ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ಸಂಪದ ಬಳಗದವರಿಗೆ ಇಂದಿನಿಂದ ಪ್ರಾರಂಭವಾಗುವ ನಮ್ಮ ನಾಡಹಬ್ಬ ದಸರಾ ಪ್ರಯುಕ್ತ ಹಾರ್ದಿಕ ಶುಭಾಶಯಗಳು...

ಮೈಸೂರಿನಲ್ಲಿ ಇಂದು ಬೆಳಿಗ್ಗೆ ಉದ್ಘಾಟನೆ... ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ... 

ಸ್ವಗತ

ಮೊನ್ನೆ ನಮ್ಮೂರಿಂದ ಮೂವರು ಪ್ರತಿಭಾವಂಥರು ಇತ್ತ ನ್ಯೂಯಾರ್ಕ್ ಕಡೆಗೆ ಬಂದಿದ್ದರು, ನ್ಯೂಯಾರ್ಕ್ ನಲ್ಲಿ ಅವರು ಯಾರದೋ ಮನೆಯಲ್ಲುಳಿದು ಕೊಂಡಿದ್ದರು, ನಾನು ಅವರನ್ನೆಲ್ಲ ಭೆಟ್ಟಿ ಮಾಡುವ ಇಚ್ಛೆಯಿಂದ
ಅವರನ್ನು ನಮ್ಮ ಕಡೆ ಬನ್ನಿ ಎಂದು ಆಹ್ವಾನಿಸಿದೆ.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

ಮೊನ್ನೆ ಶನಿವಾರ ಒಂದು ಸೊಗಸಾದ ಸಂಗೀತ ಕಚೇರಿಗೆ ಹೋಗುವ ಅವಕಾಶ ದೊರೆತಿತ್ತು. ಒಂದು ಒಳ್ಳೇ ಉದ್ದೇಶಕ್ಕಾಗಿ ಆಯೋಜಿತವಾಗಿದ್ದ ಕಾರ್ಯಕ್ರಮ ಅದು. ಹಾಡುಗಾರ್ತಿ ಹಾಡಲು ಕರ್ನಾಟಕದ ವಾಗ್ಗೇಯಕಾರ ರಚನೆಗಳನ್ನೇ ಆಯ್ದಿದ್ದರು. ಮೈಸೂರು ಸಂಗೀತದ ಒಂದು ಪ್ರಮುಖ ಕೇಂದ್ರವಾದ್ದರಿಂದ ಮೈಸೂರಿನ ವಾಗ್ಗೇಯಕಾರರ ರಚನೆಗಳೇ ಅದರಲ್ಲಿ ಹೆಚ್ಚಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಅವರು ಹಾಡಿದ ರಚನೆಗಳಲ್ಲಿ ಮೊದಲ ರಚನೆಯನ್ನು ನವರಾತ್ರಿಯ ಮೊದಲ ದಿನವಾದ ಇಂದು ನಿಮಗೆ ಕೇಳಿಸೋಣ ಎನ್ನಿಸಿತು. ಅದಕ್ಕೆ ಎರಡು ಮೂರು ಕಾರಣಗಳಿವೆ. ಒಂದು ದಸರ ಅಂದರೆ ಮೈಸೂರು, ಮೈಸೂರು ಅಂದರೆ ದಸರಾ ಅನ್ನಿಸುವ ಈ ನವರಾತ್ರಿ ಹಬ್ಬದಲ್ಲಿ, ಮೈಸೂರಿನಲ್ಲಿ ರಚನೆಯಾದ ಇದು ಒಳ್ಳೇ ಆರಂಭವನ್ನು ತರುತ್ತೆ ಎನ್ನುವುದು. ಎರಡನೆಯದು, ಸಂಗೀತ ಕಚೇರಿಯನ್ನು ವರ್ಣದೊಂದಿಗೆ ಆರಂಭಿಸಿದಾಗ ಅದು ಸೊಗಸುತ್ತೆಂಬ ನಂಬಿಕೆಯಂತೆ, ಈ ಹಾಡನ್ನು ಕೇಳುತ್ತ ನವರಾತ್ರಿ ಹಬ್ಬವೂ ಎಲ್ಲರಿಗೂ ಸೊಗಸಲಿ ಎನ್ನುವುದು ನನ್ನ ಆಸೆ. ಮೂರನೆಯ ವಿಷಯಕ್ಕೆ
ಮತ್ತೆ ಬರುವೆ.

ಅಮೆರಿಕದಲ್ಲಿನ ಸಾರ್ವಜನಿಕ ಸೇವಾಸಂಸ್ಥೆಗಳು-೨

ದಿನದಲ್ಲಿ ಹಿರಿಯರ ಯೋಗಕ್ಷೇಮ ವಿಚಾರಣೆ ! (Adult Day Connection) (Day care Home for the Old) ಹೇಗೆ ಪುಟ್ಟ ಮಕ್ಕಳಿಗೆ ಬೇಬಿಸಿಟಿಂಗ್ ಅನುಕೂಲಗಳು ದೊರೆಯುತ್ತಿವೆಯೋ, ಅದೇರೀತಿ ಹಿರಿಯನಾಗರಿಕರಿಗೂ ಒಂದು ಹಂತದಲ್ಲಿ ಹಲವಾರು ಸೌಲಭ್ಯಗಳ ಆವಶ್ಯಕತೆಗಳಿವೆ.

ಹೃದಯ ಸಮುದ್ರ

ಯುವತಿಯೊಬ್ಬಳು ತನ್ನ ಪ್ರೀತಿ,ಪ್ರೇಮ ಭಾವನೆಗಳು ಸುಳ್ಳೆಂದು ತಿಳಿದಾಗ ಅವಳ ಮನದಲ್ಲಿ ಮುಡೂವ ಮೌನರಾಗ,ನಾನು ಚಿಕ್ಕಂದಿನಲ್ಲಿ ಕೇಳಿದ,ನಮ್ಮ ನಿಮ್ಮ್ಮ ನೆಚ್ಚಿನ ಅಂದಿನ ಮಾತನಾಡುವ ಗೆಳೆಯ/ಗೆಳತಿಯಾಗಿದ್ದ ಬಾನುಲಿಯಲ್ಲಿ ನುಲಿದಾಗ,ಹಾಗೆ ಒಂದು ಪುಸ್ತಕದಲ್ಲಿ ಬರೆದಿದ್ದೆ,ಅದನ್ನು ನಿಮಗೂ ಪರಿಚಯಿಸುವ ಇರಾದೆ ನನ್ನದು..ಹಾಗೂ ಈ ಕವನ ರಚಿಸಿದ ವ್ಯಕ್ತಿಗೂ ನನ್ನ ನಮನಗಳು.....

ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ

ಅಕ್ಟೋಬರ್ ೧ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ.

೧ ಅಕ್ಟೋಬರ್ ಸಂಜೆಯ ಕಾರ್ಯಕ್ರಮ ಹೀಗಿದೆ:
---------------------------------------------------
೫.೩೦: ವಿದ್ವಾನ್ ಶ್ರೀ ಆರ್. ಕೆ. ಪದ್ಮನಾಭ ಅವರಿಂದ ಉದ್ಘಾಟನೆ
೫.೪೦-೬.೪೫:
ವಿದುಷಿ ನೀಳಾ ರಾಮ ಗೋಪಾಲ್'ರವರ ಮುಂದಾಳತ್ವದಲ್ಲಿ ವೆಂಕಟ ಕವಿಯವರು ರಚಿಸಿದ ಸಪ್ತರತ್ನ ಕೃತಿ ಗೋಷ್ಟಿ ಗಾನ.

ನಾನು ನನ್ನ ಪ್ರಿಯೆ

ನನ್ನ ಮನದ ಮನೆಯಲ್ಲಿ ನೀನೆ ಹಚ್ಚಿಟ್ಟ
ಪ್ರೀತಿಯ ದೀಪವ, ಕಾರಣ ಹೇಳದೆ ಏಕೆ ಆರಿಸಿ ಹೋದೆ ಗೆಳತಿ.
ನಮ್ಮ ಒಲವಿನ ದೋಣಿಯು ಬಿರುಗಾಳಿಗೆ ಸಿಕ್ಕಿದ್ದಾದರೂ ಹೇಗೆ.
ನೀ ಕೊಟ್ಟ ಪ್ರೀತಿಯ ಗುಲಾಬಿಯಲ್ಲಿ
ಮೋಸವೆಂಬ ಮುಳ್ಳನ್ನು ನಾ ನೋಡಲೇ ಇಲ್ಲ.

ಪ್ರೀತಿಯೆಂಬುದು '೨ ಹೃದಯಗಳ ವಿಷಯ' ಎಂದು ಹೇಳುತ್ತಾ
ನೀನು '೩ ನೆ ಹೃದಯ'ವ ಸದ್ದಿಲ್ಲದೆ ಹುಡುಕಿಕೊಂಡಿದ್ದೆ!