ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೋಗದ ವಿಶ್ವರೂಪ ದರ್ಶನ

ಅಲ್ಲಿ ರಾಜಾ, ರಾಣಿ, ರೊಕೆಟ್, ರೊಲರ್ ಇಲ್ಲ. ಜಗದ್ವಿಖ್ಯಾತ ಜೋಗಕ್ಕೆ ಹೊಸ ರೂಪ ನೀಡಲು ಅವೆಲ್ಲ ಸಮ್ಮಿಳಿತಗೊಂಡಿವೆ. ಧುಮ್ಮಿಕ್ಕುವ ನೀರು, ಅದು ಬೆಣ್ಣೆಯೊ, ಹಿಟ್ಟೊ ಎಂಬ ಭ್ರಮೆ, ಅದೂ ಸ್ಲೊ ಮೊಶನ್ ನಲ್ಲಿ. ಸದ್ಯಕ್ಕೆ ಜೋಗ ಶಬ್ದಗಳಾಚೆಯ ಜಗತ್ತು, ಛಾಯಾಚಿತ್ರಗಳೂ ಸೆರೆಹಿಡಿಯಲಾರದ ದೈವಿಕ ಔನ್ನತ್ಯಕ್ಕೇರಿಬಿಟ್ಟಿದೆ ಅದರ ವೈಭವ.

ಚಾಣಕ್ಯ ನೀತಿ

ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣ ಎಂಬ ಪುಸ್ತಕದಿಂದ ನನಗೆ ಹಿಡಿಸಿದ ನಾಲ್ಕು ಸುಭಾಷಿತಗಳನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ.

 

ಈ ಚಾಣಕ್ಯ ಪಂಡಿತ ಅರ್ಥಶಾಸ್ತ್ರವನ್ನು ಬರೆದ ಕೌಟಿಲ್ಯನೇ (ಚಂದ್ರಗುಪ್ತನ ಗುರು, ಮಾರ್ಗದರ್ಶಿ), ಅಥವಾ ಬೇರೊಬ್ಬನೇ ಎಂಬುದು ನನಗೆ ತಿಳಿದಿಲ್ಲ.

ಮೂಲವನ್ನೂ ಇಲ್ಲೇ ಬರೆದಿದ್ದೇನೆ.

 

ಶೈಲೇ ಶೈಲೇ ಚ ಮಾಣಿಕ್ಯಂ ಮೌಕ್ತಿಕಂ* ನ ಗಜೇ ಗಜೇ
ಸಾಧವೋ ನಹಿ ಸರ್ವತ್ರ ಚಂದನಂ ನ ವನೇ ವನೇ

 

ಗಿರಿಬೆಟ್ಟಗಳಲೆಲ್ಲ ದೊರೆವುದೆ ಮಾಣಿಕ್ಯ?
ಎಲ್ಲ ಚಿಪ್ಪಿನಲು ಸಿಗುವುದೆ ಮುತ್ತುಗಳು ?
ಕಾಡುಕಾಡಲ್ಲೆಲ್ಲ ಇವೆಯೆ ಗಂಧದ ಮರವು?
ಒಳ್ಳೆಯ ಜನರೆಲ್ಲೆಲ್ಲೂ ಹೇಗೆ ದೊರೆತಾರು?

ಅಭಿಮಾನ್ಯ ಶೂನ್ಯ ಕನ್ನಡಿಗಾ....

ಅನಿಸಿದಂತೆ ನಡೆದಿದೆ
ಬಾಲಗ್ರಹ ಪೀಡಿತ ುದುಪಿ ಸಾಹಿತ್ಯ ಸಮ್ಮೇಳನ ಕೊನೆಗೂ ಮುಂದೂಡಲ್ಪಟ್ಟಿದೆ
ಇಲ್ಲಿ ಎಲ್ಲವೂ ರಾಜಕಾರಣಿಗಳಿಂದ ರಾಜಕಾರಣಿಗಳಿಗಾಗಿ, ರಾಜಕಾರಣಿಗಳೇ ನಡೆಸುವ ಆತಿ ದೊಡ್ಡ .....ಬೇಡ ಬಿಡಿ
ಛೇ shame on us

ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?

ನಾನು ಕೆಲವೊಮ್ಮೆ ಬೇರೆಯವರಿಂದ ಈ ತರದ ಸಲಹೆ ಪಡೆದು "ಮಠ" ಹತ್ತಿದ್ದೇನೆ. :)  "ನಾನು ಹೇಳಿದೆ ಸರಿ, ಅದನ್ನು ನೀನ್ಯಾಕೆ ಕೇಳಿದ?" ಅಂತ ಡೈಲಾಗ್ ಬೇರೆ ಹೋಡೆದ್ರು. ಯಾಕೆ ಅಂತ ಹಲ್ಲು ಕಿರಿದು ಸುಮ್ಮನಾದೆ !!!

ಶಿವನಿಗೆ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ಎರಡು

 ಶಿವನಿಗೆ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ಎರಡು
ವೆಂಕಟಮಖಿ ಗೋವಿಂದದೀಕ್ಷಿತನ ಮತ್ತು ನಾಗಮ್ಮ ಇವರ ಮಗ. ಇವನಿಗೆ ವೆಂಕಟಾಧ್ವರಿ, ವೆಂಕಟೇಶ್ವರ ದೀಕ್ಷಿತ ಎಂಬ ಹೆಸರೂ ಇತ್ತು.

ದೇವರು ನಕ್ಕುಬಿಟ್ಟ

ಇದು ಓಷೋ ಹೇಳಿದ ಕಥೆ.

ಆ ಊರಿನಲ್ಲಿ ಇದ್ದುದು ಅದೊಂದೇ ಗುಡಿ. ಬಲು ಸುಂದರವೂ ಭವ್ಯವೂ ದಿವ್ಯವೂ ಕಲಾಪೂರ್ಣವೂ ಆಗಿತ್ತದು. ಊರಿನ ಸಕಲ ಸಿರಿವಂತರೂ ದೇಣಿಗೆ ನೀಡಿ ಅದನ್ನು ನಿರ್ಮಿಸಿದ್ದರು. ಅದಕ್ಕೆ ಒಬ್ಬ ಪೂಜಾರಿಯನ್ನೂ ನೇಮಿಸಿದ್ದರು. ಆತ ಗುಡಿಯ ಬದಿಯಲ್ಲೇ ಮನೆ ಮಾಡಿಕೊಂಡು ನಿತ್ಯ ಪಾರಾಯಣ, ಪೂಜೆ, ಮಂಗಳಾಭಿಷೇಕ, ಗಂಟಾನಾದ, ಸುಗಂಧ ಧೂಪಗಳೊಂದಿಗೆ ಮಂದಿರವನ್ನು ಸೊಬಗಿನ ತಾಣವಾಗಿಸಿದ್ದ.
ಹೀಗಿರುವಲ್ಲಿ ಒಂದು ರಾತ್ರಿ ಬಡವನೊಬ್ಬ ಬಂದು ಪೂಜಾರಿಯ ಮನೆಯ ಬಾಗಿಲು ತಟ್ಟಿದ. ಹಗಲಿನ ಬೆಳಕಲ್ಲೇ ಆತ ಬರಬಹುದಿತ್ತು. ಆದರೆ ನಾನು ನಿಮಗೆ ಹೇಳಲು ಮರೆತಿದ್ದೆ. ಅದು ಸಿರಿವಂತರ ಗುಡಿಯಾಗಿತ್ತು. ಬಡವರಿಗೆ ಅಲ್ಲಿ ಪ್ರವೇಶ ನಿಷಿದ್ಧವಿತ್ತು. ನಮ್ಮ ದೇಶದ ಗುಡಿಗಳ ಜಾಯಮಾನವೇ ಹಾಗೆ. ಗುಡಿಗಳ ನಿರ್ಮಾಣಕ್ಕೆ ಹಣ ಒದಗಿಸುವವರು ಸಿರಿವಂತರು. ದುಡಿಮೆ ಬಡವರದು. ಭಕ್ತಿಭಾವದಿಂದ ತನ್ಮಯತೆಯಿಂದ ಬಡವರು ಗುಡಿಕಟ್ಟಿ ಅದರ ಅಂದ ಹೆಚ್ಚಿಸುತ್ತಾರೆ. ಗುಡಿ ಪೂರ್ಣಗೊಂಡ ನಂತರ ಸಿರಿವಂತರು ಅದರಲ್ಲಿ ತುಂಬಿ ಬಡವರಿಗೆ ಪ್ರವೇಶ ನಿರಾಕರಿಸುತ್ತಾರೆ.

ಮಂಕು ನೀಲಿ ಚುಕ್ಕೆ!

ನ್ಯೂಯೋರ್ಕಿನ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ ೧೩, ೧೯೯೪ ರಂದು ಖ್ಯಾತ ಖಗೋಳ ಶಾಸ್ತ್ರಜ್ಞರಾದ ಕಾರ್ಲ್ ಸಗನ್ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ಮೇಲಿನ ಚಿತ್ರವನ್ನು ತೋರಿಸಿದರು..

ಇದು ೧೯೯೦ರಲ್ಲಿ ಭೂಮಿಯಿಂದ ನಭದತ್ತ ಚಿಮ್ಮಿದ ಅಂತರಿಕ್ಷ ನೌಕೆ ವಾಯೇಜರ್ ೧ ಸುಮಾರು ೪ ಬಿಲಿಯನ್ ಮೈಲುಗಳ ದೂರದಿಂದ ತೆಗೆದದ್ದಾಗಿದೆ. ಅದರ ಮುಖ್ಯ ಉದ್ದೇಶ ಪೂರ್ಣಗೊಂಡ ನಂತರ, ಸೂರ್ಯ ಮಂಡಲದಿಂದ ಹೊರಕ್ಕೆ ತನ್ನ ಯಾನವನ್ನು ಬೆಳಸಿದ್ದ ಅದು ಸೂರ್ಯನ ಸಮತಲದಿಂದ ಸುಮಾರು ೩೨ ಡಿಗ್ರಿ ಮೇಲಿನ ಪಥದಲ್ಲಿದ್ದಾಗ, ಹಿಂದೆ ತಿರುಗಿ ಅದಕ್ಕೆ ಕಂಡ ಎಲ್ಲಾ ಗ್ರಹಗಳ ಚಿತ್ರವನ್ನು ತೆಗೆಯುವಂತೆ ಆದೇಶಿಸಲಾಯಿತು. ಆ ಅನಂತ ದೂರದಿಂದ ವಾಯೇಜರಿನ ಕ್ಯಾಮೆರಾ ಕಣ್ಣಿಗೆ ಭೂಮಿಯು ಒಂದು ಅತಿ ಚಿಕ್ಕ ಬೆಳಕಿನ ಚುಕ್ಕೆಯಾಗಿ, ಈ ಚಿತ್ರದ ಒಂದು ಪಿಕ್ಸೆಲ್ಲಿಗಿಂತ್ ಚಿಕ್ಕದಾಗಿ ಕಾಣಿಸಿತು. ಈ ಚಿತ್ರವನ್ನು ನೋಡಿ ದ ನಿಜಕ್ಕೂ ವಿಚಲಿತಗೊಂಡಿದ್ದ ಡಾ|| ಸಗನ್ ಅವರ ಭಾಷಣದಲ್ಲಿ ಹೀಗೆಂದರು :

" ಆಗಸದ ಅನಂತದಿಂದ ಕೆಳಬಗ್ಗಿ ತೆಗೆದ ಈಚಿತ್ರವನ್ನು ಗಮನಿಸಿ, ಅದರಲ್ಲಿ ನಿಮಗೆ ಒಂದು ಎದ್ದು ಕಾಣುವ ಸಣ್ಣ ನೀಲಿ ಚುಕ್ಕೆ ಕಾಣಿಸಬಹುದು (ಗುರುತು ಹಾಕಿದಲ್ಲಿ)! ಅದೇ ನಾವು , ಅಲ್ಲಿದೆ ನಮ್ಮ ಮನೆ. ನಮಗೆ ಗೊತ್ತಿರುವ ಎಲ್ಲರೂ, ಪ್ರತಿಯೊಂದು ಮನುಷ್ಯ ಜೀವಿಯೂ, ಇಲ್ಲಿಯೇ ಬದುಕಿದ್ದು, ಇಲ್ಲಿಯೇ ಮಣ್ಣಾದದ್ದು! ನಮ್ಮೆಲ್ಲಾ ಸುಖ ಸಂತೋಷ ಹಾಗು ನೋವುಂಡ ಕ್ಷಣಗಳು, ದೃಢವಾಗಿ ನಂಬಲ್ಪಟ್ಟ ಸಾವಿರಾರು ಧರ್ಮಗಳು, ವಿಚಾರ ಪರಂಪರೆಗಳು, ಆರ್ಥಿಕ ಸಿದ್ಧಾಂತಗಳು, ಹೊಟ್ಟೆ ಪಾಡಿಗಾಗಿ ಬದುಕಿದ ಪ್ರತಿಯೊಂದು ಜೀವಿ, ಪ್ರತಿಯೊಬ್ಬ ನಾಯಕ ಹಾಗು ಹೇಡಿ, ಬದುಕಿದ್ದ ಎಲ್ಲಾ ನಾಗರೀಕತೆಗಳ ಪ್ರತಿಯೊಬ್ಬ ನಿರ್ಮಾರ್ತೃ ಹಾಗು ಧ್ವಂಸಕ, ಪ್ರತೀ ಚಕ್ರಾಧಿಪತಿ ಹಾಗು ಬಂಡುಕೋರ, ಪ್ರೇಮಿಸಿದ ಪ್ರತಿಯೊಂದು ಜೋಡಿಗಳು, ಎಲ್ಲ ಭರವಸೆಯ ಮಕ್ಕಳು, ತಂದೆ ತಾಯಂದಿರು, ಪ್ರತಿಯೊಬ್ಬ ಅನ್ವೇಷಕ ಹಾಗು ಶೋಧಕ, ನೀತಿಯನ್ನು ಭೋಧಿಸಿದ ಪ್ರತಿಯೊಬ್ಬ ಗುರು, ಎಲ್ಲಾ ಭ್ರಷ್ಟ ರಾಜಕಾರಣಿ, ಪ್ರತಿಯೊಬ್ಬ ಸೂಪರ್ ಸ್ಟಾರ್, ಎಲ್ಲ ಧೀಮಂತ ನಾಯಕರು, ಮನುಷ್ಯ ಜಾತಿಯ ಇತಿಹಾಸದಲ್ಲಿ ಬಂದು ಹೋದ ಪ್ರತಿ ಸನ್ಯಾಸಿ ಹಾಗು ಪಾಪಿ, ಎಲ್ಲರೂ ಬದುಕಿದ್ದು, ಸತ್ತಿದ್ದು ಎಲ್ಲವೂ ಸೂರ್ಯ ಪ್ರಕಾಶದಲ್ಲಿ ತೇಲುತ್ತಿರುವ ಈ ಒಂದೇ ಒಂದು ಧೂಳಿನ ಕಣದಲ್ಲಿ!

ಮಳೆ

ಹೋದ ವರ್ಷ ನಾವು ಮನೆ ರಿಪೇರಿ ಮಾಡಿಸಿದೆವು. ರೂಫ್ ಕೂಡ ರಿಪೇರಿ ಮಾಡಿಸಿದೆವು. ರೂಫ್ ಮೇಲಿನ ಸುರ್‍ಕಿ ತೆಗೆದು ಹಾಕಿದ್ದರು ಮಳೆ ಹಿಡಿಯಿತು ನೋಡಿ ಅಬ್ಬ!