ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತಳ್ಳುಗಾಡಿಗಳನ್ನು ತಳ್ಳಿಯೇಬಿಟ್ಟರು!

ಬೆಳಿಗ್ಗೆ ಬೇಗನೇ ಏಳುವ ಅಭ್ಯಾಸವಿದ್ದವರು ಸುಮ್ಮನೆ ಬೆಂಗಳೂರಿನ ಬೀದಿಗಳಿಗೆ ಕಿವಿ ತೆರೆದಿಟ್ಟು ಕುಳಿತುಕೊಳ್ಳಿ. ಚಿತ್ರ ವಿಚಿತ್ರ ಸ್ವರ, ಸದ್ದುಗಳು ಬಂದು ಅಪ್ಪಳಿಸುತ್ತವೆ: ರಾತ್ರಿಯಿಡೀ ಕುಡಿದೂ ಕುಡಿದೂ ತೂರಾಡಿ ಎಗರಾಡಿ ಮಲಗಿದ್ದ ಆಚೆ ಮನೆಯವನು ಬೆಳಿಗ್ಗೆ ಗಂಟಲಲ್ಲಿ ಏನೋ ಸಿಕ್ಕಿ ಹಾಕಿಕೊಂಡವನಂತೆ `ಕ್ರ್ಯಾ...' ಎಂದು ಸರಿಪಡಿಸಿಕೊಳ್ಳುತ್ತಾ, ಕಂಡ ಕಂಡಲ್ಲಿ ಉಗಿಯುವ ಸದ್ದನ್ನು ಕೇಳಿಸಿಕೊಂಡರೆ ನಮ್ಮ ಮೈಮೇಲೇ ಉಗಿದುಬಿಟ್ಟನೇನೋ ಎಂಬಷ್ಟು ಜಿಗುಪ್ಸೆಯಾಗಿಬಿಡುತ್ತದೆ. ರಾತ್ರಿ ಜಗಳವಾಡಲು ಸಮಯವೇ ಸಿಗದ ಗಂಡ-ಹೆಂಡತಿ ಬೆಳಿಗ್ಗೆ ಎದ್ದೊಡನೆ ಸಹಸ್ರ ನಾಮಾವಳಿಗಳನ್ನು ಶುರು ಹಚ್ಚಿಕೊಳ್ಳುವುದನ್ನು ಕೇಳುವುದೂ ಒಮ್ಮೊಮ್ಮೆ ಖುಷಿಕೊಟ್ಟರೆ ಇನ್ನೂ ಕೆಲವೊಮ್ಮೆ ಕಿರಿಕಿರಿಯೋ ಕಿರಿಕಿರಿ. ಗಂಡ, ಹೆಂಡತಿಗೆ `ಲೋಫರ್‌' ಎಂದು ಬಯ್ಯುವುದೂ ಹೆಂಡತಿಯೂ `ನಾನಾ ಲೋಫರು? ನೀನು' ಎಂದು ಎದುರು ವಾದಿಸುವುದೂ ತಮಾಷೆಯ ಪರಾಕಾಷ್ಠೆ. ಕೆಲವೊಮ್ಮೆ ಆಚೆ ಮನೆಯವನು ಮತ್ತು ಈಚೆ ಮನೆಯವನು ವಿನಾಕಾರಣ ಕ್ಯಾತೆ ತೆಗೆದು ಬೆಂಗಳೂರಿನ ಶಬ್ದ ಭಂಡಾರದಲ್ಲಿರುವ ಬೈಗುಳಗಳನ್ನೆಲ್ಲ ಹರಾಜಿಗೆ ಹಾಕುವುದುಂಟು. ಇಷ್ಟಾಗಿಯೂ ಬೈಗುಳಗಳ ಹೊರತಾಗಿ ಅವರು ಮುಂದುವರಿಯುವುದಿಲ್ಲ ಎಂಬುದು ಗೊತ್ತಿದ್ದೋ ಏನೋ ಸದಾ ಜಗಳಾಡುವ ಈ ಇಬ್ಬರ ಹೆಂಡಂದಿರು ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ತಮ್ಮಷ್ಟಕ್ಕೆ ತಾವು ಸುಮ್ಮನಿದ್ದುಬಿಡುತ್ತಾರೆ. ಈ ಬೈಗುಳಗಳೂ ವಿಚಿತ್ರವೇ. ಇವು ಮನಸ್ಸಿಗೆ ತಟ್ಟುವ ಬೈಗುಳಗಳಲ್ಲ. ಕಿವಿಗೆ ಅಪ್ಪಳಿಸುವ ಬೈಗುಳಗಳಷ್ಟೆ; ಆ ಮಗ, ಈ ಮಗ, ಕೊಚ್ಚೆ ನನ್ಮಗ, ಕಜ್ಜಿ, ಕಂತ್ರಿ ನಾಯಿ ನನ್ಮಗ, ಅಪ್ಪಾ ನನ್ಮಗ... ಹೀಗೆ. ಈ ಬೈಗುಳಗಳನ್ನು ಕೇಳಿಸಿಕೊಂಡ ಹಳ್ಳಿಯವರು `ಥೂ! ಅವ್ನ... ಬೈಯಾಕೂ ಬರಾಂಗಿಲ್ಲಲ್ಲೋ' ಎಂದು ಗೊಣಗಿದ್ದನ್ನು ನಾನು ಕೇಳಿದ್ದೇನೆ. ಇಷ್ಟಕ್ಕೂ ಇದು ನಿಜವೇ ಅಲ್ಲವೇ? ಮೇಲ್ಕಾಣಿಸಿದ ಒಂದಿಷ್ಟು ಬೈಗುಳಗಳ ಹೊರತಾಗಿ ಬೇರೆ ಯಾವುದಾದರೂ ಬೈಗುಳಗಳು ಬೆಂಗಳೂರಿನ ಶಬ್ದ ಭಂಡಾರದಲ್ಲಿದ್ದರೆ ಹೇಳಿ!

ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?

ಸೀರಿಯಲ್‍ಗಳ ಟಿ.ಆರ್.ಪಿ ಹೆಚ್ಚುತ್ತಲೇ ಇದೆ. ಅದರಲ್ಲಿ ಅತ್ತೆ ಸೊಸೆ ಪರಸ್ಪರ ಜುಟ್ಟು ಹಿಡಿದು ಜಗಳವಾಡುತ್ತಲೇ ಇದ್ದಾರೆ. ಮಾತು ಮಾತಿಗೆ ದೇವರ ಕೋಣೆಗೆ ಹೋಗಿ ದೀವಾರ್ ಸಿನೆಮಾದಂತೆ ದೇವರನ್ನು ಬ್ಲಾಕ್ ಮೈಲ್ ಮಾಡಿ ತಮ್ಮ ಕೆಲಸ ಗಿಟ್ಟಿಸುತ್ತಲೇ ಇದ್ದಾರೆ. ದಿನ ದಿನ ಕಡುವಾ ಚೌತ್ ಮಾಡಿ ತಮ್ಮ ಗಂಡಂದಿರ ಆಯುಷ್ಯ ಹೆಚ್ಚಿಸುತ್ತಲೇ ಇದ್ದಾರೆ. ನಮ್ಮ ಕಾಲೇಜು ಹುಡುಗ ಹುಡುಗಿಯರು ಈ ಸೀರಿಯಲ್‍ಗಳನ್ನು ಬೈಯ್ಯುತ್ತಲೇ ಕದ್ದು ಮುಚ್ಚಿ ತಮ್ಮ ಪ್ರೇಮಿಗಳಿಗಾಗಿ ಉಪವಾಸ ಮಾಡುವುದು, ಕಡುವಾ ಚೌತ್ (ನಂಬಿದರೆ ನಂಬಿ ಬಿಟ್ಟರೆ ಬಿಡಿ... ಆದರೆ ಇದು ನಿಜ!) ನಡೆಸುತ್ತಿದ್ದಾರೆ! ಕನ್ನಡದ ಉತ್ತಮ ನಿರ್ದೇಶಕರೊಬ್ಬರ ಮನೆಗೆ ನಾನು ಹೋಗಿದ್ದ ಸಂದರ್ಭದಲ್ಲಿ ಉತ್ತಮ ಕಲಾವಿದೆಯಾಗಿರುವ ಅವರ ಹೆಂಡತಿಯೂ ಸಹ ಇಂಥದ್ದೇ ಸೀರಿಯಲ್ ನೋಡಿಕೊಂಡು ಕುಳಿತಿದ್ದದ್ದು ಕಂಡು ನಾನು ಎರಡು ವರ್ಷ ಹಿಂದೆ ಆಶ್ಚರ್ಯ ಪಟ್ಟಿದ್ದೆ. ವರ್ಷ ಉರುಳುತ್ತಾ ಸಾಗಿದೆ. ಸೀರಿಯಲ್‍ಗಳ ಎಪಿಸೋಡ್ ಸಂಖ್ಯೆ ಉರುಳಿದಂತೆ. ನಾವಿನ್ನೂ ಇದರಿಂದ ಮೇಲೆದ್ದಿಲ್ಲ.

ಕನ್ನಡದ ಕಂಪು

ಕನ್ನಡವನ್ನು ಬೆಳೆಸಲು ಕನ್ನಡದ ಬಗ್ಗೆ ಹೊರ ರಾಜ್ಯದಿಂದ ಬಂದು ನೆಲೆಸಿರುವ ಜನರಲ್ಲಿ ಆಸಕ್ತಿ ಮೂಡಿಸುವುದು ಇಂದು ಅಗತ್ಯವಾಗಿದೆ. ಅಂತದೊಂದು ಪ್ರಯತ್ನ ನಮ್ಮ ಕಂಪನಿ LG CNS Global, ಬೆಂಗಳೂರಿನಲ್ಲಿ ನಡೆಯಿತು. ನಮ್ಮ ಟೀಮಿನಲ್ಲಿ ಇರುವ 25 ಜನರಲ್ಲಿ 12 ಜನ ಕನ್ನಡಿಗರು ಮತ್ತು ಉಳಿದವರು ಹೊರ ರಾಜ್ಯದವರು.

ಜಯಂತ ಕಾಯ್ಕಿಣಿಯವರ ಹೊಸ ಕತೆ - ನೀರು

  • ನಿದ್ದೆ ಎಚ್ಚರ ನೀರು ಬೆಳಕು ಪಯಣ ಭಯ ದಣಿವುಗಳ ಮಾದಕ ಮಿಶ್ರಣದಂತಿರುವ ಒದ್ದೆ ಇರುಳಲ್ಲಿ ಒಂದು ಸ್ವಪ್ನದಲ್ಲಿ ನಡೆದಂತೆ ನಡೆದರು. ಅದಾಗಲೇ ಅವರ ನಡುವೆ ಎಷ್ಟೋ ವರುಷಗಳಿಂದ ಜತೆಗಿದ್ದಂತಿದ್ದ ಸಲುಗೆಯ ದಣಿವು ಇತ್ತು.
  • "ಕಾಳಜಿ ಮಾಡಬೇಡಿ ಸಾಬ್, ಬೇಗ ಬಲುಬೇಗ ಗುಣವಾಗ್ತೀರಿ, ನಿಮ್ಮ ಮೊಮ್ಮಗಳ ಮದುವೆ ಖಂಡಿತ ನೋಡ್ತೀರಿ. ನನ್ನ ಈ ರಾತ್ರಿಯ ದುವಾ ಇದೆ ನಿಮಗೆ"
  • ಲಕ್ಷಾಂತರ ಮನೆಗಳನ್ನು ನಡುನೀರಿನಲ್ಲಿ ಬಿಟ್ಟು ಲಕ್ಷಾಂತರ ಜನರನ್ನು ಅಂಚಿಗೆ ತಳ್ಳಿದ ಈ ಜಲಪ್ರಳಯದ ಅನಂತರದ ಈ ಸುದೀರ್ಘ ನೀರವದ ಬೀದಿಯಲ್ಲಿ, ಇರುಳಿನ ಕೊನೆಗಳಿಗೆಯಲ್ಲಿ, ಆರಾಧ್ಯ ಜೀವದ ಲೇಸಿಗೆಂದು ಹೃದಯ ತುಂಬಿ ತಂದ ಪುಟ್ಟ ಬಿಂದಿಗೆಯೊಂದು ಚಲಿಸಿ ಹೋದ ರೀತಿಯನ್ನು ಸುಮ್ಮನೆ ನೋಡಿದ ಸಂತೋಷನ್ ಗೆ ದೇವರನ್ನೇ ಕಂಡಂತಾಯಿತು..

ಮೇಲಿನ ಈ ಮೂರೂ ಪಂಕ್ತಿಗಳು ನನ್ನ ಪ್ರೀತಿಯ ಕತೆಗಾರ ಜಯಂತ್ ಕಾಯ್ಕಿಣಿಯವರ ಇತ್ತೀಚಿನ ಪ್ರಕಟಿತ ಕತೆ - ನೀರು - ಇಂದ ಆಯ್ದದ್ದು. ತರಂಗದ ಈ ಬಾರಿಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದೆ.

ಜಯಂತ್ ನನ್ನ ಪ್ರೀತಿಯ ಬರಹಗಾರರು. ಒಬ್ಬ ಲೇಖಕರಾಗಿ ಮತ್ತು ವ್ಯಕ್ತಿಯಾಗಿ ನಾನು ಅವರನ್ನು ತುಂಬ ಇಷ್ಟಪಡುತ್ತೇನೆ. ಅವರ ಸಹವಾಸವೇ, ಮಾತುಕತೆಯೇ ಒಂದು ಆಹ್ಲಾದ.. ಕಡಲ ದಂಡೆಯ ಸಂಜೆ ಗಾಳಿಯಂತೆ... ಅವರ ಬರಹಗಳು ಮಬ್ಬು ಕವಿದ ಮನಸ್ಸಿನಲ್ಲಿ ಮಿನುಗುವ ಪುಟ್ಟ ದೀಪಗಳಾಗಿ ಚಿಂತನೆಯ ಬೆಳಕು ಹಚ್ಚುತ್ತವೆ. ಇಲ್ಲ ಅವರೇನು ಉಪದೇಶ ಮಾಡುವುದಿಲ್ಲ, ದಾರಿದೀಪವೂ ಅಲ್ಲ - ಕತ್ತಲ ಹಾದಿಯುದ್ದದ ಮನೆಗಳ ದೀಪದ ಕೋಲಿನಂತೆ ಅವರ ಬರಹ/ಕತೆ/ಕವನಗಳು. ಅದು ಕಣ್ಣು ಕುಕ್ಕುವ ಪ್ರಖರ ಬೆಳಕಲ್ಲ, ಇದೇ ದಾರಿಯಲ್ಲಿ ಹೋಗಿ ಎಂದು ಹೇಳುವ ಕೈಮರವಲ್ಲ.. ನಿಮ್ಮ ದಾರಿಯ ನೀವೇ ಹುಡುಕಿಕೊಳ್ಳಲು ಸುಲಭವಾಗುವಂತೆ, ನಿಮಗೇ ಉದ್ದೇಶಿಸದಂತೆ, ಆದರೆ ನಿಮಗಾಗೇ ಕಾದಿರುವಂತೆ ಬೆಳಗಿರುವ ಬೆಳಕಿನ ಕೋಲುಗಳು. ಓದತೊಡಗಿದಂತೆ ಆಪ್ತವಾಗಿ ತೆರೆದುಕೊಳ್ಳುವ ಕಥಾಲೋಕದೊಂದಿಗೆ ನಿಮ್ಮೊಳಹೊಕ್ಕು, ನಿಮ್ಮ ನಡೆ ನುಡಿ ಆಲೋಚನೆಗಳಲ್ಲಿ ನಿಮ್ಮವೇ ಆಗಿ ಹೊರಹೊಮ್ಮುವ ಭಾವ ದೀಪಗಳು.

ಜಾನಪದಶೈಲಿಯ ಗೀತೆ

ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ 

ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ 

ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ 

ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡುಗಿಯ ಪಕ್ಕಕೆ ಬಂದು ನಿಂತಿತ್ತ "ಪ" 

ನನಗೊಂದು ಹೆಣ್ಣು ಬೇಕು ಅವಳು ಈ(ಹೀ)ಗಿರಬೇಕು

"ನನಗೊಂದು ಹೆಣ್ಣು ಬೇಕು   

ಅವಳು ಈಗಿರಬೇಕು(ಹೀಗಿರಬೇಕು)"

ಮನದ ಮೃದಂಗ  ನುಡಿಸಿ 

ಎದೆಯಲ್ಲಿ ಪ್ರೇಮರಾಗ ಮಿಡಿವಂತೆ  

ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು

ಅಂದಕಾರದ ಬದುಕಿಗೆ ಬೆಳಕಾಗಬಲ್ಲ

ಅರಿವಿನ ಅ(ಹ)ರಿಣಿ ಅವಳಾಗಬೇಕು

ಜೀವಕ್ಕೆ ಉಸಿರು-ಹಸಿರಾಗ ಬಯಸುವ

ಚೈತ್ರ ಚಲುವ ಹೆಣ್ಣಾಗಿರಬೇಕು

ಪುಸ್ತಕ ಬಿಡುಗಡೆ ಸಮಾರಂಭ

ಪ್ರೊ| ಕೆ ಎಂ ಸೀತಾರಾಮಯ್ಯ ಅವರು ಅನುವಾದಿಸಿರುವ

ಈನಿಯಡ್

 

(ಲ್ಯಾಟಿನ್ ಮಹಾಕವಿ ವರ್ಜಿಲನ ಮಾಹಾಕಾವ್ಯದ ಕನ್ನಡಾನುವಾದ)

ಮತ್ತು

ಶ್ರೀಮತಿ ಸುನಂದಾ ಬೆಳಗಾಂವಕರ ಅವರ

ಕಜ್ಜಾಯ

(ಲಲಿತ ಪ್ರಬಂದಹಗಳು)

೦೧-೪-೨೦೦೭ ಭಾನುವಾರ ಬೆಳಿಗ್ಗೆ ೧೦.೩೦ ಕ್ಕೆ

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಂ. ೬, ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು - ೫೬೦ ೦೦೪
(ಅಂಕಿತ ಪುಸ್ತಕ)

ವಿನುತ(ವನಿತ)

ನಿನ್ನ ಕೀರ್ತಿ ಏರಲಿ

ದಿಗಂತ

ನಿನ್ನ ಸಾದ(ಧ)ನೆಗೆ

ನನ್ನ ಹೃದಯಾಭಿನಂದನೆ

ಅನಂತಾನಂತ

ಸದಾ ಹಸಿರಾಗಿರಲಿ

ಪ್ರೀತಿ,ವಾತ್ಸಲ್ಯ,ಅನುಕಂಪ

ನಿನ್ನಲ್ಲಿ ಸಿರತ

ಬದುಕಲ್ಲಿ ಗೆಲುವು ಸಿಗಲಿ

ನಿನಗೆ ಸತತ

-ವೆಂ ಕೃ ಬಿ ಎಂ ಎಸ್ ಸಿ ಇ