ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಗಲು-ಇರುಳು

ಕಣ್ಣ ತುಂಬ ತುಂಬಿರುವ ನಿನ್ನ ನಲ್‍ಮೆಯ ಬೆಳಕಲ್ಲಿ
ಜಗವು ಕಾಣದಾಗಿದೆಯಲ್ಲೇ!!

ನೀ ದೂರವಾಗಿ ಹೋದರೇನು ಗತಿ
ತೊರೆಯದಿರು ನನ್ನ ನಲ್ಲೆ!!

ಕಣ್ಣ ತುಂಬ ತುಂಬುವ ವಿರಹದ ಕತ್ತಲೆಯಲ್ಲಿ
ಜಗವೇ ಕಾಣದಾಗುವುದಲ್ಲೇ!!

ನೀ ಜೊತೆ ಇರುವವರೆಗಸ್ಟೇ ಹಗಲು
ನೀ ದೂರಾದ ಮರುಗಳಿಗೆ ನೆಟ್ಟಿರುಳು!!

ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಿಂದ ರಾಮನಗರಕ್ಕೆ ಹೋಗುವ ರಸ್ತೆ. ಗಣೇಶಗುಡಿ ಮುಖ್ಯ ರಸ್ತೆ ಸಹ ಇದೆ. ಈ ಹಾದಿಯ ಮೇಲೆ ೧೬ ಮೈಲಿ ಕ್ರಮಿಸಿದರೆ ಬಲಬದಿಗೆ ಶಿಂಗರಗಾಂವ್ ಕ್ರಾಸ್. ಈ ಕತ್ತರಿಯಲ್ಲಿ ಸುಮಾರು ೬ ಮೈಲಿ ಹೋದರೆ ಜಗಲಬೇಟ್ ಕ್ರಾಸ್. ಇಲ್ಲಿಂದ ಬಲಬದಿಗೆ ೮ ಮೈಲಿ ನಡೆದರೆ ಸಿಗುವ ಹಳ್ಳಿ ಕೂಡಲ್ ಗಾಂವ್. ಇದೊಂದು ರೀತಿ ನಮ್ಮ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಇದ್ದಂತೆ!

ಅದೊಂದು ಸುಂದರ ಹಳ್ಳಿ. ಸ್ವಚ್ಛಂದ ಪರಿಸರ. ಸಮೃದ್ಧ ಕಾಡು. ಪ್ರಾಣಿ-ಪಕ್ಷಿಗಳ ಕಲರವದ ರಮಣೀಯ ವಾತಾವರಣ. ಅಲ್ಲಲ್ಲಿ ಹರಿಯುವ ಸುಂದರ ಝರಿಗಳು. ನೀರಿನ ತೊರೆಗಳು. ಕಾಡನ್ನು ಸೀಳಿಕೊಂಡು ಹೋಗಿರುವ ಕಾಲು ದಾರಿಗಳು. ಹತ್ತಾರು ಮೈಲಿಗಳನ್ನು ಗದ್ದೆಯ ಬದುಗಳ ನಡುವಿನ ‘ಸುಂದರಿಯ ಬೇತಲೆ ಮಣಿ!’ ಮೇಲೆ ಕಾಲ್ನಡಿಗೆಯಲ್ಲೇ ಕ್ರಮಿಸುವ ಜನ. ಅಬ್ಬಾ ಮೈನವಿರೇಳಿಸುವ ಅನುಭವ!

‘ಇಲ್ಲೊಂದು ಹಳ್ಳಿ ಇದೆ, ೩೦ ಹೆಂಚಿನ ಮನೆಗಳಿವೆ, ಸುಮಾರು ೧೦೦ ಜನರ ವಸತಿ ಇದೆ’ ಎಂದು ಪತ್ತೆ ಹಚ್ಚಿದ ಪರಿಸರವಾದಿ, ಕ್ರಿಯಾಶೀಲಗೆಳೆಯರು ಬಳಗದ ಅಧ್ಯಕ್ಷ ಮುಕುಂದ ಮೈಗೂರ ಅವರಿಗೆ ‘ಹ್ಯಾಟ್ಸ್ ಆಫ್’.

ಕತೆಗಾರ್ತಿ ದೊಡ್ಡಮ್ಮ

"ರೂಪವ್ವ ಬಾರೆ , ಆನಂದ ಬಾರಲಾ , ಒಂದ್ಕತೆ ಯೇಳ್ತೀನಿ " ಅಂತಾ ಆ ಹೆಂಗಸು ಕರೆದ ತಕ್ಶಣ, ಏನೇ ಮಾಡುತ್ತಿದ್ದರೂ ನಾವು ಅವಳ ಮುಂದೆ ಹಾಜಾರಾಗುತ್ತಿದ್ದೆವು.
ಅವಳ ಹೆಸರೇ ದೊಡ್ಡಮ್ಮ. ಪಕ್ಕದ ಮನೆಯವರಿಗೆ ಯಾವುದೋ ಸಂಬಂಧದವಳು. ಅವಾಗ ವಯಸ್ಸು ಎಷ್ಟು ಅಂತ ಗೊತ್ತಾಗ್ತಿರಲಿಲ್ಲ, ಅದೆಲ್ಲಾ ಬೇಕಾಗೂ ಇರಲಿಲ್ಲ.
ಈಗ ಅನ್ನಿಸುತ್ತಿದೆ ಸುಮಾರು ೬೫ -೭೦ ವರ್ಷವಿರಬೇಕು.

ನುಡಿ ಚಿತ್ರ ಬರೆಯಲು ಕಲಿತಿದ್ದು

ಒಂದೆರಡು ಘಟನೆಗಳನ್ನು ಹೇಳುವ ಮೂಲಕ ವಿಷಯಕ್ಕೆ ಬರುವುದು ಸುಲಭ ಅನ್ನಿಸುತ್ತಿದೆ.

ಪತ್ರಿಕೋದ್ಯಮಕ್ಕೆ ಬಂದ ಪ್ರಾರಂಭಿಕ ದಿನಗಳವು. ಅಪರಾಧ ಸುದ್ದಿಯನ್ನು ಬರೆದು ಅನುಭವವಿದ್ದ ನನ್ನನ್ನು, ನುಡಿ ಚಿತ್ರದತ್ತ ಹೊರಳಿಸಲು ಮಿತ್ರ ಆನಂದತೀರ್ಥ ಪ್ಯಾಟಿ ಯತ್ನಿಸುತ್ತಿದ್ದರು.

ನುಡಿ ಚಿತ್ರ ಬರೆಯಲು ಕಲಿತಿದ್ದು

ಒಂದೆರಡು ಘಟನೆಗಳನ್ನು ಹೇಳುವ ಮೂಲಕ ವಿಷಯಕ್ಕೆ ಬರುವುದು ಸುಲಭ ಅನ್ನಿಸುತ್ತಿದೆ.

ಪತ್ರಿಕೋದ್ಯಮಕ್ಕೆ ಬಂದ ಪ್ರಾರಂಭಿಕ ದಿನಗಳವು. ಅಪರಾಧ ಸುದ್ದಿಯನ್ನು ಬರೆದು ಅನುಭವವಿದ್ದ ನನ್ನನ್ನು, ನುಡಿ ಚಿತ್ರದತ್ತ ಹೊರಳಿಸಲು ಮಿತ್ರ ಆನಂದತೀರ್ಥ ಪ್ಯಾಟಿ ಯತ್ನಿಸುತ್ತಿದ್ದರು.

ಒಂದು ಮರದ ಅಳಲು

ಒಂದು ಮರದ ಅಳಲು
ಒಂದಾನೊಂದು ಕಾಲದಲ್ಲಿ
ನನ್ನೊಡನಾಡಿದ ಗೆಳೆಯರೆ
ಇಂದೆಲ್ಲಿ ಮಾಯವಾದಿರಿ?
ನಾನೇಕೆ ಏಕಾಂಗಿಯಾದೆನಿಲ್ಲಿ?
ಎಲ್ಲೆಲ್ಲೂ ಹಸಿರಾಗಿ ಮೆರೆದಿದ್ದೆವಲ್ಲ
ನಮ್ಮಲ್ಲೆ ಮನೆಮಾಡಿ ಉಲಿದ ಪಕ್ಷಿಗಳೆ
ನೀವೆಲ್ಲಿ ಕಣ್ಮರೆಯಾದಿರೋ ಕಾಣೆನಲ್ಲ
ಅಯ್ಯೋ! ನಾನೇಕೆ ಏಕಾಂಗಿಯಾದೆನಿಲ್ಲಿ?
ಚಿಲಿಪಿಲಿ ಎನ್ನುತ ನಲಿದವು ಹಕ್ಕಿಗಳಂದು-ಆ