ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಂಡೀಗಢದ ಮೂಲೆಯಲ್ಲಿ ಕನ್ನಡದ ಸವಿ

ಚಂಡೀಗಢದ ಸೆಕ್ಟರ್ ೪೭-ಡಿ. ಹೋಟೆಲ್ ಹೆಸರು "ಸೌತ್ ರತ್ನಮ್". ಹೊರಗೆ ದೊಡ್ಡದಾದ ತಿರುಪತಿ ವೆಂಕಟೇಶ್ವರನ ಚಿತ್ರ. ಆಂಧ್ರದವರಿರಬೇಕೆಂದುಕೊಂಡೆ. ಒಳ ಹೊಗ್ಗಿ ಕುಳಿತು ಸುತ್ತಲೂ ನೋಡಿದಾಗ ಕಂಡದ್ದು ಚಿಕ್ಕದಾದರೂ ಚೊಕ್ಕದಾದ ಹೋಟೆಲ್. ಸರ್ದಾರ್ಜೀಗಳು ದೋಸೆ, ಇಡ್ಲಿ ಮೆಲ್ಲುವ ದೃಶ್ಯ.  ಸ್ವಲ್ಪ ಸಮಯದ ನಂತರ ಸಂಗೀತ ತೇಲಿಬರತೊಡಗಿತು..

ಪೊಲೀಸರ ಮೇಲೆ ಅನುಮಾನ...ಸರೀನಾ?

ಮಲೆನಾಡಿನಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ನಕ್ಸಲೀಯರ ವಿವರಗಳನ್ನು ನಕ್ಸಲ್ ನಿಗ್ರಹ ಪಡೆ ಬಿಡುಗಡೆ ಮಾಡಿ ವಾರ ಕಳೆದಿದೆ. ಅದರ ಹಿಂದೆ ಗೃಹ ಮಂತ್ರಿ ಅದನ್ನು ವಾಪಸ್ಸು ಪಡೆದದ್ದೂ ಆಯಿತು.

ಅಮೆರಿಕೆ ಇಂಗ್ಲಿಸ್ ಬಲು ಸಲೀಸು

ನಾನು ಅಮೆರಿಕೆ ಇಂಗ್ಲಿಸ್ನಲ್ಲಿ ಗವನಿಸಿದ ವಿಶ್ಯಗಳು. ಅಮೆರಿಕೆ ಇಂಗ್ಲಿಸ್ ನಾವಾಡುವ (ಕಲಿತಿರುವ) ಇಂಗ್ಲಿಸ್ ಗಿಂತ ಬಲು ಸುಲಬ ಅಂತ ನನ್ನ ಅನಿಸಿಕೆ. ಅವರು

office ಗೆ work,

toilet ಗೆ rest room,

parcel ಗೆ to go,

going to ಗೆ gonna  ಬಳಸುತ್ತಾರೆ.

ಜಲ ಸಾಕ್ಷರ ತಾಲೂಕು... ಇದೊಂದು ಸಾಂಘಿಕ ಅಭಿಯಾನ

- ತಾಲೂಕನ್ನು ಬರ ಮುಕ್ತ- ಜಲಸಂಪದ್ಭರಿತವಾಗಿಸುವ ಉದ್ದೇಶ
- ತಾಲೂಕಿನ ೪೫ ಸಾವಿರ ಮನೆಯವರಿಗೆ ನೀರಿನ ಬಗ್ಗೆ ಜಾಗೃತಿ

ಇಡೀ ತಾಲೂಕಿನ ಜನರಲ್ಲಿ ನೀರಿನ ಬಗ್ಗೆ ತಿಳಿವಳಿಕೆ ನೀಡಿ, ಜಲ ಸಾಕ್ಷರರನ್ನಾಗಿ ಮಾಡಿ ತಾಲೂಕನ್ನು ಜಲಸಂಪದ್ಭರಿತ ತಾಲೂಕು ಮಾಡುವ ಹೊಸ ಪ್ರಯತ್ನವೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದೆ.

ತಲುಪುವುದಕ್ಕಲ್ಲ

ಪಯಣಗಳಿಂದು ತಲುಪುವುದಕ್ಕಲ್ಲ.
ತಲುಪಿದರೂ ಮತ್ತೆ ಹೊರಡುವುದಕ್ಕೆ
ತಂಗುದಾಣಗಳೇ ಎಲ್ಲ ಚಣ ನಿಂತು
ಕಾಫಿ ಹೀರಿ, ಎಲೆಯಡಿಕೆ ಅಗಿದು ಉಗಿಯಲಿಕ್ಕೆ.
ಗಂಟು ಮೂಟೆ ಇಳಿಸಿ ಬಂಧುಮಿತ್ರರ ಅಪ್ಪಿ
ಉಸ್ಸಪ್ಪ ನಿಲ್ದಾಣಗಳಲ್ಲ ದಾರಿಗುಂಟ ಸಿಕ್ಕುವುದೆಲ್ಲ.

ಇಲ್ಲಿರುವರಿಗೆ ಅಲ್ಲಿರುವ ಕನಸು, ಅಲ್ಲಿರುವರಿಗೆ ಇನ್ನೆಲ್ಲಿಯೋ ಕಣ್ಣು

ಪತ್ರಿಕೆಯ ಸುಡೋಕು ಸ್ಥಳ

ಪ್ರತಿದಿನ ಬೆಳಗ್ಗೆ ಪತ್ರಿಕೆಯ ಮುಖ್ಯ ವರದಿಗಳನ್ನು ಓದಿದ ಮೇಲೆ ನಾನು ಹುಡುಕೋದು ಪತ್ರಿಕೆಯ ಸುಡೋಕು ಸ್ಥಳ.
ಎಲ್ಲಾ ಪತ್ರಿಕೆಗಳು ಸುಡೋಕುಗಾಗಿ ಒಂದು ಸ್ಥಳ ಮೀಸಲಿಟ್ಟಿದೆ.ಸಂಜೆ ಪತ್ರಿಕೆಗಳೂ ಸಹ. ಉದಾಹರಣೆಗೆ ಉದಯವಾಣಿಯಲ್ಲಿ ಕೊನೆಯ ಪುಟಕ್ಕಿಂತ ಹಿಂದೆ,ವಿ.ಕರ್ನಾಟಕದಲ್ಲಿ ಕೊನೆಯ ಪುಟದಲ್ಲಿ, ಪ್ರಜಾವಾಣಿ,ಕನ್ನಡಪ್ರಭ...ದಲ್ಲಿ ಒಳಗಿನ ಪುಟಗಳಲ್ಲಿ.

ಮಾತಿನ ಮೋಡಿ

ನಾನು,ಯಜಮಾನರು ಚರ್ಚಿಸಿ,ಅನೇಕ ಮಿತ್ರರ ಅಭಿಪ್ರಾಯ ಕೇಳಿ,ಸ್ಯಾಮ್ ಸಂಗ್ ಟಿ.ವಿ ತೆಗೆದುಕೊಳ್ಳಲು ಹೋದೆವು. ತೆಗೆದುಕೊಂಡುದು ಒನಿಡಾ.
ಇದೇ ರೀತಿ ಐ ಎಫ಼್ ಬಿ ವಾಷಿಂಗ್ ಮೆಷಿನ್ ತೆಗೆದು ಕೊಳ್ಳಲು ಹೋಗಿ ಕೊಂಡದ್ದು ವಿಡಿಯೊಕಾನ್.

ಸಹಜ ಯಾನದ ತುಂಗಾ ಎಕ್ಸ್ ಪ್ರೆಸ್..

ಎಂದಿನಂತೆ ಚಡಪಡಿಕೆ ಶುರುವಾಗಿತ್ತು..ರುಟೀನ್ ಇರೋದೇ ಮುರಿಯಕ್ಕೆ ಎನ್ನುವ ಧ್ಯೇಯವಾಕ್ಯದ ಗೆಳೆಯರ ಪುಟ್ಟ ಗುಂಪು ನಮ್ಮದು. ಮುರಿಯುವ ದಾರಿ - ಗಜಿಬಿಜಿಯಿಂದ ದೂರಕ್ಕೆ, ಹಸಿರು ಹೊದ್ದ ಕಾಡಿನ ಮಡಿಲಿಗೆ ಹೋಗಿ, ಇಲ್ಲ ನಂಗೇನೂ ಗೊತ್ತಾಗ್ತಾ ಇಲ್ಲ, ಅಲ್ಲಿ ಏನ್ ನಡೀತಾ ಇದೆ - ಸರಿಯಾಗಿ ಕೆಲಸ ಮಾಡದ ಕೋಡ್, ಪೂರ್ತಿ ಮುಗಿಸಿರದ ರಿಪೋರ್ಟ್, ಹಾಗೇ ಉಳಿಸಿದ ಬಗ್, ಬಗೆಹರಿಯದ ಬಜೆಟ್ ಅನಲಿಸಿಸ್, ಎಲ್ಲ ಏನೋ ಗೊತ್ತಿಲ್ಲ, ಅಂತ ಕಣ್ಣು ಮುಚ್ಚಿಕೊಂಡು ಹಾಲುಕುಡಿವಂತೆ, ನಾವು ಕಾಡಿನ ಮಡಿಲು ಹುಡುಕಿ ಹೊರಡುತ್ತೇವೆ. ಅದೇನು ಕಡಿದಾದ ಬೆಟ್ಟದ ಕಷ್ಟಸಾಧ್ಯ ಚಾರಣವೇ ಆಗಬೇಕಿಲ್ಲ. ಎಲ್ಲಿ ಸರಳ ದಿನಚರಿಯ, ಹಸಿರ ನೆರಳೋ ಅಲ್ಲಿಗೆ ನಾವು.. ಒಂದು ದೀರ್ಘ ಪ್ರಯಾಣ, ಬೆಳಗಾ ಮುಂಚೆಯ ಬಸ್ ಸ್ಟಾಂಡ್ ಹೋಟೆಲಿನ ಗಬ್ಬು ಆದರೆ ಬಿಸಿಯಾದ ಕಾಫಿ, ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಶಟ್ಲಿನಲ್ಲಿ, ಎದ್ದೆದ್ದು ಹಾರಿ ಕೂರುತ್ತ, ಊರಿಂದ ದೂರಾಗಿ ಮನೆಯಲ್ಲೇ ಊರಿರುವ ಹಳ್ಳಿಯ ತಪ್ಪಲು ಸೇರುವುದು ನಮ್ಮನ್ನು ಸದಾ ಹಿಡಿದಿಟ್ಟ ಆಕರ್ಷಣೆ.. ಅಲ್ಲಿ ಬೆಟ್ಟವಿದ್ದರೆ, ದಟ್ಟ ಕಾನಿದ್ದರೆ, ಜಲಪಾತವಿದ್ದರೆ ಮುಗಿದೇ ಹೋಯಿತು.. ಹೋಗಲೇಬೇಕು.. ಮಳೆಯಾ, ಬಿಸಿಲಾ, ಚಳಿಯಾ ಅದೇನಡ್ಡಿಲ್ಲ ಬಿಡಿ, ಮಳೆಯಲ್ಲಿ ಒದ್ದೆಯಾಗಿ ನಡೆದು ಬಂದು, ಬೆಚ್ಚಗೆ ಬಟ್ಟೆ ಬದಲಾಯಿಸಿ ಕೂರದಿದ್ದರೆ, ಮಳೆಯ ಮಜಾ, ಹೋಗಲಿ ಬೆಚ್ಚಗಿರುವುದರ ಮಜಾ ಹ್ಯಾಗೆ ಗೊತ್ತಾಗುತ್ತದೆ..?! ಅದಿರಲಿ, ಚಳಿಯಲ್ಲಿ ನಡುಕ ಬರುವಾಗ, ಕಾಲಿಗೆ ಸಾಕ್ಸ್ ಹಾಕಿ, ಬೆಚ್ಚನೆ ಸ್ವೆಟರ್, ಟೋಪಿ ಧರಿಸಿ ಕೂತು ಚಳಿಯನ್ನೇ ಸಿಪ್ ಮಾಡುವ ಮಜಾ.. ಬಿಸಿಲಲ್ಲಿ ಬೆವರಿಳಿದು, ಉಸಿರು ಭಾರವಾಗಿ, ಉಪ್ಪುಪ್ಪು ಬೆವರು ಕಣ್ಣಿಗಿಳಿದು ಉರಿಯಾಗಿ, ಬೆನ್ನ ಹೊರೆಯನ್ನ ಹೊರಲಾರದೆ ಹೊತ್ತು ಆ ಬೆಟ್ಟದ ತುದಿ ಸೇರಿ ಬೀಸಿ ಬರುವ ತಂಗಾಳಿಗೆ ಒಪ್ಪಿಸಿಕೊಂಡು, ಸುತ್ತಲ ಚಂದದಲ್ಲಿ ಮಾತು ಹೊರಡದೆ ಕೂತು ಹಗುರಾಗುವ ಕ್ಷಣದ ಖುಶಿ.. ಇದೆಲ್ಲದರ ಮುಂದೆ ಇನ್ನೇನಿದೆ..? ಅಬ್ಬಬ್ಬಾ ಅಂತ ಹಾಯಾಗಿ ಕೂತ ಕ್ಷಣದಲ್ಲಿ, ಇದನ್ನ ಇವತ್ತು ಇಷ್ಟೊತ್ತಿಗೆ ಮುಗಿಸಿ ರಿಪೋರ್ಟ್ ಕಳಿಸಬೇಕು ಎನ್ನುವ ಧಾವಂತವಿಲ್ಲ.. ಅಲ್ಲದೆ, ಪ್ರಕೃತಿಯ ಶಕ್ತಿ ಮತ್ತು ಭವ್ಯತೆಗೆ ಮಣಿದು ಮೆತ್ತಗಾದ ಕ್ಷಣಗಳಲ್ಲಿ ಎಲ್ಲ ಖಾಲಿಯಾಗಿ ಮತ್ತೆ ಎಲ್ಲ ತುಂಬಿಕೊಂಡ ಅದ್ವೈತ ಭಾವ..

ಹಾಗೇ ಕಳೆದ ವಾರ ನಾವು ನಾಲ್ವರು ಮುತ್ತೋಡಿ - ಭದ್ರಾ ಅಭಯಾರ್‍ಅಣ್ಯ, ಚಿಕ್ಕಮಗಳೂರಿಗೆ ಹೊರಟೆವು.. ತುಂಬು ಮಳೆ, ಚಂದ ಕಾಡು, ಅಲ್ಲಲ್ಲಿ ಹೊಳವಾದಾಗ ಮರದಿಂದ ಮರಕ್ಕೆ ಉಲಿಯುತ್ತ ಹಾರುವ ಥರಾವರಿ ಹಕ್ಕಿಗಳು.. ನೆಂದು ಹೊಳೆವ ಹಸಿರ ಜೀವಗಳು..ಕೆಂಪಗೆ ತುಂಬಿ ಹರಿವ ಸೋಮವಾಹಿನಿ, ಅದರಲ್ಲಿ ಅದ್ದಿ ತೇಲಿ ಬರುತ್ತಿರುವ ದೊಡ್ಡ ದೊಡ್ಡ ಮರದ ಚಿಕ್ಕ ದೊಡ್ಡ ಕಾಂಡಗಳು.. ಸೋರುತ್ತಿದ್ದ ಕಾಟೇಜುಗಳು, ನೀಟಾಗಿ ಆಹ್ವಾನಿಸುತ್ತಿದ್ದ ಜಗುಲಿಯ ಮೇಲೆ ಬೆತ್ತದ ಖುರ್ಚಿಗಳು, ಯುನಿಫಾರ್ಮಿನ ಮೇಲೆ ಅರ್ಧ ತೋಳಿನ ಸ್ವೆಟರ್ ಹಾಕಿ, ತಲೆಗೆ ಮಳೆಟೊಪ್ಪಿಗೆ ಹಾಕಿದ ಫಾರೆಸ್ಟ್ ಆಫೀಸಿನವರು.., ಅಲ್ಲಿದ್ದ ಊಟದ ಮನೆಯಿಂದ ಬೆಚ್ಚಗೆ ಹೊರಹೋಗುತ್ತಿದ ಕಟ್ಟಿಗೆ ಒಲೆಯ ಹೊಗೆ, ಹೊಗೆ ಮಾತ್ರ ಯಾಕಮ್ಮ ನಾನೂ ಹೋಗ್ ಬೇಕ್ ಅಂತ ಮೈ ತುಂಬ ಸ್ವೆಟರ್ ತೊಟ್ಟ ಇನ್ನೂ ಮಾತು ಬರದ ಕಂದನೊಂದು ಹೊಸ್ತಿಲ ದಾಟಲು ಮಾಡುತ್ತಿರುವ ಕಸರತ್ತು, ಅಲ್ಲಿ ಸುತ್ತ ಬೆಳೆದಿದ್ದ ಹೂಗಿಡಗಳ ರಸಕುಡಿಯಲು ಮಳೆ ಕಡಿಮೆಯಾದ್ ಕೂಡಲೆ ಹಾರಿ ಬಂದು ಬಗ್ಗಿ ಕೂತು ಹೂವೊಳಗೆ ಕೊಕ್ಕಿಟ್ಟ ಪುಟಾಣಿ ಹಕ್ಕಿ.. ಯಾವ ರಸವನ್ನ ಸವಿಯುವುದು.. ಯಾವುದನ್ನ ಬಿಡುವುದು.. ಅಲ್ಲ ಬಿಡಲಿಕ್ಕೆ ಆದೀತಾ? ನೋಡುತ್ತ ನೋಡುತ್ತ ಸವಿಯುತ್ತ ನಾವು ಜಾರಿ ಹೋಗಿ ಮಾಯಾಲೋಕ ಸೇರಿದ್ದೆವು.. ನಾಳೆ ಊರಿಗೆ ವಾಪಸಾಗಲೇಬೇಕು ಎಂಬ ಎಚ್ಚರದ ಜಗುಲಿಯ ಮೇಲೆ ನಾವು ಆ ಚಂದದ ಜಾಗದ ಸೊಗದಲ್ಲಿ ನೇಯ್ದ ಮಾಯಾಚಾಪೆ ಹಾಸಿ ಕೂತಿದ್ದೆವು.. ನಮ್ಮ ತೇಲುವಿಕೆಯ ಸಮಗ್ರ ನೋಟವನ್ನು ಮತ್ತೆ ಕಟ್ಟಲು ಅಸಾಧ್ಯವಾದರೂ ಕೆಲ ಹಕ್ಕಿನೋಟಗಳನ್ನು ಹೇಗಾದರೂ ಮಾಡಿ ಬರೆದಿಟ್ಟು ಮತ್ತೆ ಮತ್ತೆ ಮೆಲುಕು ಹಾಕಬೇಕೆಂಬ ಸ್ವಾರ್ಥ...

ನಿನ್ನ ನೋಡದೆ.....(ಪ್ರೇಮಗೀತೆ)

ನಿನ್ನ ನೋಡದೆ
ಮಾತು ಆಡದೆ
ಮನಸು ನೊಂದಿದೆ
ಗೆಳತಿ, ಮನಸು ನೊಂದಿದೆ

ಸಂಜೆ ಉಷೆಯ ಕಿರಣಗಳಲ್ಲಿ
ನಿನ್ನ ಜೊತೆ ನಾ ನಡೆಯಲು ಇಲ್ಲ
ಒಲಿದು ಸುರಿವಾ, ಜಡಿಮಳೆಯಲ್ಲಿ
ನಿನ್ನ ಜೊತೆ ನಾ ಬರಲು ಇಲ್ಲ

ನೀಕರೆದಲ್ಲಿಗೆಲ್ಲ, ಕರೆದಾಗಲೆಲ್ಲ
ನಿನ್ನೊಡನೆ ನಾನು ಬರಲಾಗಲಿಲ್ಲ
ನೀನಲಿದಾಗಲೆಲ್ಲ, ನೊಂದಾಗಲೆಲ್ಲ
ನಿನ್ನೊಡನೆ ನಾನು ಇರಲಾಗಲಿಲ್ಲ.

ಮಾಧ್ಯಮದ ಮಿತ್ರರಿಗೊಂದು ಬಹಿರಂಗ ಪತ್ರ

>> ಮಾಧ್ಯಮಗಳ ಸನ್ಮಿತ್ರರಿಗೊಂದು ಸವಿನಯ ಮನವಿ.
>> ------------------------------------------------
>>
>> ಸತ್ಯಶೋಧನೆ, ಸಾರ್ವಜನಿಕ ಹಿತಾಸಕ್ತಿಗಳು ಪತ್ರಿಕೋದ್ಯಮದ - ಸಮೂಹ ಮಾಧ್ಯಮಗಳ
>> ಅಡಿಪಾಯಗಳಾಗಿದ್ದ ಕಾಲವೊಂದಿತ್ತು. ಅದು ಸತ್ಯಯುಗದ ಕಾಲ, ಇಂದಿನ ಕಲಿಯುಗಕ್ಕೆ
>> ಹೊಂದುವುದಿಲ್ಲ ಎಂಬ ಭಾವನೆ, ಮಾಧ್ಯಮಗಳ ಇಂದಿನ ಕೆಲವು ಮಿತ್ರರಿಗೆ ಇದ್ದಂತಿದೆ.