ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?
ಕೆಲವರು ಕನ್ನಡಕ್ಕೆ ಷ, ಱ, ೞ ಮಹಾಪ್ರಾಣಗಳು ಬೇಡವೆನ್ನುತ್ತಾರೆ. ಆದರೆ ಅಚ್ಚ ಸಕ್ಕದ ಪದಗಳನ್ನು ಬೞಸುತ್ತಿದ್ದೇವೆ. ಹಾಗಾಗಿ ’ವಿಷಯ’ ಪದವನ್ನೇ ತೆಗೆದುಕೊಳ್ಳಿ. ಅದನ್ನು ವಿಶಯ ಎಂದು ಬರೆಯುವುದನ್ನು ನಾನೊಪ್ಪುವುದಿಲ್ಲ. ಬೇಕಾದರೆ ಬೆಸಯ ಅಥವಾ ಇಸ್ಯ ಎಂದು ಕನ್ನಡೀಕರಿಸಿ ಹೇೞಿ. ವ್ಯಾಯಾಮಕ್ಕೆ ಯಾಯಾಮ ಎನ್ನಲು ಪರವಾಗಿಲ್ಲ. ವಾಡಿಕೆಗೆ ಆಡಿಕೆ ಎನ್ನಲಾಗದು. ಱ ಮತ್ತು ೞ ತೆನ್ನುಡಿಗಳಿಗೆ ವಿಶೇಷವಾದ ಧ್ವನಿಗಳು. ಇವನ್ನು ಬಿಟ್ಟಾಗ ’ಬಾಳ್’ , ’ಬಾೞ್’ , ಬಾೞೆ, ಬಾಳೆ, ನೆಱೆ, ನೆರೆ, ಬೇಱ್ ಮತ್ತು ಬೇರ್ ಇವುಗಳ ವ್ಯತ್ಯಾಸ ಗೊತ್ತಾಗದೇ ಹೋಗಬಹುದು. ನೀವೊಂದು ಮಾತು ಕೇಳಿರಬಹುದು. ಕನ್ನಡ ಕಸ್ತೂರಿ, ತೆಲುಗು ತೇಟ, ಅರವಮಧ್ವಾನಂ. ಇಲ್ಲಿ ಅರವ ಎಂದರೆ ತಮಿೞ್. ತಮಿೞಿನಲ್ಲಿ ಕಡಿಮೆ ಅಕ್ಷರಗಳಿದ್ದು, ಕೆಲವು ಅಕ್ಷರಗಳಿಗೆ ಬೇಱೆ ಕೆಲವು ಅಕ್ಷರಗಳನ್ನು ಬಳಸಿದಾಗ ಆಗಬಹುದಾದ ಅಚಾತುರ್ಯಗಳಿಗೆ ಜನ ಹೇೞುವ ಗಾದೆ ಮಾತಿದು. ಕನ್ನಡತನ್ನಕ್ಕೆ ಒಗ್ಗಿಸಿಕೊಳ್ಳದೆ ಸಂಸ್ಕೃತ ಮತ್ತು ಇತರ ಭಾಷೆಯ ಶಬ್ದಗಳನ್ನು ಬಳಸುವಾಗ ಯಥಾವತ್ತಾಗೇ ಬಳಸುವುದು ಉತ್ತಮ. ಇಲ್ಲದಿದ್ದರೆ ’ಚಿಂತೆ ಯಾತಕೋ ಮನುಜ ಭ್ರಾಂತಿಯಾತಕೋ’ ಎಂಬ ಮಾತು ’ಚಿಂತೆ ಯಾತಕೋ ಮನುಜ ಭ್ರಾಂದಿಯ ತಗೋ’ ಎಂದು ಅರವೀಕರಿಸಿ ಕಿಲಾಡಿಯೊಬ್ಬ ಹೇೞಿದಂತಾಗಬಹುದು. ಆದ್ದರಿಂದ ಕನ್ನಡೀಕರಿಸದ ಶಬ್ದಗಳನ್ನು ಹಾಗೆಯೇ ಬಳಸುವುದು ಸೂಕ್ತ. ಹೇಗೆ ಈಗಿನ ಯಾವ ವಿದ್ಯಾವಂತರು 'zone' ಎಂಬುದನ್ನು ’ಜ಼ೋನ್’ ಮತ್ತು ’flower' ಎಂಬುದನ್ನು ಫ಼್ಲವರ್ ಎಂದೇ ಹೇೞುವಂತೆ.
Comments
ಉ: ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?
ಉ: ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?