ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಾರು ಸರಿ?

ಕನ್ನಡದ ಜನಪ್ರಿಯ ನಟಿಯೊಬ್ಬರು ಅತ್ತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಗೆದ್ದ ಮಾತ್ರಕ್ಕೆ ಅವರು ರಜನಿಕಾಂತ್ ಅವರು ಕ್ಷಮೆ ಕೇಳಲಿ, ನಾವು ಕ್ಷಮಿಸಿ ದೊಡ್ಡವರಾಗೋಣ ಏಂಬ ಆಸೆ ನನ್ನದು ಎಂದು ಟಿ ವಿ ೯ ಚಾನೆಲ್‍ನಲ್ಲಿ ಬಹಿರಂಗವಾಗಿ ಹೇಳಿದ್ದರು. ಅಂದರೆ ಅವರೆಂದಿಗೂ ದೊಡ್ಡವರೇ ಅಲ್ಲ ಎಂದೇ ಅರ್ಥ.

ಯುಗಾದಿ ಹಬ್ಬದ ಹಾರ್ಥಿಕ ಶುಭಾಶಯಗಳು

ಯುಗಾದಿ ಮರಳಿ ಬರುತಿದೆ...................

ಕತ್ತಲು ಸರಿದು..
ಬೆಳಕು ಹರಿದು
ಕನಸು ಮುಗಿದು
ಮನಸು ಜಿಗಿದು
ನೋವು ಮಂಜಿನ ಹಾಗೆ ಕರಗಿ
ನಲಿವು ಬೆಳಕಿನ ಹಾಗೆ ಹರಿದು
ಈ ಯುಗಾದಿಯು ನಿಮಗೆಲ್ಲಾ ವರ್ಷಪೂರ್ತಿ ಹರ್ಷ ತರಲೆಂದು ಆ ದೇವರನ್ನು ಪ್ರಾರ್ತಿಸುವೆ!!!!!!

ನಿಮಗೆಲ್ಲಾ ಯುಗಾದಿ ಹಬ್ಬದ ಹಾರ್ಥಿಕ ಶುಭಾಶಯಗಳು

ನಿಮ್ಮೊಂದಿಗೆ...

ಆತ್ಮೀಯರೇ,

ಇಂಥದೊಂದು ಬ್ಲಾಗ್ ಪ್ರಾರಂಭಿಸಲು ಕನಸು ಕಾಣುತ್ತಿದ್ದ ನನಗೆ, ಬರೆದ ಬರಹಗಳನ್ನು ಅಂತರ್ಜಾಲ ತಾಣಕ್ಕೆ ತರುವುದು ಹೇಗೆ ಎಂಬ ಸಮಸ್ಯೆ ಕಾಡುತ್ತಿತ್ತು. ಯಾರ ಸಹಾಯವೂ ಇಲ್ಲದೆ, ಇದ್ದ ಸ್ವಲ್ಪ ಸಮಯದಲ್ಲಿ ಉತ್ತಮವಾದ ಬರಹಗಳನ್ನು, ನಿಧಾನಗತಿಯಲ್ಲಿ, ಬರಹ ತಂತ್ರಾಂಶದಲ್ಲಿ ಟ್ಯೆಪ್ ಮಾಡುವುದು ಸುಲಭವಾಗಿರಲಿಲ್ಲ.

ಅಸೂಯೆ ಎಂಬ ತಡೆಗೋಡೆ...

ಇತ್ತೀಚೆಗೆ ಪುಸ್ತಕವೊಂದನ್ನು ಓದುತ್ತಿದ್ದಾಗ, ಸುಮಾರು ಹತ್ತು ವರ್ಷಗಳ ಹಿಂದೆ ಅನಾಮಿಕ ಸಾಧುವೊಬ್ಬ ಹೇಳಿದ ಮಾತು ನೆನಪಾಯ್ತು.

’ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಅಪಾರ ಶಕ್ತಿ ಇರುತ್ತದೆ. ವಿಶಿಷ್ಟ ಪ್ರತಿಭೆ ಇರುತ್ತದೆ. ತನ್ನ ಸುತ್ತಮುತ್ತಲಿನ ಸಂದರ್ಭಗಳನ್ನು ಬಳಸಿಕೊಂಡು ಬೆಳೆಯುವಂತಹ ಅವಕಾಶಗಳು ಎಲ್ಲರಿಗೂ ಇದ್ದೇ ಇರುತ್ತವೆ.

ನ್ಯಾನೊ ಮತ್ತು ವೈಚಾರಿಕ ಸಣ್ಣತನ

ಬಹುತೇಕ ಭಾರತೀಯರ ಸಂಕುಚಿತ ಮನಃಸ್ಥಿತಿಯನ್ನು ಎರಡು ಪ್ರಮುಖ ಬೆಳವಣಿಗೆಗಳು ಬಹಿರಂಗಪಡಿಸಿವೆ.

ಮೊದಲನೆಯದು, ಕಳೆದ ಒಂದೆರಡು ತಿಂಗಳುಗಳಿಂದ ನಡೆದಿರುವ ಉಡುಪಿ ಪರ್ಯಾಯ ವಿವಾದ. ಎರಡನೆಯದು, ವಾರಾಂತ್ಯದಲ್ಲಿ ಪ್ರದರ್ಶಿಸಲ್ಪಟ್ಟ ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ’ನ್ಯಾನೊ’.

ನಿಮಗೂ ಹೀಗೆ ಅನಿಸಿದೆಯೆ?

ಹಲವಾರು ಬಾರಿ ಹಾಗನ್ನಿಸಿದೆ.

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ.

ಏಕೆ ಹಾಗಾಗುತ್ತದೆ?

ಸರ್ವರಿಗೂ ಸರ್ವಧಾರಿ ಸಂವತ್ಸರದ ಶುಭಾಶಯಗಳು

ಪರಿಭ್ರಮಣ
---------------

ಕಾಲಚಕ್ರಕ್ಕೊಂದು
ಪರಿಭ್ರಮಣ
ತಂದಿದೆ ನವ ಸಂವತ್ಸರದ
ಉಷಾಕಿರಣ

ಬಂದಿಹುದಿದೋ
ಬಂದಿಹುದು ಸರ್ವಧಾರಿನಾಮ
ಕಟ್ಟಿಹುದಿದೋ
ಹೊಸ ಕನಸ ತೋರಣ

ಹೊಂಗೆಯ ತಳಿರು
ಮಾವಿನ ಚಿಗುರು
ಜೊತೆಜೊತೆಯಲೆ
ಬೇವಿನ ಹಸಿರು

ದುಂಬಿಗಳ ಝೇಂಕಾರ
ಕೋಗಿಲೆಗಳ ಇಂಚರ
ನಡುನಡುವೆ ಕೇಳಿದೆ
ಕಾಕರಾಜನ ಸ್ವರ

ನಗೆ ತುಂಬಿದೆ
ಹೊಗೆ ತಂದಿದೆ
ಸಿಹಿಯಾಗಿದೆ

ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !

ಯುಗಾದಿ ಹಬ್ಬದ ಆಚರಣೆ :

ಚಾಂದ್ರಮಾನ ರೀತ್ಯ ಯುಗಾದಿಯನ್ನು ಆಚರಿಸುವವರು, ಚೈತ್ರ ಶುಕ್ಲ ಪ್ರತಿಪತ್ ತಾ. ೦೭-೦೪-೨೦೦೮ ನೆಯ ಸೋಮವಾರವೂ, ಹಾಗೂ ಸೌರಮಾನ ರೀತ್ಯ ಆಚರಿಸುವವರು, ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪುಣ್ಯಕಾಲದ ದಿನ : ೧೩-೦೪-೨೦೦೮ ನೇ ರವಿವಾರ, ಯುಗಾದಿಹಬ್ಬವನ್ನು ಆಚರಿಸುತ್ತಾರೆ. ಆಂಧ್ರದವರೂ, ಸೋಮವಾರದಂದೇ ಯುಗಾದಿಯನ್ನು ಆಚರಿಸುತ್ತಾರೆ.

ಉಷಃಕಾಲದಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ದೇವರ ಮಂಟಪವನ್ನು ಅಲಂಕರಿಸಿ, ಅಭ್ಯಂಜನವನ್ನು ಮಾಡಿ, ಸಂಧ್ಯಾವಂದನೆಗಳನ್ನು ನೆರವೇರಿಸಿ, ಶ್ರೀ ಮಹಾಗಣಪತಿ ಪೂಜಾ ಪೂರ್ವಕ, ನೂತನ ವರ್ಷದ ಪಂಚಾಂಗ ಸಹಿತ, ಕುಲದೇವತೆಯನ್ನು ಅರ್ಚಿಸಬೇಕು. ತದನಂತರ, ಬೇವು-ಬೆಲ್ಲಗಳನ್ನು ಭುಜಿಸಿ, ಸನ್ಮಿತ್ರರೊಡನೆಯೂ, ಸುಜನರುಗಳಳಿಂದ ಕೂಡಿರುವ ಸಭೆಯಲ್ಲಿ ದೈವಜ್ಞರು ಪಠನಮಾಡುವ "ಪಂಚಾಂಗ ಶ್ರವಣ," ವನ್ನು ಆಲಿಸಬೇಕು. ಬೇವು-ಬೆಲ್ಲವನ್ನು ಸಾಮಾನ್ಯವಾಗಿ ಮನೆಯ ಯಜಮಾನರು, ಮನೆಯವರಿಗೆಲ್ಲಾ ಕೊಡುವ ಪದ್ಧತಿ ಇದೆ. ಪರಿವಾರದವರು, ಪ್ರಸಾದವನ್ನು ಸೇವಿಸುವಾಗ, ಕೆಳಗಿನ ಶ್ಲೋಕವನ್ನು ಹೇಳಿ ಸೇವಿಸತಕ್ಕದ್ದು.

" ಶತಾಯುರ್ವತ್ರದೇಹಾಯ ಸರ್ವಸಂಪತ್ಕರಾಯಚ.

ಸರ್ವಾರಿಷ್ಠವಿನಾಶಾಯ ನಿಂಕಂದಳ ಭಕ್ಷಣಂ ".