ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದಲಿತ ಸೂರ್ಯ ಅಂಬೇಡ್ಕರ್ ------------ಪ್ರೀತಿಯಿಂದ ಪ್ರೀತಿಗಾಗಿ ಜಿ ವಿಜಯ್ ಹೆಮ್ಮರಗಾಲ

ದಲಿತ ಸೂರ್ಯ ಅಂಬೇಡ್ಕರ್

ಬಾ ಸೂರ್ಯನೇ ಮರಳಿ ಬಾ...
ಮತ್ತೇ ಹಿಡಿದಿದೆ ಜಾತಿ-ಜಾತಿಯ ಮರುಳು,
ಅರಳಿ ಬರಬೇಡ ಹೂವಾಗಿ
ಕೆರಳಿ ಬಾ... ಕೆಂಡವಾಗಿ...
ಅಗ್ನಿ-ಕುಂಡವಾಗಿ...
ಜಾತಿ-ಜಾತಿಯ ಬೀಜಾಸುರರ ಸುಡಲು
ಮನುಜರೆಲ್ಲಾ ಅನು-ಅನುಜರೆಂದೂ....!
ಸಮೈಕ್ಯ ಗೀತೆಯಾಡಲೂ...
ಬಾ ಸೂರ್ಯನೇ ಮರಳಿ ಬಾ...
ಮತ್ತೇ ಕಮರುತ್ತಿದೆ ಮಬ್ಬಾಳಿಕೆ,
ನನ್ನವರ ಮೇಲಿನ ದಬ್ಬಾಳಿಕೆ,

ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ

Bush n Blairಅವತ್ತು ರಾತ್ರಿ ಆಫೀಸಿಂದ ಮನೆಗೆ ಹೋಗಬೇಕಾದ್ರೆ, ಟೀವಿ ಟವರ್ ಹತ್ರ ಒಂದು ಆಟೋ ನನ್ನ ಮುಂದೆ ಪಾಸ್ ಆಯ್ತು, ಹಿಂದೆ ನೋಡುದ್ರೆ ಈ ಥರ ಲಿರಿಕ್ಸು...

ಚೈತ್ರ ಸಂಭ್ರಮ

ಚೈತ್ರನೊಂದಿಗೆ ವಸಂತ ಬಂದನು
ಶಿಶಿರನಾರ್ಭಟಕಂತ್ಯ ತಂದನು
ಪ್ರಕೃತಿ ತಳೆದಳು ನವಚೇತನ
ಹೊಸತು ತಳಿರಿನ ತೋರಣ

ಚಳಿಗೆ ಮೌನದೆ ಕುಳಿತ ಕೋಗಿಲೆ
ಸ್ಪೂರ್ತಿಗೊಂಡಿತು ಚೈತ್ರನಿಂದಲೆ
ತುಂಬಿತೆಲ್ಲೆಡೆ ಮಧುರ ಗಾಯನ
ತಂದಿತೆಲ್ಲೆಡೆ ಪ್ರೇಮಸಿಂಚನ

ತರುಲತೆಗೆ ಹಿಗ್ಗಿನ ಪಲ್ಲವ
ಎಲ್ಲೆಲ್ಲು ಚಿಲಿಪಿಲಿ ಕಲರವ
ಅಳಿಸಿಹೋಯಿತು ಬರಡಾದ ನೋವು
ಅಂಕುರಾಯಿತು ಹೊಸತು ಮಾವು

ವೇದಾಂತಿಯ ಹಾಡೂ ಕವಿಯೊಬ್ಬನ ಸಿದ್ಧಾಂತಗಳೂ...

ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ (ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ) ಒಂದು ಉತ್ತಮ ಪುಸ್ತಕ. ಕಾದಂಬರಿಯ ನಡುನಡುವೆ ನಡುನಡುವೆ ನಮ್ಮ ಕಂಬಾರರ (ಚಕೋರಿ, ಶಿಖರಸೂರ್ಯ) ಮಾತೃಪರಂಪರೆ, ಪಿತೃಪರಂಪರೆಯ ನೆನಪಾದರೆ ಅಚ್ಚರಿಯಿಲ್ಲ!

 

ಅನುವಾದ ಸಿಬಿಲ್ ಕಾದಂಬರಿಯಷ್ಟು ಕಲಾತ್ಮಕವಾಗಿದೆ ಅನಿಸುವುದಿಲ್ಲ ನಿಜ. ಆದರೆ ಡಿ.ಆರ್.ಮಿರ್ಜಿಯವರು ಕೃತಿಯ ಸೊಗಡನ್ನು ಉಳಿಸಿಕೊಡಲು ವಹಿಸಿದ ಶ್ರಮ ಎದ್ದು ಕಾಣುತ್ತದೆ. 1946ರ ನೊಬೆಲ್ ಪಾರಿತೋಷಕ ವಿಜೇತ ಕೃತಿಯನ್ನು ಐಬಿಎಚ್ ನವರು ಪ್ರಕಟಿಸಿದ್ದಾರೆ. ಇನ್ನೂರ ತೊಂಭತ್ತನಾಲ್ಕು ಪುಟಗಳ ಈ ಕಾದಂಬರಿಯ ಬೆಲೆ ನೂರ ಎಂಭತ್ತು ರೂಪಾಯಿಗಳು.

ವೇದಾಂತಿಯ ಹಾಡೂ ಕವಿಯೊಬ್ಬನ ಸಿದ್ಧಾಂತಗಳೂ...

ಪುಸ್ತಕದ ಲೇಖಕ/ಕವಿಯ ಹೆಸರು
(ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ

ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ (ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ) ಒಂದು ಉತ್ತಮ ಪುಸ್ತಕ. ಕಾದಂಬರಿಯ ನಡುನಡುವೆ ನಡುನಡುವೆ ನಮ್ಮ ಕಂಬಾರರ (ಚಕೋರಿ, ಶಿಖರಸೂರ್ಯ) ಮಾತೃಪರಂಪರೆ, ಪಿತೃಪರಂಪರೆಯ ನೆನಪಾದರೆ ಅಚ್ಚರಿಯಿಲ್ಲ!

ಅನುವಾದ ಸಿಬಿಲ್ ಕಾದಂಬರಿಯಷ್ಟು ಕಲಾತ್ಮಕವಾಗಿದೆ ಅನಿಸುವುದಿಲ್ಲ ನಿಜ. ಆದರೆ ಡಿ.ಆರ್.ಮಿರ್ಜಿಯವರು ಕೃತಿಯ ಸೊಗಡನ್ನು ಉಳಿಸಿಕೊಡಲು ವಹಿಸಿದ ಶ್ರಮ ಎದ್ದು ಕಾಣುತ್ತದೆ. 1946ರ ನೊಬೆಲ್ ಪಾರಿತೋಷಕ ವಿಜೇತ ಕೃತಿಯನ್ನು ಐಬಿಎಚ್ ನವರು ಪ್ರಕಟಿಸಿದ್ದಾರೆ. ಇನ್ನೂರ ತೊಂಭತ್ತನಾಲ್ಕು ಪುಟಗಳ ಈ ಕಾದಂಬರಿಯ ಬೆಲೆ ನೂರ ಎಂಭತ್ತು ರೂಪಾಯಿಗಳು.

ಬೆಕ್ಕು ಬಂತು ಗುಬ್ಬಿ ಹೋಯ್ತು ಡುಂ ಡುಂ.

ನನ್ನ ಮಗಳಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಇಷ್ಟ. ಅವಳನ್ನು ಒಂದು ದಿನ ಪ್ಲೇ ಹೋಮ್ಗೆ ಕರೆದು ಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಕರುವೊಂದು ಅರಚುತಿತ್ತು. ಅದರ ತಾಯಿ ಹಸು ಅಲ್ಲೆಲ್ಲೂ ಇರಲಿಲ್ಲ. "ಅಪ್ಪಾ. ನೋಡು ಆ ಮರಿ ಹಸು ಅವರಮ್ಮನ್ನ ಕರೀತಿದೆ. ಅಮ್ಮ ಹಸು ಆಫಿಸ್ಗೆ ಹೋಗಿದ್ಯಾ?" ಅಂತ ಕೇಳಿದ್ದಳು.

ಕನ್ನಡದ ಬಗ್ಗೆ ಹತ್ತು ಕಣಸುಗಳು

ಕನ್ನಡದ ಬಗ್ಗೆ ಹತ್ತು ಕಣಸುಗಳು

ನಾವು ಯಾವುದೇ ಗುರಿ ಮುಟ್ಟಲು ಅದರ ಬಗ್ಗೆ ಕಣಸು/vision ಗಳು ಇರಬೇಕು. ಇಲ್ಲ ಅಂದ್ರೆ ದಾರಿ ತಪ್ಪಿ ಬುಡ್ತಿವಿ. ಹಾಗೆ ಪಟ್ಟಿ ಮಾಡಿದೆ.

೧) ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡಾಗ ಅವುಗಳ ಜೊತೆ ಬರುವ ಮಾನ್ಯುಯಲ್ ಕನ್ನಡದಲ್ಲಿರಬೇಕು
೨) ಮದ್ದು/ಅವ್ಶದ ಇವುಗಳು ಹೆಸರುಗಳು ಕನ್ನಡದಲ್ಲಿ ಆ ಮದ್ದಿನ ಮೇಲೆ ಕನ್ನಡದಲ್ಲಿ(ಇಂಗಲೀಸ್ ಜೊತೆ) ಲಗತ್ತಿಸಿರಬೇಕು
೩) ಕನ್ನಡ ಸಿನಿಮಾಗಳು ಹೆಚ್ಚು ಟೆಕ್ನಿಕಲ್ ಆಗಿ ಮುಂದುವರೆಯಬೇಕು ಮತ್ತು ಬೇರೆ ರಾಜ್ಯ, ದೇಸಗಳಲ್ಲಿ ಕನ್ನಡ ಸಿನಿಮಾ ಸುಲಬವಾಗಿ ನೋಡುವಂತಾಗಬೇಕು
೪) ಕನ್ನಡಿಗರು ಇನ್ನು ಹೆಚ್ಚು ಎಂಟರ್ ಪ್ರಿನ್ಯೂರಿಯಲ್ ಆಗ್ಬೇಕು.
೫) ಕನ್ನಡ ನೆಲದಲ್ಲಿರುವ ಎಲ್ಲ ಮಂದಿಗೆ ಕನ್ನಡ ಮಾತನಾಡಲು/ತಿಳಿದುಕೊಳ್ಳಲು ಬರಬೇಕು.
೬) ಬಾನೋಡ/ವಿಮಾನದ ಟಿಕೆಟ್ ಗಳು ಕನ್ನಡದಲ್ಲೂ ಅಚ್ಚಾಗಿರಬೇಕು.
೭) ಸಿಂಗಾಪುರ ಎಲರ್ವಟ್ಟೆ(airlines)ಯವರು ತಮ್ಮ ಬಾನೋಡಗಳಲ್ಲಿ ಕನ್ನಡದ ಸಿನಿಮಾಗಳನ್ನು ತೋರಿಸಬೇಕು.
೮) ಸಿರಿವಿಜಯ, ಕೊಳಂಬೆ ಪುಟ್ಟಣ್ಣಗೌಡ ಮತ್ತು ಆಂಡಯ್ಯನವರ ಪದ್ಯಗಳು ಮಂದಿ ಬಾಯಲ್ಲಿ ಕುಣಿಯಬೇಕು.
೯) ಕನ್ನಡಕ್ಕೆ ತನ್ನದೇ ಆದ ಕೀಲಿ ಮಣೆ, ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ಬೇಕು.
೧೦) ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರಕ್ಕಿಂತ ಕನ್ನಡ ಸರ್ಕಾರ ಬರಬೇಕು.

ಈ ಬ್ಲಾಗಿನ ಬಗ್ಗೆ ಕಮೆಂಟ್ ಮಾಡುವವರು ಈ ಪಿಡಿಎಪ್ ಓದಬೇಕಾಗಿ ಕೋರಿಕೆ. ಹೇಗೆ ತಮಿಳು ಇಂಗಲೀಸನ್ನು ಎದುರಿಸಲು ಹೋಗಿ ಸೊರಗಿದೆ ಅಂತ ಅರಿತ ಆಗುತ್ತೆ.

http://ccat.sas.upenn.edu/~haroldfs/public/AusbauTamil.pdf

ಎಚ್ಚರವಿರಲಿ"................................................"â"

ಎಚ್ಚರವಿರಲಿ".....

ಯೌವನದ ಅಮಲಿನಲ್ಲಿ - ನೀ ಜಾರಬೇಡ.....
ಪ್ರೀತಿಯಾ ಗಾಳಕ್ಕೆ - ನೀ ಸಿಲುಕಬೇಡ.....
ಕಣ್ಣಿಲ್ಲದ ಪ್ರೇಮಕ್ಕೆ - ನೀ ಕುರುಡಾಗಬೇಡ.....
ಪ್ರೀತಿಯ ಮಾತಿಗೆ - ನೀ ಮರುಳಾಗಬೇಡ.....
ಕಾಣದ ಪ್ರೇಮಕ್ಕೆ - ನೀ ಮನ ಸೋಲಬೇಡ.....
ಪ್ರೇಮ ಕುರುಡೆಂಬ - ನೀ ಮರೆಯಬೇಡ..............................................................."