ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಂದ್ರವ್ವಳ "ಶಿವನ ಸಭಾ" ಕನಸು.

ಜೀವನದ ಸಿಂಹಪಾಲು ಸಮಯ ಹುಟ್ಟಿದ ಹಳ್ಳಿಯ ಹೊರಗೇ ಕಳೆದರೂ ಊರಿನ ಅವಿಸ್ಮರಣೀಯ ಅನುಭವಗಳು ನನ್ನನ್ನು ಸೆರೆಹಿಡಿದಿವೆ. ತಿಳುವಳಿಕೆ ಬಂದಾಗಿನಿಂದ ಸಮಾಜವನ್ನು ಅರ್ಥೈಸಿಕೊಳ್ಳಬೇಕೆಂಬ ಹಂಬಲ ಬರೆಯಲು ಪ್ರೇರೇಪಿಸಿದರೂ ಸಮಯದ ಒತ್ತಡಕ್ಕೆ ಸಿಕ್ಕು ಮೈಗಳ್ಳಾನಾಗಿದ್ದ ನನಗೆ ಕಣ್ತೆರೆಸಿದವಳು ಚಂದ್ರವ್ವ ಮುದುಕಿ. ಪ್ರತಿ ಸಲ ಊರಿಗೆ ಹೋದಾಗಲೆಲ್ಲಾ ಊರಿನ ಹಿರಿಯರ ಜೊತೆ ಸ್ವಲ್ಪ ಕಾಲ ಕಳೆಯುವ ಹವ್ಯಾಸ ನನ್ನದು. ಹಾಗೆಯೇ ಎಲ್ಲರಿಗೂ ಹಾಜರಿ ಕೊಟ್ಟು ಬರುವ ನೆಪದಲ್ಲಿ ಚಂದ್ರವ್ವ ಮುದುಕಿಯನ್ನು ಕಾಣಲು ಹೋದೆ.ಹೋದವನೆ "ಆರಾಮಿದ್ದೀ ಆಯಿ?" ಎಂದೆ. ಬೇಸಿಗೆಯಾದರೂ ಮುಂಜಾವಿನ ಎಳೆಬಿಸಿಲಿಗೆ ಮೈಒಡ್ಡಿ ಮನೆಯ ಮುಂದೆ ಕುಳಿತಿದ್ದ ಚಂದ್ರವ್ವ ಕೊರಳಲ್ಲಿ ಸಿಕ್ಕಿಸಿಕೊಂಡಿದ್ದ ಕನ್ನಡಕ ಧರಿಸಿಕೊಂಡಾಗಲೇ ಅವಳಿಗೆ ನನ್ನ ಗುರುತು ಹತ್ತಿದ್ದು ಅಂತ ಕಾಣುತ್ತೆ. " ಅಯ್ಯ ಹಡದಯ್ಯ, ಯಾವಾಗ ಬಂದ್ಯೋ ನನಕೂಸ?" ಎನ್ನುವ ಮಾತಿನಲ್ಲಿದ್ದ ಅಪಾರವಾದ ಪ್ರೀತಿ ನನ್ನ ಹೃದಯವನ್ನು ಅಪೂರ್ವ ಆನಂದಕ್ಕೆ ಗುರಿ ಮಾಡಿತು.

"ನೀ ಒಬ್ಬನೇ ನೋಡಪಾ ನನಗ ಹುಡಕ್ಯಾಡಕೊಂಡ ಬಂದ ಮಾತ್ಯಾಡ್ಸಂವ" ಎನ್ನುತ್ತಾ ಮತ್ತಷ್ಟು ಹತ್ತಿರ ಸರಿದು ನನ್ನ ತಲೆಯ ಮೇಲೆ ಕೈಯಾಡಿಸುತ್ತಾ ಯಾವುದೋ ವಿಚಾರದಲ್ಲಿ ಮಗ್ನಳಾಗಿಬಿಟ್ಟಳು.ಅಷ್ಟರಲ್ಲೇ ಕುಡಿದ ನಶೆ ಇನ್ನೂ ಇಳಿಯದಂತಿದ್ದ ಅವಳ ಮಗ ಯಮನಪ್ಪ ನಮ್ಮ ಹತ್ತಿರ ಬಂದು ನನ್ನನ್ನೂ ಮಾತನಾಡಿಸಿ, "ಏ ಯವ್ವಾ, ದೊಡ್ಡಪ್ಪಗೋಳ ಮನಿಗಿ ಬಂದವರ ಮುಂದ ನನ್ನ ಬಗ್ಗೆ ಏನೂ ಹೇಳಬ್ಯಾಡ ನೋಡು ಎಂದಾಗ ಮುದುಕಿಯ ಕಣ್ತುಂಬಿತು. "ಆಯೀ ಯಾಕ ಅಳತಿ ಸುಮ್ ಇರು" ಎಂದೆ. "ನಿಮ್ಮುತ್ಯಾ ಇದ್ದಾಗ ಶಿವನ ಸಭಾ ಇದ್ದಾಂಗ ಇತ್ತಪಾ ಈ ಮನಿ; ಪ್ರತೀ ವರ್ಷ ಹುಚ್ಚಯ್ಯನ ಜಾತ್ರ್ಯಾಗ ಅಗ್ಗಿ ಹಾಯ್ದು ಬೆಂಕಿ ಹಾಂಗ ಪವಿತ್ರ ಇದ್ದವನ ಹೋಟ್ಯಾಗ ಯಮನಪ್ಪನಂಥ ಬೂದಿ ಹುಟ್ಟಿ ಈ ಮನಿ ಸ್ಮಶಾನಆಗಿಬಿಟ್ಟೈತಿ" ಎಂದಾಗ ಅವಳ ಹೃದಯಾಂತರಾಳದಲ್ಲಿದ್ದ ನೋವು ಅವಳ ಕಣ್ಣೀರಲ್ಲಿ ಪ್ರತಿಬಿಂಬಿಸಿದಂತಾಯಿತು. ಅವಳನ್ನು ಸಮಾಧಾನ ಪಡಿಸುವಷ್ಟು ಅನುಭವವಾಗಲಿ, ಮಾತುಗಳಾಗಲಿ ನನ್ನಲ್ಲಿ ಹುಟ್ಟಲಿಲ್ಲ.

ಕಾಳಿದಾಸ

ಹಳೆಯದೇ ಯಾವಾಗಲೂ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಹಾಗೆಯೇ ಹೊಸದು ಚೆನ್ನಾಗಿರುವುದಿಲ್ಲ ಎಂದೂ ಹೇಳಲಾಗುವುದಿಲ್ಲ. ಸಹೃದಯರು ಮೊದಲು ಪರೀಕ್ಷಿಸಿ ನಂತರ ತೀರ್ಮಾನಿಸುತ್ತಾರೆ. ಮೂಢರು ಪರರ ನಂಬಿಕೆಯನ್ನು ಆಶ್ರಯಿಸುತ್ತಾರೆ. - ಕಾಳಿದಾಸ 

ಸೂಪರ್ ಹಿಟ್ ಹಾಡು,ಸೂಊಊಊಊಪರ್ ಸಿನೆಮಾ..??

ಈ ವರ್ಷ ಮುಂಗಾರುಮಳೆಯ ಹಾಡುಗಳುsuper hit.ಕಳೆದ ವರ್ಷ ಜೋಗಿ ಹಾಡುಗಳು super super hit.ಅದಕ್ಕೂ ಹಿಂದೆ ಆಪ್ತಮಿತ್ರhitಮೇಲೆhitಮೇಲೆhit.

ಪುಟ್ಟಣ್ಣ ಕಣಗಾಲ್ ಚಿತ್ರಗಳು

ಪುಟ್ಟಣ್ಣ ಕಣಗಾಲ್ (೧ ಡಿಸೆಂಬರ್ ೧೯೩೩ - ೫ ಜೂನ್ ೧೯೮೫) ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ಮಹೋನ್ನತ ಚಿತ್ರಗಳನ್ನು ನಿರ್ದೇಶಿಸಿ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ಬೆರಗಾಗಿ ನೋಡುವಂತೆ ಮಾಡಿದ ಮೇಧಾವಿ.

ಹುಡುಕಾಟ

ಹುಡುಕಾಟ

ಕಪ್ಪು ಕತ್ತಲಲಿ, ಗೊಂಡಾರಣ್ಯದಲಿ, ಬಾಳ ಬೆಳಕಿನ ಹುಡುಕಾಟ
ರವಿಯೇ ಬರಲೊಲ್ಲೆ ಎನುತಿರೆ, ನಾ ಬಿಡಲಾರೆ ನನ್ನ ತಿಣುಕಾಟ
ಕಲ್ಲು ಮುಳ್ಳೆನದೆ, ಹಳ್ಳ ದಿಣ್ಣೆ ಎನದೆ, ನಾ ಸಾಗುತಿರೆ ಗುರಿಯತ್ತ ಭರದಿ
ಮೂರ್ಖತನ ಎನಬೇಡ ನಂಬಿಕೆಯಿದೆ, ನಾನೊಬ್ಬ ಆಶಾವಾದಿ

ಮಿಂಚುಹುಳದ ಬೆಳಕ ನಿರ್ಲಕ್ಷಿಸಲಾರೆ
ನನ್ನ ದೀಪದ ಹುಡುಕಾಟವ ನಿಲ್ಲಿಸಲಾರೆ

ಕಾವೇರಿ

ಕಾವೇರಿ

ರಾಮರಾಜ್ಯದ ಜನ ಕಾದರು,
ರಾಮ ಮುಗಿಸಿ ಬರುವನು ವನವಾಸದ ಹದಿನಾಲ್ಕು ವರುಷ
ಜನ ಮತ್ತೆ ಕಾದರು,
ಕಾವೇರಿ ತೀರ್ಪು ಬರಲು ಇನ್ನೂ ಹದಿನಾಲ್ಕು ವರುಷ

ಕಾದು ಕಾದು ಬೇಸತ್ತಿರಬೇಕು ಆಕೆಯೂ
ಜೀವನಾಡಿಯಲ್ಲಿ ನೆತ್ತರಂತೆ ಹರಿವ ನೀರ
ಸುಡುಬಿಸಿಲಿಗೆ ಮೈಯೊಡ್ಡಿ ಒಣಗಿಸಿ ಬರಿದಾಗಿಸಿ
ಜೀವನದಿಗೇನಾದರು ಜೀವವಿದ್ದಿದ್ದರೆ!

ಕಾವೇರಿ ನಕ್ಕಳೆಷ್ಟೊ, ಅತ್ತಳೆಷ್ಟೊ?

ಎರಡು ಕವನ - ಪ್ರಕ್ರತಿ ಮತ್ತು ಕಾಲ

ಪ್ರಕ್ರತಿ

ಅಪರೂಪಕೊಮ್ಮೆ ಎಂಬಂತೆ ಹೊರ ನಡೆದಿದ್ದೆ ಕಾವೇರಿ ತಡಲಿಗೆ
ತಂಪಾದ ಗಾಳಿ ಬೀಸಲು ಜಾರಬೇಕೆನಿಸಿತು ಹಸಿರ ಮಡಿಲಿಗೆ
ದೂರದಿ ನದಿ ನೀರು ಹರಿಯೆ ಕೇಳುತಿದೆ ಜುಳು ಜುಳು
ಚಿಂವ್ ಚಿಂವ್ ಎಂದು ದನಿಗೂಡಿ ಹಾಡಿವೆ ಗಿಣಿಗಳು

ಘಮ್ಮನೆ ಕಂಪ ಸೂಸುತಿರೆ ಅರಳಿ ಬೀಗುತಿಹ ಮಂದಾರ ಪುಷ್ಪ
ನೋಡುಗನ ಕಣ್ಣಿಗೆ, ಧರೆಗಿಳಿದು ಬಂದ ದೇವತೆಯ ಪ್ರತಿರೂಪ