ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಾಳು ಬೊಂಬಾಟ್

ಬೆಳ್ ಬೆಳಗ್ಗೆ ಬಲ್ ಮೊಗ್ಲಲ್ ಎದ್ ಬುಟ್
ನನ್ ಹೆಂಡ್ರು ಮಾಡಿದ್ದ ಚಿಬ್ಲಿಡ್ಲಿ ತಿಂದ್ ಬುಟ್
ಕುಟ್ತಾ ಇದ್ರೆ ಕೈಮಣೆ ಕಟ್ ಕಟ್
ಉನಿಯಾಕಂಡಿರ ಕೆಲಸವೆಲ್ಲ ಓಡ್ತವೆ ಪಟ್ ಪಟ್
ಹೀಗಿದ್ರೆ ನಾನು ನನ್ ಬಾಳು ಬೊಂಬಾಟ್

 

ನನ್ನ ಹೊಸ "ಅಪಾರ್ಥಗಳು"

ಮಾರ್ಕ್ಸ್ ವಾದಿಃ ಬರೆದಿದ್ದಕ್ಕೆಲ್ಲಾ ಮಾರ್ಕ್ಸ್ ಕೊಡಬೇಕೆಂದು ವಾದಿಸುವ ವಿದ್ಯಾರ್ಥಿ!

ಸಂತೆಃ ಸಂತ ಶಬ್ಧದ ಸ್ತ್ರೀಲಿಂಗ..!

ಪತ್ರಿಕಾ ಧರ್ಮಃ ಪ್ರತಿಯೊಂದು ಪತ್ರಿಕೆಯವರೂ ತಮಗೆ ಬೇಕಾದಂತೆ ವ್ಯಾಖ್ಯಾನಿಸಬಹುದಾದಂಥದ್ದು

ಕಾಲಿಸುಃ call ಮಾಡು

ಪೇರಿಸು(Pair+ಇಸು)ಃ ಜೋಡಿ ಮಾಡು

mattashtu apaarthagaligaagi bheTi kodi...
www.aparthakosha.wordpress.com

ಶೃಂಗೇರಿಯ ಇತಿಹಾಸ.

ಶೃಂಗೇರಿಯ ಇತಿಹಾಸ : ಆದಿಶಂಕರರು, ತಮ್ಮ ಪ್ರಥಮ, ಹಾಗೂ ಪ್ರಶಷ್ತ್ಯ ವಾದ ಮಠವನ್ನು ಸ್ಥಾಪಿಸುವ ಉದ್ದೇಶ್ಯದಿಂದ ಪವಿತ್ರಸ್ಥಾನದ ಅನ್ವೇಷಣೆಯಲ್ಲಿದ್ದಾಗ, ಶೃಂಗೇರಿಗೂ ಭೇಟಿಯಿತ್ತರು. ಅಲ್ಲಿನ ತುಂಗಾನದಿಯ ದಂಡೆಯ ಬಳಿ ಕಂಡ ದೃಶ್ಯದಿಂದ ಅವರು ಬಹಳ ಪ್ರಭಾವಿತರಾದರು. ಬಿಸಿಲಿನ ತಾಪದಿಂದ ಬಸವಳಿದ ಒಂದು ಗರ್ಭಿಣಿ ಕಪ್ಪೆಯೊಂದಕ್ಕೆ, ಕಾಳಿಂಗಸರ್ಪವೊಂದು, ತನ್ನ ಹೆಡೆಯೆತ್ತಿ ನೆರಳು ನೀಡುತ್ತಿತ್ತು ! ಹೀಗೆ, ಸಹಜ ಶತೃಗಳಾದಾಗ್ಯೂ, ಪರಸ್ಪರ ಪ್ರೀತಿ ಸೌಹಾರ್ದದಿಂದ ಬಾಳ್ವೆಮಾಡುತ್ತಿದ್ದ, ಪಶು, ಪಕ್ಷಿ, ಪ್ರಾಣಿಗಳ ನಡುವಳಿಕೆಯ ಸ್ಥಾನದ ಪವಿತ್ರತೆ, ಅವರನ್ನು ಮೂಕರನ್ನಾಗಿಸಿತು.

ವಸಂತದ ವಿಷಾದ, ಏಪೆಕ್ ಮತ್ತು ಸೋಲ್ಸನಿತ್ಸಿನ್

ಈ ಮರಣ ಪದ್ಯಕ್ಕೆ ಗಾಢವಾಗಿ ಪ್ರತಿಕ್ರಿಯಿಸಿದ ಇಲ್ಲಿ ಬ್ಲಾಗಿಸುವ ಟೀನಾ ಸೋಲ್ಸನಿತ್ಸಿನ್‌ನ "ಎ ಡೇ ಇನ್ ದ ಲೈಫ್ ಆಫ್ ಇವಾನ್ ಡೆನೀಸೊವಿಚ್‌" ನಾನು ಓದಬೇಕು ಎಂದು ಸೂಚಿಸಿದರು. ಓದಬೇಕು ಎಂದು ಈ ಹಿಂದೆ ಅಂದುಕೊಂಡಿದ್ದರೂ ಓದಲಾಗಿರಲಿಲ್ಲ. ಇದೊಂದು ಪ್ರೇರಣೆ ಸಾಕಾಯ್ತು. ಕೈಗೆತ್ತಿಕೊಂಡೆ.

ನಡುವೆ ಏಪೆಕ್ ಸಮಿಟ್‌ನ ಪ್ರೊಟೆಸ್ಟ್‌ನಲ್ಲಿ ಪಾಲ್ಗೊಂಡಾಗ ನಾನು ಹಲವರಿಗೆ ಉತ್ತರಿಸಬೇಕಾಗಿ ಬಂದ ಪ್ರಶ್ನೆ "ನೀನು ಏನನ್ನು ವಿರೋಧಿಸುತ್ತಿದ್ದೀಯ?" ಕೆಲಸ, ಹಣ ಆಸೆಗಳು ಎಲ್ಲ ಇರುವ ನಿನಗೆ ತೊಂದರೆ ಏನು? ಅಂದರೆ, ವಯ್ಯಕ್ತಿಕವಾಗಿ ನಿನಗೆ ಏನು ಅನ್ಯಾಯವಾಗಿದೆ? ಪ್ರಶ್ನೆ ಕೇಳಿದವರು ಉತ್ತರಿಸದ ನನ್ನನ್ನು ಒಂದು ಕ್ಷಣ ದಿಟ್ಟಿಸಿ, ಕೇಳಬಾರದಿತ್ತು ಎಂಬಂತೆ ತಟ್ಟನೆ ತಮ್ಮ ಕೆಲಸಕ್ಕೆ ವಾಪಸಾಗುತ್ತಾರೆ. ಅವರ ತಲೆಯಲ್ಲಿ ಪ್ರಶ್ನೆ. ನನ್ನ ತಲೆಯಲ್ಲಿ ಅದಕ್ಕೆ ಉತ್ತರವಾಗಲು ನಿರಾಕರಿಸುವ ಹಲವು ವಿಚಾರಗಳು.

ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!

(ಇ-ಲೋಕ-40)(17/9/2007)

ಕೈಗಾರಿಕೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದು ನಮ್ಮ ಅನುಭವಕ್ಕೆ ಬರುತ್ತಿರುತ್ತದೆ.ವಿಶ್ವದ ಅತಿಮಲಿನ ಸ್ಥಳಗಳ ಪಟ್ಟಿ ಪ್ರಕಟವಾಗಿದೆ.ದುರಂತವೆಂದರೆ,ಈ ಪಟ್ಟಿಯಲ್ಲಿ ಭಾರತದ ಎರಡು ಸ್ಥಳಗಳು ಸ್ಥಾನ ಪಡೆದಿವೆ.ಸುಕಿಂದ ಕ್ರೊಮಿಯಮ್ ಗಣಿಗಾರಿಕೆಯಿಂದ ನೀರು ಮಲಿನವಾಗಿದೆಯಂತೆ.ಇಲ್ಲಿನ ಕೆಲಸಗಾರರು ಅದೇ ನೀರನ್ನು ಕುಡಿಯಲು,ದೈನಂದಿನ ಕೆಲಸಗಳಿಗೆ ಬಳಸುವುದರಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಾರೆ.ಜತೆಗೆ ಬಂಜೆತನ,ವಿಕಲಾಂಗ ಮಕ್ಕಳ ಜನನ ಸಾಮಾನ್ಯ.ಪ್ರಸಿದ್ಧ ಟಾಟಾ ಸ್ಟೀಲ್ ಕಂಪೆನಿ ಈ ಗಣಿಯನ್ನು ನಡೆಸುತ್ತಿದೆ.ಜಂಶದ್‍ಪುರದ ಬಳಿ ಈ ಗಣಿಗಳಿವೆ.ಗುಜರಾತಿನ ವಪಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇನ್ನೊಂದು ಪಟ್ಟಣ.ಇದಕ್ಕೆ ಕಾರಣವಾಗಿರುವುದು ನೀರಿನ ಮಾಲಿನ್ಯವೇ ಆಗಿದೆ.ಈ ನಗರದಲ್ಲಿರುವ ಅಪಾರ ಸಂಖ್ಯೆಯ ಕೈಗಾರಿಕೆಗಳು ರಾಸಾಯಿನಿಕ,ಕ್ರಿಮಿನಾಶಕಗಳು,ಬಣ್ಣಗಳ ತಯಾರಿಯಲ್ಲಿ ತೊಡಗಿದ್ದು,ಇಲ್ಲಿನ ನೀರಿನ ಮೂಲಗಳು ಮಲಿನವಾಗಲು ಕಾರಣವಾಗಿವೆ.ಇಲ್ಲಿ ಲಭ್ಯ ನೀರಿನಲ್ಲಿ ಪಾದರಸದ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ತೊಂಭತ್ತಾರು ಪಟ್ಟು ಹೆಚ್ಚು! ಈ ಪಟ್ಟಿಯಲ್ಲಿ ರಷ್ಯಾದ ನಾಲ್ಕು ಸ್ಥಳಗಳು ಇವೆ.ಬ್ಲಾಕ್‍ಸ್ಮಿತ್ ಇನ್ಸ್‍ಸ್ಟಿಟ್ಯೂಟ್ ಎನ್ನುವ ಸ್ವತಂತ್ರ ಪರಿಸರ ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ಈ ಪಟ್ಟಿಯನ್ನು ತಯಾರಿಸಲಾಗಿದೆ.ಕಲ್ಲಿದ್ದಲು ಗಣಿಗಳ ಕಾರಣ ಮಲಿನವಾಗಿರುವ ಎರಡು ಚೀನಾದ ಪಟ್ಟಣಗಳೂ ಪಟ್ಟಿಯಲ್ಲಿ ಸೇರಿವೆ.

ಗೂಗಲ್ನಲ್ಲಿ ಚಂದ್ರ !!!

ಗೂಗಲ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ, ಅದೆ ಬಾಹ್ಯಾಕಾಶವನ್ನು ಹುಡುಕುವ ಕೆಲಸ. ತಲತಲಾಂತರದಿಂದ ಮನುಷ್ಯನ್ನ ಕಾಡುತ್ತಿರುವ ಪ್ರಶ್ನೆ "ಅಲ್ಲೇನಿದೆ ??"... ಈ ಪ್ರಯತ್ನದಿಂದ "ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ... " ಎನ್ನುವವರಿಗೆ ಸೂಕ್ತ ಜಾಗ ಕಲ್ಪಿಸಿಕೊಡಬಹುದೇ ? ಎಂದು ನೋಡಬೇಕು...

ಇ-ಮೇಲ್ ಬಗ್ಗೆ

ಸ್ನೇಹಿತರೇ,

ನಾವು ಇ-ಮೇಲ್ (ಕನ್ನಡ ಪದ ಗೊತ್ತಿಲ್ಲಾ) ಕಳಿಸುವಾಗ 'Regards' ಪದದ ಬದಲಾಗಿ ಯಾವ ಕನ್ನಡ ಪದ ಬಳಸಬಹುದು? ಮತ್ತು ವಿಂಡೋಸ್ ಎಕ್ಸ್ ಪಿ ಯಲ್ಲಿ 'ರ' ಕ್ಕೆ 'ಯ' ಒತ್ತು ಬರಿಸಲು ಯಾವ ಯಾವ ಕೀಲಿ ಅಕ್ಷರಗಳನ್ನು ಬಳಸ ಬೇಕು?

-ಪಂಚಿ.....