ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶೋಷಿತ ಜನತೆಯ ಉದ್ದಾರಕ ಅಂಬೇಡ್ಕರ್

ಬಾಬಾ ಸಾಹೇಬ್ ಅಂಬೇಡ್ಕರ್ ರವರು ದಲಿತ ಪ್ರಪಂಚದ ಜ್ಞಾನ ಭಂಡಾರದಲ್ಲಿ ನಿಸ್ಸಂಶಯವಾಗಿಯೂ ಒಬ್ಬ ಕೇಂದ್ರೀಯ ವ್ಯಕ್ತಿಯಾಗಿದ್ದಾರೆ. ಅಂಬೇಡ್ಕರ್ ರವರು ದಲಿತರ ಸಾಮೂಹಿಕ ಜೀವನದಲ್ಲಿ ಯಾವುದೇ ಗಂಭೀರವಾದ ಅಥವಾ ಬಹುಮುಖ್ಯವಾದ ವಿಷಯವನ್ನು ಸಂಪೂರ್ಣವಾಗಿ ಸ್ಪಶರ್ಿಸದ ವಿಷಯವನ್ನು ಊಹಿಸಿಕೊಳ್ಳುವುದು ಕಷ್ಟ.

ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....

ಕೆ.ಎಸ್.ನರಸಿಂಹಸ್ವಾಮಿಯವರಿಗೂ, ಮೈಸೂರು ಅನಂತ ಸ್ವಾಮಿಯವರಿಗೂ ಹೆಂಡತಿಯೊಬ್ಬಳು
ಮನೆಯೊಳಗಿದ್ದರೆ ಅದೇ ಕೋಟಿ ರೂಪಾಯಿ ಅನ್ನೋದು ನಮ್ಮೆಲ್ಲರಿಗೂ ಗೊತ್ತು. ಅವರಂತೆ ಎಷ್ಟೋ
ಜನಗಳಿಗೂ ಅದೇ ಭಾವನೆಯಿದ್ದರೂ, ಆ ರೀತಿ ಹೊಸ ಪದ್ಯಗಳನ್ನು ಹಾಡಿಲ್ಲ ಅಷ್ಟೇ.
ದಾರಿತಪ್ಪುತ್ತಿದ್ದ ಗಂಡಸರನ್ನು ಸರಿದಾರಿಗೆ ತಂದವರು ಹಲವರು, ಮತ್ತೆ ಸರಿಯಾದ

ಕೋಮುವಾದಿ/ವಿಚಾರವಾದಿ- ಯಾರು ಹಿತವರು ಕಷ್ಟಕಾಲದಿ?

ಹೆಚ್ಚಿನ ವಿಚಾರವಾದಿಗಳು ಸುರಕ್ಷಿತ ಸ್ಥಳದಲ್ಲಿದ್ದು, ಆ ಸಂಘಟನೆ ತಪ್ಪು, ಈ ಪಕ್ಷ ಕೋಮುವಾದಿ,ಮತ್ತೊಂದು ದೇಶದ್ರ್‍ಓಹಿ ಎಂದು ಹೇಳುತ್ತಿರುತ್ತಾರೆ.ಆದರೆ ಆ ಸಂಘಟನೆ
ಹುಟ್ಟಬೇಕಾದರೆ,ಅದು ಬಲಿಷ್ಟವಾಗಿ ಬೆಳೆಯಬೇಕಾದರೆ ಒಂದು ಕಾರಣ ಮತ್ತು
ಜನಬೆಂಬಲ ಇರಲೇಬೇಕಲ್ವಾ?
ಉದಾಹರಣೆಗೆ ಮೇಲ್ವರ್ಗದ ದಬ್ಬಾಳಿಕೆ ಜಾಸ್ತಿ ಇದ್ದ ಪ್ರದೇಶದಲ್ಲಿ ಒಂದು

ಹಿತನುಡಿ

ಪುಟ್ಟ ಮಗು ಬೇಕಾದರೆ ಒಂದನ್ನು ತಂದುಕೊ. ಇರುವ ದೊಡ್ಡ ಮಗನನ್ನೆ ಪುಟ್ಟ ಮಗನಂತೆ ಮಾತ್ರ ಕಾಣಬೇಡ. ಮುಂದು ಅವನ ಗತಿ?

ಹಿತನುಡಿ

ಸರಿಯಾಗಿ ಒಂದು ಸುಳ್ಳನ್ನು ಆಡಲು ಬಾರದವರು ಇದ್ದಾರೆ ಎಂಬುದು ಬಹು ಸಂತೋಷದ ಸಂಗತಿ ಆದರೆ, ಅವರೇ ಹೆಚ್ಚು ಸುಳ್ಳನ್ನು ಆಡುತ್ತಿರುವುದು ಸೋಜಿಗದ ಮತ್ತು ದುರ್ದೈವದ ಸಮಾಚಾರ.

ಇವುಗಳಿಗೆ ಏನನ್ನುತ್ತಾರೆ ?

ಹಚ್ಚ  ಹಸಿರು
ಹೊಚ್ಚ  ಹೊಸ
ಬೆಳ್ಳಂ ಬೆಳಿಗ್ಗೆ

ಅಂದ್ರೆ ಯಾವುದಕ್ಕೆ ಹೆಚ್ಚು ಒತ್ತು ಕೊಡುವಾಗ ಹೀಗೆ ಪದಗಳ(ಹಚ್ಚ, ಹೊಚ್ಚ, ಬೆಳ್ಳಂ) ಬಳಕೆ ಏನನ್ನುತ್ತಾರೆ...?

ನನ್ನ ಇತ್ತೀಚಿನ ಓದು

ಇತ್ತೀಚೆಗೆ ಒಂದು ಹಳೆಯ ಪುಸ್ತಕವನ್ನು DLIನಲ್ಲಿ ನೋಡಿದೆ. ಅದರಲ್ಲಿ ಮೊದಲಪುಟದ ಹಿಂದೆ ಸಾಮಾನ್ಯವಾಗಿ ಬರೆಯುವಂತೆ ' ಸರ್ವ ಹಕ್ಕುಸ್ವಾಮ್ಯ ಲೇಖಕರದು ಎಂಬುದರ ಬದಲಿಗೆ - ಒಡೆತನವೆಲ್ಲಾ ಬರೆದವರದು . ಎಂದಿತ್ತು!

-----------------------
ಇತ್ತೀಚೆಗೆ ನನ್ನ ಮೆಚ್ಚಿನ ಲೇಖಕ - ಅ.ರಾ.ಸೇ ಅವರ ಹಾಸ್ಯಲೇಖನಗಳ ಸಂಗ್ರಹ - ಶೀನಣ್ಣನ ರೋಮಾನ್ಸ್ -ಬಂದಿದ್ದು , ಕೊಂಡು ಓದಿ ಮುಗಿಸಿದೆ.

ಬ್ರೆಕ್ಟ್ ನ ವಿಶಿಷ್ಟ ನಾಟಕ 'ಚಾಕ್ ಸರ್ಕಲ್'ಪ್ರದರ್ಶನ ಕುರಿತ ವಿಮಶರ್ೆ

ಪ್ರಸಿದ್ದ ನಾಟಕಕಾರ ಬಟರ್ಾಲ್ ಬ್ರೆಕ್ಟ್ ರವರ 'ಚಾಕ್ ಸರ್ಕಲ್' ನಾಟಕ ಪ್ರದರ್ಶನ

ಎಂದೂ ಮುಳಗದ ಬೋಟು...

ನಾವೊಂದಷ್ಟು ಮಂದಿ ಬೈಕನೇರಿ ಬೆಳ್ಳಂಬೆಳಗ್ಗೆನೇ ಹೋರಟಿದ್ದು ತೀರ್ಥಹಳ್ಳಿ ರಸ್ತೆಯ ಮಾರ್ಗದಲ್ಲಿ. ಶಿವಮೊಗ್ಗದಿಂದ ಗಾಜನೂರು ಅಣೆಕಟ್ಟೆ ದಾಟುವಷ್ಟರಲ್ಲೇ ಇರುವ ಸಕ್ಕರೆಬೈಲು ಆನೆ ಬಿಡಾರ ನಮ್ಮ ಮೊದಲ ನಿಲುಗಡೆಯ ಸ್ಥಳ. ಹಿನ್ನೀರಿನಲ್ಲಿ ಬಂಡೆಗಳಂತೆ ಆನೆಗಳನ್ನು ಕೆಡವಿಕೊಂಡು ಅವುಗಳ ಮೈ ತಿಕ್ಕುವ ಮಾವುತರ ಕೆಲಸವನ್ನು ಅಚ್ಚರಿಯಿಂದ ನೋಡುತ್ತಿದ್ದಂತೆ ನಮ್ಮ ಬಳಿ ಬಂದವನು ಸಾದಿಕ್. ‘ಸಾರ್ ಬನ್ನಿ ಆ...ಲ್ಲಿ ಕಾಣ್ತಿದೆಯಲ್ಲಾ ಆ ಮರದವರೆಗೂ ಬೋಟಿನಲ್ಲಿ ಕರೆದುಕೊಂಡು ಹೋಗ್ತಿನಿ. ಒಬ್ಬರಿಗೆ ಬರೀ ಹದಿನೈದು ರುಪಾಯಿ ಅಷ್ಟೇ ಸಾರ್’ ಅಂದ. ಆತ ತೋರಿದ ಬೋಟು ನೋಡಿದರೆ ನಮಗೆ ಒಳಗೊಳಗೆ ದಿಗಿಲು. ನಮ್ಮ ಅನುಮಾನ ತುಂಬಿದ ಮುಖಗಳನ್ನು ನೋಡಿ ಅರ್ಥಮಾಡಿಕೊಂಡ ಆತ ‘ಸಾರ್ ಇದು ಕಬ್ಬಿಣದ ಬೋಟು ಸಾರ್....ಯಾವತ್ತೂ ಮುಳಗಲ್ಲ ನೋಡಿ, ಒಂದ್ಸಲ ಹತ್ತಿ ಸಾರ್ ನಿಂಗೆ ಗೋತ್ತಾಗುತ್ತೆ’ ಎಂದ. ಆತನ ಮಾತನ್ನು ನಾವೇನೂ ನಂಬಲಿಲ್ಲ. ಆದರೆ, ಹಿನ್ನಿರಿನಲ್ಲಿ ವಿಹರಿಸುವ ಆಸೆ ಹತ್ತಿಕ್ಕಿಕೊಳ್ಳಲಾಗದೆ ಆಗಿದ್ದಾಗಲಿ ಎಂದು ಆತ ತೋರಿದ ಎಂದೂ ಮುಳುಗದ ಬೋಟನ್ನೇರಿ, ಆತ ತೋರಿದಂತ ವಾಸ್ತು ಪ್ರಕಾರ ಕುಳಿತೆವು. ನೋಡಿ ಸಾರ್ ಆ ನೀರನಲ್ಲಿ ಇದ್ಯಲ್ಲಾ ಆ ಆನೆಯತ್ರ ಹೋದಾಗ ಗಲಾಟೆ ಮಾಡಬೇಡಿ... ಅದೇ ಆನೆ ಮೊನ್ನೆ ಟಾಟಾ ಸುಮೋನ ಪಲ್ಟಿ ಮಾಡಿತ್ತು ಎಂದ.. ನಾವು ಹತ್ತಿ ಕೂಂತಿದ್ದ ಎಂದೂ ಮುಳುಗದ ಬೋಟು ಆ ಆನೆಗೆ ಟಾಟಾ ಸುಮೋದಂಗೆ ಕಂಡರೇನು ಮಾಡೋದು ಅನ್ಕೊಂಡು ನಾವು ಸಮಸ್ತವನ್ನು ಮುಚ್ಚಿಕೊಂಡು ಕಣ್ಣನ್ನು ಮಾತ್ರ ಬಿಟ್ಟುಕೊಂಡು ಇರುವ ದೃಢ ನಿರ್ಧಾರ ಮಾಡಿದೆವು. ಆದರೆ, ಆತ ಮೊದಲು ಅತ್ಲಾಕಡೆ ಹೋಗಿ ಬರೋಣ ಸಾರ್.. ಎಂದು ಕರೆದೊಯ್ದ. ಸಧ್ಯ ಪಲ್ಟಿ ಮಾಡಿಸುವ ಆನೆಯಿಂದ ದೂರದಲ್ಲೇ ಹೋಗುತ್ತಿದ್ದೇವೆ ಅನ್ಕೊಂಡು ಹಿನ್ನೀರಿನಲ್ಲಿ ಎಂದೂ ಮುಳಗದ ಬೋಟನ್ನೇರಿ ಹೊರಟೆವು.