ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

IT ಗೆ ಬಂತು ಆಪತ್ತು ! ?

ಹಿಂದೊಮ್ಮೆ (ಅಂದರೆ ಕೇವಲ ಏಳು ವರ್ಷಗಳ ಹಿಂದೆ!) ಬೆಂಗಳೂರಿನ ಐಟಿ ಹುಡುಗರ ಎದೆ ಒಮ್ಮೆ ಭಯದಿಂದ ಕಂಪಿಸಿತ್ತು. ಈಗ ಮತ್ತೆ ಆ ಕಂಪನ ಆರಂಭವಾಗಿದೆ. ಅಷ್ಟೇನೂ ಜೀವನಾನುಭವ ಇಲ್ಲದ (ಮುಖ್ಯವಾಗಿ ವಯಸ್ಸಿನ ಕಾರಣದಿಂದಾಗಿ), ಕೇವಲ ಒಳ್ಳೆಯ ದಿನಗಳನ್ನೆ ನೋಡುತ್ತ ಬಂದವರಿಗೆ ಈಗಿನ ಸದ್ಯದ ಸ್ಥಿತಿಯಲ್ಲಿ ಪ್ರಳಯದ ಭಾವನೆಗಳು ಸಹಜ. ಆದರೆ, ಈ ಶತಮಾನ ವಯಸ್ಸಿನ ಆಧುನಿಕ ಅರ್ಥವ್ಯವಸ್ಥೆಯಲ್ಲಿ ಲೇಯಾಫ್, ಹೈರಿಂಗ್ freeze, ನಿರುದ್ಯೋಗ, ಮತ್ತೆ ರಾಕೆಟ್ ವೇಗದಲ್ಲಿ ಮುನ್ನುಗ್ಗುವಿಕೆ, ಇವೆಲ್ಲ ಇದ್ದದ್ದೆ. ಈ ಪ್ರಳಯವಲ್ಲದ, ಆದರೆ ನಿರಾಶಾದಾಯಕ ದಿನಗಳಲ್ಲಿ ನಮ್ಮ ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಬರಲಿರುವ ದಿನಗಳನ್ನು ನಿರ್ದೇಶಿಸುತ್ತದೆ.

2002 ರಲ್ಲಿ ಕೇವಲ 2400 ಜನ ಉದ್ಯೋಗಿಗಳನ್ನು ಹೊಂದಿದ್ದ ನಷ್ಟದಲ್ಲಿದ್ದ ಉದ್ದಿಮೆ NGEF ಅನ್ನು ಮುಚ್ಚುವಷ್ಟರಲ್ಲಿ ಕರ್ನಾಟಕ ಸರ್ಕಾರಕ್ಕೆ ಸಾಕಾಗಿ ಹೋಗಿತ್ತು. ಆದರೆ ಈಗ 2,80,000 ಉದ್ಯೊಗಿಗಳನ್ನು ಹೊಂದಿರುವ ಭಾರತದ ಮೂರು ಅತಿದೊಡ್ಡ ಐಟಿ ಕಂಪನಿಗಳು ತಮ್ಮಲ್ಲಿ ಬೆಂಚ್ ಮೇಲೆ ಇರುವವರನ್ನು ಉಳಿತಾಯದ ಕಾರಣ ಕೊಟ್ಟು ಲೇಯಾಫ್ ಮಾಡಿದರೆ ಸಾಕು NGEF ನ ಒಟ್ಟು ಉದ್ಯೋಗಿಗಳ ಇಪ್ಪತ್ತರಷ್ಟು ಜನ ಮನೆಗೆ ಹೋಗಬೇಕಾಗುತ್ತದೆ. ಇನ್ನು ಎಲ್ಲರೂ ಅದೆ ಮಾಡಿದರೆ ಲಕ್ಷಾಂತರ ಜನ ಆಗಿಬಿಡುತ್ತಾರೆ. NGEF ಉದ್ಯೋಗಿಗಳ ಪರವಾಗಿ ಪ್ರತಿಭಟನೆಗಳಾದವು. ಅಸೆಂಬ್ಲಿಯಲ್ಲಿ ವಿರೋಧ, ಗದ್ದಲಗಳೆಲ್ಲ ದಾಖಲಾದವು. ಆದರೆ ಐಟಿ ಹುಡುಗರ ಪರವಾಗಿ ಅಂತಹುದೇನೂ ಆಗುವುದಿಲ್ಲ. ಯಾಕೆ ಎನ್ನುವುದಕ್ಕೆ ಅನೇಕ ಕಾರಣಗಳಿವೆ.

ನನ್ನ ಈ ವಾರದ ಅಂಕಣ ಲೇಖನ, ಬೆಂಗಳೂರಿನ ರಿಯಲ್ ಎಸ್ಟೇಟ್, ಭಾರತದ ಐಟಿ ಇಂಡಸ್ಟ್ರಿಯ ಏಳುಬೀಳುಗಳು, ಆಗಿಹೋದ ಇತಿಹಾಸ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಆಗುತ್ತಲೆ ಇರುವ ಏರಿಳಿತಗಳು, corrections, ಇತ್ಯಾದಿಗಳ ಕುರಿತು ಇದೆ. ಪೂರ್ಣ ಲೇಖನ ಇಲ್ಲಿದೆ:

http://amerikadimdaravi.blogspot.com/2008/03/blog-post_20.html

ಮುನ್ನುಡಿ...............

ಪ್ರೀತಿ...

ತಡವಾಗಿ ಬಂದೆಯೆಂದು ಸಿಟ್ಟಿಲ್ಲ ಗೆಳತಿ
ಬಂದ್ದದ್ದು ನನಗಿಂತ ಕೊಂಚ ಎರಡು
ಗಳಿಗೆಯ ಅಂತರದಲ್ಲಿ
ನಿನ್ನ ಕಂಡ ಕ್ಷಣ ಏಕೋ ಎನೋ.....
ಮಾತಿಲ್ಲ ಕಥೆಯಿಲ್ಲ ......ಕೇವಲ
ಬರೀಯ ಮೌನದ ಉತ್ತರ !
ಹೃದಯ-ಹೃದಯಗಳ ಸಂಗಮ
ಏನೇನ್ನುವೇ ಎಂಬ ಸಂಶಯ ಬೇಡ....
ಮನಸ್ಸು ನಿನ್ನದೇ... ಈ ಮನುಷ್ಯನೂ
ನಿನ್ನವನೇ ಮುಗಿಸು ನನ್ನೀ .... ವಿರಹವನು...
ಬರೇ ಅವನ ಬಾಳಿನ
ಮುನ್ನುಡಿಯನು.........

ನನ್ನಾಕೆಯಂತೆ....

ಪ್ರೀತಿಯ...
ಎಷ್ಟೊಂದು ಚೆಂದುಳ್ಳಿ ಚೆಲುವೆಯರು,
ಹೂ-ರಾಶಿ ನಕ್ಷತ್ರಗಳಂತೆ
ಆದರೇನು....?
ಅವರಲ್ಲಿ ಯಾರು ಇಲ್ಲಾ.....
ನನ್ನಾಕೆಯಂತೆ....

ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ

ಲೀನ್ ಮ್ಯಾನೇಜ್ ಮೆಂಟ್

ಜಪಾನೀ ಪರಿಕಲ್ಪನೆಯ ’ಲೀನ್ ಮ್ಯಾನೇಜ್ ಮೆಂಟ್’ ಈಗೀಗ ಒಂದು ಜನಪ್ರಿಯವಾಗುತ್ತಿರುವ ಪ್ರಕ್ರಿಯೆ. ಕೆಲಸದ ಸ್ಥಳದ ಅಚ್ಚುಕಟ್ಟುತನ, ಸೂಕ್ತಜೋಡಣೆ, ಉತ್ತಮ ಕಾರ್ಯವಿಧಾನ ಹಾಗೂ ಇವೆಲ್ಲವುಗಳ ಮೂಲಕ ಸಮಯ ಉಳಿತಾಯದೊಂದಿಗೆ ಒಳ್ಳೆಯ ಉತ್ಪನ್ನವನ್ನು ನೀಡುವುದಕ್ಕೆ ಜಪಾನ್ ಜನ ಅನುಸರಿಸುವ ರೀತಿಯನ್ನು ಈ ಲೀನ್ ನಲ್ಲಿ ಅಳವಡಿಸಿಕೊಳ್ಳಲಾಗಿದೆ.

ನಿನದೇ ಧ್ಯಾನ........

ಪ್ರೀತಿಯ...

ನೀನೊಮ್ಮೆ
ಇಳಿದೊಡೆ ಮನಸ್ಸಿನೊಳಗೆ,
ಚೈತ್ರ- ಸಂಭ್ರಮ ಕನಸು-ಮನಸುಗಳಿಗೆ,
ಹಸಿವೆ,ನಿದಿರೆ, ನೀರಡಿಕೆಗಳ ಅರಿವಿಲ್ಲ,
ನಿನದೇ ಧ್ಯಾನ ಹಗಲಿರುಳೆಲ್ಲಾ.....

ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ

ಕನ್ನಡ ರಸಪ್ರಶ್ನೆ:೭

ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ಯೋಜನೆಯಡಿಯಲ್ಲಿ ಕನ್ನಡ ಕನ್ನಡ ನಿಘಂಟುಗಳ ಮಹಾಸಂಪುಟಗಳು ಹೊರಬಂದಿವೆ. ಆ ನಿಘಂಟುಗಳ ಮುಖಪುಟಗಳಲ್ಲಿ ಕಂಡುಬರುವ ಘೋಷವಾಕ್ಯವೇನು?

ಬಡತನದ ಅರಿವು

ಹುಟ್ಟಿದ ಊರನ್ನು
ಓಡಾಡಿದ ಕೇರಿಯನ್ನು,
ಮಾಡುತ್ತಿದ್ದ ಕಸುಬನ್ನು,
ಬದುಕುತ್ತ್ೞಿದ್ದ ರೀತಿಯನ್ನು,
ಬದಿಗಿಟ್ಟು,
ಕೇವಲ ಕೆಲಸಕ್ಕಾಗಿ
ಬೆಂಗಳೂರಿಗೆ ಬರುವ
ಎಷ್ಟೋ ಕುಟುಂಬಗಳು
ಇಂದು
ಬಡತನವನ್ನೇ ಬದುಕಾಗಿಸಿಕೊಂಡಿವೆ.

ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ

' ಮುತ್ತು '

ಪ್ರೀತಿಯ...

ನಲ್ಲೆ ಕೇಳಿದಳೆಂದು ತಂದು ಕೊಟ್ಟೆ,
ಕೆಂಪು ಕಲ್ಲಿನ ಮುತ್ತೊಂದು
ಆದರೆ,
ಅದಕ್ಕೆ ,
ಅವಳು ಹೇಳಬೇಕೆ;
ನಾನು ಕೇಳಿದ್ದು ಚುಂಬನದ ಸಿಹಿ ಮುತ್ತೆಂದು...!

ಪ್ರೀತಿಯಿಂದ ಪ್ರೀತಿಗಾಗಿ
ಜಿ. ವಿಜಯ್ ಹೆಮ್ಮರಗಾಲ.

ಚೆಲುವೆ

ನಾ ನೋಡಿ ನಕ್ಕಿದ್ದು ನಿನ್ನನ್ನಲ್ಲ,
ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡ ನನ್ನ ಪ್ರತಿಬಿಂಬವಾ....