ಏರ್ಟೆಲ್ ತಪ್ಪೋ, ಪೋಲೀಸರ ದಬ್ಬಾಳಿಕೆಯೋ?
ತನ್ನದಲ್ಲದ ತಪ್ಪಿಗೆ ನಿರ್ದೋಶಿಯೊಬ್ಬನನ್ನು ಜೈಲಿಗೆ ಎಳೆದುಕೊಂಡು ಹೋಗೋದೆಲ್ಲ ಫಿಲ್ಮುಗಳಲ್ಲಿ ನೋಡಿರುತ್ತೀರಿ. ನಿಜಸ್ಥಿತಿ ಎಷ್ಟು ಕೆಟ್ಟದಿರಬಹುದು ಎಂಬುದರ ಅರಿವು ಪರದೆಯ ಮೇಲಿನ ಕಥೆ ನೋಡಿಯೂ ಆಗುವುದು ಕಡಿಮೆ.
ಟೈಮ್ಸ್ ಆಫ್ [:http://timesofindia.indiatimes.com/Wrong_man_jailed_for_50_days/articleshow/2513737.cms|ಇಂಡಿಯಾದ ಈ ವರದಿ ಓದಿ.]
ತನ್ನದಲ್ಲದ ತಪ್ಪಿಗೆ ಬೆಂಗಳೂರಿನ ಇಂಜಿನೀಯರನ್ನು ಇದೇ ಆಗಸ್ಟಿನಲ್ಲಿ ಪೋಲೀಸರು ಪುಣೆಗೆ ಎಳೆದುಕೊಂಡು ಹೋಗಿ ಅಲ್ಲಿ ೫೦ ದಿನ ಜೈಲಿಗೆ ಹಾಕಿದ್ದಾರಂತೆ. ಆರ್ಕುಟ್ ನಲ್ಲಿ ಛತ್ರಪತಿ ಶಿವಾಜಿ ಫೋಟೋ ಕೆಡಿಸಿ ಅವಮಾನ ಮಾಡಿದರೆಂಬುದು ಅವನ ತಲೆಯ ಮೇಲೆ ಹೇರಿದ್ದ ತಪ್ಪು. ಇಷ್ಟು ದಿನ ಜೈಲು ವಾಸದ ನಂತರ ಅವನ ತಪ್ಪೇ ಇರಲಿಲ್ಲ, ಏರ್ಟೆಲ್ ನೀಡಿದ ಐ ಪಿ ವಿಳಾಸ ತಪ್ಪಾಗಿತ್ತು ಎಂಬ ವಿಷಯ ಹೊರಬಂದಿದೆಯಂತೆ.
ಮಾಹಿತಿ ನೀಡಿ ತಿಂಗಳುಗಳೇ ಆದ ಮೇಲೆ ಏರ್ಟೆಲ್ "ಅರೆ, ತಪ್ಪು ಐ ಪಿ ವಿಳಾಸ ಕೊಟ್ಟುಬಿಟ್ಟೆವು" ಎಂದು ಹೇಳುವುದಕ್ಕೆ ಇದೇನು ಮಕ್ಕಳಾಟವೆ? ಲಕ್ಷ್ಮಣ ಕೈಲಾಶ್ ಜಾಗದಲ್ಲಿ ಏರ್ಟೆಲ್ ಬಳಸುವ ಅಮಾಯಕರು ಯಾರೊಬ್ಬರೂ ಆಗಬಹುದಿತ್ತು! ಹೇಳದೆ ಕೇಳದೆ ಪೋಲೀಸರು ಹೀಗೆ ಹೊತ್ತುಕೊಂಡು ಹೋದರೆ ಪಾಪ ಅಮಾಯಕರ,ದುಡ್ಡಿಲ್ಲದವರ ಗತಿಯೇನು?
- Read more about ಏರ್ಟೆಲ್ ತಪ್ಪೋ, ಪೋಲೀಸರ ದಬ್ಬಾಳಿಕೆಯೋ?
- 1 comment
- Log in or register to post comments