b
my dreams are end from the day, when i rejected by dreams
- Read more about b
- Log in or register to post comments
my dreams are end from the day, when i rejected by dreams
ಅಮೆರಿಕದ ಮಿಸ್ಸೂರಿರಾಜ್ಯ, ಚಾರಿತ್ರ್ಯಿಕವಾಗಿ ಸಾಂಸ್ಕೃತಿಕ, ಸಂಪದ್ಭರಿತವಾದ ರಾಜ್ಯಗಳಲ್ಲೊಂದು. ಇದು 'ಹ್ಯಾರಿ ಟ್ರೂಮನ್' ನಂತಹ ಅಮೆರಿಕನ್ ಅಧ್ಯಕ್ಷರ ತವರುಮನೆ ; ’ವೈಲ್ಡ್ ವೆಸ್ಟ್’ ಎಂದು ಅನೇಕರು ಕರೆದು, ಅದರಬಗ್ಗೆ ಹಲವಾರು ದಶಕಗಳಕಾಲ ವಿಶ್ವದ ಜನರೆಲ್ಲರ ಗಮನಸೆಳೆದ, ಹಾಗೂ ಒಂದು ’ತಲೆಬಾಗಿಲಿನ ತರಹ ಸೆಟೆದೆದ್ದುನಿಂತ ಸೊಗಸಿನತಾಣ ! ಚಾರ್ಲ್ಸ್ ಲಿಂಡ್ಬರ್ಗ್ ರ ’ಸ್ಪಿರಿಟ್ ಆಫ್ ಸೇಂಟ್ ಲೂಯಿಸ್’, ಯೆಂಬ ಒಮ್ಮೆಲೇ ಎಲ್ಲೂ ನಿಲ್ಲದೆ ಅಟ್ಲಾಂಟಿಕ್ ಮಹಾಸಾಗರವನ್ನು ವಿಮಾನದಲ್ಲಿ ಹಾರಿಮುಗಿಸಿದ ಸನ್ನಿವೇಶವನ್ನು ಸೃಷ್ಟಿಸಿದ ಹೆಮ್ಮೆ, ಈ ರಾಜ್ಯಕ್ಕಿದೆ.
ಮೌನ ಹೆಸರಲ್ಲಿ ಮನವನ್ನು ಕೊಂದೆ
ಕಾಡುವ ನೆಪದಲ್ಲಿ ಕನಸನು ಕೊಂದೆ
ಪ್ರೀತಿಯ ಹೆಸರಲ್ಲಿ ಪ್ರಾಣವ ಹಿಂಡಿದೆ
ಹರೆಯದ ಮನದಲ್ಲಿ ಉಕ್ಕಿದೆ ಪ್ರೀತಿ
ಸಾವಿಗೂ ಅಂಜದು ಸೆಳೆಯುವ ರೀತಿ
ಮನಸ್ಸಿಗೆ ಇಲ್ಲ ನಾಳೆಯ ಚಿಂತೆ
ಬೆಡದ ಜೀವನ ಬೇಕಿದೆ ಎಂದೆ
ಒಲ್ಲದ ಮನಸ್ಸಲಿ ಒಪ್ಪಿದೆ ಎಂದೆ
ನೊಡುವ ನೋಟ ನಾಟಕ ಎಂದೆ
ಮನಸ್ಸಿನ ನೋವು ಕಣ್ಣಿಗೆ ಗೊತ್ತು
ಸಿ ಎಸ್ ಶಾರದಾ ಪ್ರಸಾದ್ ನೀರಿನ ಸೆಲೆಗಳನ್ನು ಹುಡುಕಿಕೊಂಡು ಇಡಿಯ ದೇಶ ಬೈಕಿನಲ್ಲಿ ಸುತ್ತಲು ಹೊರಟದ್ದರ ಬಗ್ಗೆ ಈ ಹಿಂದೆ ಬರೆದಿದ್ದೆ. ಅವರು ೯೦ ದಿನಗಳಲ್ಲಿ ೧೯,೦೦೦ಕ್ಕೂ ಹೆಚ್ಚು ಕಿ.ಮಿ. ಪ್ರಯಾಣ ಮಾಡಿದರೂ ಟ್ರಿಪ್ ಯಶಸ್ವಿಯಾಗಿ ಮುಗಿಸಿಕೊಂಡು ಬಂದದ್ದು ಈಗ ಹಳೆಯ ಸುದ್ದಿ. ಆದರೆ ಈ ಯಾತ್ರೆಯಲ್ಲಿ ಅವರಿಗಾದ ಅನುಭವದ ಪುಟಗಳಲ್ಲಿನ ಭಾಗಗಳನ್ನು ಕೇಳಿ ತಿಳಿದು, ಜೋಡಿಸಿ ಕಳೆದ ವಾರದ ತರಂಗದಲ್ಲಿ ಮಾನ್ಯ ಶ್ರೀ ಪಡ್ರೆಯವರು ಒಂದು ಸಚಿತ್ರ ಲೇಖನ ಬರೆದಿದ್ದಾರೆ. ತರಂಗದ ಕಾಪಿ ಸಿಕ್ಕರೆ ಓದಿ.
ಶಾರದಾ ಪ್ರಸಾದ್ ಭಾರತುದ್ದಕ್ಕೂ ಅವರು ಭೇಟಿ ನೀಡಿದ ಸ್ಥಳಗಳಲ್ಲಿ ನೀರಿನ ಪರಿಸ್ಥಿತಿಯ ಫೋಟೋ ಲಾಗ್ ಮಾಡಿದ್ದಾರೆ. ಅದನ್ನು ಇಲ್ಲಿ ವೀಕ್ಷಿಸಬಹುದು.
ಪಿಟೀಲು ಒಂದು ಪಾಶ್ಚಾತ್ಯ ವಾದ್ಯ. ಅದನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಒಗ್ಗಿಸಿರುವ ಪರಿ ಅದ್ಭುತ! ಅದರಲ್ಲೂ ಇತ್ತೀಚೆಗೆ ನಮ್ಮನಗಲಿದ ಶ್ರೀಕುನ್ನಕುಡಿ ವೈದ್ಯನಾಥನ್ ಅವರು ಪಿಟೀಲಿನೊಡನೆ ಸಂಭಾಷಿಸುತ್ತಿದ್ದರು! ತಮಗನಿಸಿದ್ದನ್ನು ಮಾಡಲು ಹಿಂಜರಿಯದ ಕುನ್ನಕುಡಿ ವಿವಾದಗಳ ಕೇಂದ್ರವಾಗಿದ್ದರು.
ಮಾರ್ಚ್ ೨, ೧೯೩೫ರಲ್ಲಿ ಶ್ರೀರಾಮಸ್ವಾಮಿ ಶಾಸ್ಥ್ರಿ ಹಾಗೂ ಶ್ರೀಮತಿ ಮೀನಾಕ್ಷಿ ಅವರ ಮಗನಾದಿ ತಮಿಳುನಾಡಿನ ಕುನ್ನಕುಡಿ ಗ್ರಾಮದಲ್ಲಿ ಹುಟ್ಟಿದರು. ಸುಮಾರು ೧೨ ವರ್ಷ ವಯಸ್ಸನ್ನು ತಲುಪುವಷ್ಟರಲ್ಲಿಯೇ ಸಂಗೀತದ ಮೇಲೆ ಹಾಗೂ ಪಿಟೀಲಿನ ಮೇಲೆ ಅದ್ಭುತ ಹಿಡಿತವನ್ನು ಸಾಧಿಸಿದರು. ಅಂದಿನ ದಿಗ್ಗಜರಾದ ಶ್ರೀಗಳಾದ ಅರಿಯಾಕುಡಿ, ಶೆಮ್ಮಂಗುಡಿ, ಮಹಾರಾಜಪುರಂ ಮುಂತಾದವರ ಕಚೇರಿಗಳಲ್ಲಿ ಪಕ್ಕ ವಾದ್ಯಕರರಾಗಿ ಪಿಟೀಲನ್ನು ನುಡಿಸಿ ಸೈ ಎಂದು ಅನಿಸಿಕೊಂಡರು.
ಇರುವುದೆಲ್ಲವ ಬಿಟ್ಟು ಕಣ್ಣಿಗೆ ಕಾಣದ್ದನ್ನ , ತನ್ನ ಊಹೆಗೆ ನಿಲುಕದ್ದನ್ನ, ಬ್ರಹ್ಮ ಸೃಷ್ಠಿಯನ್ನ ಅರ್ಥಮಾಡಿಕೊಳ್ಳಲಿಕ್ಕೆ ಹವಣಿಸುವುದು, ತನ್ನನ್ನ ತಾನು ಪರೀಕ್ಷೆಗೆ ಒಡ್ಡಿ ಕೊಳ್ಳುವುದು, ಪ್ರಕೃತಿಯೊಡನೆ ಆಟಕ್ಕೂ ಇಳಿಯುವುದು ಮಾನವ ಸಹಜ ಗುಣ. ಈ ಗುಣವೇ ಅನೇಕ ಅನ್ವೇಷಣೆಗಳಿಗೆ ಕಾರಣವಾಗಿದೆ ಕೂಡ. ಇಂದು ಅದರ ದೈತ್ಯ ಉದಾಹರಣೆಯೊಂದು ನಮ್ಮ ಮುಂದಿದೆ.
೮೦ಕ್ಕೂ ಹೆಚ್ಚು ದೇಶಗಳ ೩ ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು ೧೪ ವರ್ಷಗಳಿಂದ ೧೦ಬಿಲಿಯನ್ ಡಾಲರ್ ವೆಚ್ಚ ಮಾಡಿ CERN (ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್) ನಡಿಯಲ್ಲಿ, ಎಲ್.ಎಚ್.ಎಸ್ (LHS - Large Hadron Collider) ಎಂಬ ಅಣು ವೇಗವರ್ಧಕದ ವೃತ್ತಾಕಾರದ ಕೊಳವೆ ಯನ್ನ ಫಾನ್ಸ್ ಮತ್ತು ಸ್ವಿಡ್ಜರ್ ಲ್ಯಾಂಡಿನ ಗಡಿಯಲ್ಲಿ ಭುವಿಯ ಗರ್ಭದಲ್ಲಿ ನೂರಾರು ಅಡಿಗಳ ಕೆಳಗೆ ಹುದುಗಿಸಿಟ್ಟು , ಭೌತಶಾಸ್ತ್ರದ ಮಹಾ ಪ್ರಯೋಗವನ್ನ ಮಾಡಲಿಕ್ಕೆ ಶುರು ಹಚ್ಚಿ ಕೊಂಡಿದ್ದಾರೆ. ಇದರ ಉದ್ದ ಸುಮಾರು ೨೭ ಕಿಲೋಮೀಟರ್ ಗಳು. ಪ್ರಪಂಚದಾಧ್ಯಂತ ೬೦ ಸಾವಿರಕ್ಕೂ ಹೆಚ್ಚಿನ ಕಂಪ್ಯೂಟರುಗಳು ಈ ಪ್ರಯೋಗದ ಅಂಕಿಅಂಶಗಳನ್ನ ಪರಿಶೀಲಿಸಲಿವೆ.
ಚಿತ್ರ : ಎಲ್.ಎಚ್.ಎಸ್ . ಬೋಸ್ಟನ್ ಡಾಟ್ ಕಾಮ್.
ಸಂಪದದಲ್ಲಿ "ಇಲ್ಲಿ ನೋಡಿ", "ಈ ಕೊಂಡಿ ಚಿಟುಕಿಸಿ" ಎಂದೆಲ್ಲಾ ಕೆಲವರು Link ಕೊಡುತ್ತಾರೆ...
ಆಗ ಅಂತಹ ಕೊಂಡಿಗಳನ್ನು ಚಿಟುಕಿಸಿದರೆ, ನೇರವಾಗಿ ಆ Respective ವೆಬ್ ಪೇಜ್ ಗೆ ಹೋಗುತ್ತದೆ...
ಆ ತರಹದ link ಗಳನ್ನು ಹೇಗೆ ಕೊಡುವುದು?
ನಾನೂ ಪ್ರಯತ್ನಸಿದೆ, ಆದರೆ ಪ್ರಯೋಜನವಾಗಲಿಲ್ಲ... :-(
ಯಾರಾದರೂ ಸ್ವಲ್ಪ ತಿಳಿಸಿಕೊಡಿ...
ನೇರವಾಗಿ ವಿಷಯಕ್ಕೆ ಬರುತ್ತೇನೆ.
ಧಾರವಾಡದ ದಾನುನಗರ. ರೈಲು ನಿಲ್ದಾಣದ ಪಕ್ಕದಲ್ಲಿರುವ ಆಳ ಪ್ರಪಾತದ ಅತ್ತಿಕೊಳ್ಳಕ್ಕೆ ಹತ್ತಿಕೊಂಡಿರುವ ‘ಸ್ಲಂ’ ಸದೃಷ ಪ್ರದೇಶ. ಅಲ್ಲಿ ಒಂದು ಅಲ್ಪತೃಪ್ತ ಸುಖಿ ಹಿಂದು ಅವಿಭಕ್ತ ಕುಟುಂಬ. ಮನೆಯ ವ್ಯಾವಹಾರಿಕ ಊರುಗೋಲಾಗಿ ಕಿರಾಣಿ ಅಂಗಡಿ. ಮನೆಯ ಕೊನೆಯ ಮಗ ಎಲ್ಲರಿಗೂ ಕಣ್ಮಣಿ. ಆದರೆ ಆ ಪ್ರೀತಿ ಉಳಿಸಿಕೊಳ್ಳುವ ಹರಕತ್ತು ಇಲ್ಲದ ಜೀವಿ. ಆತನಿಗೂ ಮದುವೆ ಮಾಡಿದ್ದರು. ಸದ್ಗೃಹಿಣಿ ಪತ್ನಿ. ಮುತ್ತಿನಂತಹ ಎರಡು ಮಕ್ಕಳು. ಉಪಜೀವನಕ್ಕೆ ರಿಕ್ಷಾ ಆತನಿಗೆ ಜೀವನ ಸಾಥಿಯಾಗಿತ್ತು. ಬಹುತೇಕ ಇದು ನಮ್ಮ ಮಧ್ಯಮ ವರ್ಗದ ಕುಟುಂಬಗಳ ಚಿತ್ರಣಕ್ಕಿಂತ ಬೇರೆ ಏನಲ್ಲ.
ಪರಿಸರ ಅತ್ಯುತ್ತಮವಾಗಿದ್ದರೆ ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳಬಹುದು. ಇದು ಚರ್ಚೆಯ ವಿಷಯವೂ ಹೌದು. ಅದಿರಲಿ. ಸಂಗತಿ, ಸಾಂಗತ್ಯದ ದೋಷ. ಆ ಶ್ರಮಜೀವಿ ರಿಕ್ಷಾಚಾಲಕ ಪ್ರಕಾಶ ಸಾಲೋಡಗಿ ಜವಾಬ್ದಾರಿ ಮರೆತ. ಕುಡಿತ, ಸಿಗರೇಟು, ಜೂಜು ಲೆಕ್ಕತಪ್ಪಿತು. ಸ್ವಂತ ರಿಕ್ಷಾ ಒತ್ತೆ ಇಟ್ಟ. ಬಿಡಿಸಿಕೊಳ್ಳಲಾಗದೇ ಮಾರಿದ. ಕೊನೆಗೆ ಮಾಲೀಕರಿಂದ ದಿನದ ಬಾಡಿಗೆ ಕರಾರಿನ ಮೇಲೆ ಆಳಾದ. ಮನೆಯವರ ಪರಿಸ್ಥಿತಿ ದೇವರಿಗೇ ಪ್ರೀತಿ.
ಬ್ಲಾಗ್ ಪುಟಗಳಲ್ಲಿ ಅಥವಾ ಲೇಖನ ಪುಟಗಳಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಸೇರಿಸುವುದು ಹೇಗೆ?
ಯಾರಾದರೂ ದಯವಿಟ್ಟು ತಿಳಿಸಿ...