ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಳೆದ ವಾರದಲ್ಲಿ 'ಸಂಪದ'

ಕಳೆದ ವಾರ ಸಂಪದದಲ್ಲಿ ಹಲವಾರು ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿದೆವು. ಸದಸ್ಯರು ಕಳುಹಿಸಿದ ಸಲಹೆಗಳನ್ನು ಪರಿಶೀಲಿಸಿ ಸಾಧ್ಯವಾದಾಗಲೆಲ್ಲ ಉತ್ತಮಪಡಿಸುವತ್ತ ಗಮನಹರಿಸಿದ್ದೇವೆ. ಕೆಲವು ಬದಲಾವಣೆಗಳು ಎಲ್ಲರಿಗೂ ಹಿಡಿಸದಿರಬಹುದು. ಹಿಡಿಸದಿದ್ದರೆ [:http://sampada.net/contact|ತಪ್ಪದೆ ನಮಗೆ ತಿಳಿಸಿ, ನಿಮ್ಮ ಸಲಹೆ/ಅಭಿಪ್ರಾಯಗಳನ್ನೂ ಕಳುಹಿಸುತ್ತಿರಿ]. ಸಂಪದಕ್ಕಾಗಿ ಕೆಲಸ ಮಾಡುತ್ತಿರುವ ನಾವೆಲ್ಲರೂ ಬಿಡುವಿನ ಸಮಯದಲ್ಲಿ ಈ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಸಲಹೆಗಳನ್ನು ಕೂಡಲೆ ಕಾರ್ಯಗತಗೊಳಿಸಲಾಗದಿದ್ದರೂ ಸಮಯವಾದಂತೆ ಖಂಡಿತ ಕೈಗೆತ್ತಿಕೊಳ್ಳುವೆವು.

ಹಾಗೆಯೇ ನೀವು ಕಳುಹಿಸಿದ ಸಂದೇಶಕ್ಕೆ ಹಿಂದೆ ಉತ್ತರ ಬಂದಿಲ್ಲವೆಂದು ಬರೆಯದೆ ಇರಬೇಡಿ. ಇ-ಮೇಯ್ಲುಗಳ dozeಉ ಹೆಚ್ಚಾದಾಗ ಹಲವು ಮೇಯ್ಲುಗಳು ಓದಲ್ಪಟ್ಟರೂ ಉತ್ತರ ಪಡೆಯದೆ ಕಳೆದುಹೋಗುತ್ತವೆ. [:http://sampada.net/forum/5085|ಕಳೆದ ವಾರ ಬರೆದ ಚರ್ಚೆಯ ವಿಷಯಕ್ಕೆ] ಸ್ಪಂದಿಸಿ ಆಸಕ್ತಿಯಿಂದ ಪತ್ರ ಬರೆದ ಎಲ್ಲ ಓದುಗರಿಗೂ ವಂದನೆಗಳು.

[:http://sampada.net/contact|ಬರೆಯುತ್ತಿರಿ].

- ಹರಿ ಪ್ರಸಾದ್ ನಾಡಿಗ್

ಸದಸ್ಯರ ಗಮನಕ್ಕೆ: ಸಂಪದದ ಸಕ್ರಿಯ ಸದಸ್ಯರಿಗೆ ಈಗ [:http://email.sampada.net|ಗೂಗಲ್ ವತಿಯಿಂದ username @ sampada.net ಎಂಬಂತಿರುವ] ಇ-ಮೇಯ್ಲ್ ಐಡಿ ಲಭ್ಯ (ಗಮನಿಸಿ: ಲಾಗಿನ್ info ಬೇರೆ ಬೇರೆ). ನಿಮಗೊಂದು ಐಡಿ ಬೇಕಿದ್ದರೆ [:http://sampada.net/contact|ನಮಗೊಂದು ಮೇಯ್ಲ್ ಹಾಕಿ]. (ಜೀಮೇಯ್ಲ್ ಐಡಿಯಂತೆಯೇ ಇದೂ ಕೂಡ, ಹೆಸರು ಮಾತ್ರ @sampada.net ಎಂದಿರುತ್ತದೆ. ಮತ್ತೇನೂ ವಿಶೇಷವಿಲ್ಲ. ಸ್ಟ್ರಿಕ್ಟಾಗಿ ಸಕ್ರಿಯ ಸದಸ್ಯರಿಗೆ ಮಾತ್ರ.)

ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

ನಮ್ಮ ನಾಡ ಭಾಷೆಯ ಮೇಲೆ ಅಭಿಮಾನ ಖಂಡಿತ ನಮಗಿರಬೇಕು ಒಪ್ಪುತ್ತೇನೆ, ಆದರೆ ಕೆಲಮಟ್ಟಿಗೆ practical ಆಗಿಯೂ ಇರುವುದು ತುಂಬಾ practical ((ಕ್ಷಮಿಸಿ, practicalನ ಕನ್ನಡ ಪದವೇನು?).

ಉದಾಹರಣೆಗೆ ನಡೆದ ಕತೆಯೊಂದನ್ನು ಹೇಳುತ್ತೇನೆ.

ನಮ್ಮ ಮನೆಮಾತು ಕನ್ನಡವಲ್ಲ, ಹಿಂದಿಜಾತಿಯ ಒಂದು ಉಪಭಾಷೆ.

ಪ್ರಜಾಪ್ರಭುತ್ವದಲ್ಲಿ ನಕ್ಸಲರಿಗೆ ಸ್ಥಳವಿಲ್ಲ...

ಕರ್ನಾಟಕದಲ್ಲಿನ ನಕ್ಸಲೀಯರಿಂದ ಬಂದದ್ದು ಎನ್ನಲಾಗುವ ಇ-ಮೇಯ್ಲ್ ಅದು. ಅದನ್ನು ನಂಬಬಹುದಾದರೆ, ಎರಡು ವಾರಗಳ ಹಿಂದೆ ಮಲೆನಾಡಿನಲ್ಲಿ ಪೋಲಿಸರಿಂದ ಹತ್ಯೆಯಾದವರಲ್ಲಿ ಇಬ್ಬರು ಸಕ್ರಿಯ ನಕ್ಸಲೀಯರು. ಮಿಕ್ಕ ಮೂವರು ಅವರೇ ಹೇಳುವ ಪ್ರಕಾರ ನಕ್ಸಲೀಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ, ಅವರ ಬಗ್ಗೆ ಸಹಾನುಭೂತಿ ಹೊಂದಿದ್ದ ಅಲ್ಲಿನ ಆದಿವಾಸಿ ರೈತರು. ಆ ಐದು ಜನರ ಮರಣದ ನಂತರ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಂದ ನಕ್ಸಲೀಯ ಚಟುವಟಿಕೆಗಳ ಬಗ್ಗೆ ಸುದ್ದಿಗಳು ಬರುತ್ತಲೆ ಇವೆ. ಅಲ್ಲಿ ಮನೆ ದೋಚಿದರು, ಇಲ್ಲಿ ಧಮಕಿ ಹಾಕಿದರು, ಅಲ್ಲಿ ಎ.ಎಸ್.ಐ. ಗೆ ಗುಂಡು ಹೊಡೆದರು, ಇತ್ಯಾದಿ. ಈ ಮಧ್ಯೆ, ಇವುಗಳಲ್ಲಿ ಕೆಲವನ್ನು ದುಷ್ಕರ್ಮಿಗಳೆ ಮಾಡಿ ಅವನ್ನು ನಕ್ಸಲೀಯರ ಮೇಲೆ ಹಾಕುತ್ತಿದ್ದಾರೆ ಎನ್ನುವ ಆರೋಪ ಮತ್ತು ಸಂದೇಹಗಳು ಬೇರೆ.

ಆದರೆ, ಬೇರೆಯವರು ಮಾಡಿ ನಮ್ಮ ಮೇಲೆ ಹಾಕುತ್ತಿದ್ದಾರೆ ಎನ್ನುವುದು ನಕ್ಸಲೀಯರು ಮಾಡುತ್ತಿರುವ ಮತ್ತು ಈಗಾಗಲೆ ಮಾಡಿರುವ ಕಾನೂನುಬಾಹಿರ ಕೆಲಸಕ್ಕೆ ವಿನಾಯಿತಿ ಕೊಡುವುದಿಲ್ಲ. ನಕ್ಸಲೀಯರು ಭಾರತದ ಪ್ರಜೆಗಳು ಒಪ್ಪಿಕೊಂಡಿರುವ ಸಂವಿಧಾನಕ್ಕೆ ಬಾಹಿರವಾದ ಭೂಗತ ಚಟುವಟಿಕೆ ಮಾಡುತ್ತಿರುವುದಾಗಲಿ, ಮಲೆನಾಡಿನ ಕೆಲವು ಕಡೆ ಜನರನ್ನು ಹೆದರಿಸಿರುವುದಾಗಲಿ, ಈಗಾಗಲೆ ಹಲವು ಹೆಣಗಳನ್ನು ಉರುಳಿಸಿರುವುದಾಗಲಿ ಸುಳ್ಳಲ್ಲ. ಈಗಿರುವ ಮೂಲಭೂತ ಪ್ರಶ್ನೆ ಎಂದರೆ, ಲೈಸನ್ಸ್ ಇಲ್ಲದ ಬಂದೂಕು ಹಿಡಿದು ಪ್ರಜಾಪ್ರಭುತ್ವ ವಿರೋಧಿ ಕೃತ್ಯದಲ್ಲಿ ತೊಡಗಿರುವ ನಕ್ಸಲೀಯರಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿದೆಯೆ ಎನ್ನುವುದು.

ಮುದನೀಡುವ "ಮೀರಾ ಮಾಧವ ರಾಘವ"

ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್.ಸೀತಾರಾಂ ನಿರ್ದೇಶನದ ಹಿರಿತೆರೆಯ ಚಿತ್ರ ಮೀರಾ ಮಾಧವ ರಾಘವ ನೋಡಲು ಇಂದು ಪಿ.ವಿ.ಆರ್ ಗೆ 4.20 ರ ಆಟಕ್ಕೆ ಹೋಗಿದ್ದೆ. ಚಿತ್ರಮಂದಿರ ಭಾಗಶಃ ತುಂಬಿತ್ತು. ಕಿರುತೆರೆಯ ಕೆಲವು ಕಲಾವಿದರೂ ಸಹ ಸಿನಿಮಾ ನೋಡಲು ಬಂದಿದ್ದರು.

ದೇವರು ಮತ್ತು ನಾವು

”ದೇವರು ಎಲ್ಲಿದ್ದಾನೆ ಬಿಡಿ! ಅವನು ಇದ್ದಿದ್ದರೆ ಇಷ್ಟೆಲ್ಲ ಅನ್ಯಾಯ-ಅನಾಚಾರ ಆಗುತ್ತಿರಲಿಲ್ಲ. ಅವನು ಕಣ್ಮುಚ್ಚಿ ಕುಳಿತಿದ್ದಾನೆ. ಕಲ್ಲಾಗಿದ್ದಾನೆ” ಹೀಗೆ ಹೇಳುವವರಿದ್ದೇವೆ.  ಅತೀವ ಕಷ್ಟ ಕಾರ್ಪಣ್ಯಗಳಿಂದ,ಮಾನಸಿಕ ತಳಮಳ,ಹಿಂಸೆ-ಕಿರುಕುಳದಿಂದ ಬೇಸತ್ತಾಗ ನಿಜವಾಗಲೂ ದೇವರು ಎಲ್ಲಿದ್ದಾನೆ? ದೇವರು ಎಂದರೇನು ಚಿಂತಾಕ್ರಾಂತರಾಗುತ್ತೇವೆ...
 

ಮಾತಾಡು ಮಾತಾಡು ಮಲ್ಲಿಗೆ!

ಝಣ ಝಣ ಝಣ ಝಣ ಕಾಂಚಾಣದಲ್ಲಿ
ಅಮೇರಿಕದ ಲಾಂಛನದಲ್ಲಿ
.............................
.............................
ಎಲ್ಲಾ ಮಾಯ, ಇನ್ನು ನೀವೂ ಮಾಯ!
ನಾವೂ ಮಾಯ, ಇನ್ನು ನೀವೂ ಮಾಯ!

'ಮಾತಾಡು ಮಾತಾಡು  ಮಲ್ಲಿಗೆ' ಚಿತ್ರದ ಈ ಹಾಡು ಇಂದಿನ ರಾಜಕೀಯಕ್ಕೆ ಸನ್ನಿವೇಶಕ್ಕೆ ತಕ್ಕುದಾಗಿದೆ. ಈ ಚಿತ್ರದಿಂದ ಇನ್ನಷ್ಟು ನಿರೀಕ್ಷಿಸೋಣ.

ಯಾರು ಹಿತವರು ನಮಗೆ - ಕೃತಿಯೋ , ಕರ್ತೃವೋ?

ಒ೦ದು ಸಾಹಿತ್ಯ ಕೃತಿಯನ್ನು ಕೊಳ್ಳುವ ಮೊದಲು ಯೋಚನೆಗೆ ಬರುವುದು - ಯಾವ ಪುಸ್ತಕವನ್ನು ಕೊಳ್ಳಲಿ ? ಕಾವ್ಯವಾದರೆ, ಯಾವ ಕವಿಯದ್ದು ? ಕಾದ೦ಬರಿಯಾದರೆ, ಯಾರದ್ದು ಚೆನ್ನ ? ಯಾವ ಕತೆಗಾರನ ಕತೆಗಳು ಸೊಗಸು ? ... ಹೀಗೇ ಅಲ್ಲವೇ ಲಕ್ಷಾ೦ತರ ಕೃತಿಗಳಲ್ಲಿ ನಾವು ಒ೦ದೆರಡನ್ನು ಆರಿಸಿಕೊಳ್ಳುವ ವಿಧಾನ ? ಇದು ಸತ್ಯ ಮತ್ತು ಸಹಜ ಎ೦ದೆನಿಸುತ್ತದೆ.

ಸ್ನೇಹಿತನ ಶಿಫಾರಸ್ಸಿನ ಮೇರೆಗೋ, ಪ್ರಸಿದ್ಧ ಸಾಹಿತಿಯದೆ೦ದೋ ಅಥವಾ ಭಾರೀ ಚರ್ಚೆಗೆ ಗ್ರಾಸವಾಗಿದ್ದೆ೦ದೋ, ಒ೦ದು ಪುಸ್ತಕವನ್ನು ಕೊ೦ಡು ಓದಲು ಪ್ರಾರ೦ಭಿಸುತ್ತೇವೆ. ಕ್ರಮೇಣ ಒ೦ದು ಇಷ್ಟವಾಗಿ, ಇನ್ನೊ೦ದು ಆಗದೇ, ನಮ್ಮ ರುಚಿ ನಮಗೇ ಗೊತ್ತಾಗಿ, ಯಾರ ಪಾಕ ಹೇಗಿರುತ್ತದೆ೦ಬ ಕಲ್ಪನೆ ಬರತೊಡಗಿ, ಓದಿ ಓದಿ ಕೊನೆಗೆ ತಮ್ಮ ತಮ್ಮ ಅಭಿರುಚಿಗೆ ಎ೦ತಹ ಪುಸ್ತಕವನ್ನು ಕೊಳ್ಳಬೇಕು ಎ೦ಬುದನ್ನೂ ತರ್ಕಬದ್ಧವಾಗಿ ನಿರ್ಧರಿಸುವುದರ ಮಟ್ಟಿಗೆ ನಮ್ಮ ಓದು ಬೆಳೆದುಬಿಡುತ್ತದೆ.

ಇಷ್ಟು ಸಲೀಸಾಗಿ ಒಬ್ಬ ಓದುಗ ತನ್ನ ಸಾಹಿತ್ಯ ರುಚಿಯನ್ನು ಕ೦ಡುಹಿದಿದುಕೊ೦ಡುಬಿಟ್ಟಿದ್ದರೆ ಅಥವಾ ಕೃತಿ ಆಯ್ಕೆಯಲ್ಲಿ ಮನಸ್ಸು ಅಷ್ಟು ಸ್ವತ೦ತ್ರ್ಯವಾಗಿದ್ದಿದ್ದರೆ ನಾವು ಭಯಪಡಬೇಕಿರಲಿಲ್ಲ. ಬದಲಾಗಿ ಇ೦ದು ಕರ್ತೃ ಆಧಾರಿತ, ಅದರಲ್ಲೂ ಕರ್ತೃವಿನ ರಾಜಕೀಯ, ವೈಚಾರಿಕ ಮತ್ತು ವೈಯುಕ್ತಿಕ ನಿಲುವುಗಳ ನೆಲೆಗಟ್ಟಿನಮೇಲೇ ಅವರ ಕೃತಿಗಳನ್ನು ಅಳೆದು, ಓದುಗರ ವರ್ಗೀಕರಣವಾಗುತ್ತಿರುವುದು ಸ್ವತ: ಓದುಗರಿಗೆ ಮತ್ತು ಸಾಹಿತ್ಯಲೋಕಕ್ಕೆ ಆಗುತ್ತಿರುವ ಅತಿದೊಡ್ಡ ನಷ್ಟ.