ನನ್ನ ಕವನ ಸಂಕಲನ ಬಿಡುಗಡೆ

ನನ್ನ ಕವನ ಸಂಕಲನ ಬಿಡುಗಡೆ

ನನ್ನ ಸಂಪದ ಬಳಗಕ್ಕೆ ನಮಸ್ಕಾರ.
’ನೀಲ ಕಡಲ ಬಾನು’ ನನ್ನ ಚೊಚ್ಚಲ ಕವನ ಸಂಕಲನ. ಬರುವ ಭಾನುವಾರ ರವೀಂದ್ರ ಕಲಾಕ್ಷೇತ್ರದ ಬಲಗಡೆಯ ವಿಶ್ರಾಂತಿ ಕೊಠಡಿಯಲ್ಲಿ, ಸಂಜೆ ೬ ಗಂಟೆಗೆ ಈ ಸಂಕಲನ ಬಿಡುಗಡೆಯ ಕಾರ್ಯಕ್ರಮವಿದೆ. ಕನ್ನಡದ ಪ್ರಖ್ಯಾತ ವಿಮರ್ಶಕರಾದ ಕಿ.ರಂ.ನಾಗರಾಜ ಕೃತಿಯನ್ನು ಅನಾವರಣಗೊಳಿಸುತ್ತಾರೆ.ಇನ್ನೊಬ್ಬ ಪ್ರಖ್ಯಾತ ವಿಮರ್ಶಕ ಎಸ್.ಆರ್.ವಿಜಯಶಂಕರ ಅವರು ಕೃತಿಯ ಕುರಿತು ಮಾತನಾಡುತ್ತಾರೆ. ಜೊತೆಗೆ ಕವಿ ಡಾ.ಎಚ್.ಎಲ್.ಪುಷ್ಪಾ ಅವರು ಸಂಪಾದಕಿಯಾಗಿ ಜೊತೆಗಿದ್ದಾರೆ.
ಅಂದು ನೀವುಗಳೂ ಜೊತೆಗೂಡಿದರೆ ಅದು ನನ್ನ ಪಾಲಿನ ಸುವರ್ಣ ದಿನ. ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ. ಹರಸಿ. ಪುಸ್ತಕ ಕೊಂಡು ಸಂಪದ ದ ಮೂಲಕ ನಿಮ್ಮ ನೇರ ಅಭಿಪ್ರಾಯ ತಿಳಿಸಿ. ನೀವು ಕವನಗಳು ಚೆನ್ನಾಗಿಲ್ಲ ಅಂತ ಹೇಳಿದರೆ ಅದು ನನ್ನ ಬೆಳವಣಿಗೆ ಪಾಲಿಗೆ ರೋಗನಿವಾರಕ ಮದ್ದು ಅಂದುಕೊಳ್ಳುತ್ತೇನೆ, ಚೆನ್ನಾಗಿ ಬರೆದಿದ್ದೀಯ ಎಂದು ಬೆನ್ನು ತಟ್ಟಿದರೆ ಪೋಷ್ಟಿಕಾಂಶ ದೊರಕಿದಂತೆ ಆರೋಗ್ಯಪೂರ್ಣ ಬೆಳವಣಿಗೆ ಮಾಡಿಕೊಳ್ಳುತ್ತೇನೆ. ದಯಮಾಡಿ ಬಿಡುವು ಮಾಡಿಕೊಂಡು ಬನ್ನಿ.

ನಿಮ್ಮ
ಜಯಲಕ್ಷ್ಮೀ.ಪಾಟೀಲ್.