ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆ ಲೇಸರ್ ಪ್ರಿಂಟರಿನಿಂದ ಇನ್ನು ದೂರ ಓಡೋದಷ್ಟೇ...

ಆಫೀಸುಗಳಲ್ಲಿ ಸಾಮಾನ್ಯವಾಗಿ ಬಳಸುವ ಲೇಸರ್ ಪ್ರಿಂಟರುಗಳು ಸಿಗರೇಟಿನ ಹೊಗೆಯಲ್ಲಿರುವ ಕಣಗಳಷ್ಟೇ ತೊಂದರೆ ಕೊಡಬಲ್ಲದೆಂದು [:http://news.bbc.co.uk/2/hi/asia-pacific/6923915.stm|ಬಿ ಬಿ ಸಿ ವರದಿ ಮಾಡಿದೆ].

The humble office laser printer can damage lungs in much the same way as smoke particles from cigarettes, a team of Australian scientists has found.

ಪಡುವಣ ಪಂಡಿತರನ್ನು ಏಕೆ ನಂಬಬಾರದು?

ಹಲವಾರು ಸಾರಿ ಸಂಪದದಲ್ಲಿ, ಮಂದಿ ಪಡುವಣ ಪಂಡಿತರ ಕೆಲಸವನ್ನ ಮತ್ತು ಅವರು ಬರೆದಿರುವ ಹೊತ್ತಗೆಗಳನ್ನ ನಂಬಲಾಗುವುದಿಲ್ಲ ಅನ್ನುತ್ತಾರೆ.
ಪುರಾವೆ ಮತ್ತು ಲಾಜಿಕ್ ಇದ್ದು ಯಾರಾದರೂ ಹೇಳಲಿ, ಈ ಮೂಡಣ, ಪಡುವಣ ಎಂಬ ಮೇಲು-ಕೀಳು ಮಾಡುವುದೇಕೆ.

ನನ್ನ ಎಂಜಿನಿಯರಿಂಗ್ನಲ್ಲಿ ನಾನು ಓದಿದ ಹೊತ್ತಗೆಗಳೆಲ್ಲವೂ ಪಡುವಣ ಪಂಡಿತರದೇ

ಕಾಣದ ಕನ್ನಡ ನಾಮ ಫಲಕಗಳು!

ನಿಮ್ಮ ಸಂಸ್ಥೆಯಲ್ಲಿ ಏನಾದರು ಕನ್ನಡ ನಾಮ ಫಲಕ ಹಾಕಿಲ್ಲ ಅಂದರೆ ಏನು ಮಾಡಬೇಕು?

----------------------------------------------------------------------------------------------------------------------------------------------------
೧: ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಿ -
----------------------------------------------------------------------------------------------------------------------------------------------------

Dr.S.Subramanya
Commissioner Bruhat Bangalore Mahanagara Palike
Public Relation Office, N.R. Square, Bagalore-560 002
Phone: 080-2222 1188 , 9900507467, 9945090448, 9845449875, 9448145670

ದಳಕ್ಕೆ ದಿಂಬು, ಕಮಲಕ್ಕೆ ಚೊಂಬು ?

ದಳಕ್ಕೆ ದಿಂಬು, ಕಮಲಕ್ಕೆ ಚೊಂಬು ?

ಸದ್ಯದ ರಾಜಕಿಯ ವ್ಯವಸ್ಥೆಯಲ್ಲಿ, ಕಮಲಕ್ಕೆ ಕುರ್ಚಿ ಸಿಗುತ್ತೊ, ಇಲ್ಲವೊ ಎಂಬ ಭಯವು ಹುಟ್ಟಿದೆ ಎಂದು ಕಾಣಿಸುತ್ತೆ !! ಅದಕ್ಕೆ ಸಾಕಷ್ಟು ಪತ್ರಿಕಾಗೋಷ್ಟಿಯಲ್ಲಿ ತುಂಬ ಹೇಳಿಕೆಗಳು ಕೊಡುತ್ತಿದ್ದಾರೆ ಉ.ಮು.ಮಂ

ಸದ್ಯಕ್ಕೆ ಹಾಸಿಗೆ ದಿಂಬು ಸಹಿತ ಸೆಟ್ಟಲ್ ಆಗಿರುವ ದಳ, ಕಮಲಕ್ಕೆ ಜಾಗ ಕೊಡುತ್ತಾ ?? ಕಾದು ನೋಡಬೇಕು ...

ನಮ್ಮ ಮನೆಯ ನಾಟಕ

ಸ೦ಕ್ರಮಣ:
ಈ ನಾಟಕ ನೋಡುವ ಪ್ಲಾನ್ ಇರಲಿಲ್ಲಾ. ಆದರೆ ಕೆಲವು ನಾಟಕಗಳೂ ನಾವು ನೋಡಲೇ ಬೇಕಾಗುತ್ತೆ.
ಅ೦ತಹ ಅನಿವಾರ್ಯ ಕಾರಣದಿ೦ದ ನಾನು ಈ ನಾಟಕ ನೋಡಿದ್ದು.
ನಾಟಕದಲ್ಲಿ ಬರುವುದು ಮೂರು ಪಾತ್ರಗಳು. ಒ೦ದು ತ೦ದೆಯ ಪಾತ್ರ, ಮತ್ತೊ೦ದು ತಾಯಿಯ
ಪಾತ್ರ, ಎಲ್ಲಾದಕ್ಕಿನ್ನಾ ಎಲ್ಲಾ ಸ೦ಭಾಷಣೆಯಲ್ಲೂ ಮೂಡಿ ಬರುವುದು ಮಗನ ಪಾತ್ರ.

ಚಾಚಿಕೊಂಡಿರುವ ನಾಲಿಗೆ ಆಚಾರವಿಲ್ಲದ್ದು ಎಂದೇನಿಲ್ಲ!

ಏಕಾಗ್ರತೆ ಸಾಧಿಸಲು ಕೆಲವರು ಕಣ್ಣು ಮುಚ್ಚಿಕೊಳ್ಳುತ್ತಾರೆ. ಕೆಲವರು ಸಿಗರೇಟ್ ತುದಿಗೆ ಬೆಂಕಿ ಹಚ್ಚಿ, ಬಿಳಿ ಮೋಡಗಳ ಸೃಷ್ಟಿಸುತ್ತಾರೆ. ಇನ್ನೂ ಕೆಲವರು ನಾಲಿಗೆ ಹೊರಚೆಲ್ಲಿ, ಎಡಕ್ಕೆ ಬಲಕ್ಕೆ ನಾಲಿಗೆಯನ್ನು ವಾಕಿಂಗ್ ಮಾಡಿಸುತ್ತಾರೆ! ನಾಲಿಗೆ ಹೊರಚಾಚುವುದರಿಂದ ಯಾರಿಗೇನು ನಷ್ಟವಿಲ್ಲ. ಅವರ ನಾಲಿಗೆ, ಅವರಿಷ್ಟ ಬಿಡಿ! ಇಷ್ಟಕ್ಕೂ ನಾಲಿಗೆ ಹೊರಚಾಚಲು ಏನು ಕಾರಣ?

ಮಂಜುಗಡ್ಡೆ ಬಳಸಿ ಕಟ್ಟಡ ತಂಪುಗೊಳಿಸುವ ವ್ಯವಸ್ಥೆ! (ಇ-ಲೋಕ-33) (31/7/2007)

 ಬೇಸಗೆಯಲ್ಲಿ ವಿದ್ಯುತ್ ಬಳಕೆ ಮಿತಿಮೀರಿ ಹೋಗುವುದು ಎಲ್ಲರ ಅನುಭವ.ಕಟ್ಟಡಗಳನ್ನು ತಂಪುಗೊಳಿಸುವ ವ್ಯವಸ್ಥೆಗಳು ವಿದ್ಯುತ್ ಬೇಡಿಕೆಯ ಮೇಲೆ ಹೆಚ್ಚು ಒತ್ತಡ ಹೇರುತ್ತವೆ. ಅಮೆರಿಕಾದಲ್ಲು ಪರಿಸ್ಥಿತಿ ಭಿನ್ನವಲ್ಲವಂತೆ. ಅಲ್ಲಿಯೂ ಕಚೇರಿ ಸಮಯದಲ್ಲಿ ವಿದ್ಯುತ್ ಬೇಡಿಕೆ ಮಿತಿಮೀರಿ ಹೋಗುತ್ತದೆ.

ಒಂದು ಅರ್ಜಿ

ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಮುಂದೆ ತೆರೆದುಕೊಳ್ಳುತ್ತಿರುವ ಹಾದಿ. ಹಿಂದೆ ಮುಚ್ಚಿಕೊಳ್ಳುತ್ತಿರುವ ಹೆಜ್ಜೆ ಗುರುತು. ರಸ್ತೆ ಪಕ್ಕದ ಮರದ ಹಳದಿ ಎಲೆಗಳು. ದೂರದ ಬೆಟ್ಟದ ಮೈಯೆಲ್ಲಾ ತುಂಬಿಕೊಂಡಿರುವ ಕುರಚಲು ಗಿಡಗಳು. ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಒಪ್ಪಲೇ ಬೇಕೆಂದು ಒತ್ತಾಯ ಮಾಡಲಾರೆ. ಆದರೂ, ಪ್ರತೀಕವಾದರೆ ಎಲ್ಲಕ್ಕೂ ಹೆಚ್ಚು ಅರ್ಥಬರುತ್ತದೆ ಎಂದು ನನ್ನ ಮನಸ್ಸಿನಾಳದ ಆಸೆ.
ಪಕ್ಕದಲ್ಲೇ ಡೊಂಕು ಬಾಲ ಆಡಿಸುತ್ತಿದ್ದ ನಾಯಿ ನನ್ನ ಆಸೆ ಗೊತ್ತಾಗಿ ಹಂಗಿಸುವಂತೆ ಅಂಡು ತಿರುಗಿಸಿ ಹೊರಟು ಹೋಯಿತು. ಅದು ಎಚ್ಚರಿಕೆಯಿಂದ ತುಳಿಯದೇ ಇಟ್ಟ ಕಾಲ ನಡುವೆ ಹೊರಟ ಇರುವೆ ಸಾಲು. ಅದರ ಅಡಿಯ ಗಾರೆಯ ಮೇಲೆ ಇನ್ನೂ ಹಸಿಯಿದ್ದಾಗ ತುಂಟಾಟದಲ್ಲಿ ಮಾಡಿದ ಯಾರದೋ ಅಂಗೈ ಗುರುತು. ಎಲ್ಲಕ್ಕೂ ನನ್ನ ಆಸೆ ಗೊತ್ತಾಗಿ ಪಕಪಕ ನಗುತ್ತಿರುವುದು ನನಗೆ ಖಾತ್ರಿಯಾಯಿತು.
ಸರಿ, ಹಾಳಾಗಿ ಹೋಗಲಿ ಅಂದು ಕೊಂಡು ನನ್ನ ಕೈಯಲ್ಲಿ ವಕ್ರವಾಗಿ ಬೆಳೆದಿದ್ದ ಉಗುರನ್ನು ನೋಡಿಕೊಂಡೆ. ಅದರ ನೆರಳು ಇದ್ದಕ್ಕಿದ್ದ ಹಾಗೆ ನೆಲದ ಮೇಲೆ ಬಿದ್ದ ಕಡೆ ಹಳ್ಳವಾಯಿತು ಎಂಬ ಅನುಮಾನ ಬಂತು. ಬಗ್ಗಿ ನೋಡಿದೆ. ನೆರಳು ಬಿದ್ದದ್ದು ಎಲ್ಲಿ ಎಂದು ಗೊಂದಲವಾಗಿ ಸಣ್ಣಗೆ ಸಿಟ್ಟೂ ಬಂತು. ಯಾಕೆ ಯಾವುದರ ಮೇಲೆ ಅನ್ನುವುದಕ್ಕಿಂತ, ಎಷ್ಟು ಹೊತ್ತು ಎಷ್ಟು ಜೋರಾಗಿ ಎಂದು ಕೇಳುವುದು ಸೂಕ್ತ ಎಂದು ಹಲ್ಲು ಕಡಿದೆ.
ಹೆಚ್ಚು ಅರ್ಥ ಬರುವುದಿರಲಿ ಈ ಪ್ರತೀಕದ ಗಲಾಟೆಯಲ್ಲಿ ಇರುವ ಅರ್ಥವೂ ಕಳೆದುಕೊಳ್ಳುವ ಅಪಾಯ ನಿಜವಾಗ ತೊಡಗಿತು. ಕಣ್ಣು ಮುಚ್ಚಿದಾಗ ಆಗುವ ಅನುಭವ ಕತ್ತಲೆಯೇ? ಇದಕ್ಕೆ ಉತ್ತರ ಕಂಡು ಕೊಂಡರೆ ಸಾಕು, ಪ್ರತೀಕಗಳ ಗೋಜಿಗೇ ಹೋಗಬಾರದು. ಬೇಕಾದರೆ ಅವೇ ಬರಲಿ ಎಂದು ಮೊಂಡು ಹಿಡಿದು ಕೂತೆ.