ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

೨೦೦೭-೦೮ ರಣಜಿ ಋತು ಮತ್ತು ಕರ್ನಾಟಕ

೭೪ನೇ ರಣಜಿ ಋತು ನವೆಂಬರ್ ೩ ರಂದು ಆರಂಭಗೊಂಡಿದೆ. ಈ ಬಾರಿಯಾದರೂ ಮುಂಬೈ ಬಿಟ್ಟು ಬೇರೆ ತಂಡ ರಣಜಿ ಟ್ರೋಫಿ ಗೆಲ್ಲುವುದೋ ... ಕಾದು ನೋಡಬೇಕು. ಕಳೆದ ಋತುವಿನಲ್ಲಿ ಸೆಮಿಫೈನಲ್ ನಲ್ಲಿ ತನ್ನ ಅಭಿಯಾನ ಮುಗಿಸಿದ ಕರ್ನಾಟಕ, ಈ ಋತುವಿನಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ ಅದೇ ದೊಡ್ಡ ಸಾಧನೆ.

ಕಳೆದ ಋತುವಿನಲ್ಲಿ ಕರ್ನಾಟಕದ ಉತ್ತಮ ಪ್ರದರ್ಶನಕ್ಕೆ ಕಾರಣ ರಾಬಿನ್ ಉತ್ತಪ್ಪ. ಪ್ರಮುಖ ಪಂದ್ಯಗಳಲ್ಲಿ ರಾಬಿನ್ ನೀಡಿದ ಉತ್ತಮ ಆರಂಭದಿಂದ ಕರ್ನಾಟಕ ಉತ್ತಮ ಮೊತ್ತಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಆದ್ದರಿಂದ ಬೌಲರ್ ಗಳಿಗೂ ಉತ್ತಮ ಮೊತ್ತದ ಬೆಂಬಲವಿದ್ದರಿಂದ ಎದುರಾಳಿ ತಂಡಗಳನ್ನು ಕಬಳಿಸುವಲ್ಲಿ ಕರ್ನಾಟಕ ಸಾಕಷ್ಟು ಯಶಸ್ವಿಯಾಗಿತ್ತು.

ಅದೇನು ಯೇಸು ಕ್ರಿಸ್ತನ ಮಾಯೆಯೋ, ಆ ರೋಲಂಡ್ ಬ್ಯಾರಿಂಗ್ಟನ್ ಮತ್ತೆ ತಂಡದಲ್ಲಿ ಸ್ಥಾನ ಪಡೆದದ್ದು ಮಹಾದಾಶ್ಚರ್ಯ! ಕಳೆದೆರಡು ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಬ್ಯಾರಿಂಗ್ಟನ್ ಮತ್ತೆ ತನ್ನ ಸ್ಥಾನ ಕಾಯ್ದುಕೊಂಡಿದ್ದಾರೆ. ರೋಲಂಡ್ ಬ್ಯಾರಿಂಗ್ಟನ್ ಒಬ್ಬ ಕಲಾತ್ಮಕ ಆರಂಭಿಕ ಆಟಗಾರ. ತನ್ನಲ್ಲಿರುವ ಪ್ರತಿಭೆಗೆ ತಕ್ಕಂತೆ ಆಡಿದರೆ ಈತನನ್ನು ಔಟ್ ಮಾಡಲು ಎದುರಾಳಿ ಬೌಲರ್ ಗಳು ಹೆಣಗಾಡಬೇಕಾಗುತ್ತದೆ. ಆದರೆ ಕಳೆದೆರಡು ಋತುಗಳಿಂದ ಕ್ರಿಕೆಟ್ ಬಗ್ಗೆ ಮಾತನಾಡುವುದು ಮತ್ತು ಯೋಚಿಸುವುದನ್ನು ಬಿಟ್ಟು ತನ್ನ ಧರ್ಮದ ಬಗ್ಗೆ ಅತಿಯಾಗಿ ಮಾತನಾಡುವುದು ಮತ್ತು ಯೋಚಿಸುವುದನ್ನು ಮಾಡುತ್ತಿರುವುದರಿಂದ ಬ್ಯಾರಿಂಗ್ಟನ್ ಆಟದ ಮೇಲೆ ಗಮನ ಕಳೆದುಕೊಳ್ಳುತ್ತಿದ್ದಾರೆ. ಬ್ಯಾರಿಂಗ್ಟನ್ ಈಗ ಸೀನಿಯರ್ ಆಟಗಾರ. ಅದರಂತೆಯೇ ಅವರು ನಡೆದುಕೊಳ್ಳುವುದೂ ಲೇಸು. ಈ ಋತುವಿನಲ್ಲಾದರೂ ರೋಲಂಡ್, ಕರ್ನಾಟಕಕ್ಕೆ ಒಂದೆರಡಾದರೂ ಉತ್ತಮ ಆರಂಭವನ್ನು ದೊರಕಿಸಿಕೊಡಲಿ. ಆಮೆನ್.

ನಮ್ಮ ಮನೆಯ ದೀಪಾವಳಿ

ಮತ್ತೊಂದು ದೀಪಾವಳಿ ಸಂದಿದೆ. ನಾವು ವರುಷದಂತೆ ಸರಳ ಸುಂದರವಾಗಿ ಆಚರಿಸಿಕೊಂಡೆವು. ನಮ್ಮಲ್ಲಿ ದೀಪಾವಳಿಯೆಂದರೆ ತುಳಸೀ ಪೂಜೆ, ಗೋಪೂಜೆ, ಊಟ.

ಕಾರಂತರು

ಮೊನ್ನೆ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪ್ರೊ.ಕೃಷ್ಣೇಗೌಡರು ವಿವರಿಸಿದ ಕಾರಂತರ ಕುರಿತ ಒಂದು ಪ್ರಸಂಗ.
ಕಾರ್ಯಕ್ರಮ ವೀಕ್ಷಿಸದ ಓದುಗರಿಗಾಗಿ ಇಲ್ಲಿ ಸಂಕ್ಷೇಪಿಸಿದ್ದೇನೆ:

ಶಿವರಾಮ ಕಾರಂತರಿಗೆ ಪುತ್ರವಿಯೋಗವಾಗುತ್ತದೆ. ಬೆಳೆದ ಮಗನನ್ನು ಕಳೆದುಕೊಂಡು ದುಃಖದಲ್ಲಿರುತ್ತಾರೆ.

ಗಾಂಧಿ ಪುರಾಣ

ಸ್ವ ತಂತ್ರ ಭಾರತದ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪಿತರೆನಿಸಿದ ಗಾಂಧೀಜಿಯನ್ನು ಆ ಪದವಿಯಿಂದ ಇಳಿಸಲು ಅನೇಕ ವಲಯಗಳಿಂದ ಪ್ರಯತ್ನಗಳು ಆರಂಭವಾಗಿರುವಂತೆ ತೋರುತ್ತದೆ.

ಯುದ್ಧ ಮತ್ತು ಶಾಂತಿ...

ಅದು 1811-1812 ನೆ ಇಸವಿಯ ಯೂರೋಪು. ನೆಪೊಲಿಯನ್ನನ ಕಾಲ. ರಷ್ಯ-ಫ್ರಾನ್ಸ್ ಒಕ್ಕೂಟದಿಂದ ಬೇರಾಗಲು ರಷ್ಯ ಬಯಸುತ್ತಿರುತ್ತದೆ. ಅದನ್ನು ಒಪ್ಪದ ಫ್ರಾನ್ಸ್‌ನ ನೆಪೊಲಿಯನ್ ರಷ್ಯಕ್ಕೆ ಬುದ್ಧಿ ಕಲಿಸಲು ಅದರ ಮೇಲೆ ದಾಳಿ ಮಾಡುತ್ತಾನೆ. ರಷ್ಯಾದ ಒಳಗೇ ಅನೇಕ ಕದನಗಳು ನಡೆಯುತ್ತವೆ. ನೆಪೊಲಿಯನ್ನನದು ದೊಡ್ಡ ಸೈನ್ಯ. ಆದರೂ ರಷ್ಯನ್ನರನ್ನು ಸಂಪೂರ್ಣವಾಗಿ ಸೋಲಿಸಲಾಗುವುದಿಲ್ಲ.

ನಮ್ಮ ನಿಜವಾದ ಶತೃ ಯಾರು?

ಭಾರತ-ಅಮೆರಿಕದೊಡಗಿನ ಪರಮಾಣು ಸಂಧಾನ ಯತ್ನಕ್ಕೆ ಅನೇಕರು ವಿರೋಧಿಸುತ್ತಿದ್ದಾರೆ. ಅದರಲ್ಲಿ, ಸ್ವಯಂ ಘೋಷಿತ ಬಡವರ ಬಂಧು ಎಡರಂಗ ಮತ್ತು ಹಿಂದೂ ಉದ್ಧಾರಕ ಭಾರತೀಯ ಜನತಾ ಪಕ್ಷಗಳ ಮಾತು ಕೇಳಿ ಬರುತ್ತಿವೆ.

ಬಿಜೆಪಿಗೆ ಇದೊಂದು ಸಂಧಿಗ್ಧ ಪರಿಸ್ಥಿತಿ. ಅಧಿಕಾರದಲ್ಲಿದ್ದಾಗ ತಾವೇ ಶುರು ಮಾಡಿದ ಕಾರ್ಯವನ್ನು ವಿರೋಧಿಸಲು ಸಾಕಷ್ಟು ಒದ್ದಾಟ ಅನುಭವಿಸುತ್ತಿದ್ದಾರೆ. ಹಾಗಾಗಿ, ಅವರ ಮಾತುಗಳು ಕೇವಲ ವಿರೋಧ ಪಕ್ಷದ ದುರ್ಬಲ ಅನಿಸಿಕೆಗಳಾಗಿ ಕಂಡು ಬರುತ್ತಿದೆ. ಮತ್ತೆ, ಅವರ ಮಾತುಗಳನ್ನು ಯಾರೂ ಹೆಚ್ಚು ಗಂಭೀರವಾಗಿ ಕೂಡ ತೆಗೆದುಕೊಳ್ಳುತ್ತಿಲ್ಲ. ನನಗೆ ಅನ್ನಿಸುವ ಹಾಗೆ, ಬಿಜೆಪಿಯ ಉದ್ದೇಶ UPA ಮತ್ತು ಎಡರಂಗಗಳ ಮಧ್ಯೆ ಒಡಕನ್ನುಂಟು ಮಾಡುವುದೇ ಆಗಿದೆ.

ಆದರೆ ವಿರೋಧದ ಮುಂಚೂಣಿಯಲ್ಲಿರುವ ಎಡರಂಗ ಈ ವಿಷಯವನ್ನು ಕೇವಲ ತತ್ವ ಬದ್ಧ ಕಾರಣಗಳಿಗಾಗಿ ಮಾತ್ರವಲ್ಲದೆ, UPA ಸರ್ಕಾರವನ್ನು ಹದ್ದಿನಲ್ಲಿಡುವ ತರ್ಕ ಬದ್ಧ ಕಾರಣಗಳೇ ಮುಖ್ಯವಾಗಿದೆ. ದೇಶದ 'ಹಿತ'ದೃಷ್ಟಿಯಿಂದ ಈ ಸಂಧಾನವನ್ನು ವಿರೋಧಿಸುತ್ತಿರುವುದಾಗಿ ಹೇಳುತ್ತಿರುವ ಎಡರಂಗದ ಮಾತು ಹಾಸ್ಯಾಸ್ಪದ ಎನಿಸುತ್ತಿದೆ. ಇದುವರೆವಿಗೂ, ಕಾರ್ಮಿಕರ, ರೈತರ ಪರವಾಗಿ ಕೂಗಾಡುತ್ತಿದ್ದವರಿಂದ ದೇಶದ ಕಳಕಳಿಯ ಬಗ್ಗೆ ಮಾತು ಕೇಳುತ್ತಿರುವುದು ಎಲ್ಲರೂ ಕುತೂಹಲದಿಂದ ಗಮನಿಸುವಂತೆ ಮಾಡಿದೆ.

ಆಶ್ಡೆನ್ ಪ್ರಶಸ್ತಿ

೨೦೦೭ನೇ ಸಾಲಿನ ಆಶ್ಡೆನ್ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಸಂಸ್ಥೆಗಳಲ್ಲಿ ಕರ್ನಾಟಕದ ಎರಡು ಸಂಸ್ಥೆಗಳಿವೆ!

ಮೊದಲನೆಯದು [:http://www.selco-india.com/|ಸೆಲ್ಕೊ ಇಂಡಿಯ] (SELCO-India). ಇವರಿಗೆ "ಅತ್ಯುತ್ತಮ ಸಾಧನೆ" ಪ್ರಶಸ್ತಿ ಲಭಿಸಿದೆ.

ಎರಡನೆಯದು [:http://www.skgsangha.org/|SKG ಸಂಘ] - ಇವರಿಗೆ ಫುಡ್ ಸೆಕ್ಯೂರಿಟಿ ವಿಭಾಗದಲ್ಲಿ ಎರಡನೇ ಪ್ರಶಸ್ತಿ ಲಭಿಸಿದೆ.

ಹೆಚ್ಚಿನ ಮಾಹಿತಿ ಮತ್ತು ಇನ್ನಷ್ಟು ಆಸಕ್ತಿ ಹುಟ್ಟಿಸುವ ಪ್ರಯೋಗಗಳ ಸಾರಾಂಶ [:http://www.ashdenawards.org/|ಇಲ್ಲಿದೆ, ಓದಿ].

ಮುಖ್ಯವಾಗಿ [:http://www.ashdenawards.org/finalists_UK_2007|U K winners], ಹಾಗೂ [:http://www.ashdenawards.org/finalists_2007|International winners] ಪುಟಗಳನ್ನು ನೋಡಿ.