ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡೈನೋಸಾರ್!...ನಮ್ಮ ಬೀದೀಲಿ!!

ನಿಜಕ್ಕೂ!..
ಒಂದು ಫೋಟೋ ತೆಗೆಯಲು ಬಹಳ ಪ್ರಯತ್ನಿಸಿದೆ. ಮಧ್ಯರಾತ್ರಿ,ಮುಂಜಾನೆ,ಸಂಜೆ.. .ಊಹೂಂ..
ಅದು ಬಂದು ಹೋಗುವ ಸಮಯವೇ ಗೊತ್ತಾಗುವುದಿಲ್ಲ.

ಹೆಂಗಸರ ಕಿವಿ ಬಹಳ ಸೂಕ್ಷ್ಮ.ನಿನ್ನೆ ಮಧ್ಯರಾತ್ರಿ ನನ್ನಾಕೆ ಎಬ್ಬಿಸಿದಳು..

2006 ರಲ್ಲಿ ಬರೆದಿರುವ ಅಂಕಣ ಲೇಖನಗಳು ಹಾಗೂ ಅಡಿಗರ ನೆನಪು...

ಆನ್‍ಲೈನ್‌ನಲ್ಲಿ ಇಲ್ಲದಿರುವ ನನ್ನ ಇತರೆ ಲೇಖನಗಳನ್ನೆಲ್ಲ ಬ್ಲಾಗಿನಲ್ಲಿ ಇಲ್ಲವೆ ವೆಬ್‌ಸೈಟಿನಲ್ಲಿ ಹಾಕಬೇಕು ಎಂದು ಒಂದಷ್ಟು ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಆ ಪಟ್ಟಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚಿನ ಲೇಖನಗಳಿದ್ದವು. ನನ್ನ ಸುಮಾರು ಒಂದು ಒಂದು ವರ್ಷದ ಚಿಂತನೆ ಮತ್ತು ಚಿಂತೆಗಳ ಮೂರ್ತರೂಪ ಅವು. ಎಂದಿನಂತೆ ಯಾವುದೆ ಒಂದು ವಿಷಯಕ್ಕೆ ಸೀಮಿತಗೊಳಿಸಿಕೊಳ್ಳದೆ ಬರೆದಿರುವವು. 2006 ರ ಆಗಸ್ಟ್ ‍ನಿಂದ ಡಿಸೆಂಬರ್ 30 ರವರೆಗೆ ಬರೆದಿರುವ 21 ಲೇಖನಗಳನ್ನು ಈಗ ಬ್ಲಾಗಿಗೆ ಸೇರಿಸಿದ್ದೇನೆ. ಇದೇ ಅವಧಿಯಲ್ಲಿ ಬರೆದಿರುವ ಇತರೆ ಒಂದೆರಡು ಲೇಖನಗಳನ್ನು ಇನ್ನೂ ಸೇರಿಸಬೇಕು. ಹಾಗೆಯೆ 2007 ರ ಉತ್ತರಾರ್ಧದಲ್ಲಿ ಬರೆದಿರುವ ಲೇಖನಗಳನ್ನೂ ಮುಂದಿನ ದಿನಗಳಲ್ಲಿ ಸೇರಿಸಲಿದ್ದೇನೆ.

2006 ರಲ್ಲಿ ಬರೆದಿರುವ ಲೇಖನಗಳು (ಕಾಲಾನುಕ್ರಮಣದಲ್ಲಿ):

ಇವೆಲ್ಲ MS Word ಫೈಲುಗಳಲ್ಲಿ 'ಬರಹ' ಫಾರ್ಮ್ಯಾಟ್‍ನಲ್ಲಿ ಇದ್ದವು. ಇವನ್ನು ಯೂನಿಕೋಡ್‍ಗೆ ಪರಿವರ್ತಿಸುವಾಗ ಮಿ/ವಿ/ಯಿ/ಹಿ/ಷಿ ಯಂತಹ ಅಕ್ಷರಗಳು ನಾಪತ್ತೆಯಾಗುತ್ತಿದ್ದವು. ಏನೊ ನನ್ನ ಸೆಟ್ಟಿಂಗ್‌ ಸಮಸ್ಯೆ. ಆದಷ್ಟೂ ಬಹುಪಾಲನ್ನು ಸರಿಪಡಿಸಿದ್ದೇನೆ. ಆದರೂ ಅಲ್ಲಿ ಇಲಿ ಒಂದೊಂದು ತಪ್ಪು ಉಳಿದುಬಿಟ್ಟಿರಬಹುದು. ಕ್ಷಮೆ ಇರಲಿ. (ಆಸಕ್ತರು ಓದುವಾಗ ಈ ತಪ್ಪುಗಳನ್ನು ಕಂಡರೆ, ಅವನ್ನು ಎತ್ತಿ ತೋರಿಸಿದರೆ, ಭಾರಿ ಖುಷಿ ಸ್ವಾಮಿ!)

ಕೆಲವೊಂದು ಬರಹಗಳಿಗೆ (ಯಾರದೇ ಆಗಿರಲಿ) ಕಾಲದ ಹಂಗಿರುವುದಿಲ್ಲ. ನಾನು ಎಂದೋ ಬರೆದಿದ್ದ ಲೇಖನವನ್ನು ನೆನ್ನೆ ತಾನೆ ಓದಿ ಭಾರೀ ದು:ಖ ಮತ್ತು ಅಸಹನೆಗೊಂಡ ಓದುಗರೊಬ್ಬರು (lostman888) "ಶ್ಯಾನೇ ಪ್ರೀತಿಯಿಂದ" ಬರೆದ ಪತ್ರ ಇವತ್ತು ತಾನೆ ಬಂದಿದೆ. ಇಂತಹ ತತ್‍ಕ್ಷಣದ ಪ್ರತಿಕ್ರಿಯೆಗಳ ವಿಚಾರಕ್ಕೆ ಮತ್ತು ಆಕಸ್ಮಿಕ ಓದುಗಳ (ಅಂದರೆ ಎಲ್ಲೆಲ್ಲಿಂದಲೊ ಆರಂಭಿಸಿ ಎಲ್ಲೆಲ್ಲೊ ಹೋಗಿ ಮುಟ್ಟುವ) ವಿಷಯಕ್ಕೆ ಇಂಟರ್‍ನೆಟ್ ನಿಜಕ್ಕೂ ಕ್ರಾಂತಿ ಮಾಡಿದೆ. ಮುದ್ರಿತ ಪುಸ್ತಕಗಳ ವಿಚಾರದಲ್ಲಿ ನಮ್ಮ ಅಭಿರುಚಿಯದನ್ನೆ ಕೊಳ್ಳುತ್ತೇವೆ, ಓದುತ್ತೇವೆ. ಇಂಟರ್‍ನೆಟ್‍ನಲ್ಲಿನ ಬರಹಗಳಿಗೆ ಆ ಮಿತಿಯಿಲ್ಲ.

ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಮತ್ತು ಚಿಂತಕರಲ್ಲಿ ಒಬ್ಬರಾದ ಗೋಪಾಲಕೃಷ್ಣ ಅಡಿಗರ ಸಾಹಿತ್ಯವನ್ನು ನಾನು ಓದಿಯೇ ಇಲ್ಲ ಅನ್ನಬೇಕು. ಕವನ ಮತ್ತು ಕಾವ್ಯ ಓದುವ ಅಭ್ಯಾಸವನ್ನು ಇಲ್ಲಿಯವರೆಗೆ ರೂಢಿಸಿಕೊಳ್ಳಲಾಗದೆ ಇರುವುದೆ ಅದಕ್ಕೆ ಮುಖ್ಯ ಕಾರಣ. ಆದರೆ ಅಡಿಗರು ಅನುವಾದಿಸಿರುವ "ಬನದ ಮಕ್ಕಳು" ನನ್ನ ಫೇವರೈಟ್‍ಗಳಲ್ಲಿ ಒಂದು. ಬಟಾಬಯಲಿನಲ್ಲಿ ಹಸುಗಳನ್ನು ಮೇಯಿಸುತ್ತ ಯಾವುದೊ ಒಂದು ಮರದ ಕೆಳಗೆ, ಕೆಲವೊಮ್ಮೆ ನಮ್ಮ ಗದ್ದೆಯ ದೊಡ್ಡಬದಿಯ ಹೊಂಗೆ ಮರಗಳ ಕೆಳಗೆ, ನಮ್ಮ ಹುಲ್ಲುಗಾವಲಿನಲ್ಲಿದ್ದ ಜಾಲಿಮರದ ಅರೆಬರೆ ನೆರಳು/ಬಿಸಿಲಿನ ಕೆಳಗೆ, ಇಲ್ಲವೆ ಬೆಳಿಗ್ಗೆ ಹತ್ತರ ಸುಮಾರಿನ ಎಳೆಬಿಸಿಲಿನಲ್ಲಿ ಹಸಿರು ಹುಲ್ಲಿನ ಮೇಲೆ ಟರ್ಕಿ ಟವೆಲ್ ಹಾಸಿಕೊಂಡು, ಬೋರಲು ಮಲಗಿಕೊಂಡು, ಇಂಗ್ಲೆಂಡಿನ ನವಬನದ ಮಕ್ಕಳ ಕತೆಯನ್ನು ನನ್ನ ಹೈಸ್ಕೂಲು ದಿನಗಳಲ್ಲಿ ಅನೇಕ ಸಲ (ಏಳೆಂಟು ಸಲವಾದರೂ) ಓದಿದ್ದೇನೆ. ಆ ಮುಗ್ಧತೆಯ ದಿನಗಳಲ್ಲಿ ಆ ಪುಸ್ತಕದಲ್ಲಿದ್ದ ಅಡಿಗರ ಅಡ್ರೆಸ್‌ಗೆ ಆ ಪುಸ್ತಕದ ಬಗ್ಗೆ ಒಂದು ಪತ್ರವನ್ನೂ ಬರೆದಿದ್ದೆ (ಬಹುಶಃ 1988-90 ರ ಸುಮಾರಿನಲ್ಲಿರಬೇಕು). ಅನೇಕ ಊರುಗಳಲ್ಲಿ ಅಧ್ಯಾಪನ ಮಾಡಿದ ಅಡಿಗರಿಗೆ ಆ ಪತ್ರ ತಲುಪಿರುವ ಸಾಧ್ಯತೆ ಬಹಳ ಕಮ್ಮಿ ಎನ್ನಿಸುತ್ತದೆ ಈಗ. ನಾನು ಲೇಖಕರೊಬ್ಬರಿಗೆ ಪೆನ್ನಿನಲ್ಲಿ ಬರೆದ ಮೊದಲ ಮತ್ತು ಕೊನೆಯ ಪತ್ರ ಇರಬೇಕು ಅದು!!

ಇವತ್ತು ಆ ಪುಸ್ತಕದ ಇಂಗ್ಲಿಷ್ ಮೂಲ ಗುಟೆನ್‍ಬರ್ಗ್ ನಲ್ಲಿ ಲಭ್ಯವಿದೆ. ಓದಬೇಕು ಎಂದು ಮನಸ್ಸು ಬಹಳ ತುಡಿಯುತ್ತದೆ. ಆದರೆ ಆ ತುಡಿತವನ್ನು ಅಮುಕಿಕೊಂಡು ಕನ್ನಡದ ಪುಸ್ತಕವನ್ನು ಏಳೆಂಟು ವರ್ಷಗಳಿಂದ ಹುಡುಕುತ್ತಿದ್ದೇನೆ. ಸಿಗುತ್ತಿಲ್ಲ.

ನಾನು ಯಾವಾಗಲೊ ಬರೆದ ಲೇಖನಕ್ಕೆ ಓದುಗನೊಬ್ಬ ಇವತ್ತು (ಕೋಪದ!) ಪ್ರತಿಕ್ರಿಯೆ ತೋರಿದ ಬಗ್ಗೆ ಯೊಚಿಸುತ್ತಿದ್ದಾಗ ಅಡಿಗರು ಎಂದೊ ಅನುವಾದಿಸಿದ ಪುಸ್ತಕವನ್ನು ಬೆಂಗಳೂರು ಪಕ್ಕದ ಹಳ್ಳಿಯ ಹುಡುಗ ಓದಿ ಅವರಿಗೆ ಪತ್ರ ಬರೆದದ್ದು ನೆನಪಾಯಿತು. ಈಗ ನೋಡಿದರೆ ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಆದರೆ ಆ ಸಮಯದಲ್ಲಿ ಮನಸ್ಸು ಎಲ್ಲೆಲ್ಲಿಂದ ಎಲ್ಲೆಲ್ಲಿಗೆ ಜಿಗಿಯುತ್ತ ಹೋಯಿತು ಎಂದು ನೋಡಿದರೆ ಆಶ್ಚರ್ಯವಾಗುತ್ತದೆ. ಹಾಗೆಯೆ, ಕೆಲವು ಬರವಣಿಗೆಗಳಿಗೆ ಮತ್ತು ಚಿಂತನೆಗಳಿಗೆ ಕಾಲದ ಮಿತಿಯಿರುವುದಿಲ್ಲ ಎನ್ನುವುದೂ ಅರಿವಾಗುತ್ತದೆ.

ಮೊದಲನೆಯದಾಗಿ....

ಕನ್ನಡದಲ್ಲಿ ಮಾತ್ರವಲ್ಲ, ನನ್ನ ಜೀವನದಲ್ಲೇ ಮೊದಲ ಬ್ಲಾಗ್ ಇದು..!! ಈ ’ಸಂಪದ’ ಕನ್ನಡ ಸಮುದಾಯದ ಉಪಯುಕ್ತತೆ, ವಿಶಾಲತೆ ನೆನೆಸಿಕೊಂಡರೆ ಭಯಂಕರ ಖುಷಿಯಾಗುತ್ತೆ..!! ಕೈಗೆ ಸಿಗುವ ಕನ್ನಡ ಬರಹಗಳನ್ನೆಲ್ಲ ಓದುವ ಅಭ್ಯಾಸವಿದೆ, ಆಗೊಮ್ಮೆ, ಈಗೊಮ್ಮೆ ಮನಸ್ಸಿಗೆ ಅನ್ನಿಸಿದನ್ನ ಬರೆಯೋ ಹವ್ಯಾಸವಿದೆ, ಆಧ್ಯಾತ್ಮ, ಕನ್ನಡ ಸಾಹಿತ್ಯ, ಸಿನಿಮಾ, ನನ್ನ ಇತರೆ ಆಸಕ್ತಿಯ ವಿಷಯಗಳು.

ಪುಣ್ಯದ ಫಲ

ಪುರಂದರದಾಸರು "ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರೂ ಎನ್ನ ಸಲಹೋ" ಎಂದು ಒಂದು ದೇವರನಾಮದಲ್ಲಿ ಹಾಡಿದ್ದಾರೆ. ಹಿಂದಿನ ದುಷ್ಕರ್ಮದಿಂದ ಬಳಲುತ್ತೇವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ತೊಂದರೆಗೊಳಗಾಗಿದ್ದಾಗ,ಎಲ್ಲಿಂದಲೋ ಬಂದ ನೆರವಿನಿಂದ ಆ ತೊಂದರೆಯಿಂದ ಪಾರಾಗುವ ಘಟನೆಗಳ ಅನುಭವ ಎಲ್ಲರಿಗೂ ಆಗಿರುವುದೇ! ಇದನ್ನೇ ಪುಣ್ಯದ ಫಲ ಎನ್ನುವುದೇ?

ಹೇಗೆ ತೊರೆಯಲಿ...?

ಹೇಗೆ ತೊರೆಯಲಿ ...?

 ಹೇಗೆ ಒಡೆಯಲಿ ಕೈಯ ಬಳೆಯನು ?

ನಿನ್ನ ಸವಿನುಡಿ ಇಂಪು ದನಿಯನು

ಕಿಣಿಕಿಣಿ ಸದ್ದಲಿ ನೆನಪಿಸಿದೆ.

 

ಹೇಗೆ ತರಿಯಲಿ ಹೆರಳ ಹೂವನು?

ನಿನ್ನ ಉಸಿರೇ ತೇಲಿ ಬರುತಿದೆ,

ನನ್ನ ಉಸಿರಲಿ ನೆಲಸಿದೆ.

 

ಹೇಗೆ ಅಳಿಸಲಿ ಹಣೆಯ ಕುಂಕುಮ?

ನಿನ್ನ ಮುತ್ತಿನ ಹಚ್ಚೆ ಗುರುತಾಗಿ

ಶಾಶ್ವತ ಸಂಭ್ರಮ ಶೋಭಿಸಿದೆ.

 

ಹೇಗೆ ಬಿಸುಡಲಿ ಬಣ್ಣದುಡುಗೆಯ?

ನಿನ್ನ ಸನಿಹದ ಸಂಜೆಗನಸಿನ

ಸಪ್ತವರ್ಣಗಳು ಮೆರೆಯುತಿವೆ.

 

ಹೇಗೆ ತೊರೆಯಲಿ ಹೇಳು ನಲ್ಲನೆ?

ನಿನ್ನ ಸೇರಲು ಕಾಯುತಿರುವೆನು,

ಸ್ವರ್ಗದ ಲಗ್ನಕೆ ಮದುಮಗಳಾಗಿ;

ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ದಾವಣಗೆರೆ ವತಿಯಿಂದ ದಿನಾಂಕ ೨೩,೨೪ ರಂದು ದಾವಣಗೆರೆ ಜಿಲ್ಲಾ

ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹರಪನಹಳ್ಳಿಯಲ್ಲಿ ಹಮ್ಮಿ ಕೊಳ್ಳಲಾಗಿದೆ.

ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣ

ದಿನಾಂಕ: ೨೩-೦೨-೨೦೦೮ ರಂದು
ಬೆಳಿಗ್ಗೆ ೭:೩೦ಕ್ಕೆ ಧ್ವಜಾರೋಹಣ ಕಾರ್ಯಕ್ರಮ

ಬೆಳಿಗ್ಗೆ ೮:೦೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಬೆಳಿಗ್ಗೆ ೧೦:೩೦ಕ್ಕೆ ಸಮ್ಮೇಳನದ ಉದ್ಘಾಟನೆ ಮಾನ್ಯ ಶ್ರೀ ಎಂ.ಪಿ. ಪ್ರಕಾಶ್ ಅವರಿಂದ

ಸ್ಮರಣ ಸಂಚಿಕೆ ಬಿಡುಗಡೆ: ಶ್ರೀ ಪಿ.ಟಿ. ಪರಮೇಶ್ವರನಾಯ್ಕ ಅವರಿಂದ

ಸಮ್ಮೇಳನಾಧ್ಯಕ್ಷರ ನುಡಿ: ಶ್ರೀಮತಿ ಟಿ.ಗಿರಿಜಾ (ಸಾಹಿತಿಗಳು, ದಾವಣಗೆರೆ)

ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ದಾವಣಗೆರೆ ವತಿಯಿಂದ ದಿನಾಂಕ ೨೩,೨೪ ರಂದು ದಾವಣಗೆರೆ ಜಿಲ್ಲಾ

ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹರಪನಹಳ್ಳಿಯಲ್ಲಿ ಹಮ್ಮಿ ಕೊಳ್ಳಲಾಗಿದೆ.

ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣ

ದಿನಾಂಕ: ೨೩-೦೨-೨೦೦೮ ರಂದು
ಬೆಳಿಗ್ಗೆ ೭:೩೦ಕ್ಕೆ ಧ್ವಜಾರೋಹಣ ಕಾರ್ಯಕ್ರಮ

ಬೆಳಿಗ್ಗೆ ೮:೦೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಬೆಳಿಗ್ಗೆ ೧೦:೩೦ಕ್ಕೆ ಸಮ್ಮೇಳನದ ಉದ್ಘಾಟನೆ ಮಾನ್ಯ ಶ್ರೀ ಎಂ.ಪಿ. ಪ್ರಕಾಶ್ ಅವರಿಂದ

ಸ್ಮರಣ ಸಂಚಿಕೆ ಬಿಡುಗಡೆ: ಶ್ರೀ ಪಿ.ಟಿ. ಪರಮೇಶ್ವರನಾಯ್ಕ ಅವರಿಂದ

ಸಮ್ಮೇಳನಾಧ್ಯಕ್ಷರ ನುಡಿ: ಶ್ರೀಮತಿ ಟಿ.ಗಿರಿಜಾ (ಸಾಹಿತಿಗಳು, ದಾವಣಗೆರೆ)

"ಆ ದಿನಗಳು" ಮತ್ತು ಚೇತನ್ ಕುಮಾರ್.

Chetan

ಆವತ್ತು ಮಹಾಭಾರತದ ಕಾರ್ಯಕ್ರಮವನ್ನು ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದರು.ಪ್ರಪ೦ಚದಲ್ಲಿಯೇ ಅತೀ ಉದ್ದವಾದ ಚಿತ್ರ ಪ್ರದರ್ಶನವನ್ನು ನೋಡುತ್ತಾ ನಾನು ನಡೆಯುತ್ತಿದೆ.ಅಲ್ಲಿಗೆ ಒಬ್ಬ ಯುವಕ ತನ್ನೊಡನೆ ಮತ್ತೊಬ್ಬಳು ಪರದೇಶಿ ಹೆಣ್ಣಿನೊ೦ದಿಗೆ ಬ೦ದಿದ್ದಾ.ಆತ ಮಹಾಭಾರತದ ಪಾತ್ರಗಳನ್ನು ಅವಳಿಗೆ ತಿಳಿಸುತ್ತಿದ್ದಾ.ನೋಡೋಕ್ಕೆ ರಾಜ ಕುಮಾರನ೦ತಿದ್ದಾ.ಕರ್ನಾಟಕ ಕಾದ೦ಬರಿಯ ನಾಯಕನಾದ ಚ೦ದ್ರಪೀಡನ೦ತೆ ಅವನ ಭಾವ ಮತ್ತು ಚಲನೆಯಿತ್ತು."ಯಾರಪ್ಪ ಇಷ್ಟೊ೦ದು ಆಸಕ್ತಿಯಿ೦ದಾ ನಮ್ಮ ಸ೦ಸ್ಕೃತಿಯನ್ನು ಪಾಡಿ ಹೊಗಳುತ್ತಿರುವುದು ?"
ಅ೦ದು ಕೊ೦ಡು ಸುಮ್ಮನೆಯಿದ್ದೆ. ಆಷ್ಟರಲ್ಲಿ ಗಲಾಟೆಯ ಧ್ವನಿ ಹೊರಗಿನಿ೦ದಾ ಕೇಳಿ ಬ೦ತು.ಇಬ್ಬರು ಹೊರಗೆ ಬ೦ದರು.
ಹೆಚ್ಚಾಗಿ ಕಾರ್ಪೋರೇಟ್ ವಾತಾವರಣ ಇದಿದ್ದರಿ೦ದಾ ಎಲ್ಲಿಯೂ ಕನ್ನಡ ಬ್ಯಾನರ್ಗಳು ಕಾಣಲಿಲ್ಲಾ.

ಅದೇ ಕ್ಷಣಕ್ಕೆ ಕರ್ನಾಟಕ ನವೋದಯದ ಶ್ರೀ ರ೦ಗಾಚಾರ್ಯ ಅಲ್ಲಿಗೆ ಬ೦ದರು. ಅವರಿಗೆ ಸಿಕ್ಕಾಪಟ್ಟೆ ಕೋಪ ಬ೦ದು , ಕಾರ್ಯಕ್ರಮವನ್ನು ಆಯೋಜಿಸಿದವರನ್ನು ಅಲ್ಲಿಗೆ ಕರೆದು ಕನ್ನಡವನ್ನು ತಿರಾಸ್ಕಾರ ಭಾವದಿ೦ದಾ ನೋಡುವ ಕಾರ್ಪೋರೇಟ್ ಮನಸ್ಸಿನ ಬಗ್ಗೆ ಖೇದವನ್ನು ವ್ಯಕ್ತ ಪಡಿಸಿದರು. ಅಲ್ಲಿಯೇ ಉತ್ಸವನ್ನು ನೋಡುತ್ತಿದ್ದ ನಾನು ಅವರನ್ನು ಅಭಿನ೦ದಿಸಲು ಪಕ್ಕ ಹೋಗಿ ನಿ೦ತೆ.
ಆ ಯುವಕ ಕೂಡಾ "ಅವರು ಹೇಳ್ತಾಯಿರೋದು ಸರಿ ! " ಎ೦ದು ಕೆಚ್ಚಿನಿ೦ದ ಗರ್ಜಿಸಿದ.