ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - The End!

ಸ್ನೇಹಿತರೆ, ಮೊದಲ ನಾಲ್ಕು ಭಾಗಗಳಲ್ಲಿ, ಮೈಲಾಪುರ ಜಾತ್ರೆಯ ಅನುಭವಗಳನ್ನು
ಅಕ್ಷರಗಳಲ್ಲಿ ಹಿಡಿದಿಡಲು ಸಾಕಷ್ಟು ತಿಣುಕಾಡಿದ್ದೇನೆ. ಎಲ್ಲಾ ಘಟನೆಗಳನ್ನು
ಹಂಚಿಕೊಳ್ಳಲಾಗಲಿಲ್ಲ. ಮನಸ್ಸಿಗೆ ಪರಿಣಾಮ ಬೀರಿದ ಕೆಲವೇ ಕೆಲವು ದೃಶ್ಯಗಳನ್ನು ನಿಮ್ಮ
ಮುಂದಿಟ್ಟಿದ್ದೇನೆ. ಕೇವಲ ಒಂದು ದಿನ ಇಷ್ಟೊಂದು ಘಟನೆಗಳ ಮಹಾಪೂರವಾಗಬಹುದೆಂದು

ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೪

ಅಂತೂ ಹೇಗೋ ಕಷ್ಟಪಟ್ಟು ಗರ್ಭಗುಡಿಯ ಜನದಟ್ಟಣೆಯಿಂದ, ಅದರಲ್ಲೂ ಅಲ್ಲಿದ್ದ
ದೇವದಾಸಿಯರು, ಗೊರವರು, ಭಿಕ್ಷುಕರಿಂದ ತಪ್ಪಿಸಿಕೊಂಡು ಬಾಗಿಲಿನ ಹತ್ತಿರ ನನಗಾಗಿ
ಅತ್ತಿತ್ತ ನೋಡುತ್ತಿದ್ದ ಕಾಕಾನ ಹತ್ತಿರ ಹೋದೆ. ಗುಡಿಯ ಒಳಗೆ ತುಂಬಾ ಹೊತ್ತು
ಕಳೆದದ್ದರಿಂದ ತಡ ಮಾಡದೆ ನಮಗಾಗಿ (ಮತ್ತು ನಮ್ಮ ಪಾದರಕ್ಷೆಗಳನ್ನು) ಕಾಯುತ್ತಿದ್ದ
ಲೋಕನಾಥ ಸರ್ ಹತ್ತಿರ ಹೋದೆವು. ಅವರು, "ಸರ್ ನಾನು ಒಂದು round ಹೋಗಿ ದೇವರ ದರ್ಶನ
ಮಾಡಿಕೊಂಡು ಬರಲೇ?" ಅಂತ ಕೇಳಿದರು. ಕಾಕಾನಿಗಿಂತ ಮುಂಚೆ ನಾನೆ, "ಆಗಲಿ ಸರ್, ಈಗ
ಪಾದರಕ್ಷೆಗಳನ್ನು ಕಾಯುವ ಸರದಿ ನಮ್ಮದು" ಎಂದೆ. ಜಾತ್ರೆಯೆಲ್ಲಾ ಸುತ್ತಾಡಿ
ಸುಸ್ತಾಗಿದ್ದ ನನ್ನ ಕಾಲುಗಳಿಗೆ ಕುಳಿತುಕೊಳ್ಳಲು ಜಾಗ ಸಿಕ್ಕರೆ ಸಾಕಾಗಿತ್ತು.
ಜನದಟ್ಟಣೆ ಸ್ವಲ್ಪ ಕಡಿಮೆಯಾಗಿದ್ದರಿಂದ ಬಾಗಿಲಿನ ಮುಂದಿದ್ದ ಮೆಟ್ಟಿಲಿನ ಮೇಲೆ ಸ್ವಲ್ಪ
ಜಾಗ ಕಂಡಿತು. ಸಾವಿರಾರು ಜನ ತುಳಿದಾಡಿದ್ದರೂ ಆ ಜಾಗ ಅಷ್ಟೊಂದು ಕೊಳೆಯಾಗಿ
ಕಾಣಲಿಲ್ಲಿ. ಅಲ್ಲಿದ್ದ ಧೂಳನ್ನು ಝಾಡಿಸಿ ಅಲ್ಲೆ ಕುಳಿತು ನಿಟ್ಟುಸಿರು ಬಿಟ್ಟೆ.

ಲ೦ಡನ್ ದೃಶ್ಯಕಥನ: ಪ್ರವಾಸ ಭಾಗ ೩ --ಎಚ್.ಎ.ಅನಿಲ್ ಕುಮಾರ್

www.anilkumarha.com

ಸ್ಠಳ: ಲ೦ಡನ್ ನಗರದ ದಕ್ಷಿಣ ಭಾಗ. ಸಮಯ: ಇ೦ದು ನಾಳೆಯಾದ ಕೆಲ ಕ್ಷಣಗಳ ನ೦ತರ.

"ಏಕ್ಸ್‍ಕ್ಯೂಸ್ ಮಿ. ಗೀವ್ ಮಿ ಟು ಪೌ೦ಡ್ಸ್ ಪ್ಲೀಸ್" ಎ೦ದನಾತ. ಸುತ್ತಲೂ ಕಾರ್‍ಗತ್ತಲು ಮತ್ತು ಬಾರ್‍ಗತ್ತಲು. ಎದುರಿಗೆ ಆರೂವರೆ ಅಡಿ ಎತ್ತರದ ಅಜಾನುಬಾಹು ಕರಿಯ-ಆಫ್ರಿಕನ್. ಆತ ನೀಗ್ರೋ ಆಗಿದ್ದರೂ ಹಾಗೆ೦ದು ನಾನು ಬರೆಯಲಾರೆ. ಏಕೆ೦ದರೆ ಅದೊ೦ದು ’ರೇಸಿಸ್ಟ್’ ಹೇಳಿಕೆಯಾಗುತ್ತದೆ. ಆದರೆ ಆತನನ್ನು ಹಾಗೆ೦ದು ಕರೆಯದೆ ಕನ್ನಡದಲ್ಲಿ ಮತ್ತಿನ್ನು ಹೇಗೆ ಬರೆಯಬಹುದೋ ಎ೦ಬುದು ಆತನಿಗೂ ತಿಳಿದಿರಲಾರದು. ಏಕೆ೦ದರೆ ಆತನಿಗೆ ಕನ್ನಡ ಬರದು.

ಆ ಕತ್ತಲ ಆ ಬೃಹದಾಕಾರದ ಬೃಹತ್ ಬೇಡಿಕೆ, ಅ೦ದರೆ ನೂರ ಅರವತ್ತು ರೂಗಳ ಭಿಕ್ಷೆಯನ್ನು "ತಗೋ ಮಜಾ ಮಾಡು" ಎ೦ದುಕೊ೦ಡು ಕೊಟ್ಟೆನಾದರೂ, ಹಾಗೆ ಕೊಟ್ಟುಬಿಡುವುದಲ್ಲದೆ ನನಗೆ ಬೇರ್ಯಾವ ಮಾರ್ಗವೂ ಉಳಿದಿರಲಿಲ್ಲ. ಏಕೆ೦ದರೆ ಎದುರಿಗಿದ್ದ ಒ೦ದೇ ಮಾರ್ಗಕ್ಕೆ ಅಡ್ಡಲಾಗಿ ರಸ್ತೆಯಷ್ಟೇ ಅಗಲವಿದ್ದ, ಕತ್ತಲಿನಷ್ಟೇ ಆಳವಾಗಿದ್ದ ಆತ ನಿ೦ತಿದ್ದ. ಇ೦ಗ್ಲೆ೦ಡಿನ ಲ೦ಡನ್ನಿನ ಆ ರಸ್ತೆ ಇದ್ದದ್ದು (ಈಗಲೂ ಆ ರಸ್ತೆ ಅಲ್ಲಿಯೇ ಇದೆ. ಗೂಗಲ್ ಅರ್ಥ್‌ನ ಮ್ಯಾಪಿನಲ್ಲಿ ಮೊನ್ನೆಯಷ್ಟೇ ನೋಡಿದೆ ಅದನ್ನ) ’ಬರೋ’ ಎ೦ಬ ಟ್ಯೂಬ್ ಸ್ಟೇಷನ್ನಿನ ಬಳಿ ’ಎಲಿಫ್ಯಾ೦ಟ್ ಅ೦ಡ್ ಕ್ಯಾಸಲ್’ ಎ೦ಬ ಟ್ಯೂಬ್ ಸ್ಟೇಷನ್ನಿನ ಬಳಿ.

ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮೀ ದೇವಾಲಯದಲ್ಲಿರುವ ಬೇತಾಳಗಳ ಮೂರ್ತಿಗಳು

ಹಾಸನ ಜಿಲ್ಲೆಯು ದೇವಾಲಯಗಳ ಆಗರ. ಹಾಸನದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿರುವ ದೊಡ್ಡಗದ್ದವಳ್ಳಿಯ ೧೨೦೦ ವರ್ಷಗಳಷ್ಟು ಪುರಾತನ ಲಕ್ಷ್ಮೀದೇವಿ ದೇವಾಲಯವು ತನ್ನ ಸೌಂದರ್ಯದಿಂದ ಹಾಗು ಸ್ಥಳ ಮಹಿಮೆಯಿಂದ ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತಲೇ ಇದೆ.

ಮಾಯವಾದರು ಎಲ್ಲಿಗೆ

ಮಾಯವಾದರು ಎಲ್ಲಿಗೆ
ಯಾರು ಯಾವ ಕಾಳುಗಳನು
ಇಲ್ಲಿ ತಂದು ನೆಟ್ಟವರು ಹೀಗೆ
ಯಾವ ಪ್ರತಿಫಲವ ಬಯಸಿ
ಎಲ್ಲಿ ಮರೆಯಾಗಿ ಅಡಗಿಹರು

ಸಸಿಯಾಗಿ, ಗಿಡವಾಗಿ, ಮರವಾಗಿ,
ಹೆಮ್ಮರಗಳು ತಾವಾಗಿ, ನೆರಳಾಗಿ
ತಂಪನು ಚೆಲ್ಲಿ ಇಂದು ಎಲ್ಲರಿಗಾಗಿ,
ಆಗಸವ ಚುಂಭಿಸುವ ಗುರಿಯನಿಟ್ಟು

ಇವು ಯಾರ ಕಲ್ಪನೆಯ ವಿನ್ಯಾಸಕ್ಕೆ
ಬಾಹುಗಳ ಬಳಸಿ ಬೆಳೆಸಿ ನಿಂತಿಹವು

ಶಂಖ ವಾದ್ಯ :)

ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದಕ್ಕೆ ಅದೇ ತಾನೇ ಹೆಸರು?

 http://thatskannada.oneindia.in/literature/music/2008/2801-saint-tyagaraja-aradhana-mahotsava.html

ಮೊದಲು ಸಂಪದದಲ್ಲಿ ಬರೆದಿದ್ದ ಈ ಬರಹ, ಈಗ ದಟ್ಸ್ ಕನ್ನಡದಲ್ಲಿ ಬೆಳಕು ಕಂಡಿದೆ.

(ಮೂರು ದಿನದ ಹಿಂದೆಯೇ ಹಾಕಿದ್ದರೆಂದು ಕಾಣುತ್ತೆ - ನನಗೆ ಇವತ್ತು ತಾನೇ ಕಂಡಿತು)

ಎರಡು ವಜ್ರಗಳು ಮತ್ತು ಯೇಸು ಕ್ರಿಸ್ತನ ಹುಟ್ಟು

ಇಂದು ಬೆಳಗ್ಗೆ ಎರಡು ವಜ್ರಗಳು ದೊರಕಿದ್ದವು ನನಗೆ.  ಒಂದು ನಾಕು ಕ್ಯಾರಟ್, ಒಂದು ಎರಡು ಕ್ಯಾರಟ್. ಹೋಗಿ ಎತ್ತಿಕೊಳ್ಳುವಷ್ಟರಲ್ಲಿ, ಹಾಳು ಸೂರ್ಯ ಮೇಲೆ ಬರತೊಡಗಿದ ;)