ಹಿತನುಡಿ
ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ
ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ
ಎಲ್ಲಿ ಬರಮಾಡಿಕೊಳ್ಳುವವರು ಇಲ್ಲವೋ ಎಲ್ಲಿ ಆತ್ಮೀಯ ವಾತಾವರಣ ಇಲ್ಲವೋ ಎಲ್ಲಿ ಗುಣದೋಷಗಳ ಮಾತೇ ಇಲ್ಲವೋ ಅಂಥ ಮನೆಗೆ ಹೋಗಲಾಗದು.
ಎದೆಯ ಹೊರೆಯನಿಳಿಸಿ ಮೇಲೆ ಬರುವ ನಗು ಬದುಕ ಬೆಲೆ, ನಕ್ಕರೆ ನಗಬಲ್ಲುದಿಳೆ
ಉನ್ನತಿ ಪಡೆದನ್ಯರಿಗೆ ನೆರವಾಗದಿರೆ ನಿನ್ನಯ ಜನ್ಮವು ವ್ಯರ್ಥ, ಮೇಲೇರಿದ ಮೋಡ ಮಳೆ ಸುರಿಯದಿರೆ ಏರಿದ್ದಕ್ಕೇನಿದೆ ಅರ್ಥ?
ಉತ್ಸಾಹಕ್ಕಿಂತ ಹೆಚ್ಚಿನ ಶಕ್ತಿ ಇನ್ನೊಂದಿಲ್ಲ, ಉತ್ಸಾಹೀ ಪುರುಷನಿಗೆ ಜಗತ್ತಿನಲ್ಲಿ ದುರ್ಲಭ ವಸ್ತುವೆಂಬುದೇ ಇಲ್ಲ.
ಈ ಭೂಮೀಲಿ ಜೀವಿಸೋಕೆ ಭಗವಂತನಿಗೆ ಕೊಡೋ ಬಾಡಿಗೆ, ಸುತ್ತಮುತ್ತಲೂ ಇರೋ ಜನರಿಗೆ ಉಪಕಾರವಾಗಿರೋದೇ...
· ಪುಷ್ಪಕ್ ವಾಹನಸೇವೆ ಪ್ರಾರಂಭಗೊಂಡಾಗ ಅದರಲ್ಲಿ ನಿಲ್ಲುವ ಪ್ರಯಾಣಕ್ಕೆ ಆಸ್ಪದವಿಲ್ಲ, ಸಂಸ್ಥೆಯ ಸಿಬ್ಬಂದಿಗೆ ಪ್ರವೇಶವಿಲ್ಲ, ಸೀಮಿತ ನಿಲುಗಡೆ, ವೇಗಕ್ಕೆ ಆದ್ಯತೆ ಎಂಬುದಾಗಿತ್ತು. ದುಬಾರಿ ರಿಕ್ಷಾಗಳಿಗಿಂತ ಪುಷ್ಪಕ್ಗಳು ವೇಗ ಮತ್ತು ಸುರಕ್ಷತೆಯ ದೃಷ್ಟಿಯಿಂದ ಜನರ ಮೆಚ್ಚುಗೆ ಗಳಿಸಿದವು.
ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಎಂಬ ನೀಳ್ಗತೆ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿನ ಕುಗ್ರಾಮವೊಂದರ ವನಿತೆಯರ ಚಿತ್ರಣವನ್ನು ತೆರೆದಿಡುತ್ತದೆ.
ಕಥೆಯ ಪ್ರಾರಂಭವೇ ಹೆಂಗಸರ ನೆಪದಿಂದ ಕಿರಗೂರು ಪ್ರಸಿದ್ದವಾಗಿರುವುದನ್ನು ಹೇಳುತ್ತದೆ. ಗಂಡಸರು ಎಷ್ಟು ಸೌಮ್ಯರೋ ಹೆಂಗಸರು ಅಷ್ಟೇ ಬಜಾರಿಯರು (ಪುಟ ೨) ಎಂಬುದು ಕಥೆಯ ಉದ್ದಕ್ಕೂ ಸ್ಥಿರವಾಗುತ್ತಾ ಹೋಗುವುದೇ ಇದರ ವೈಶಿಷ್ಟ್ಯ.
ಮೂರು ದಿನಗಳು ಸತತವಾಗಿ ಬೀಸಿದ ಗಾಳಿ ಕಥೆಯ ಹಂದರಕ್ಕೆ ಮುಖ್ಯ ನೆಲೆ ಒದಗಿಸಿದ್ದರೂ ನಂತರದ ಸಾಮಾಜಿಕ ಬದಲಾವಣೆಗೆ ವನಿತಾಕ್ರಾಂತಿಗೆ ದಾನಮ್ಮನೇ ಮೂಲ ಕಾರಣವಾಗಿ ನಿಲ್ಲುತ್ತಾಳೆ. ಒಂದು ರೀತಿಯಲ್ಲಿ ದಾನಮ್ಮನೇ ಕಥಾನಾಯಕಿ ಎಂದರೂ ತಪ್ಪಾಗದು. ದಾನಮ್ಮನ ಸಿಟ್ಟು ಭಯಂಕರ, ಅವಳಿಗೆ ಸಿಟ್ಟು ಬಂದಾಗ ದೆವ್ವ ಬಂದವರನ್ನು ಮಾತಾಡಿಸುವಂತೆ ಅವಳ ಗಂಡನೂ ಮಾವನೂ ಆಕೆಯನ್ನು ಗೌರವದಿಂದ ಮಾತಾಡಿಸುತ್ತಿದ್ದರು.(ಪುಟ ೬) ಹೇಗೆ ಹೇಗೋ ಎಲ್ಲರನ್ನೂ ಕಲಾತ್ಮಕವಾಗಿ ಸಂಯೋಜಿಸಿ ಭಾವಗೀತೆಯಂತೆ ಝಾಡಿಸಿ ಉಗಿದಿದ್ದರಿಂದ ಪುಟ(೭) ಕಾಕತಾಳೀಯವೋ ಎಂಬಂತೆ ಬಿರುಗಾಳಿ ಕಡಿಮೆಯಾಗಿ. ಆ ಗಯ್ಯಾಳಿ ಬಾಯಿಗೆ ಮಳೆಗಾಳಿ ಸುತ ಹೆದರ್ತದೆ ಅಂತಾಯ್ತು ಎಂಬಂತೆ ಊರಿನವರಿಂದ ಅನ್ನಿಸಿಕೊಳ್ಳುತ್ತಾಳೆ.
ದಾನಮ್ಮ ಮಾತ್ರವಲ್ಲ ಊರಿನ ಇತರ ಹೆಂಗಸರು ಸಹ ಇದೇ ರೀತಿ ಗಯ್ಯಾಳಿಗಳೇ. ಅವರ ಗಯ್ಯಾಳಿತನ ಕೇವಲ ಮಾತುಗಾರಿಕೆಯಲ್ಲಿ ಮಾತ್ರವಲ್ಲದೆ ದೈಹಿಕ ಕಸುವಿನಲ್ಲೂ ವ್ಯಕ್ತವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಊರಿನ ಗಂಡಸರ ದೌರ್ಬಲ್ಯ ಶಾರೀರಿಕವಾಗಿಯಲ್ಲದೆ ಆಲೋಚನಾ ಶಕ್ತಿಯಲ್ಲೂ ಕಾಣುತ್ತದೆ.
ಇಂದು ನಮ್ಮ ಕಛೇರಿಯಲ್ಲಿ ಸಹೋದ್ಯೋಗಿಯೊಬ್ಬರಿಗೆ ಕೊನೆಯ ದಿನ, ಅರ್ಚನ ಅಂತ QA ವಿಭಾಗದಲ್ಲಿದ್ದರು, ಅವರಿಗೋಸ್ಕರ ಈ ಕವನ...
ವಾರ ಬಂತಮ್ಮ, ಶುಕ್ರವಾರ ಬಂತಮ್ಮ
ಅರ್ಚನ ನೆನೆಯಮ್ಮ, QA ಅರ್ಚನ ನೆನೆಯಮ್ಮ;
ಸ್ಮರಣೆ ಮಾತ್ರದಿ, war ಪುಟ ಬಂದೆ ಬಿಡುವುದಮ್ಮ, (WAR-Weekly Activity Report)
ವಾರ ಬಂತಮ್ಮ, ಶುಕ್ರವಾರ ಬಂತಮ್ಮ;
ವಾರು ತುಂಬಿಸಮ್ಮ, ಕೆಲಸದ ವಾರು ತುಂಬಿಸಮ್ಮ,
ಈ ಜನ, ಗಲಾಟೆ, ಗಡಿಬಿಡಿಗಳನ್ನ ಎಷ್ಟೂಂತ ನೋಡೋದು ಅನ್ನಿಸಿ ಮುಖಕ್ಕೆ ಮೋಡದ ಮುಸುಕು ಹೊದ್ದು ಉದಾಸೀನಗೊಂಡ ಆಕಾಶ; ಅತ್ತ ಬಿಸಿಲೂ ಅಲ್ಲದೆ, ಇತ್ತ ತಂಪೂ ಇಲ್ಲದೆ ಇದ್ದ ಈ ವಾತಾವರಣದಲ್ಲಿ ಗಿಜಿಗುಡುತ್ತಿದ್ದ ಬಸ್ ಸ್ಟ್ಯಾಂಡು; ಎಲ್ಲಿ ನೋಡಿದರೂ ಜನ,
ಎಲ್ಲರೂ ಎಲ್ಲಿಗೋ ಹೊರಟವರು
ಎಲ್ಲಿಗೋ. . . ?
ಎಲ್ಲರೂ ಎಲ್ಲಿಂದಲೋ ಬಂದವರು,
ಎಲ್ಲಿಂದಲೋ. . .?