ಹೆಲನ್ ಕೆಲ್ಲರ್
ಶಿಕ್ಷಣದ ಅತ್ಯುಚ್ಚ ಫಲಿತಾಂಶವೆಂದರೆ ಸಹನೆ ಮತ್ತು ಸಹಿಷ್ಣುತೆ. - ಹೆಲನ್ ಕೆಲ್ಲರ್
ಶಿಕ್ಷಣದ ಅತ್ಯುಚ್ಚ ಫಲಿತಾಂಶವೆಂದರೆ ಸಹನೆ ಮತ್ತು ಸಹಿಷ್ಣುತೆ. - ಹೆಲನ್ ಕೆಲ್ಲರ್
ಓ ದೇವರೇ, ನನಗೆ ಸಿರಿತನ ಅಥವಾ ಬಡತನ ಎರಡೂ ಬೇಡ. ಕೇವಲ ತೃಪ್ತಿಹೊಂದುವ ಗುಣ ನೀಡು ಸಾಕು. - ಹೆಲನ್ ಕೆಲ್ಲರ್
ಬರೇ ಫೋನಲ್ಲವಿದು,ಐಫೋನ್
ಐಪಾಡ್ ಎಂಬ ಸಂಗೀತ ಮುದ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಂಡು ಬೇಕೆಂದಾಗ ನುಡಿಸುವ ಸೌಲಭ್ಯ ನೀಡುವ ಸಾಧನವನ್ನು ಕಂಪ್ಯೂಟರ್ ಕಂಪೆನಿ ಹೊರತಂದು ಹಿಟ್ ಆದುದು ಈಗ ಹಳೆ ಸುದ್ದಿ.ಸದ್ಯ ಐಪಾಡ್ ಕಿಸೆಯಲ್ಲಿರಿಸಿ ಅತ್ತಿತ್ತ ಒಯ್ಯಬಲ್ಲ ಸಂಗೀತ ಸಾಧನಗಳ ಮಾರುಕಟ್ಟೆಯ ಶೇಕಡಾ ಎಪ್ಪತ್ತೈದು ಭಾಗವನ್ನು ಪಡೆದಿದೆ.ಆಪಲ್ ಕಂಪೆನಿ ಈ ಸೌಲಭ್ಯವಿರುವ ಫೋನನ್ನೂ ಮಾರುಕಟ್ಟೆಗೆ ತರಬಹುದೆಂದು ಗುಸುಗುಸು ಹಬ್ಬಿತ್ತು. ಅದೀಗ ನಿಜವಾಗಿದೆ. ಈ ವಾರ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜಾಬ್ ಅಂತರ್ಜಾಲ ಲಭ್ಯವಿರುವ,ಸಂಗೀತ ಮುದ್ರಿಕೆಗಳನ್ನು ಆಲಿಸಬಹುದಾದ, ದೂರವಾಣಿ ಕರೆ ಮಾಡಬಹುದಾದ ಮಾತ್ರವಲ್ಲದೆ ವಿಡಿಯೋವನ್ನು ಕಿರು ಸ್ಪರ್ಶಸಂವೇದಿ ತೆರೆಯಲ್ಲಿ ನೋಡುವ ಸೌಲಭ್ಯ ನೀಡುವ ಐಫೋನನ್ನು ಮಾರುಕಟ್ಟೆಗೆ ಪರಿಚಯಿಸಿದರು.ಇಷ್ಟು ಸಾಲದಿದ್ದರೆ ಕ್ಯಾಮರಾವೂ ಇದೆ.ಬೆಲೆ ಐನೂರು ಡಾಲರು. ನಾಲ್ಕು ಮತ್ತು ಎಂಟು ಗಿಗಾಬೈಟು ಸಂಗ್ರಹ ಸಾಮರ್ಥ್ಯದ ಎರಡು ಆಯ್ಕೆಯಿದೆ. ಬೆಲೆ ಕ್ರಮವಾಗಿ ಐನೂರು ಮತ್ತು ಏಳುನೂರು ಡಾಲರುಗಳು.ಆದರೆ ಫೋನ್ ಸೌಲಭ್ಯ ಏಟಿ&ಟಿ ಕಂಪೆನಿಯ ಸಿಂಗ್ಯುಲ್ಯಾರ್ ಸೆಲ್ಫೋನ್ ಜಾಲದಲ್ಲಿ ಮಾತ್ರ ಇದು ಕೆಲಸ ಮಾಡುತ್ತದೆ.
ಆತ್ಮೀಯ ಸಂಪದಿಗರೇ,
ವಿರಾಮ ಚಿಹ್ನೆಗಳ ಬಗ್ಗೆ ನಮಗೆಷ್ಟು ಗೊತ್ತು? ಕೆಳಗಿನ ಸಾಲುಗಳನ್ನು ಸ್ವಲ್ಪ ಓದಿ ನೋಡಿ:
ನಾಳೆ ಸುಖವೋ ದುಖಃವೋ ಬಲ್ಲವರ್ಯಾರು ? ಇರುವ ನಾಲ್ಕು ದಿನ ಸಮಾಜಕ್ಕೆ
ಉಪಕಾರಿಗಳಾಗಿ ಬಾಳುವುದನ್ನು ಕಲಿಯಿರಯ್ಯಾ.
೨. ಕನ್ನಡ ಸಾಹಿತ್ಯದ ಆರಂಭದಿಂದಲೂ ಪ್ರತಿ ಸಾಹಿತಿಯೂ ತನಗೆ ಬೇಕಾದಾಗ, ಸನ್ನಿವೇಶಕ್ಕೆ, ಅಗತ್ಯಕ್ಕೆ ತಕ್ಕಂತೆ ಪದಗಳನ್ನು ಬಳಸುತ್ತಲೇ ಬಂದಿದ್ದಾನೆ. ಇದು ಆಯಾ ಕೃತಿಕಾರರಿಗೆ ಮತ್ತು ರಸಾಸ್ವಾದನೆಗೆ ಸಂಬಂಧಿಸಿದ ವಿಷಯ. ಹಾಗಂತ ಕನ್ನಡ ಪದಗಳನ್ನು ಹುಡುಕಲಿಲ್ಲ ಅಂತಲ್ಲ. ನಿಘಂಟನ್ನು ಓದುವ ಹವ್ಯಾಸ ನನಗೂ ಸ್ವಲ್ಪ ಮಟ್ಟಿಗಿದೆ. ಆದರೆ "ಕೆಲವೊಮ್ಮೆ" ನಿಘಂಟಿನಿಂದ ಪದಗಳನ್ನು ಬಳಸಲೇಬೇಕೆಂದು ಬಳಸಿದಲ್ಲಿ ರಸಾಸ್ವಾದನೆಗೆ ಭಂಗವಾದೀತೆಂದು ನನ್ನ ಅನಿಸಿಕೆ. ಒಳ್ಳೆಯದು ಎಲ್ಲಿಂದ ಬಂದರೂ ಸ್ವೀಕರಿಸೋಣ. ಅದರಲ್ಲಿ ಹಿಂಜರಿಕೆ, ತಪ್ಪಿತಸ್ಥ ಮನೋಭಾವ ಯಾಕೆ? ಈ ರೀತಿಯ ಪ್ರಯತ್ನಗಳು (ಶುದ್ಧ ಕನ್ನಡ ಪರ್ಯಾಯ ಪದಗಳ ಬಳಕೆ) ನಿಧಾನವಾಗಿ ಪ್ರಾರಂಭವಾಗಿ, ಕ್ರಮೇಣ ರೂಢಿಗೆ ಬರಬೇಕೆ ಹೊರತು ಒಮ್ಮೆಗೇ ಹಿಂದಿನ ಎಲ್ಲವನ್ನೂ ತಿರಸ್ಕರಿಸಬೇಕು ಎಂದಲ್ಲ. ಎಲ್ಲಕ್ಕಿಂತ ರಸಾಸ್ವಾದನೆ ಮತ್ತು ಸಂವಹನ ಮುಖ್ಯ ಅಂತ ನನ್ನ ಭಾವನೆ. ಹಾಗಂತ ಕನ್ನಡ ತನ್ನ ಸ್ವಾಭಿಮಾನ ಕಳೆದುಕೊಳ್ಳಬೇಕು ಅಂತ ನಾನು ಖಂಡಿತ ಹೇಳುತ್ತಿಲ್ಲ. ನಾನೂ ಒಬ್ಬ "ಹದಿನಾರಾಣೆ ಕನ್ನಡಿಗ". ಉದಾಹರಣೆಗೆ ಆಂಡಯ್ಯನವರ "ಕಬ್ಬಿಗರ ಕಬ್ಬ" ಸಂಪೂರ್ಣ ಕನ್ನಡದ ಕೃತಿ ಅಂತ ಹೇಳುತ್ತಾರೆ. ಆದರೆ ಯಾಕೆ ಅವರ ನಂತರ ಯಾರೂ ಆ ಪ್ರಯತ್ನವನ್ನು ಪದೇ ಪದೇ (ಇನ್ನಷ್ಟು ದೊಡ್ಡ ಮಟ್ಟದಲ್ಲಿ) ಮಾಡಲಿಲ್ಲ? ಅಥವಾ ಆ ಒಂದು ಕೃತಿ ಕೂಡ ಯಾಕೆ ನಮ್ಮನ್ನು "ಗದುಗಿನ ಭಾರತ", ವಚನಗಳು, ದಾಸಸಾಹಿತ್ಯಗಳಷ್ಟು ಆವರಿಸಲಿಲ್ಲ? (ನಾನು ಕೇವಲ ಜನಪ್ರಿಯತೆಯ ಮಾನದಂಡವನ್ನಿಟ್ಟುಕೊಂಡು ಹೇಳುತ್ತಿಲ್ಲ) ನೀವೇ ಹೇಳಿ? ದಯವಿಟ್ಟು ತಪ್ಪು ತಿಳಿಯದಿರಿ, ನಾನು ಆಂಡಯ್ಯನವರ ಕಾವ್ಯದ ಬಗ್ಗೆ ಟೀಕಿಸುತ್ತಿಲ್ಲ. ಆ ಮಟ್ಟಿಗಿನ ಪಾಂಡಿತ್ಯ/ಅರ್ಹತೆ ನನಗಿಲ್ಲವೇ ಇಲ್ಲ. ಇರುವ ವಿಚಾರ ಹೇಳುತ್ತಿದ್ದೀನಿ ಅಷ್ಟೇ.
(ಕರ್ನಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರ 'ನನ್ನ ಜೀವನಸ್ಮೃತಿಗಳು' ಪುಸ್ತಕದಿಂದ ಆಯ್ದ ಕೆಲವು ಕುತೂಹಲಕರ ಭಾಗಗಳು )
ಎರಿಕ್ ಹಾಫರ್ ನ ಮಾತಿನಲ್ಲಿ - ಮನುಷ್ಯ ದೇವರ ಒಂದು ಅಪೂರ್ಣ ಕೃತಿ . ಹಾಗೂ ಆತನ ಪ್ರತಿಯೊಂದು ಹೋರಾಟ ದೇವರು ಅರ್ಧಕ್ಕೇ ಬಿಟ್ಟ ಕೆಲಸವನ್ನು ಪೂರ್ತಿಗೊಳಿಸುವ ಪ್ರಯತ್ನವಾಗಿದೆ
ಅಲ್ಲ, ಇರ್ಫಾನ್ ಎಂಬ ಲಷ್ಕರೇ ತೋಯ್ಬ ಉಗ್ರಗಾಮಿಯನ್ನು ಹಿಡಿದಾದ ಮೇಲೆ ಅವರ ಯೋಜನೆಗಳು ಹಾಗಿತ್ತು ಹೀಗಿತ್ತು, ಅಂಥಾ ಕನೆಕ್ಷನ್ ಇಟ್ಕಂಡಿದ್ದ, ಇಂಥಾ ಪ್ಲಾನ್ ಹಾಕಿದ್ದ ಅಂತ ನಮ್ಮ ಸ್ಥಳೀಯ ಪೇಪರ್ ಮತ್ತು ಟೀವಿ ಚಾನೆಲ್ಲುಗಳಲ್ಲಿ ಸುದ್ದಿಯೋ ಸುದ್ದಿ, ರಾಷ್ಟ್ರೀಯ ಚಲನಚಿತ್ರ ಮಾಧ್ಯಮದವರು ಇದನ್ನೇನು ತೋರಿಸುತ್ತಲೇ ಇಲ್ಲವಲ್ಲ, ಏನು ಕರ್ನಾಟಕದಲ್ಲಿ ಭಯೋತ್ಪಾದಕರು ಬಾಂಬ್ ಎಸೆದ ಮೇಲೇ ವರದಿ ಮಾಡೋದು ಅಂತ ನಿರ್ಧರಿಸಿದ್ದಾರೋ ಹೇಗೆ ಇವರು?