ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಲ್ಲರಳಿ ಹೂವಾಗಿ - ನನ್ನ ನೆಚ್ಚಿನ ಕೋಟೆಯಾ

ನನ್ನ ನೆಚ್ಚಿನ ಕೋಟೆಯಾ, ಹೃದಯ ಸೇರುವ ದಾರಿಯಾ
ಗುಟ್ಟು ಬಲ್ಲೆನು, ನಾನು ಜಾಣೆ
ನನ್ನ ನೆಚ್ಚಿನ ಹೆಣ್ಣಿನ, ಹೃದಯ ಸೇರುವ ಕಣ್ಣಿನಾ

ಕಲ್ಲರಳಿ ಹೂವಾಗಿ - ನನ್ನ ನೆನಪಿನಲಿ

ನಿನ್ನ ನೆನಪಿನಲಿ ನನ್ನ ಉಸಿರಿರಲಿ, ನೆನಪೇ ಬದುಕು ನಮಗೇ.. ಹೋ..
ನಿನ್ನ ನೆನಪಿನಲಿ ನನ್ನ ಬದುಕಿರಲಿ, ನೆನಪೇ ಬದುಕು ಕೊನೆಗೇ..

ಕಲ್ಲರಳಿ ಹೂವಾಗಿ - ಸ೦ಪಿಗೆ

ಸ೦ಪಿಗೆ ಸಿದ್ದೇಶ ಮಾಯಕಾರ, ಸ೦ಪಿಗೆ ಹೂವಾಗಿ ಕ೦ಡೆಯಲ್ಲೋ..
ಲಿ೦ಗ ಲಿ೦ಗಾತೀತನ ಬೃ೦ಗಲೀಲೆಯೊಳಗೆ, ಜಗದಾ ಜೀವಗಳೆ೦ಬೋ ಮಹಾಮಾಲೆಯೊಳಗೆ

ಕವನ ಕವಿತೆ ಬರೆಯಲು ಕಲಿಯಿರಿ - ಇನ್ನೊಂದು ಕಂತು

೧. ಕವನ/ಕಾವ್ಯವನ್ನು ಓದಿ ಓದಿ ಕಾವ್ಯಕ್ಕಿರುವ ಅದರದೇ ಆದ ಭಾಷೆ / ವ್ಯಾಕರಣ ಅರಿಯಿರಿ.

೨. ನಿಮ್ಮ ಕವನ ಕವಿತೆಯ ಬಗ್ಗೆ ಇತರರ ಅಭಿಪ್ರಾಯ ಪಡೆಯಿರಿ.

ಬೋರಣ್ಣನ ಬೆಂಗ್ಳೂರು ಯಾತ್ರೆ

ಬೀರ: ಓ, ಏನ್ ಬೋರಣ್ಣಾ, ಇಂಗೆ ತಲೆ ಮ್ಯಾಗೆ ಕೈಹೊತ್ಕಂಡು ಕುಂತ್ಕಡಿದ್ದೀಯಾ? ಏನ್ಸಮಾಚಾರ? ಮೈಯಾಗ ಉಸಾರಿಲ್ಲೇನು?
ಬೋರ: ಥತ್, ಸುಮ್ಕಿರಲೇ, ತಲೆ ತಿನ್‌ಬ್ಯಾಡ. ನಂದೇ ನಂಗಾಗೈತೆ; ತಲೆ ಕೆಟ್ಟು, ಎಕ್ಕುಟ್ಟ್ ಹೋಗದೆ.
ಬೀರ: ಅದೇನಣ್ಣಾ ಅಂಥಾ ಬೇಜಾರು? ಅದ್ಸರೀ,ಏನಣ್ಣಾ, ಬೆಂಗ್ಳೂರಿಗೆ ಓಗಿದ್ಯಂತೆ ಮೊನ್ನೆ? ಒಂದ್ ಕಿತ ನಂಗೂ ಏಳಾದಲ್ವಾ? ನಾನೂ ಬರ್ತಿದ್ದೆ. ನೀನು ಬಿಡಪ್ಪ ಬೋ ಜಾಣ. ಒಬ್ನೆ ಸಿಟೀಗ್ ಓಗಿ ಮಜಾ ಮಾಡ್ಕಂಡ್ ಬಂದ್ಬುಟ್ಟು, ಈಗಿಲ್ಲಿ ತಲೆ ಮ್ಯಾಕೆ ಕೈಹೊತ್ತು ಪೋಸು ಕೊಡ್ತಿದ್ದೀಯಾ.
ಬೋರ: ಲೇ ಬೀರಾ, ನಾನ್ ಬೆಂಗ್ಳೂರಿಗೆ ಹೋಗಿದ್ದು ಮಜಾ ಮಾಡಾಕಲ್ಲ ಕಣ್ಲೇ. ನಮ್ಮೂರ್ನಾಗೆ ಬೀದಿ ದೀಪ ಇಲ್ಲದೇ ಒಂದೂವರೆ ವರ್ಷ ಆಯ್ತು ನೋಡು, ಅದ್ಕೆ ಮಂತ್ರಿಗಳ ತಾವಾನೇ ಹೋಗಿ ಒಂದು ಅರ್ಜಿ ಹಾಕ್ ಬರಾಣ ಅಂತ ಹೋಗಿದ್ದೆ. ಈ ಉರಿ ಬಿಸ್ಲಲ್ಲಿ ಎರಡು ದಿನದಿಂದ ಓಡಾಡೀ ಓಡಾಡೀ, ತಲೆ ಕೆಟ್ಟೋಗದೆ.

ಬೀರ: ಅಬ್ಬಾ, ಅಬ್ಬಾ, ಅಬ್ಬಾ...ಇದೇನಣ್ಣಾ ಇದು?! ನಮ್ಮೂರಿಗೆ ಬೀದಿ ದೀಪ ಹಾಕ್ಸಕ್ಕೂ ಬೆಂಗ್ಳೂರಾಗಿರೋ ಮಂತ್ರಿಗಳ ತಾವ ಓಗ್ಬೇಕಾ? ಅಂತಾ ಕಾಲ ಬಂದ್ಬುಟ್ಟದಾ?
ಬೋರ: ಉಂ ಮತ್ತೆ. ಒಂದೂವರೆ ವರ್ಷದಿಂದ ಈ ಡಿ.ಸಿ. ಆಫೀಸು, ಎಂ.ಎಲ್.ಎ. ಮನೆ, ಜಿಲ್ಲಾ ಪಂಚಾಯತ್ತು ಅಂತ ನಾಯಿ ಅಲ್ದಂಗೆ ಅಲದ್ರೂ ಏನೂ ಆಗ್ಲಿಲ್ಲ. ಮೊನ್ನೆ ಪೇಪರ್ ಓದ್ತಾ ಇರೋವಾಗ ಒಂದು ಐಡಿಯಾ ಬಂತು ನೋಡು. ನಮ್ಮ ಹೊಸಾ ಮಂತ್ರಿಗಳು ಅವಾಗವಾಗ ಅದೇನೋ "ನೇರ ದರ್ಶನ" ಅಂತ ಮಾಡಿ, ಸ್ಟ್ರೇಟಾಗಿ ಜನ್ರು ಕೈಯಿಂದ್ಲೇಯ ಅರ್ಜಿ-ಪರ್ಜಿ ಎಲ್ಲಾ ತಗಾತಾರಂತೆ. ಅದ್ಕೇ ಈ ನನ್ ಮಕ್ಳಿಗೆ ಬುದ್ಧಿ ಕಲ್ಸಿದ ಹಾಗೆ ಆಗುತ್ತೆ, ನೇರ ಮಂತ್ರಿಗಳ ಅಫೀಸಿಗೇ ಹೋಗಾಣಾಂತ ಸಿಟೀಗೆ ಹೋದೆ.
ಬೀರ: ಬಲೇ ತ್ರಿಲ್ಲಿಂಗಾಗೈತಿ ಕಣಣ್ಣಾ, ಮುಂದಕ್ಕೇನಾತು...

ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು?

ನಮ್ಮ ದೇಶದಲ್ಲಿ ಬುದ್ದಿ ಜೀವಿಗಳನ್ನ ೩ ಪ೦ಗಡಗಳಾಗಿ ವಿಬಜಿಸಬಹುದು.
* ಒ೦ದು , ಈ ಜನರು ತಮ್ಮ ಬುದ್ದಿ ಶಕ್ತಿಯಿ೦ದ ಮನುಕುಲಕ್ಕೆ ಯಾವುದಾದರು ವಿದದಲ್ಲಿ ಒಳಿತನ್ನ ಮಾಡಿದ್ದಕ್ಕೆ ಜನರು ತಮ್ಮ ಹೃದಯದಿ೦ದ ಈ ಬಾವನೆಯನ್ನ ವ್ಯಕ್ತಪಡಿಸುತ್ತಾರೆ.
* ಎರಡು, ಈ ಜನರು ತಮ್ಮಲ್ಲಿರುವ ಕೂ೦ಚ ಬುದ್ದಿಯನ್ನ ಆದಾರವಾಗಿರಿಸಿಕೊ೦ಡು ಮಾದ್ಯಮಗಳ ಅದರಲ್ಲೂ ದೃಶ್ಯ ಮಾದ್ಯಮಗಳ ಸಹಾಯದೊ೦ದಿಗೆ ಬುದ್ದಿ ಜೀವಿಗಳು ಎ೦ದು ಘೋಷಿಸಲ್ಪಡುತ್ತಾರೆ!.
* ಮೂರು, ಕೆಲವರು ಎಡ ಪ೦ಥದ ತತ್ವವನ್ನ ಪಾಲಿಸುವ ಜನ ಬುದ್ದಿ ಜೀವಿಗಳೆ೦ದು ಸ್ವಘೊಷಿಸಿಕೊಳ್ಳುತ್ತಾರೆ.
ನಮ್ಮ ಆತ್ಮೀಯ ಕಾರ್ನಾಡರು ಎರಡು ಮತ್ತು ಮೂರನೆ ವರ್ಗಕ್ಕೆ ಸೇರಿದವರು. ಅವರ ಬುದ್ದಿವ೦ತಿಕೆಯಲ್ಲಿ ನನಗೆ ಸ೦ಶಯವಿಲ್ಲ ಆದರೆ ಈ ಬುದ್ದಿ ಜೀವಿ ಎ೦ಬ ಪಟ್ಟವನ್ನ ಅಲ೦ಕರಿಸಿದ ಮೇಲೆ ಇವರುಗಳ ಸಾರ್ವಜನಿಕ ಮಾತುಗಳು ಎಷ್ಟು ಪರಿಣಾಮ ಬೀರುತ್ತವೆ ಎ೦ಬುದನ್ನ ಇವರು ಅರಿಯಬೇಕು.

ದಿ ಹಿಂದೂ ಇ-ಪೇಪರ್ ಫೆಬ್ರವರಿ ೯ ರಿಂದ

[:http://epaper.thehindu.com/sub_inf.htm|'ದಿ ಹಿಂದೂ' ಪತ್ರಿಕೆಯ] ಇ-ಪೇಪರ್ ಆವೃತ್ತಿ [:http://epaper.thehindu.com/sub_inf.htm|ಫೆಬ್ರವರಿ ೯ ರಿಂದ ಲಭ್ಯವಂತೆ]. ಇಲ್ಲಿಯವರೆಗೂ ಸಾಧಾರಣ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಎಲ್ಲ ಪತ್ರಿಕೆಗಳು ಇ-ಪೇಪರ್ ಆಗಿ ಲಭ್ಯವಿದ್ದವು - 'ದಿ ಹಿಂದೂ' ಪತ್ರಿಕೆಯೊಂದನ್ನು ಬಿಟ್ಟು.

ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ?

'ಮುಂಗಾರು ಮಳೆ'ಯ ಗೆಲುವಿನ ನಂತರ, ಗಾಂದಿನಗರ ಗಣೇಶ್ ಮುಂದಿನ ಸಿನಿಮಾ ಬಗ್ಗೆ ಸುದ್ದಿ ಕೊಟ್ಟಿತೇ ಹೊರತು ಯೋಗರಾಜ್ ಭಟ್‍ರ ಸುದ್ದಿನೇ ಇಲ್ಲ. ಇವರ ಮೊದಲ ಸಿನಿಮಾ 'ಮಣಿ' ಕೂಡ ಚೆನ್ನಾಗಿದೆ, ಆದರೆ ಇದು ಸೋತಿದ್ದು ಅತಿಯಾದ ಹಿಂಸೆಯನ್ನು ತೋರಿಸಿದ್ದರಿಂದ. ಆದರೆ ಕತೆ ಮತ್ತು ಅದನ್ನು ಹೆಣೆದಿರುವ ರೀತಿ, ದ್ರುಶ್ಯಗಳು ಚೆನ್ನಾಗಿವೆ. ಉಮಾಶ್ರಿ ಮತ್ತು ರಂಗಾಯಣ ರಘು ಪ್ರತಿಭೆ ಒರೆಗೆ ಹಚ್ಚಿದಂತಿದೆ.