕಳೆದಿದ್ದರೂ ಮೆಟ್ರೋ ರೈಲಿನಲ್ಲೇ ನಾನು ಅನೇಕ ಬಾರಿ ಯಾತ್ರೆ ಮಾಡಿದ್ದು. ಅಲ್ಲಿನ ಬಸ್ ಯಾತ್ರೆ ನಂಗೆ ಇಷ್ಟವಿರಲ್ಲಿಲ್ಲ. ಯಾಕೆಂದ್ರೆ ಕಂಡಕ್ಟರ್ ಬಳಿಗೆ ನಾವೇ ಹೋಗಿ ಟಿಕೆಟ್ ಕೊಡ ಬೇಕು, ಆಮೇಲೆ ಭಾಷಾ ಸಮಸ್ಯೆ ಬೇರೆ. ಬಸ್ ನಂಬರ್ ನೋಡಿಕೊಂಡು ಹತ್ತಬೇಕು. ತಮಿಳಿನಲ್ಲಿ ಬರೆದ ಬಸ್ ಬೋರ್ಡ್ ಓದಲಿಕ್ಕಾಗುವುದಿಲ್ಲ. ಏನೆಲ್ಲಾ ಕಿರಿಕಿರಿ?. ಆದ್ರೆ ಟ್ರೈನಲ್ಲಿ ಅದರ ರಗಳೆಯೇ ಇಲ್ಲ. ಅದಕ್ಕೆ ಮೆಟ್ರೋ ಟ್ರೈನ್ ಅಂದ್ರೆ ಅಚ್ಚುಮೆಚ್ಚು.
ಆದ್ರೆ ಒಂದು ಮಾತು..ಟ್ರೈನ್ ಓಡಾಡದೇ ಇರುವ ಸ್ಥಳಕ್ಕೆ ಬಸ್ಸಲ್ಲೇ ಹೋಗಿದ್ದೆ .(ಅದು ಏನೋ ಸಾಹಸ ಮಾಡಿದಂಥ ಅನುಭವವನ್ನು ನೀಡುತ್ತಿತ್ತು). ಅದಲ್ಲಿರಲಿ, ಸದ್ಯ ನಾನು ಹೇಳ ಹೊರಟಿರುವುದು ಮೆಟ್ರೋ ಟ್ರೈನ್ ಅನುಭವದ ಬಗ್ಗೆ. ಅಲ್ಲಿನ ಮೆಟ್ರೋ ಟ್ರೈನ್ ಯಾವಾಗಲೂ ಜನರಿಂದ ತುಂಬಿ ತುಳುಕ್ಕುತ್ತಿರುತ್ತದೆ. ಐದು ನಿಮಿಷ ಅಥವಾ ಹತ್ತು ನಿಮಿಷಕ್ಕೊಮ್ಮೆ ಟ್ರೈನ್ ಇದ್ದರೂ ಜನರ ಗೌಜಿ ಇದ್ದೇ ಇರುತ್ತದೆ. ಬೆಳಗ್ಗಿನ ಹೊತ್ತು ಮತ್ತು ಸಂಜೆಯ ಸಮಯ ಜನ ಜಂಗುಳಿ ಹೇಳತೀರದು.