ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೊಬ್ಬೆ

ಬೊಬ್ಬೆ_೧ (ನಾ)
ಸುಡುವುದರಿಂದ ಚರ್ಮದ ಮೇಲಾಗುವ ಗುಳ್ಳೆ

ಬೊಬ್ಬೆ_೨ (ನಾ)
೧.(ಆನಂದ, ರೋಷ, ಆವೇಶ ಮುಂತಾದ ಕಾರಣಗಳಿಂದ ಮಾಡುವ) ಆರ್ಭಟ; ಕೂಗಾಟ; ಅರಚುವಿಕೆ
೨.ದೊಡ್ಡ ಶಬ್ದ; ಮಹಾಧ್ವನಿ
೩.ಆಕ್ರಂದನ; ಪ್ರಲಾಪ
೪.ಗುಲ್ಲು; ಪುಕಾರು
[ತುಳು: ಬೊಬ್ಬೆ, ತೆಲುಗು: ಬೊಬ್ಬ]

ಬೊಬ್ಬೆ_೩, ಬೊಬ್ಬಿ (ನಾ)
ಒಂದು ಬಗೆಯ ಹೊನ್ನೆ ಮರ; ಕಲ್ಹೊನ್ನೆ

ಅಮ್ಮನ ಒಲವಿನ ಓಲೆ.....

ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ. ಭಾನುವಾರ ಆದ ಕಾರಣ ಹಾಸ್ಟೆಲ್‌ನಲ್ಲಿಯೇ ಇರಬೇಕಾದ ಪರಿಸ್ಥಿತಿ.

ಜಯಮ್ಮ ಮತ್ತು ಜನರೇಟರ್‍ ಶ್ರುತಿ

ಕಪ್ಪು ಎರಡರ ಶ್ರುತಿ ಹಿಡಿದೇ ಇತ್ತು ಜನರೇಟರ್‌

ಯಾರದೋ ಒತ್ತಾಯಕ್ಕೆಂಬಂತೆ ಆಗೊಮ್ಮೆ ಈಗೊಮ್ಮೆ ತೂಗುತ್ತಿದ್ದವು ಎಲೆಗಳು, ಅವುಗಳಿಗಂಟಿದ ಕೊಂಬೆಗಳೂ... ನೋಡಲು ಬಂದ ಹುಡುಗನ ಮುಂದೆ ಕಾಫಿ ಟ್ರೇ ಹಿಡಿದು ಮನಸ್ಸಿಲ್ಲದ ಮನಸ್ಸಿನಿಂದ ಆರ್ಟಿಫೀಶಿಯಲ್ ಸ್ಮೈಲ್‌ ಕೊಡುವ ಹುಡುಗಿಯ ಹಾಗೆ. ಈ ನೀರಸ ಪ್ರತಿಕ್ರಿಯೆಗೋ ಏನೋ ಮುನಿಸಿಕೊಂಡು, ಮರ ಬಿಟ್ಟು ಕಟ್ಟಡದ ನೆತ್ತಿ ಏರಿದ್ದವು ಒಂದಿಷ್ಟು ಮೈನಾ, ಎಂಟ್ಹತ್ತು ಕಾಗೆಗಳು. ಚಲಿಸುವುದೇ ನಮ್ಮ ಧರ್ಮ ಕಣಯ್ಯಾ ಎಂದು ಭುಜ ತಟ್ಟಿ ಹೇಳುತ್ತಿತ್ತು ಬೂದುಬಣ್ಣದ ಮೋಡ ಬಿಳಯ ಮೋಡಕ್ಕೆ. ಆದರೂ ಆ ಬಿಳಿಯ ಮೋಡ ತಿರುತಿರುಗಿ ಮರವನ್ನ ಮೈನಾ-ಕಾಗೆಗಳನ್ನ, ಶ್ರುತಿ ಹಿಡಿದಿರುವ ಜನರೇಟರ್‌ನನ್ನ ನೋಡುವುದ ಮರೆಯಲಿಲ್ಲ ಮರೆಯಾಗುವತನಕ. ಹಗಲಿಗೆ ಹೆಗಲು ಕೊಡುವವನು ಅದ್ಯಾಕೋ ಏನೋ ತುಸು ಲೇಟಾಗಿಯೇ ಹಾಜರಾಗಿದ್ದ ಶಿಫ್ಟಿಗೆ. ಅದು ನಿದ್ದೆಗಣ್ಣಲ್ಲೇ. ಕನಸು-ಕನವರಿಕೆ ಗುಂಗಲ್ಲೇ. ಮನಸೊಲ್ಲದ ಮನಸಿನಿಂದ. ಮೊನಾಟನಸ್‌ ರೂಟಿನ್ ಲೈಫಿನಿಂದ.

ಜನರೇಟರ್‌ ಕಪ್ಪು ಎರಡರ ಶ್ರುತಿಯಲ್ಲೇ ಇತ್ತು...

ತುರುಕಿದ ಮಂತ್ರವನ್ನೇ ತಿರುಚಿ ತಿರುಚಿ ಪಟಪಟಿಸುತ್ತ, ಗೋಡೆಗೆ ಬೆನ್ನಂಟಿಸಿಕೊಂಡ ಟಿವಿ ಪೆಟ್ಟಿಗೆಗಳ ಸಾಲು ಕಾಲಾಯ ತಸ್ಮೈನ್ನಮಃ ಎನ್ನುತ್ತಿದ್ದವು ; ರಾಹುಲ್ ಗಾಂಧಿ ದಾಲ್‌-ಚಾವಲ್ ತಿಂದರೆ ಬ್ರೇಕಿಂಗ್‌! ಸಿಡಿದ ಒಂದೆರಡು ಮಳೆಹನಿಯಿಂದ ಬಿಗ್‌ಬಿಗೆ ಕೋಲ್ಡ್ ಅಟ್ಯಾಕ್‌ ಫ್ಲ್ಯಾಶ್‌! ಬೆಚ್ಚಗೆ ಕಾಲಸಂದಿಯೊಳಗೆ ಮುಖ ಮುಚ್ಚಿಕೊಂಡು ಮಲಗಬೇಕಿದ್ದ ಬೆಕ್ಕು ಸಜ್ಜಾ ಏರಿ ಹದಿನೈದು ಗಂಟೆಗಳಾದರೂ ಕೆಳಗಿಳಿಯದಿದ್ದುದು ಸ್ಪೆಶಲ್‌!

ಕಪ್ಪು ಎರಡರ ಶ್ರುತಿ ಹಿಡಿದ ಜನರೇಟರ್‍ ಯಾಕೋ ಒಂದರ ಶ್ರುತಿಗೆ ಇಳಿದ ಹಾಗಿತ್ತು...

ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?

ಕೆಲವರು ಕನ್ನಡಕ್ಕೆ ಷ, ಱ, ೞ ಮಹಾಪ್ರಾಣಗಳು ಬೇಡವೆನ್ನುತ್ತಾರೆ. ಆದರೆ ಅಚ್ಚ ಸಕ್ಕದ ಪದಗಳನ್ನು ಬೞಸುತ್ತಿದ್ದೇವೆ. ಹಾಗಾಗಿ ’ವಿಷಯ’ ಪದವನ್ನೇ ತೆಗೆದುಕೊಳ್ಳಿ. ಅದನ್ನು ವಿಶಯ ಎಂದು ಬರೆಯುವುದನ್ನು ನಾನೊಪ್ಪುವುದಿಲ್ಲ. ಬೇಕಾದರೆ ಬೆಸಯ ಅಥವಾ ಇಸ್ಯ ಎಂದು ಕನ್ನಡೀಕರಿಸಿ ಹೇೞಿ. ವ್ಯಾಯಾಮಕ್ಕೆ ಯಾಯಾಮ ಎನ್ನಲು ಪರವಾಗಿಲ್ಲ. ವಾಡಿಕೆಗೆ ಆಡಿಕೆ ಎನ್ನಲಾಗದು.

ಆಷಾಢ ಮಾಸ ಅಶುಭವೇಕೆ ?

ಇದೀಗ ಆಷಾಡ ಮಾಸ ಬಂದಿದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು, ತವರು ಮನೆಗೆ ಹೋಗುವ ಸಂಭ್ಹಮ, ಕಾರಣ ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬಾರದಂತೆ. ಕಾರಣ ಏಕೋ ಗೊತ್ತಿಲ್ಲ.

ಚಂದದ ನಗು

ಮೊಗವಿದೋ ಮನಕೆ ಹಿಡಿದಿದೆ ಕನ್ನಡಿ,
ಕಣ್ಣಿದ್ದೋ ಮನದ ಮೌನ ಭಾಷೆಗೆ ಮುನ್ನುಡಿ,
ನಗುವಿದೋ ಸೊಬಗಿನ ಸಂತಸ ನುಡಿ,
ನಗುತಿರು, ನಗಿಸುತಲಿರು, ಎಂಬುದಿದೋ ಕನ್ನಡ ನಾಣ್ಣುಡಿ,
ನಿಮ್ಮ ಮನದಾಳದ ನಗುವಿನೊಂದಿಗಿನ ಮೊಗ ಬಲು ಚಂದ ನೋಡಿ.

ಚಂದದ ನಗು

ಮೊಗವಿದೋ ಮನಕೆ ಹಿಡಿದಿದೆ ಕನ್ನಡಿ,
ಕಣ್ಣಿದೋ ಮನದ ಮೌನ ಭಾಷೆಗೆ ಮುನ್ನುಡಿ,
ನಗುವಿದೋ ಸೊಬಗಿನ ಸಂತಸ ನುಡಿ,
ನಗುತಿರು, ನಗಿಸುತಲಿರು, ಎಂಬುದಿದೋ ಕನ್ನಡ ನಾಣ್ಣುಡಿ,
ನಿಮ್ಮ ಮನದಾಳದ ನಗುವಿನೊಂದಿಗಿನ ಮೊಗ, ಬಲು ಚಂದ ನೋಡಿ.

ಶಿಕ್ಷಣದ ವ್ಯವಸ್ಥೆ ಹೇಗಿರಬೇಕು?

ಶಿಕ್ಷಣದ ವ್ಯವಸ್ಥೆ ಹೇಗಿರಬೇಕು?
ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವೇ? ಹೈಕೋರ್ಟಿನ ತೀರ್ಪು ಎಷ್ಟರ ಮಟ್ಟಿಗೆ ಸರಿ?

ತಾಯಿ ಮತ್ತು ಮಗಳಿಗೆ.

ಸೀತೆ ನಿನ್ನ ಮಗಳೆ?
ನಿಜ ಹೇಳೆ ಭೂಮಿ
ಹೌದೆ! ಹಾಗಾದರೆ
ನೀನೇಕೆ ಕಲಿಸಲಿಲ್ಲ
ಅವಳಿಗೆ
ತಪ್ಪಿಲ್ಲದಾಗ ಸಿಡಿಯುವುದನ್ನು
ಎದೆಯ ಮೇಲೆ ನಿಂತು
ನೋಯಿಸುವವರ ಎದೆ
ನಡುಗಿಸುವುದನ್ನು
ಇಡೀ ಜೀವಮಾನದಲಿ
ಎಂದಾದರೂ ವರ್ತಿಸಿದಳೆ
ಆಕೆ ನಿನ್ನಂತೆ
ಇಲ್ಲಾ ನಿನ್ನುದರದಲ್ಲಿ
ಜನಿಸಿದ ದುರ್ಬಲ
ಶಿಶುವೆ
ಸೀತೆ;ನಿನ್ನ ಮಗಳೆ?
*
ಜಗತ್ತು ಬಲ್ಲ
ನಿನ್ನ ಕತೆಯನ್ನು