ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗ್ನು/ಲಿನಕ್ಸ್ ಹಬ್ಬ, ಮೈಸೂರಿನಲ್ಲಿ ಸೆಪ್ಟೆಂಬರ್ ೨೧ರಂದು

ಗ್ನು/ಲಿನಕ್ಸ್ ಹಬ್ಬ ಈ ಬಾರಿ ಮೈಸೂರಿನಲ್ಲಿ. ಸೆಪ್ಟೆಂಬರ್ ೨೧ ರಂದು.

ಬೆಂಗಳೂರಿಂದ ಹುಬ್ಬಳ್ಳಿಗೆ ಹೋಗೊವಾಗ ಕಂಡ ಹಿಂದಿ ಭೂತ !

ಮೊನ್ನೆ ಮನೆಯಿಂದ ಅಮ್ಮ ಕಾಲ್ ಮಾಡಿದ್ಲು, ಅರ್ಜೆಂಟ್ ಆಗಿ ಮನೆಗೆ ಬಾ, ಅಕ್ಕನ ಮದುವೆ ವಿಷ್ಯದ ಕೆಲಸ ಇದೆ ಅಂತ. ಸರಿ ಅಂದಕೊಂಡು ರೈಲ್ವೆಯ irctc.co.in ವೆಬ್ ಸೈಟ್ ಗೆ ಹೋಗಿ ಹುಬ್ಬಳ್ಳಿಗೆ ಒಂದು ಟಿಕೇಟ್ ಬುಕ್ ಮಾಡೋಣ ಅಂದಕೊಂಡು ಹುಡುಕಿದ್ರೆ ಸೀಟ್ ಇದ್ದಿದ್ದು ಅಜ್ಮೇರ್ ಎಕ್ಸಪ್ರೆಸ್ ಅನ್ನೋ ಮಾರ್ವಾಡಿ ಎಕ್ಸಪ್ರೆಸ್ ( ಹಾಗೆ ಯಾಕ್ ಕರೆದೆ ಅಂತ ಹೇಳುವೆ) ಒಂದರಲ್ಲೇ.

ಹಿಂದೂ ಸಂಸ್ಕೃತಿಯಲ್ಲಿ ಮಣ್ಣಿಗಿರುವ ಮಹತ್ವ

ನಾ ಗಣೇಶ ಚತುರ್ತಿಗೆ ಊರಿಗೆ ಹೋದಾಗ ಅಮ್ಮಾ ಜೂಡಿ ಮಾತಾಡ್ಕೋತ ಕುತ್ತಾಗ ಅಮ್ಮಾ ಈ ಮಾತು ಹೇಳಿದ್ಲು. ನಮ್ಮ ಹಿಂದೂ ಪದ್ದತಿಗಳ ವಳಗ ಮಣ್ಮಿಗೆ ಭಾಳ ಮಹತ್ವ ಕೊಡತಾರ. ಇದಕ್ಕ ಆಧಾರ ಎನಂದ್ರ -

೧. ಮಣ್ಣೆತ್ತಿನ ಅಮವಾಸಿಗೆ ಮಣ್ಣಿನ ಎತ್ತು ಮಾಡ್ತೀವಿ.
೨. ಗಣಪತಿ ಹಬ್ಬಕ್ಕ ಮಣ್ಣಿನ ಗಣಪತಿ ಮೂರ್ತಿ ಇಡತೀವಿ.

ಕೊಲಂಬಿಯ ಪಟ್ಟಣದ ಸಂತೆ !

ನನಗೆ ಅಮೆರಿಕದ ರೈತರನ್ನು ಕಂಡು ಮಾತಾಡಿಸುವ ಆಸೆ. ಸಿಯಾಟಲ್ ನಗರಕ್ಕೆ ಹೋದಾಗಲೂ ಅಲ್ಲಿನ ರೈತರಮಾರುಕಟ್ಟೆಗೆ ಹೋಗಿದ್ದೆವು. ಆದರೆ ನಾವು ಹೋದಾಗ ಸಂಜೆಯಾಗಿತ್ತು. ಮಳಿಗೆಗಳು ಮುಚ್ಚಿದ್ದವು. ನನ್ನ ತಮ್ಮ, ನಾದಿನಿ ಕೊಲಂಬಿಯದಲ್ಲಿ ಪ್ರತಿ ಶನಿವಾರ ರೈತರ ಮಾರುಕಟ್ಟೆಯಲ್ಲೇ ತಮಗೆ ಬೇಕಾದ ತರಕಾರಿಹಾಗೂ ಉಪಯುಕ್ತವಸ್ತುಗಳನ್ನು ಖರೀದಿಸುತ್ತಾರೆ. ನಮ್ಮನ್ನೂ ಜೊತೆಯಲ್ಲಿ ಕರೆದುಕೊಂಡುಹೋದರು. ಅಲ್ಲಿಯ ಬಿಳಿಯ ಟೆಂಟ್ ಗಳಲ್ಲಿ ತಮ್ಮ ಉತ್ಪಾದನೆಗಳನ್ನು ಮಾರುತ್ತಿದ್ದ ದೃಷ್ಯವನ್ನು ನಾವು ನೋಡಿದಾಗ, ನಮ್ಮ ಸಂತೆಗೂ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹಾಯಾಗಿಜೀವನವನ್ನು ನಡೆಸುತ್ತಿರುವ ಅಮೆರಿಕನ್ ರೈತರಿಗೂಹೋಲಿಕೆಮಾಡಿದೆ. ಅಮೆರಿಕದ ರೈತರಮಕ್ಕಳು, ತಮ್ಮದೇ ಆದ ವ್ಯಾನ್ ಗಳಲ್ಲಿ ಜೀನುಡುಪುಧರಿಸಿ ಮಂದಹಾಸ, ಹಾಗೂ ತೃಪ್ತಿಯ ಮುಖಭಾವದಿಂದ ತಮ್ಮ ಪದಾರ್ಥಗಳನ್ನು ಮಾರುವುದನ್ನು ನೋಡುವುದೇ ಒಂದು ಸೊಗಸು ! ಇಲ್ಲಿನ ರೈತರನ್ನು ನಾನೆ ಮಾತಾಡಿಸಿ ಖಚಿತಪಡಿಸಿಕೊಂಡು ಬರೆಯುತ್ತಿದ್ದೇನೆ. ಮಿಸ್ಸೂರಿಪ್ರಾಂತ್ಯದ ಬೇಸಾಯಗಾರರು, ಜರ್ಮನ್ ಮೂಲದವರು. ಕೆಲವು ಇಟ್ಯಾಲಿಯನ್, ಸ್ಪಾನಿಷ್ ಹಾಗು ಪೋರ್ಚುಗೀಸ್ ಇದ್ದಾರೆ. ಪೋರ್ಚುಗೀಸ್ ಮೂಲದವರು ಬಹಳ ಕಡಿಮೆ. ಜರ್ಮನ್ ರೈತರು ಬಂದು ಸುಮಾರು ೧೦೦ ವರ್ಷಗಳಾದವಂತೆ. ಅವರ ಜಮೀನುಗಳು ಸುಮರು ೧೦೦ ಎಕರೆಯಷ್ಟು. ಮೆಕ್ಕೆಜೋಳ, ಸೊಯಾಬೀನ್, ತರಕಾರಿಗಳು, ಹಾಗೂ ಹೂಗಳನ್ನು ಹೇರಳವಾಗಿ ಬೆಳೆಯುತ್ತಾರೆ. ಕ್ಯಾಲಿಫೋರ್ನಿಯದಲ್ಲಿ ಭಾರತೀಯ-ಸಿಖ್ ಜನಾಂಗದ ಹಲವು ರೈತರ ಸಂಘಟನೆಗಳಿವೆ. ಕಾರ್ಮಿಕರಾಗಿ ವಲಸೆಬಂದು, ತಮ್ಮ ಪರಿವಾರದ ಸದಸ್ಯರನ್ನು ಹಲವಾರು ವರ್ಷಗಳು ಬಿಟ್ಟಿದ್ದರಿಂದ ಕೆಲವು ಸಿಖ್ ಜನರು ಇಲ್ಲಿನ ಮೆಕ್ಸಿಕನ್ ಮೂಲದ ರೈತರ ಹೆಣ್ಣುಮಕ್ಕಳನ್ನು ಮದುವೆಯಾಗಿರುವ ಅನೇಕ ದಾಖಲೆಗಳಿವೆ. ಇದರಿಂದ ಮೆಕ್ಸಿಕೋ ಪದ್ಧತಿಯ ಹಲವಾರು ಮುಖ್ಯಾಂಶಗಳನ್ನು ಅವರು ಅರಿತು ಸಾಗುವಳಿಯಲ್ಲಿ ಪ್ರಾವೀಣ್ಯತೆಯನ್ನು ಪಡೆಯಲು ಸಹಕಾರಿಯಾಯಿತು. ಅಮೆರಿಕದ ಬೆಳೆಗೆ ಅಡಚಣೆಯೆಂದರೆ ವಿಂಟರ್ ನಲ್ಲಿ ಆಗುವ ಹಿಮಪಾತ. ಯಾವ ಬೆಳೆಯನ್ನೂ ಆಗ ಬೆಳೆಯಲು ಸಾಧ್ಯವಿಲ್ಲ. ಕ್ಯಾಲಿಫೋರ್ನಿಯ, ಇದಕ್ಕೆ ಅಪವಾದ. ಅಲ್ಲಿನ ಹವಾಮಾನ ಹೆಚ್ಚುಕಡಿಮೆ ನಮ್ಮ ಭಾರತದಂತೆ !

ವಾರಾಂತ್ಯ ಹೇಗಿತ್ತು?

ವಾರಾಂತ್ಯ ಹೇಗಿತ್ತು? ಸೋಮವಾರ ಬೆಳಿಗ್ಗೆ ಆಫೀಸಿಗೆ ಬಂದರೆ ನಿಮಗೆ ಈ ಪ್ರಶ್ನೆ ಎದುರಾಗಬಹುದು, ಅಥವಾ ನೀವೇ ಈ ಪ್ರಶ್ನೆ ಕೇಳುವವರಲ್ಲಿ ಒಬ್ಬರಾಗಿರಬಹುದು. ವಾರಾಂತ್ಯ ಚೆನ್ನಾಗಿತ್ತು ಎಂಬ ಸಂಕ್ಷೇಪ ಉತ್ತರದಿಂದ ಹಿಡಿದು ನಾನು ಶೋಪ್ಪಿಂಗ್ಗೆ ಹೋಗಿದ್ದೆ, ಫಿಲ್ಮ್ಗೆ ಹೋಗಿದ್ದೆ, ಅಥವಾ ಆ ಹೋಟೆಲ್ ಈ ರೆಸಾರ್ಟ್ಗೆ ಹೋಗಿದ್ದೆ ಮುಂತಾದ ವಿವರವಾದ ಉತ್ತರ ನಿರೀಕ್ಷಿಸಬಹುದು. ಕೆಲವರಿಗೆ ಈ ಪ್ರಶ್ನೆ ಅತ್ಯಂತ ಕಠಿಣದ್ದಾಗಿ ಕಾಣಿಸಬಹುದು, ಅಥವಾ ಇತರರ ಉತ್ತರ ಕೇಳಿ ತಾವು ಮಾಡಿದ್ದನ್ನು ಹೇಳಲು ಸಂಕೋಚವೂ ಆಗಬಹುದು. ಸಂಕೋಚ ಪಡುವಂತಹ ಕೆಟ್ಟ ಕೆಲಸ ಏನೂ ಮಾಡದಿದ್ದರೂ, ಅವರ ವಾರಾಂತ್ಯ ಎಂದಿನ ದಿನಕ್ಕಿಂತ ಭಿನ್ನವಾಗಿಲ್ಲದಿರುವುದೇ ಈ ಸಂಕೋಚಕ್ಕೆ ಕಾರಣ. ನಾನೂ ಈ ಕೊನೆಯ ವರ್ಗಕ್ಕೆ ಸೇರಿದವನಾದ್ದರಿಂದ, ನನಗೆ ಈ ಪ್ರಶ್ನೆ ಎದುರಾದಾಗಲೆಲ್ಲ ಒಂದು ಬಗೆಯ ಮುಜುಗರ. ಆದ್ದರಿಂದಲೇ ನನ್ನ ವೈವಿಧ್ಯಪೂರ್ಣವಲ್ಲದ ವಾರಾಂತ್ಯದ ಚುಟುಕು ಪರಿಚಯ ಈ ಬರಹದ ಮೂಲಕ ಮಾಡಿಕೊಟ್ಟು, ನನಗೆ ಈ ಪ್ರಶ್ನೆ ಕೇಳುವವರಿಗೆ ಉತ್ತರ ಕೊಡುವ ಗೋಜಿಗೆ ಹೋಗದೆ ಈ ಬರಹದ ಕಡೆಗೆ ಬೊಟ್ಟು ಮಾಡಿ ನನ್ನ ಸಮಯದ ಸದುಪಯೋಗ ಪಡಿಸಿಕೊಳ್ಳುವ ದುರಾಲೋಚನೆ.

ಎಲ್ಲೇ ಹೋಗು ಹಿಂಬಾಲಿಸುವೆ...................,

ಎಲ್ಲೇ ಹೋಗು ಹಿಂಬಾಲಿಸುವೆ...................,

ಕತ್ತಲೆ ಇರಲಿ, ಬೆಳಕೆ ಇರಲಿ,
ಮಳೆ ಇರಲಿ, ಬಿಸಿಲೆ ಇರಲಿ,
ನಿನ್ನನು ಬಿಡದೆ ನಾ ಇರುವೆ, ನಿನ್ನೆ ನಾ ಹಿಂಬಾಲಿಸುವೆ,

ನಿ ನಿಂತರೆ ನಿಲ್ಲುವೆ, ನಡೆದರೆ ನಡೆವೆ,
ನೀ ಮಲಗಿದರೂ ಪಕ್ಕದಲ್ಲೇ ಇರುವೆ,
ನಿನಗೆ ನಿದ್ದೆ ಬರಲೂಬಹುದು.
ನಾ ಮಾತ್ರ ಸದಾ ಎಚ್ಚರ ವಾಗಿರುವೆ.

ನೀ ಯಾರಿಗಾದರೂ ಪ್ರೀತಿಸು, ಎಲ್ಲಿಗಾದರೂ ಹೋಗು

"ಗುಲಾಬಿ ಟಾಕೀಸ್" ನೋಡಿದ್ರಾ?

ಕಳೆದ ವಾರ ಬಿಡುಗಡೆಯಾದ ವೈದೇಹಿಯವರ ಸಣ್ಣ ಕಥೆಯಾಧಾರಿತ ಗುಲಾಬಿ ಟಾಕೀಸ್ ಚಿತ್ರ, ಹತ್ತನೇ Osian cinefan ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತಲ್ಲದೇ, ಹಿರಿಯ ನಟಿ ಉಮಾಶ್ರೀಯವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದು ಕೊಟ್ಟಿದೆ.
ಕನ್ನಡ ಚಿತ್ರರಂಗಕ್ಕೆ ಗಿರೀಶ್ ಕಾಸರವಳ್ಳಿಯವರ ಮತ್ತೊಂದು ಅತ್ಯಮೂಲ್ಯ ಕಾಣಿಕೆ "ಗುಲಾಬಿ ಟಾಕೀಸ್".