ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓ ನಲ್ಲ...

ಓ ನಲ್ಲ...
-~-~-~-

ಎಲ್ಲಿ ಹೋದೆಯೋ, ಓ ನನ್ನ ನಲ್ಲ...!
ನೀನಿಲ್ಲದೇ, ಸೊರಗಿದೆ ನನ್ನ ಗಲ್ಲ...

ಹೋಗಿರುವೆ ಎತ್ತ?
ಕದ್ದು ನನ್ನಯ ಚಿತ್ತ...

ಬೇಗ ಬಾರೋ ನನ್ನಿನಿಯ,
ನನ್ನ ಗುಂಡಿಗೆಯೊಡೆಯ...

ಸೊರಗಿ ಸಾಯುತ್ತಿದೆ ನನ್ನ ಗಲ್ಲ
ಬಾ...ಮತ್ತೆ ಉಣಿಸೆನಗೆ, ಬೆಲ್ಲ,
ಮುತ್ತ ಸವಿ ಬೆಲ್ಲ...

--ಶ್ರೀ

ಮೋರನ ನಿಜ ಮೋರೆ

ಹಲವಾರು ವರ್ಷಗಳ ಹಿಂದೆ ಸಿಡ್ನಿಗೆ ಅಮೇರಿಕಾದ ೨೫ ವರ್ಷದ ತರುಣಿಯೊಬ್ಬಳು ಬಂದಿದ್ದಳು. ತನ್ನ ಡಾಕ್ಯುಮೆಂಟರಿವೊಂದನ್ನು ನಮಗೆ ತೋರಿಸಿದಳು. (ಅವಳ ಮತ್ತು ಅವಳ ಚಿತ್ರದ ಹೆಸರು ಈಗ ಮರೆತಿದ್ದೇನೆ) ಆಕೆಯ ಚಿತ್ರ ಅಮೇರಿಕಾ, ಕ್ಯಾನಡಾದ ಡಾಕ್ಯುಮೆಂಟರಿಕಾರರ ಬಗ್ಗೆ. ಕಾವ್ಯಾತ್ಮಕವಾಗಿತ್ತು. ಅವರ ಯೋಚನಾಕ್ರಮ ಮತ್ತು ಕೆಲಸದ ಕ್ರಮಗಳನ್ನು ಚಿತ್ರವಾಗಿಸಿದ್ದಳು. ಆ ಚಿತ್ರವನ್ನು ಮಾಡುವಾಗ ಆಕೆ ಮೈಕಲ್ ಮೋರ್‌ನನ್ನು ಮಾತಾಡಿಸಲು ಶತ ಪ್ರಯತ್ನ ಮಾಡಿದ್ದಳು. "ಆ ಬಿಲ್ಡಿಂಗಿನ, ಇಷ್ಟನೇ ಮಹಡಿಗೆ ಬಾ" ಎಂದು ಆತನ ಸಹಾಯಕರಿಂದ ಹೇಳಿಸಿಕೊಂಡು ಹೋಗುತ್ತಾಳೆ. ಅಲ್ಲಿ ಈಕೆಯನ್ನು ಗೋಡೆಗಳ ಮೇಲಿನ ಕೆಲವು ಸೆಕ್ಯುರಿಟಿ ಕ್ಯಾಮೆರಾಗಳಷ್ಟೆ ಎದುರುಗೊಳ್ಳುತ್ತವೆ. ಉಳಿದಂತೆ ಖಾಲಿ. ಆಗಷ್ಟೆ ಮೋರನ "ಬೌಲಿಂಗ್ ಫಾರ್‍ ಕಾಲಂಬೈನ್" ಬಿಡುಗಡೆಯಾಗಿ ಜನಪ್ರಿಯವಾಗಿದ್ದ ದಿನಗಳು.

ನಾನು ಈ ಮೈಕಲ್ ಮೋರನ ತೊಂಬತ್ತರ ದಶಕದ ಟಿವಿ ಸೀರಿಯಲ್ ನೋಡಿ ಖುಷಿಸಿದ್ದು ನೆನಪಾಯಿತು. "ಮೈಕಲ್ ಮೋರ್‍ ಶೋ" ಎಂದೇ ಅದರ ಹೆಸರು. ವಾರ ವಾರವೂ ಸಾಮಾಜಿಕ ಅನ್ಯಾಯಗಳ ವಿರುದ್ಧ ದೊಡ್ಡ ಕಂಪನಿಗಳ ಎದುರು ನಿಲ್ಲುತ್ತಿದ್ದ. ಹಲವಾರು ನಾಟಕೀಯ ಪ್ರಸಂಗಗಳ ಮೂಲಕ ಆ ಕಂಪನಿಗೆ ತನ್ನ ತಪ್ಪನ್ನು ಎದುರುಗೊಳ್ಳುವಂತೆ ಮಾಡುತ್ತಿದ್ದ.

ವಾರೆವ್ಹಾ ಕ್ರಿಸ್ಮಸ್ ಬಂತು

ಮೈ ಜುಂ ಎನ್ನಿಸುವ ಕ್ರಿಸ್ಮಸ್ ಮತ್ತೆ ಬರುತ್ತಿದೆ. ಇದಕ್ಕಾಗಿಯೇ ವಿಶ್ವದಲ್ಲೆಡೆ ಕ್ರಿಸ್ಮಸ್ ಗಾಗಿನ ತಯಾರಿ ಭರ್ಜರಿ ನಡೆಯುತ್ತಿದೆ. ಗೋದಲಿ ನಿರ್ಮಾಣ, ಕ್ರಿಸ್ಮಸ್ ಟ್ರೀಗೆ ಬೇಕಾಗುವ ಅಲಂಕಾರಿಕ ವಸ್ತುಗಳ ಖರೀದಿ, ಕ್ರಿಸ್ಮಸ್ ಸಂದೇಶಗಳುಳ್ಳ ಸಂದೇಶಗಳ ರವಾನೆ, ಕ್ರಿಸ್ಮಸ್ ಸ್ನೇಹಿತರಿಗಾಗಿ ಉಡುಗೊರೆಯ ಖರೀದಿ, ನಕ್ಷತ್ರಗಳ ತಯಾರಿ ಗಡದ್ದಾಗಿಯೇ ನಡೆಯುತ್ತಿದೆ.

ಮಂಗಳೂರಿನಲ್ಲಂತೂ ಕ್ರಿಸ್ಮಸ್ ಗಾಗಿ ಕುಸ್ವಾರ್ ತಯಾರಿಸುತ್ತಾರೆ. ಕ್ರಿಸ್ಮಸ್ ತಿಂಡಿಯನ್ನು ಇಲ್ಲಿನ ಜನ ಪ್ರೀತಿಯಿಂದ ಕುಸ್ವಾರ್ ಎನ್ನುತ್ತಾರೆ. ಕ್ರಿಸ್ಮಸ್ ಕೇಕ್ ಕುಸ್ವಾರ್ ನ ಯಜಮಾನ. ಕುಸ್ವಾರ್ ನಲ್ಲಿ ಕೇಕ್ ಜೊತೆಗೆ ಕಿಡಿಯೊ, ಗುಳಿಯೊ, ಲಾಡು, ಚಕ್ಕುಲಿ, ಚಿಪ್ಸ್, ನಿವ್ರ್ಯೊ, ಚಕ್ಕುಲಿ... ಮುಂತಾದ ಇನ್ನೂ ಕೆಲವು ತಿಂಡಿಗಳಿರುತ್ತವೆ.

ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?

ನಾನು ಇತ್ತೀಚಿಗೆ ತಿರುಳ್ಗನ್ನಡ ನಾಡು(ಬಾದಾಮಿ,ಐಹೊಳೆ ಮತ್ತು ಪಟ್ಟದಕಲ್ಲು) ಮತ್ತು ಬೇಂದ್ರೆ ನಾಡು(ಧಾರವಾಡ)ಗಳಲ್ಲಿ ಸುತ್ತಾಡಿದಾಗ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಎರಡು ವಿಶ್ಯಗಳು ಇವು
ಈ ಕಪ್ಪೆ ಅರಬಟ್ಟ ಯಾರು? (ಬಾದಾಮಿಯಲ್ಲಿ ಕಪ್ಪೆ ಅರಬಟ್ಟನ ಶಾಸನ ಇದೆ)

ವಚನ

"ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ, ಅಗೆದು ಕಳೆದೆನಯ್ಯಾ ಭ್ರಾಂತಿಯ ಬೇರ"

ಕತ್ತಲೆಯೆಡೆಗೆ

ಸಕಲ ಬಲ್ಲವನೆಂಬವರ
ಅರಿವಿಲ್ಲದೆ ನುಡಿವವರ
ಎಲ್ಲರ ನಡಿಗೆ
ಕತ್ತಲೆಯೆಡೆಗೆ

ಭಾವಗಳ ಬೆಸೆಯದವ
ಕನಸುಗಳ ಬೆನ್ನತ್ತದವ
ಆಸೆಯ ಕುದುರೆಯನೇರಿ
ಮದ, ಮತ್ಸರಗಳ ತೋರಿ

ನೆರೆಹೊರೆಯ ಪರಿವಿರದೆ
ಜೊತೆಗಾಗಿ ಯಾರಿರದೆ
ಸಾಗುವ ನಡಿಗೆ
ಕತ್ತಲೆಯೆಡೆಗೆ

ನಾನೂ ನನ್ನ ಬಾಸೂ

"ಯಾಕ್ರೀ ನಿನ್ನೆ ಬೇಗ ಮನೆಗೆ ಹೋದಿರಂತೆ?"

"ಹೌದು ಸಾರ್, ಮನೆಯಲ್ಲಿ ಸ್ವಲ್ಪ ಕೆಲಸವಿತ್ತು,"

"ಹಾಗಿದ್ದಲ್ಲಿ ಹೇಳಿ ಹೋಗಬಹುದಿತ್ತಲ್ಲ?"

"ಹೇಳಿದ್ದೆ ಸಾರ್ , ಕನ್ಯಾಲಗೆ ಹೇಳಿಹೋಗಿದ್ದೆನಲ್ಲ?"

"ಕನ್ಯಾಲ್ ಯಾರ್ರೀ, ಅವನೇನು ನಿಮ್ಮ ಬಾಸಾ?

ಮತ್ತೆ ಇವತ್ತು ಬೆಳಿಗ್ಗೆ ಸಹಾ ತಡವಾಗಿಯೇ ಬಂದ್ರೀ ಆೞೀಸಿಗೆ. ಹೀಗಾದಲ್ಲಿ ನಾನು ಮೇಲಿನವರಿಗೆ ಏನಂತ ಜವಾಬು ಕೊಡಲಿ?"

"ಯಾಕೆ ಸಾರ್ ಆೞೀಸು ಕೆಲ್ಸವೆಲ್ಲ ಮುಗಿಸಿಯೇ ಹೋಗುತ್ತಿದ್ದೆನಲ್ಲ."

"ಆ ವಿಷಯ ಬಿಡಿ, ಆಫೀಸ್ ಸಮಯದಲ್ಲಿ ಆಫೀಸಿನಲ್ಲಿಯೇ ಇರಬೇಕು, ಕೆಲ್ಸ ಬಂದಿದೆ ಮನೆಗೆ ಹೋದೆ ಅಂದರೆ..?"

" ಕರೆಕ್ಷನ್ ಸಾರ್! ಕೆಲಸ ಬಂದಿದ್ದಲ್ಲ , ಕೆಲಸ ಇತ್ತು ಎಂದಿದ್ದೆ" " ಸರಿ,