ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೀರು-ನೀರವತೆ-ನಗ್ನತೆ

ಸಂಜೆ,ಮುಸ್ಸಂಜೆಯ ಸಮಯ. ವಿಪರೀತ ಧಗೆ. ಬಗೆ ಬಗೆಯ ಸಸ್ಯವನ್ನು ರಾಶಿ,ರಾಶಿಯಾಗಿ ತನ್ನೊಡಲಲ್ಲಿ ಇಟ್ಟುಕೊಂಡ ಆ ಬೆಟ್ಟದ ಇಳಿಜಾರಿನಲ್ಲಿ ಇಳಿದಿಳಿದು ಹೋದೆ.ಹಸಿರು ಉಡುಗೆಯುಟ್ಟ ಎದುರಿಗಿನ ಬೆಟ್ಟದ ಕಲ್ಲಂಚಿನಿಂದ ಝರಿ,ಝರಿಯಾಗಿ ಆತುರದಿಂದ ಜರಿ ಜರಿದು ತೊರೆಯಾಗಿ ಹರಿ ಹರಿದು ಹೋಗುತ್ತಿದ್ದ ಚಿಕ್ಕಹಳ್ಳ...ಗೂಡಿಗೆ ಮರಳಿದ್ದ ಹಕ್ಕಿಗಳ ಚಿಲಿಪಿಲಿಯ ಹೊರತಾಗಿ ಅಲ್ಲೆಲ್ಲ ನಿಶ್ಯಬ್ದ..ಕಪ್ಪು ಕಪ್ಪು ಕಲ್ಲು ಹಾಸುಗಳು..ಬಿಸಿಲಿಗೆ ಅಷ್ಟಿಷ್ಟು ಕಾದವುಗಳು.

ಬೀಸುಗಾಲು ಹಾಕುತ್ತ ಹತ್ತಿ,ಗುತ್ತಿ ಹೋದ ನಾನು ಅ೦ತಿಮವಾಗಿ ಒಂದು ಬಂಡೆಯ ಮೇಲೆ ಕುಳಿತೆ.ಸಹಜವಾಗಿ ನೀರಿಗಿಳಿದವು ನನ್ನೆರಡು ಕಾಲುಗಳು..ತಂಪೆಂದರೆ ತಂಪಾದ ನೀರು ಅದು. ಕಾಲುಗಳಿಗೆ ಸವರಿಕೊಂಡು ಹೋಗುತ್ತಿದ್ದ ತಣ್ಣನೆಯ ನೀರು ನನಗೆ ಕಾಲವನ್ನೇ ಮರೆಸಿತ್ತು.
ಬೆಳದಿಂಗಳು ಆವರಿಸಿತ್ತು.ಅಲ್ಲಿ ಯಾರೂ ಇರಲಿಲ್ಲ ನನ್ನೊಬ್ಬನ ಹೊರತಾಗಿ.ಪ್ರಕೃತಿ ಮತ್ತು ಅದು ಎಲ್ಲ ಮನುಷ್ಯರನ್ನು ಸೃಷ್ಟಿಸಿದ್ದ ಹಾಗೆ ಸೃಷ್ಟಿಸಿದ್ದ ನಾನು.

ನೋವಲ್ಲಿ ಹುಟ್ಟುವ ಕವಿತೆ...

Our sweetest songs are those that tell of saddest thoughts...
- Percy Bysshe Shelley

ನೋವಲ್ಲಿ ಹುಟ್ಟುವ ಕವಿತೆಗೆ
ಅದೇನು ಶಕ್ತಿ...
ಅರಳಿ ನಳನಳಿಸುತ್ತದೆ...
ಜಗವ ಘಮಿಸುತ್ತದೆ...
ನೋವು ಹೀರುತ್ತದೆ...
ಸ೦ಗಾತಿಯಾಗುತ್ತದೆ...
ಸಾ೦ತ್ವನವಾಗುತ್ತದೆ...
ಮನವ ಬೆಳಗುತ್ತದೆ...
ಅಮೃತವಾಗುತ್ತದೆ...
ಅಮರವಾಗುತ್ತದೆ...

( ಇದು ಕವಿತೆಯಲ್ಲ :-) )

ಹಿತನುಡಿ

ಜಗತ್ತು ನಮ್ಮ ಪೂರ್ವಜರು ನಮಗೆ ಕೊಟ್ಟ ಬಳುವಳಿಯಲ್ಲ... ಬದಲಾಗಿ, ನಮ್ಮ ಮಕ್ಕಳಿಂದ ನಾವು ಕಸಿದುಕೊಳ್ಳುತ್ತಿರುವ ಸೊತ್ತು...

ಧರ್ಮಾಂಧತೆಯ ಬಗ್ಗೆ

ಈ ಲೇಖನವನ್ನು ಒಂದು ವಾರ ಮುಂಚೆಯೇ ಬರೆದು ನನ್ನ ಬ್ಲಾಗ್ಸ್ಪಾಟ್ ಬ್ಲಾಗಿನಲ್ಲಿ ಹಾಕಿಕೊಂಡಿದ್ದೆ. ಆ ಹೊತ್ತಿನಲ್ಲಿ ಸಂಪದ ವಾದವಿವಾದಗಳಿಂದ ತುಂಬಿ ಹೋಗಿತ್ತು. ಅದಕ್ಕೆ ಮತ್ತೊಂದು ವಾದವೇಕೆ ಅಂತ ಸುಮ್ಮನಿದ್ದೆ. ಆದರೆ, ನಿನ್ನೆ ವಿಜಯಕರ್ನಾಟಕದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಲೇಖನ (ಮಾಳವಿಕ ಲಿಖಿತ) ಪ್ರಕಟಗೊಂಡದ್ದು ಓದಿ ಕಿರಿಕಿರಿಯಾಯಿತು. ಅದಕ್ಕೆ ಸಂಪದದಲ್ಲಿ ಈ ವಿಚಾರವಾಗಿ ಚರ್ಚ ಸಧ್ಯಕ್ಕೆ ನಡೆಯದೇ ಇರುವುದನ್ನು ಕಂಡು ಇಲ್ಲಿ ಹಾಕುತ್ತಿದ್ದೇನೆ.

ಇತ್ತೀಚೆಗೆ ವಿಜಯಕರ್ನಾಟಕದಲ್ಲಿ, ಹಿಂದೆ ಮುಸ್ಲಿಮರು ಮಾಡಿದ್ದ ಕೃತ್ಯಗಳ ಚರ್ಚೆ, ಆ ಕೋಮಿನ ವಿಚಾರಧಾರೆಯ ಬಗ್ಗೆಯ ಮೌಲಿಕ ನಿರ್ಧಾರಗಳನ್ನು ಮೊದಲೇ ತೆಗೆದುಕೊಂಡು ಬರೆದಿರುವಂತಹ ಹಲವು ಲೇಖನಗಳು ಮೇಲಿಂದ ಮೇಲೆ ಬರುತ್ತಿರುವಂತೆ ತೋರುತ್ತದೆ, ಅಥವ ಅವುಗಳು ಬಂದಾಗ ಜನರು ಇಷ್ಟಪಟ್ಟು ಓದುವುದೇ ಕಾರಣವೇನೋ, ಹಲವು ಜನರ ಬಾಯಿಯಲ್ಲಿ ಈ‌ ವಿಷಯ ಕೇಳಬರುತ್ತಲೇ ಇದೆ. ದು:ಖಕರ ಸಂಗತಿಯೆಂದರೆ, ಹತ್ತಿರವಾಗಿರುವ ಹಲವು ಜನರು ಈ‌ ವಾದಕ್ಕೆ ಮಾರು ಹೋಗಿ, ನೈಸ್ ವನ್ ಅಂತಾನೋ, ಸರಿಯಾಗಿಯೇ ಹೇಳ್ತಾನೆ ಅಂತಾನೋ ಹೊಗಳಿ ಗರ್ವದಿಂದ ತಮ್ಮ ನಿಲುವನ್ನೇ ಬದಲಿಸಿಕೊಳ್ಳುತ್ತಿರುವುದು, ಅದಕ್ಕಿಂತಲೂ ಹೆಚ್ಚಾಗಿ ಇತರರಿಗೂ‌ ಬಲವಂತವಾಗಿ ಈ‌ ಲೇಖನಗಳನ್ನು ಉಣಿಸುತ್ತಿರುವುದು.

ಗೂಗಲ್ ನವರಿಂದ ಹೊಸ ತಂತ್ರಜ್ಞಾನ!!

ಗೂಗಲ್ ನವರು ಏನಾದರೊಂದು ಹೊಸತು ಮಾಡುತ್ತಲೇ ಇರುತ್ತಾರೆ. ಈ ಬಾರಿಯಂತೂ ಬೇರೆ ಯಾರೂ ಯೋಚನೆ ಮಾಡಲಾಗದಂತಹ ತಂತ್ರಜ್ಞಾನ ಹೊರತಂದಿದ್ದಾರೆ. ಬ್ರಾಡ್‍ಬ್ಯಾಂಡ್ ಅತ್ಯಂತ ತುಟ್ಟಿಯಾಗಿರುವ ಈ ಕಾಲದಲ್ಲಿ ಬಿಟ್ಟಿ internet ಕೊಡುವುದು ಆಶ್ಚರ್ಯ. ಅದೂ ಎಲ್ಲರ (ಪಾಶ್ಚಾತ್ಯ) ಮನೆಗಳಲ್ಲಿ ಇರುವ ಸಲಕರಣೆ ಉಪಯೋಗಿಸಿ!!

ಹೀಟ್ ಬಾಡಿ

೩೬-೨೬-೩೬. ಇಂಥಾ fiಗರ್ ಯಾರದ್ದೂಂತಿರಾ? ಬೆಂಗಳೂರಿನ
ಹವಮಾನ ಇಲಾಖೆಯದ್ದು."ಗರಿಷ್ಟ-ಕನಿಷ್ಟ"ಉಷ್ಣಾಂಶಗಳು.
ಕೊನೆಯ "೩೬" ಎನೂಂದಿರಾ?
ಅದು ವಿಮಾನನಿಲ್ದಾಣದ್ದು.ಅವರಿಗೆ ಬೇಕಾದಷ್ಟು ಬಜೆಟ್ ಮಂಜೂರಾದರೆ ಟಿ.ವಿ.
ಟವರ್ ಮೇಲಿನ,ಲಾಲ್ ಬಾಗ್ ಒಳಗಿನ ವಿದಾನಸೌಧದ ಒಳಹೊರಗಿನ
ಉಷ್ಣಾಂಶಗಳನ್ನು ಪ್ರಕಟಿಸುತ್ತಿದ್ದರೋ ಏನೋ!

ಬಣ್ಣ ಕಳಚುವ ಕೋಣೆ

ಏಕಾಂತವಿದೆ ಗೆಳತಿ ಬದುಕಿನುದ್ದ
ಏಕಾಂಕವಿದೆ ಗೆಳತಿ ಜೀವನುದುದ್ದ
ನಾನು ಬಣ್ಣ ಹಚ್ಚುತ್ತೇನೆ
ನೀನೆ ಪ್ರೇಕ್ಷಕಿ
ತೆರೆ ಸರಿಯುತ್ತದೆ
ಬಣ್ಣದೊಳಗು ಬೆವರು ಸುರಿಯುತ್ತದೆ
ಮಾತು ಹೊರಡುವುದಿಲ್ಲ

ನಿನ್ನ ಮುಖದಲ್ಲಿ ನನ್ನ ಮಾತು
ಬಣ್ಣ ನನ್ನ ಮುಖದಲ್ಲಿ
ತೆರೆ ಮುಚ್ಚುತ್ತದೆ
ಬಣ್ಣ ಕಳಚಿಹೋಗುತ್ತದೆ
ಒಂದುಗೂಡುತ್ತೇವೆ ಬಣ್ಣ ಕಳಚುವ ಕೋಣೆಯಲ್ಲಿ

ದಿಟ್ಟ ಹೆಜ್ಜೆಗಳನ್ನು ಹಿಂಬಾಲಿಸುತ್ತಾ . . .

ಕಳೆದ ಸುಮಾರು ಒಂದು ವರುಷದಲ್ಲಿ ನನ್ನ ಹತ್ತಿರದ ಸ್ನೇಹಿತರ ಪೈಕಿ ಹಲವರು ಮದುವೆ ಮಾಡಿಕೊಂಡರು.
ಅದರಲ್ಲಿ ವಿಶೇಷವಾಗಿ ನನಗೆ ಖುಷಿ ಅನ್ನಿಸಿದ ಎರಡು ಮದುವೆಗಳ ಬಗ್ಗೆ ಇಲ್ಲಿ ಬರೆಯುತ್ತಿದ್ದೇನೆ.

ಒಂದು ಅಂತರ್ ಜಾತೀಯ ವಿವಾಹವಾದರೆ , ಇನ್ನೊಂದು ಅಂತರ್ ಧರ್ಮೀಯ ವಿವಾಹ .
ಒಂದು ಸರಳ ವಿವಾಹ ; ಇನ್ನೊಂದು ವಿಧಿವತ್ತಾಗಿ ನಡೆದ ವಿವಾಹ.