ಸೇಡು ತೀರಿಸಿದ ಕರ್ನಾಟಕ
ಧರ್ಮಶಾಲಾದಲ್ಲಿ ಇಂದು ನಡೆದ ರಣಜಿ ಏಕದಿನ ಟ್ರೋಫಿಯ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಬ
- Read more about ಸೇಡು ತೀರಿಸಿದ ಕರ್ನಾಟಕ
- 1 comment
- Log in or register to post comments
ಧರ್ಮಶಾಲಾದಲ್ಲಿ ಇಂದು ನಡೆದ ರಣಜಿ ಏಕದಿನ ಟ್ರೋಫಿಯ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಬ
ಆಂಡೀ ಡುಫ್ರ್ರೆನ್ಸ್ ಒಬ್ಬ ಚತುರ, ಚಾಣಾಕ್ಷ ಬ್ಯಾಂಕ್ ಅಧಿಕಾರಿ. ಸುಂದರ ಪತ್ನಿ, ದೌಲತ್ತಿನ-ಸವಲತ್ತಿನ ಜೀವನ, ಅಮೇರಿಕಾದ ಮುಕ್ತ ಬದುಕಿನ ಸುಂದರ ಕನಸುಗಳು. ಜೀವನ ಇದಕ್ಕಿಂತ ಇನ್ನೇನು ತಾನೇ ಕೊಟ್ಟೀತು? ಜೀವನದಿಂದ ಇನ್ನೇನು ತಾನೇ ಕೇಳಬಹುದು? ಆಂಡೀ ಡುಫ್ರ್ರೆನ್ಸ್ ಸಂತುಷ್ಟನಾಗಿದ್ದ ಎನ್ನಲೇ? ಅಥವಾ ಅದೆಲ್ಲವೂ ಒಂದು ಸುಂದರ ಕನಸಾಗಿತ್ತು ಎನ್ನಲೇ? ಬಹುಷಃ ಕನಸು ಎಂಬುದೇ ಸರಿಯಾದ ಶಬ್ದ. ಏಕೆಂದರೆ ಕನಸುಗಳು ಕಣ್ಣುಬಿಡುತ್ತಿದ್ದಂತೆಯೇ ಕರಗಿಹೋಗುತ್ತವೆ. ಒಂದು ಸರಳವಾದ ಕೇಸ್. ಖಚಿತವಾಗಿ ಸಿಗುವ ಪುರಾವೆಗಳು. ದಕ್ಷ ಪೊಲೀಸರು, ಗೌರವಾನ್ವಿತ ಸಮಾಜ, ನಿಷ್ಟಾವಂತ ಅಧಿಕಾರಿಗಳು ಇವೆಲ್ಲಾ ಸೇರಿ ಸಂಶಯಕ್ಕೆಡೆಯಿಲ್ಲದಂತೆ ಆನ್ಡಿ ಡುಫ್ರ್ರೆನ್ಸನನ್ನು ೧೯೪೭ರಲ್ಲಿ ಸ್ವಶಾಂಕ್ ಎಂಬ ಅಮೇರಿಕಾದ ಜೈಲಿಗೆ ತಳ್ಳಿತು. ಸಮಾಜ ತನ್ನೊಳಗಿನೊಂದು ಮುಳ್ಳನ್ನು ಕಳೆಯಿತೆಂದು ಅಂದುಕೊಂಡು ನಿಟ್ಟುಸಿರಿಟ್ಟಿತು. ಇಲ್ಲಿಂದ ಆರಂಭವಾಗುತ್ತೆ ಒಂದು ಮಹಾಪಲಾಯನ ಕಥನ ಸ್ವಶಾಂಕ್ ರಿಡೆಂಪ್ಶನ್ ಎನ್ನುವ ಚಿತ್ರದ್ದು. (೧೯೯೪) Shawshank Redemption (1994)
ಡರಬೌನ್ಟ್ ನಿರ್ದೇಶಿತ ಮೊದಲ ಚಿತ್ರವಾದ ಇದು ಆತನ ಆಗಲೇ ಪ್ರಸಿದ್ಧವಾಗಿದ್ದ ಬರವಣಿಗೆ ಹಾಗೂ ಇತರ ಚಿತ್ರನಿರ್ಮಾಣ ಸಂಬಂಧೀ ಕುಶಲತೆಗಳ ಪಟ್ಟಿಗೆ ಇನ್ನೊಂದು ಗರಿಯನ್ನಿಟ್ಟಿತು. ಮಾನವನ ಮೂಲಭೂತ ಭಾವನೆಗಳು ಪರೀಕ್ಷೆಗಿಟ್ಟಾಗ ಹೇಗೆ ಬೇರೆ ಬೇರೆ ರೂಪಗಳಿಂದ ಚಿಮ್ಮಿ ಹೊರಹೊಮ್ಮುತ್ತದೆ ಎನ್ನುವುದು ಈ ಕಥೆಯ ಕಥನ. ನಮ್ಮ ಮನಸ್ಸನ್ನಾವರಿಸಿ ಮುದಕೊಡುವ ಕಥೆಗಳು ಶ್ರೀಸಾಮಾನ್ಯರಿಂದಲ್ಲ (ಸ್ಟೀರಿಯೋ ಟೈಪ್) ಅವರೊಳಗಿನ ಒಬ್ಬೊಬ್ಬ ವಿಶೇಷ ವ್ಯಕ್ತಿಯಿಂದ (ಆರ್ಖಿಟೈಪ್) ಹುಟ್ಟುತ್ತವೆ ಎಂದು ಒಮ್ಮೆ ಓದಿದ್ದೆ. ಆನ್ಡಿ ಡುಫ್ರ್ರೆನ್ಸ್ ಅಂಥಾ ಒಬ್ಬ ಕಥಾನಾಯಕ. ಆತ ತೀರಾ ಸರಳ, ಸಾಮಾನ್ಯ ಸಜ್ಜನ. ಮೇಲ್ನೋಟಕ್ಕೆ ತೀರಾ ಸಾಧಾರಣ ವ್ಯಕ್ತಿ. ಆದರೆ ಪರಿಸ್ಥಿತಿ ಕೂಡಿಬಂದಾಗ ಆವರೆಗೆ ಅಡಗಿದ್ದ ಒಂದು ಅದಮ್ಯ ಶಕ್ತಿ ಹೊರಬಂದು ಪವಾಡಗಳನ್ನು ಆತ ಸಾಧಿಸುತ್ತಾನೆ.
ಆಂಡೀ ಡುಫ್ರ್ರೆನ್ಸ್ ಒಬ್ಬ ಚತುರ, ಚಾಣಾಕ್ಷ ಬ್ಯಾಂಕ್ ಅಧಿಕಾರಿ. ಸುಂದರ ಪತ್ನಿ, ದೌಲತ್ತಿನ-ಸವಲತ್ತಿನ ಜೀವನ, ಅಮೇರಿಕಾದ ಮುಕ್ತ ಬದುಕಿನ ಸುಂದರ ಕನಸುಗಳು. ಜೀವನ ಇದಕ್ಕಿಂತ ಇನ್ನೇನು ತಾನೇ ಕೊಟ್ಟೀತು? ಜೀವನದಿಂದ ಇನ್ನೇನು ತಾನೇ ಕೇಳಬಹುದು? ಆಂಡೀ ಡುಫ್ರ್ರೆನ್ಸ್ ಸಂತುಷ್ಟನಾಗಿದ್ದ ಎನ್ನಲೇ? ಅಥವಾ ಅದೆಲ್ಲವೂ ಒಂದು ಸುಂದರ ಕನಸಾಗಿತ್ತು ಎನ್ನಲೇ? ಬಹುಷಃ ಕನಸು ಎಂಬುದೇ ಸರಿಯಾದ ಶಬ್ದ. ಏಕೆಂದರೆ ಕನಸುಗಳು ಕಣ್ಣುಬಿಡುತ್ತಿದ್ದಂತೆಯೇ ಕರಗಿಹೋಗುತ್ತವೆ. ಒಂದು ಸರಳವಾದ ಕೇಸ್. ಖಚಿತವಾಗಿ ಸಿಗುವ ಪುರಾವೆಗಳು. ದಕ್ಷ ಪೊಲೀಸರು, ಗೌರವಾನ್ವಿತ ಸಮಾಜ, ನಿಷ್ಟಾವಂತ ಅಧಿಕಾರಿಗಳು ಇವೆಲ್ಲಾ ಸೇರಿ ಸಂಶಯಕ್ಕೆಡೆಯಿಲ್ಲದಂತೆ ಆನ್ಡಿ ಡುಫ್ರ್ರೆನ್ಸನನ್ನು ೧೯೪೭ರಲ್ಲಿ ಸ್ವಶಾಂಕ್ ಎಂಬ ಅಮೇರಿಕಾದ ಜೈಲಿಗೆ ತಳ್ಳಿತು. ಸಮಾಜ ತನ್ನೊಳಗಿನೊಂದು ಮುಳ್ಳನ್ನು ಕಳೆಯಿತೆಂದು ಅಂದುಕೊಂಡು ನಿಟ್ಟುಸಿರಿಟ್ಟಿತು. ಇಲ್ಲಿಂದ ಆರಂಭವಾಗುತ್ತೆ ಒಂದು ಮಹಾಪಲಾಯನ ಕಥನ ಸ್ವಶಾಂಕ್ ರಿಡೆಂಪ್ಶನ್ ಎನ್ನುವ ಚಿತ್ರದ್ದು. (೧೯೯೪) Shawshank Redemption (1994)
ನನ್ನ ಪಾಂಡಿತ್ಯ ಅಷ್ಟಕ್ಕಷ್ಟೇ - ಹೆಚ್ಚು ಹೊಸಗನ್ನಡ ಓದಿದ್ದೇನೆ. ಕನ್ನಡ ವ್ಯಾಕರಣ ಗೊತ್ತಿಲ್ಲ . ಹಳೆಗನ್ನಡ ಓದಿಲ್ಲ . ಸಂಸ್ಕೃತ ಜ್ಞಾನ ಸ್ವಲ್ಪ ಇದೆ.
೧. ಶಿವರಾತ್ರಿಗೆ ಜಾಗರಣೆಯಲ್ಲಿ ಇಸ್ಪೀಟು, ಕುಡಿತ (ಬೇಕಾದದ್ದು ಸಾಂಸ್ಕೃತಿಕ ಚಟುವಟಿಕೆಗಳು)
ಶುಭಾಷಯ/ಶ ದ ಚರ್ಚೆಯನ್ನು ಗಮನಿಸಿದಾಗ ನಾನು ಇನ್ನೂ ಕೆಲವೆಡೆ ನೋಡಿದ ಕೆಲವೊಂದು ಬರಹಗಳು ನೆನಪಿಗೆ ಬಂದವು. ಈ ಬರಹಗಳಲ್ಲಿ ಕೆಲವು ಪ್ರಯೋಗಗಳು ಆಯಾ ಪ್ರದೇಶದ ಶಬ್ದಬಳಕೆಯಿಂದಲೇ ಒಡಮೂಡಿದ್ದರೆ, ಕೆಲವೊಂದು ಗೊಂದಲದಿಂದ ಆದಂಥವುಗಳು. ಕೆಲವು ಅಕ್ಷರಗಳೆಂದರೇನು ಎನ್ನುವುದೇ ಗೊತ್ತಿಲ್ಲದವರು ಬರೆದಂತಹವು. ಆದರೂ ಒಳ್ಳೆಯ ತಮಾಶೆ ಎನಿಸುವುವು.
ಇವುಗಳು ನನಗೆ ಕಂಡಿದ್ದು ನಮ್ಮೂರಿನ ಗೋಡೆಗಳ ಮೇಲೆ.
೧) ಸಾರ್ವಜನಿಕರೆಲ್ಲರಿಗೂ "ದಿವಾಳಿ"ಯ "ಆರ್ಥಿಕ" ಶುಭಾಶಯಗಳು!
೨) ಬಸವಣ್ಣನಗುಡಿಬೀದಿಯ ನಿವಾಸಿಗಳಿಗೆ ದೀಪಾವಳಿಯ "ಆರ್ತಿಕ" ಶುಭಾಶಯಗಳು!
೩) ಹೊಸವರುಷ ನಿಮಗೆ ತರಲಿ "ಹರುಸ"!
ಹರಪನಹಳ್ಳಿಯ ಕಾಲೇಜುಶಿಕ್ಷಕರೊಮ್ಮೆ ವಿದೇಶಪ್ರವಾಸಕೈಗೊಂಡಾಗ ಬರೆದ ಅಭಿನಂದನಾ ಲೇಖನದಲ್ಲಿ ಈ ರೀತಿ ಇತ್ತು.
ನಗರದ ಖ್ಯಾತಿವೆತ್ತ ಶಿಕ್ಷಕರಾದ ಪಟ್ಟಣಶೆಟ್ಟಿಯವರು ಇಂದು "ಮುಂಜಾನೆ" "ಬೆಳಗಿನ ಜಾವ" ವಿದೇಶ ಯಾನ ಕೈಗೊಂಡರು. ಅವರು ದಿಲ್ಲೀ ರೋಮದ ಮುಖಾಂತರ ಅಮೇರಿಕಾವನ್ನು ತಲುಪಲಿದ್ದಾರೆ. ಇವರಿಗೆ ಶುಭಹಾರೈಕೆಗಳು.
ಯೋಚಿಸಿ ನೋಡಿ ಏನಿರಬಹುದೆಂದು?
ಪರವೂರಿನಲ್ಲೊಮ್ಮೆ ನೋಡಿದ ಅಂಗಡಿಯ ಬೋರ್ಡಿನ ಮೇಲೆ ಬರೆದಿದ್ದು ಹೀಗೆ.
ದಗದಗ ಸೈಕಲ ಶಾಪ! ಇದೇನೆಂದು ಗೊತ್ತಾದರೆ ಸುಸ್ತು!
ಚಾಮರಾಜಪೇಟೆಯಲ್ಲಿ ಚುನಾವಣೆಗೆ ನಿಂತು ಗೆದ್ದ ನಂತರ ಎಸ್.ಎಮ್. ಕೃಷ್ಣರು ರಾಯನ್ ಸರ್ಕಲ್ಲಿನಲ್ಲಿ ಹಾಕಿಸಿದ್ದ ಬೋರ್ಡಿನಲ್ಲಿ ಚಾಮರಾಜಪೇಟೆಯ ಮತದಾರರಿಗೆ ಕೃತಘ್ನತೆಗಳು ಎಂದಿತ್ತು.! ಅದೂ ದೊಡ್ಡದಾಗಿ ಹಾಕಿಸಿದ್ದ ಹೋರ್ಡಿಂಗಿನಲ್ಲಿ!
ಕನ್ನಡದಲ್ಲಿ `ಶುಭಾಶಯ' ಮತ್ತು `ಶುಭಾಷಯ' ಇವೆರಡು ಪದಪ್ರಯೋಗಗಳಲ್ಲಿ ಯಾವುದು ಸರಿ?
ನನ್ನ ಪ್ರಕಾರ `ಶುಭಾಶಯ' ಪದವೇ ಸರಿ. ಏಕೆಂದರೆ, `ಆಶಯ' ವನ್ನು `ಆಷಯ' ಎಂದು ಬರೆಯುವುದಿಲ್ಲ, ಅಲ್ಲವೆ?
ಬಿ.ಎಚ್.ಸಿ.ಎಸ್.ಬಿ.
ಸರ್ವಜಿತು ನಾಮ ಸಂವತ್ಸರದ ಶುಭಾಶಯಗಳು.
ಸರ್ವರಿಗೂ ಸರ್ವ ವಿಧದಲ್ಲಿಯೂ ಸರ್ವಕಾಲದಲ್ಲಿಯೂ ಸರ್ವಜಿತುವು ವಿಜಯವನ್ನು/ಶುಭವನ್ನು ನೀಡಲಿ ಎಂದು ಉಗಾದಿಯನ್ನು ಬರಮಾಡಿಕೊಳ್ಳೋಣ.
ಚಂದ್ರಶೇಖರ ಬಿ.ಎಚ್.
ಮಾರ್ಚ್ ೧೬, ೨೦೦೭
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ , ಕನ್ನಡ ಪದರಚನೆ , ಕನ್ನಡ ವಾಕ್ಯರಚನೆ ಈ ಪುಸ್ತಕಗಳನ್ನು ಹಿಂದೊಮ್ಮೆ ಓದಿದ್ದೆ . ( ಈ ಪುಸ್ತಕಗಳನ್ನು ನನ್ನ ಕಯ್ಯಲ್ಲಿ ನೋಡಿದವರು 'ಸರ್ , ನೀವು ಪ್ರೊಫೆಸರ್ರಾ?' ಅಂತ ಕೇಳಿದರು! ' ಅಲ್ಲ ' ಅಂದಾಗ ' ಪಿ ಎಚ್ ಡಿ ಮಾಡ್ತಿದ್ದೀರಾ ? ' ಅಂದ್ರು . ಅದಕ್ಕೂ ಅಲ್ಲ ಎಂದಾಗ ಸುಮ್ಮನಾದರು ! ಏನು ಯೋಚಿಸಿದರೋ ಗೊತ್ತಿಲ್ಲ !)