ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೆರಳು

ನೆರಳು

ಬಿಡದೆ, ಬೆಂಬಿಡದೆ ಅನುಸರಿಸುತಿದೆ ನನ್ನೊಳಗಿನ ನಾನು
ಕಷ್ಟ ಕಾಲಕ್ಕಾಗುವ ಗೆಳೆಯನಂತೆ, ಗುಟ್ಟುಗಳ ಬೆನ್ನಟ್ಟವನಂತೆ

ಒಮ್ಮೊಮ್ಮೆ ಅನಿಸುವದು, ನೆರಳಲ್ಲವಿದು, ನನ್ನೊಳಗಿನ ನನ್ನಾತ್ಮ
ಇನ್ನೊಮ್ಮೆ, ನನ್ನ ಏಕಾಂತದಿ ಬೆಂಗಾವಲಾಗಿ ಬೆನ್ನಟ್ಟುವ ಪ್ರೇತಾತ್ಮ

ಸುತ್ತುವುದೊಮ್ಮೆ, ಕಾಣಿಸದೆ ಕಾಯಿಸುವದೊಮ್ಮೆ ಕತ್ತಲು ಬೆಳಕಿನ ಆಟದಿ

ಗುಳೇದಗುಡ್ಡದಲ್ಲೊಂದು ಜ(ನ)ಲಧಾರೆ

ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಗುಳೇದಗುಡ್ಡ. ಇಲ್ಲೊಂದು ಜಲಧಾರೆಯಿರುವುದು ಸುಮಾರು ೩ ವರ್ಷಗಳ ಹಿಂದೆ ಮಲ್ಲಿಕಾರ್ಜುನ ಯೋ. ರಾಜನಾಳ ಎಂಬವರು ಕನ್ನಡಪ್ರಭದಲ್ಲಿ ಬರೆದಿದ್ದ ಲೇಖನದಿಂದ ನನಗೆ ತಿಳಿದುಬಂದಿತ್ತು. ಆದರೆ ಇದು ಮಳೆ ಬಿದ್ದಾಗ ಮಾತ್ರ ಇರುವ ಜಲಧಾರೆಯೆಂದೂ ಮಲ್ಲಿಕಾರ್ಜುನ ಬರೆದಿದ್ದರು. ಉಡುಪಿಯಲ್ಲಿ ಕುಳಿತು ದೂರದ ಗುಳೇದಗುಡ್ಡದಲ್ಲಿ ಮಳೆ ಯಾವಾಗ ಬೀಳುವುದು ಎಂದು ತಿಳಿದುಕೊಳ್ಳುವುದು ಕಷ್ಟಕರವಾದರೂ ಮಳೆಗಾಲದ ಆರಂಭದಲ್ಲಿ ಸ್ವಲ್ಪ ಗಮನ ಆ ಕಡೆ ಇರುತ್ತಿತ್ತು.

ವಿಜಯ ಕರ್ನಾಟಕದಲ್ಲಿ ಜೂನ್ ೩೦ ೨೦೦೭ರಂದು ಈ ಜಲಧಾರೆಯ ಬಗ್ಗೆ ಲೇಖನ ಪ್ರಕಟವಾಗಿತ್ತು. ಅಂದೇ ಸಂಜೆ ೭.೩೦ಕ್ಕೆ ಮಂಗಳೂರಿನಿಂದ ಕೂಡಲಸಂಗಮಕ್ಕೆ ಹೊರಟಿದ್ದ ಬಸ್ಸಿನಲ್ಲಿ ಬದಾಮಿಗೆ ಟಿಕೇಟು ಪಡೆದು ಉಡುಪಿಯಿಂದ ಹೊರಟೆ.

ಆದಿತ್ಯವಾರ ಮುಂಜಾನೆ ಹುಬ್ಬಳ್ಳಿ ಹಳೇ ಬಸ್ಸು ನಿಲ್ದಾಣದಲ್ಲಿ ೩೦ ನಿಮಿಷ ಸರಕಾರಿ ಬಸ್ಸಿಗಾಗಿ ಕಾದರೂ ಯಾವುದೇ ಬಸ್ಸು ಬಂದಿರಲಿಲ್ಲ. ಕಡೆಗೆ ಬಾಗಲಕೋಟೆಗೆ ಹೊರಟಿದ್ದ ಖಾಸಗಿ ಬಸ್ಸು 'ಚನ್ನಮ್ಮಾ'ದಲ್ಲಿ 'ಕುಳಗೇರಿ ಕ್ರಾಸ್'ಗೆ ಟಿಕೇಟು ಪಡೆದು ಕುಳಿತೆ. ೯ಕ್ಕೆ ಹುಬ್ಬಳ್ಳಿ ಬಿಟ್ಟ ಚನ್ನಮ್ಮಾ ನವಲಗುಂದ, ನರಗುಂದ ಮಾರ್ಗವಾಗಿ ೧೧ಕ್ಕೆ ಕುಳಗೇರಿ ಕ್ರಾಸ್ ತಲುಪಿತು. ಕೇವಲ ೫ ನಿಮಿಷದ ಮೊದಲು ನೇರವಾಗಿ ಗುಳೇದಗುಡ್ಡಕ್ಕೆ ತೆರಳುವ ಇಳಕಲ್ ಬಸ್ಸು ನಾನಿದ್ದ ಬಸ್ಸನ್ನು ಹಿಂದೆ ಹಾಕಿ ಮುಂದಕ್ಕೆ ದೌಡಾಯಿಸಿತ್ತು. ಕುಳಗೇರಿ ಕ್ರಾಸ್ ನಲ್ಲಿ ನಾನು ಇಳಿದಾಗ ಬದಾಮಿ ದಾರಿಯಲ್ಲಿ ದೂರದಲ್ಲಿ ಈ ಇಳಕಲ್ ಬಸ್ಸು ಕಣ್ಮರೆಯಾಗುತ್ತಿತ್ತು. ಈ ಬಸ್ಸು ಸಿಕ್ಕಿದ್ರೆ ನನಗೆ ಬಹಳ ಸಮಯ ಉಳಿಯುತ್ತಿತ್ತು.

ಗುಳೇದಗುಡ್ಡದಲ್ಲೊಂದು ಜ(ನ)ಲಧಾರೆ

ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಗುಳೇದಗುಡ್ಡ. ಇಲ್ಲೊಂದು ಜಲಧಾರೆಯಿರುವುದು ಸುಮಾರು ೩ ವರ್ಷಗಳ ಹಿಂದೆ ಮಲ್ಲಿಕಾರ್ಜುನ ಯೋ. ರಾಜನಾಳ ಎಂಬವರು ಕನ್ನಡಪ್ರಭದಲ್ಲಿ ಬರೆದಿದ್ದ ಲೇಖನದಿಂದ ನನಗೆ ತಿಳಿದುಬಂದಿತ್ತು. ಆದರೆ ಇದು ಮಳೆ ಬಿದ್ದಾಗ ಮಾತ್ರ ಇರುವ ಜಲಧಾರೆಯೆಂದೂ ಮಲ್ಲಿಕಾರ್ಜುನ ಬರೆದಿದ್ದರು.

ಮುಂಗಾರುಮಳೆ ಮತ್ತು ದ್ವೀಪ

ಕಳೆದೆರೆಡು ವಾರ ಕನ್ನಡದ ಬ್ಲಾಗುಗಳೆನ್ನೆಲ್ಲ ನನ್ನ ಗೂಗಲ್ ರೀಡರ್ ನಲ್ಲಿ ಚಂದಾ ಮಾಡಿ, ಮತ್ತೆ ನನ್ನ ಬ್ಲಾಗಿನಲ್ಲಿ ಲಿಂಕ್ (ಕನ್ನಡ ಬ್ಲಾಗುಲೋಕ) ಕೊಟ್ಟುಕೊಂಡು ಸುಸ್ತಾಗಿ ಏನನ್ನೂ ಬರೆದಿರಲಿಲ್ಲ. ಆದರೆ ಈ ವಿಷಯದ ಬಗ್ಗೆ ತುಂಬ ದಿನಗಳಿಂದ ಬರೆಯಬೇಕು ಎಂದುಕೊಂಡಿದ್ದೆ.

ಹಿತನುಡಿ

ಮನುಷ್ಯನೆನ್ನಿಸಿಕೊಳ್ಳುವ ಮುನ್ನ ಒಬ್ಬಾತ ಎಷ್ಟು ಹಾದಿಗಳ ಸವೆಯಬೇಕು? ತೀರದ ಮರಳಲ್ಲಿ ಮಲಗುವ ಮುನ್ನ ಬಿಳಿ ಪಾರಿವಾಳವು ಎಷ್ಟು ಸಮುದ್ರಗಳ ದಾಟಬೇಕು? ಎಂದೆಂದಿಗೂ ನಿಷೇಧಿಸಲ್ಪಡುವ ಮುನ್ನ ಎಷ್ಟು ಬಾರಿ ಫಿರಂಗಿ ಚೆಂಡುಗಳು ಹಾರಬೇಕು? ಉತ್ತರವು ಗೆಳೆಯ, ಗಾಳಿಯಲ್ಲಿ ತೂರಿ ಹೋಗುತಿದೆ. ಉತ್ತರವು ಗಾಳಿಯಲ್ಲಿ ತೂರಿ ಹೋಗುತಿದೆ...

ಇದು ಬಂಜಗೆರೆಯಲ್ಲ ತುಂಬಿದ ಕೆರೆ

ಬಂಜಗೆರೆ ಜಯಪ್ರಕಾಶ ಅವರು ಬರೆದಿರುವ “ಆನುದೇವಾ ಹೊರಗಣವನು” ಎಂಬ ಸಂಶೋಧನಾ ಪ್ರಬಂಧದ ಕುರಿತಂತೆ ದೊಡ್ಡ ವಿವಾದ ನಡೆದಿದೆ. ಈ ಪುಸ್ತಕದಲ್ಲಿ ಅವರು ಬಸವಣ್ಣನವರು ವಿಚಾರಕ್ರಾಂತಿಗೆ ನಾಂದಿಯಾಗಿ ಬ್ರಾಹ್ಮಣತ್ವವನ್ನು ತೊರೆದರೆಂಬ ಸಿದ್ಧ ನಿಲುವಿಗೆ ವ್ಯತಿರಿಕ್ತವಾದ ವಾದವನ್ನು ಮುಂದಿಡುತ್ತಾ ತಮ್ಮ ವಾದಕ್ಕೆ ಪೂರಕವಾದ ಪುರಾವೆಯನ್ನು ಎಳೆಎಳೆಯಾಗಿ ಬಿಡಿಸಿಡುತ್ತಾ ಹೋಗುತ್ತಾರೆ.

ಹಾಗೆ ನೋಡಿದರೆ ಬಸವಣ್ಣನವರ ಬಗ್ಗೆ ಬರೆದ ಪರಿಚಯ ಸಾಹಿತ್ಯವೆಲ್ಲವೂ ಅವರ ಸಮಕಾಲೀನರು ಬರದಿದ್ದಲ್ಲ. ಬಸವನ ನಂತರ ಅಂದರೆ ನೂರು ನೂರೈವತ್ತು ವರ್ಷಗಳ ನಂತರ ಲಭ್ಯ ವಚನಗಳ ಆಧಾರದಲ್ಲಿ ಬರೆಯಲಾದ ಕಾವ್ಯ ಪುರಾಣಗಳ ಮೂಲಕ ಪ್ರಚುರಗೊಂಡಿದೆ. ಈ ಕಾವ್ಯ ಪುರಾಣಗಳಲ್ಲಿ ಸಿಗುವುದು ಅಲಂಕೃತ ಸತ್ಯಗಳು ಮಾತ್ರ. ಅಧಿಕೃತವೆನಿಸಬಲ್ಲಂತಹ ಶಾಸನ, ದಸ್ತಾವೇಜು, ತಾಳೆಯೋಲೆ. ಹಸ್ತಪ್ರತಿ, ವಂಶವೃಕ್ಷಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಈ ಕಪೋಲಕಲ್ಪಿತ ಪುರಾಣಗಳನ್ನು ಒರೆಗೆ ಹಚ್ಚಿ ನೋಡಬೇಕಿದೆ.

ಬಸವಣ್ಣನವರು ಬಿಜ್ಜಳನ ಸರ್ಕಾರದಲ್ಲಿ ಭಂಡಾರಿಯಾಗಿದ್ದರು ಎಂಬುದು ಪ್ರಚಲಿತ ಸತ್ಯ. ಆದರೆ ಬಸವನ ಕಾಲಾನಂತರ ಅಂದರೆ ಕೇವಲ ಅರ್ಧ ಶತಮಾನದ ನಂತರ ಬರೆಯಲಾದ ಶಾಸನಗಳಲ್ಲಿ ಬಸವನಿಗೆ ದಂಣಾಯಕ ಎಂಬ ಬಿರುದನ್ನೇ ಹೆಚ್ಚು ಬಳಸಲಾಗಿದೆ ಎಂದು ಗಮನಿಸಿದಾಗ ೧೩ನೇ ಶತಮಾನದ ಬಸವದೇವರಾಜರಗಳೆ, ೧೪ನೇ ಶತಮಾನದ ಬಸವಪುರಾಣ, ೧೫ನೇ ಶತಮಾನದ ಶಿವತತ್ವಚಿಂತಾಮಣಿ, ೧೬ನೇ ಶತಮಾನದ ಸಿಂಗಿರಾಜಪುರಾಣಗಳ ವಿಭಿನ್ನ ಕಥೆಗಳು ಕಲಸುಮೇಲೋಗರವಾಗಿ ಬೇರೊಂದು ತೆರನ ನಿರೂಪಣೆಗೆ ಪಕ್ಕಾಗಿವೆ ಎಂಬುದರಲ್ಲಿ ಸಂಶಯವಿಲ್ಲ.

ಸ್ವತಂತ್ರ ಭಾರತದೊಲ್ಲೊಂದು ಆತಂಕಕಾರಿ ಕ್ಷಣ

ಸತ್ಯ ಅಹಿಂಸೆಯ ಹಾದಿಯಲ್ಲಿ ಹೋರಾಡಿ ಪರಕೀಯ ಅಳ್ವಿಕೆಯಿಂದ ಬಿಡುಗಡೆ ಹೊಂದಿ ವಿಷ್ವ ಸಮುದಾಯದಲ್ಲಿ ಜವಾಬ್ದಾರಿಯುತ ರಾಷ್ಟ್ರವಾಗಿ ಭಾರತ ಸ್ಥಾನಮಾನ ಪಡೆದಿದೆ. ಸ್ವತಂತ್ರ ಬಂದ ಹೊಸತರಲ್ಲೇ ನಡೆದ ಈ ಘಟನೆ ನಂಬಲಸಾಧ್ಯವಾದರೂ ಸತ್ಯ.

"ಮುಂಗಾರು ಮಳೆ" ಮತ್ತು "ದ್ವೀಪ"

ಕಳೆದೆರೆಡು ವಾರ ಕನ್ನಡದ ಬ್ಲಾಗುಗಳೆನ್ನೆಲ್ಲ ನನ್ನ ಗೂಗಲ್ ರೀಡರ್ ನಲ್ಲಿ ಚಂದಾ ಮಾಡಿ, ಮತ್ತೆ ನನ್ನ ಬ್ಲಾಗಿನಲ್ಲಿ ಲಿಂಕ್ (ಕನ್ನಡ ಬ್ಲಾಗುಲೋಕ) ಕೊಟ್ಟುಕೊಂಡು ಸುಸ್ತಾಗಿ ಏನನ್ನೂ ಬರೆದಿರಲಿಲ್ಲ. ಆದರೆ ಈ ವಿಷಯದ ಬಗ್ಗೆ ತುಂಬ ದಿನಗಳಿಂದ ಬರೆಯಬೇಕು ಎಂದುಕೊಂಡಿದ್ದೆ.

ಟ್ರಾಫಿಕ್ ಜಾಮ್ ರಹಿತ ಬೆಂಗಳೂರು !!!!!

ಗೆಳೆಯ ಗೆಳತಿಯರೆ,

ಕಾರ್! ಕಾರ್!! ಕಾರ್!!! ಕಾರ್!!!! .... ಎಲ್ನೋಡಿ ಕಾರ್ !!!!!!!

ಇದೇನಪ್ಪ "ಟ್ರಾಫಿಕ್ ಜಾಮ್ ಮುಕ್ತ ಬೆಂಗಳೂರು" ಅಂತ ಯೋಚನೆ ಮಾಡ್ತಿದೀರ? ನಾವಾದರು ಬೆಂಗಳೂರು ತ್ರಾಫಿಕ್ ಜಾಮ್ ಗಳ ನಿರ್ಮೂಲನೆ ಬಗ್ಗೆ ಯೋಚಿಸಬೇಕು: ಯಾಕಂದ್ರೆ ನಮ್ಮ ಸರ್ಕಾರವಾಗಲಿ, ಮಹಾನಗರ ಪಾಲಿಕೆಯಾಗಲಿ ಇದರ ಬಗ್ಗೆ ಹೆಚ್ಹು ಗಮನ ಕೊಡುತ್ತಿಲ್ಲ ಅದಕ್ಕೆ ......

- ಆಫೀಸಿಗೆ ತಡವಾಗಿ ಹೋದಾಗ