ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಯ್

ಕನ್ನಡದಲ್ಲಿ ಕಾಯ್ ಎಂಬ ಪದ ಮೂಱು ಅರ್ಥಗಳಲ್ಲಿ ಬಳಕೆಯಾಗುವುದು ಕಂಡುಬರುತ್ತದೆ
೧)ಕಾ(ಯ್)=ರಕ್ಷಿಸು, ಕಾಪಾಡು ಉದಾ:- ನಾಯಿ ಮನೆ ಕಾಯುತ್ತದೆ.
೨)ಕಾಯ್=ಬಿಸಿಯಾಗು. ಉದಾ:- ಸ್ನಾನಕ್ಕೆ ನೀರಿನ್ನೂ ಕಾಯಬೇಕು.
೩)ಕಾಯ್=ನಾಮಪದವಾಗಿ ಕಾಯ್(ಯಿ)=ಇನ್ನೂ ಬಲಿತಿರದ ಹಣ್ಣು. ಹಾಗೆಯೇ ಕ್ರಿಯಾಪದವಾಗಿ ಕಾಯಿಬಿಡು. ಉದಾ:-ಮರ ಕಾಯುತ್ತದೆ (ಕಾಯಿ ಬಿಡುತ್ತದೆ)
ನೋಡಿ:-

ಭಾಷೆ ಒಂದು means of communication ಅಷ್ಟೆ

ಎಲ್ಲರೂ ನಮಗೆ ಕನ್ನಡ ಬೇಕು ಇಂಗ್ಲೀಷ್ ಬೇಡ.. ಹಿಂದಿ ಬೇಕು ತಮಿಳ್ ಬೇಡ ಅಂತೆಲ್ಲಾ ವಾದ ಮಾಡ್ತಾರೆ... ಆದ್ರೆ ನನಗೆ ಅರ್ಥ ಆಗ್ತಿಲ್ಲ... ಭಾಷೆ ಇರೊದು ಸಂವಹನಕ್ಕೆ ಅಲ್ವಾ... ಈ ಭಾಷೆ ಹೆಸ್ರಲ್ಲಿ ಯಾಕೆ ಇಷ್ಟೋಂದು ಗಲಾಟೆ ಮಡ್ತಾರೆ...??

ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!


ಲ೦ಡನ್ ಪ್ರವಾಸ: ಭಾಗ ೧೧

ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!

     ಬ್ರಿಟಷರ೦ತಹವರನ್ನು ಪ್ರಾಯಶ: ಬ್ರಿಟಿಷರೇ ನೋಡಿರಲಾರರು. ಅವರೆಲ್ಲ ಬುಧ್ಢ, ಕ್ರೈಸ್ಥರಿದ್ದ೦ತೆ. ಸ್ವತ: ಕ್ರಿಸ್ಥ ಕ್ರಿಶ್ಚಿಯನ್ ಜಾತಿಯವನಲ್ಲ, ಬುಧ್ಢ ಬೌದ್ಧ ಧರ್ಮೀಯನಲ್ಲ. ಹಾಗೆ ಬ್ರಿಟಿಷರು ಇಡೀ ಜಗತ್ತನ್ನು ಕ್ರಮಿಸುವ ಕಾಲದಲ್ಲಿ ಎಲ್ಲಿಯೂ ಅವರ೦ತಹವರನ್ನೇ ಸ್ವತ: ಅವರುಗಳು ’ಎದುರಿಸಿರಲಿಲ್ಲ.’ ಅಲ್ಲಲ್ಲ, ಜಗವೆಲ್ಲ ಅಲೆದಾಡಿ ಸ್ವಲ್ಪ ಭಿನ್ನವಾಗಿಬಿಟ್ಟಿದ್ದ ಬ್ರಿಟಿಷರೆಲ್ಲರೂ, ಹಾಗೆ ಮಾಡದೆ ಇ೦ಗ್ಲೆ೦ಡಿನ ಒಳಗೇ, ಲ೦ಡನ್ ಸುತ್ತಮುತ್ತಲೇ ಉಳಿದುಕೊ೦ಡುಬಿಟ್ಟವರಿಗೆ "ಅಮೇರಿಕನ್ಸ್ ಮತ್ತು ಅಸ್ಟ್ರೇಲಿಯನ್ನರಾಗಿ" ಕ೦ಡುಬರುತ್ತಾರೆ. ಬ್ರಿಟಿಷರು ದೆವ್ವಗಳನ್ನು ಈಗಲೂ ನ೦ಬುತ್ತಾರೆ. ಪಾಪ ದೆವ್ವಗಳಿರುವುದಾದರೂ ನ೦ಬುವವರಿ೦ದ, ನ೦ಬುವವರಿಗಾಗಿ, ನ೦ಬುವವರಿ೦ದಲೇ ಅಲ್ಲವೆ? ಆಸ್ಟ್ರೇಲಿಯದ ವೇಗದ ಹಾಗೂ ಸ್ಪಿನ್ ಬೌಲರ್ಗಳನ್ನು ಎದುರಿಸುವಾಗ ಬ್ರಿಟಿಷ್ ಕ್ರಿಕೆಟ್ ಟೀಮ್ ಭೂತದರ್ಶನವಾಗದಿರಲಾರದೆ? ಆದರೆ ಇವರೆಲ್ಲ ಮೆಟಫರಿಕ್ ಭೂತಗಳು.

ಕಿಱಿ ಮತ್ತು ಕಿರಿ

ಕನ್ನಡದಲ್ಲಿ ಕಿಱಿ ಮತ್ತು ಕಿರಿ ಎರಡು ಅರ್ಥಗಳಲ್ಲಿ ಬಳಕೆಯಾಗುತ್ತದೆ. ಕಿಱ್ಱು=ಚಿಕ್ಕ(ಸಣ್ಣ). ಕಿರಿ=ನಗು (ಕ್ರಿಯಾಪದ) ಸಾಮಾನ್ಯವಾಗಿ ಎದಡನೆಯ ಕಿರಿಯನ್ನು ಹಲ್ಲುಕಿರಿ ಎಂದು ಸೇರಿಸಿ ಹೇೞುತ್ತೇವೆ. ತಮಿೞಿನಲ್ಲ್ಲೂ ಚಿಱು=ಚಿಕ್ಕ(ಸಣ್ಣ) ಚಿರಿ=ನಗು

ಪಾರು

ಪಾರ್‍, ಪಾರು, ಹಾರು (ಕ್ರಿಯಾಪದ) [ತಮಿಳು, ಮಲಯಾಳ: ಪಾರ್‍]
೧. ನೋಡು; ಅವಲೋಕಿಸು ೨. (ಸಮಯವನ್ನು) ಎದುರುನೋಡು; ನಿರೀಕ್ಷಿಸು; ಪ್ರತೀಕ್ಷಿಸು ೩. ಬಯಸು; ಅಪೇಕ್ಷಿಸು; ಹಾರೈಸು ೪. ವಿಚಾರಮಾಡು; ಯೋಚಿಸು; ಆಲೋಚನೆ ಮಾಡು
(ಪಾರುಪತ್ಯ = ಮೇಲ್ವಿಚಾರಣೆ, ಉಸ್ತುವಾರಿ; ಪಾರುವೀಳೆಯ = ದರ್ಶನವನ್ನು ಮಾಡಿದವರಿಗೆ ಕೊಡುವ ಗೌರವತಾಂಬೂಲ)

ಪಾರು, ಹಾರು (ನಾಮಪದ)

ರಾಜರಲ್ಲೊಬ್ಬ ರತ್ನ

ಜುಲೈ ೧೮, ೨೦೦೮.

ಜಯಚಾಮರಾಜೇಂದ್ರ ಒಡೆಯರು ಬದುಕಿದ್ದಿದ್ದರೆ, ಅವರು ಇಂದು ತಮ್ಮ ತೊಂಬತ್ತನೇ ವರ್ಷಕ್ಕೆ ಕಾಲಿಡುತ್ತಿದ್ದರು.

ಮೈಸೂರಿನ ಕೊನೆಯ ಅರಸರಾಗಿದ್ದ ಅವರು, ಕರ್ನಾಟಕ ಸಂಗೀತದಲ್ಲೂ, ಪಾಶ್ಚಾತ್ಯ ಸಂಗೀತದಲ್ಲೂ ಪ್ರವೀಣರಾಗಿದ್ದರು ಎನ್ನುವ ವಿಷಯ ಗೊತ್ತಿತ್ತೇ ನಿಮಗೆ?

ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

ರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್‌ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.

ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

ಪುಸ್ತಕದ ಲೇಖಕ/ಕವಿಯ ಹೆಸರು
ಜಯಂತ ಕಾಯ್ಕಿಣಿ

ರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್‌ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.

ಕುಡುಕರ ರಾಜ್ಯ

ಕಳ್ಳಭಟ್ಟಿಯೋ-ಸಾಚಾಭಟ್ಟಿಯೋ ಕುಡಿತ ಕೆಟ್ಟ ಚಟ.
ಕಳ್ಳಭಟ್ಟಿ ಕುಡಿದು ಒಟ್ಟೊಟ್ಟಿಗೆ ಜನ ಸತ್ತಾಗ-
ಸರಕಾರ ಅಲ್ಲಾಡುತ್ತದೆ,
ವಿರೋಧ ಪಕ್ಷ ಕಣ್ಣೀರು ಸುರಿಸುತ್ತದೆ,
ಅಬಕಾರಿ/ಪೋಲೀಸ್ ಇಲಾಖೆ ಚುರುಕಾಗುತ್ತದೆ,
ಒಂದೆರಡು ರೈಡ್-ಒಂದೆರಡು ಎರೆಸ್ಟ್, ಮುಗಿಯಿತು. ಪುನಃ ಮಾಮೂಲ್..

ಸಾರಾಯಿ ನಿಲ್ಲಿಸಿದರೆಂದು ಈ ಸರಕಾರವನ್ನು ಹೊಗಳಿದಿರಿ. ಹಳ್ಳಿಗರೆಲ್ಲಾ ಕುಡುಕರಲ್ಲ.