ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೇಕನ್ (bacn) - ಅಂತರ್ಜಾಲದಲ್ಲಿ ಈಗ ಹೊಸ ಪದ

ಬೇಕನ್ (bacn) ಇದೊಂದು ಅಂತರ್ಜಾಲದಲ್ಲಿ ಈಗ ಹೊಸ ಪದ !!! ಅಂದ್ರೆ SPAM ಅಷ್ಟು ಕೆಟ್ಟದಲ್ಲ, EMAIL ಅಷ್ಟು ಉಪಕಾರಿಯಲ್ಲ. ಬೇಕು , ಅದ್ರೆ ಸದ್ಯಕಂತು ಬೇಡ ಅನ್ನುವ ಸಂದೇಶಗಳು ಈ ಗುಂಪಿಗೆ ಸೇರುತ್ತವೆ !!!

ಇದು ಕುರುಕ್ ತಿಂಡಿಗಳ ತರಹ - ನೆಂಜಿಕೊಳ್ಳೊಕೆ ಬೇಕಾಗುವಂತಹ ಸಂದೇಶಗಳು ...

ಹೆಚ್ಹಿನ ವಿಷಯಗಳಿಗೆ ಈ ಕೊಂಡಿಗಳನ್ನು ನೋಡಿ :-

ನೀರಿನ ಸಮಸ್ಯಗೆ ಒಂದು ಪರಿಹಾರ !!

ಭೂಮಿಯ ಶೇಕಡ ೭೫ ಬಾಗ ನೀರಲ್ಲಿ ತುಂಬಿರಬೇಕಾದರೆ, ಹಾಗು ಭಾರತ ದೇಶದ ಸುತ್ತಲು ನೀರು ಆವರಿಸಿರುವಾಗ. ನಮ್ಮಲ್ಲಿ ನೀರಿನ ಸಮಸ್ಯ ಯಾಕೆ ?

ಪರಿಹಾರ :

ಈ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಆಗದಿರಲು ಕಾರಣ ?? ನಾವುಅ ಯಾಕೆ ಈ ರೀತಿ ಮಾಡಬಾರದು. ಆದರೆ ಈ ರೀತಿ ಪ್ಲಾಂಟ್ ಸೃಷ್ಟಿಸಲು ವೆಚ್ಚವು ಅಧಿಕ ಎಂದು ಕೇಳ್ಪಟ್ಟೆ.

ಊರು, ಅಜ್ಜಿ, ಮಳೆ ಮತ್ತು ಅಜ್ಜನ ನೆನಪು...

ಸಾಗರದಲ್ಲಿ ಬೆಳಗ್ಗೆ ಬಸ್ಸಿಳಿದಾಗಿನಿಂದ ಜಿಟಿಜಿಟಿ ಮಳೆ. ರಸ್ತೆ,ರಸ್ತೆಬದಿಯ ಹುಲ್ಲು ಹಾಸು, ಹೂಳುತುಂಬಿದ ಕೆರೆಯ ಮುಕ್ಕಾಲು ಭಾಗ ತುಂಬಿದ ಜೊಂಡುಹುಲ್ಲು, ಮಳೆಯಿಂದ ತುಂಬಿದ ಮಧ್ಯಭಾಗದಲ್ಲಿ ಅರಳುಮೊಗ್ಗಾದ ಕಮಲಗಳು.. ಸುತ್ತ ಮಾತಿಲ್ಲದೆ ಜೊತೆಯಾಗಿ ನಿಂತ ಬಿಳಿಬಿಳಿ ಕಟ್ಟಡಗಳು ಕೆರೆಯಾಚೆಗಿನ ರಸ್ತೆಯಂಚಿನ ದೊಡ್ಡ ದೊಡ್ಡ ಮರಗಳು ಎಲ್ಲವೂ ಮಳೆಯ ಸೋನೆಗೆ ಮೈಯೊಡ್ಡಿ ಸೊಂಪಾಗಿ ಕಾಣುತ್ತಿತ್ತು. ತುಂಬ ದಿನಗಳ ನಂತರ ಊರಿಗೆ ಹೋಗಿದ್ದೆ. ಎಲ್ಲ ಅವತ್ತು ೧೫ ವರ್ಷಗಳ ಮುಂಚೆ ಒಂದು ಮಳೆಗಾಲದಲ್ಲಿ ನಾನು ಹೊರಟಾಗ ಇದ್ದಂತೆಯೇ ಕಂಡರೂ ಎಲ್ಲ ಬೇರೆಯೇ ಅಂತ ಗೊತ್ತಾಗುತ್ತಿತ್ತು. ಕಳೆದಕಾಲದೊಡನೆ ಬದಲಾದ ಊರು ಮತ್ತು ನಾನು..

ಅಜ್ಜಿಗೆ ಸ್ವಲ್ಪ ಹುಷಾರಿರಲಿಲ್ಲ. ನನಗೆ ನೋಡಲೇಬೇಕೆನ್ನಿಸಿತ್ತು. ಎಷ್ಟೇ ಫೋನಿನಲ್ಲಿ ಮಾತಾಡಿದರೂ ನನ್ನ ಸ್ವರದ ಅಂದಾಜಿನ ಮೇಲೆ ಮಾತನ್ನು ಊಹಿಸುವ ಇಳಿವಯಸ್ಸಿನ ಅರೆಕಿವುಡು. ನನಗೆ ಅವಳ ಜೊತೆಕೂತು ಮಾತುಕತೆ ಹೊಸೆಯಬೇಕಿತ್ತು. ಬೆನ್ನ ಹಿಂದೆ ಜಗ್ಗಿನಿಂತ ಎಲ್ಲ ಕೆಲಸಗಳನ್ನೂ ರಿಕ್ವೆಸ್ಟ್ ಮಾಡಿ ಬದಿಗೆ ಸರಿಸಿ ರಾತ್ರಿ ಬಸ್ಸು ಹತ್ತಿದೆ. ಹಣ್ಣು ಮುಖದ ತುಂಬ ಹೂನಗೆ ಹೊತ್ತವಳು ಕಾದಿದ್ದಳು.. ಯಾವಯಾವುದೋ ವಿಷಯದಲ್ಲಿ ಶುರುವಾದ ಎಲ್ಲ ಮಾತಿನ ಹಾದಿಗಳೂ ಸಾವಿನ ಮನೆಯ ಜಗುಲಿಗೇ ಹೋಗಿ ಸೇರುತ್ತಿತ್ತು. ಅವಳ ಓರಗೆಯವರನೇಕರು, ಚಿಕ್ಕವರು ಮತ್ತು ದೊಡ್ಡವರು ಸಾಕಷ್ಟು ಜನ ಗಂಟು ಮೂಟೆ ಕಟ್ಟಿದ್ದರು. ಒಬ್ಬೊಬ್ಬರು ಹೋದಾಗಲೂ ಮೊದಲ ಆತಂಕ ನೆಕ್ಸ್ಟ್ ನಾನೇ ಏನೋ ಅನ್ನುವುದೇ. ಎರಡನೆಯದು ಯಾವ ಬಗೆಯ ಸಾವು..? ಆಸ್ಪತ್ರೆಯಲ್ಲಿ ಜೀವರಸವನ್ನೂ(ಗ್ಲೂಕೋಸ್) ಹಿಂಡುವ ನೋವಿನೊಂದಿಗೆ ಜೀವದೊಳಗೆ ಬಿಟ್ಟುಕೊಳ್ಳುತ್ತಾ ಬಿಡಲಾರದೆ ಜೀವ ಬಿಡುವುದೋ, ಇಲ್ಲಾ ಮನೆಯಲ್ಲಿ ಬೆಳಿಗ್ಗೆ ತಿಂಡಿ, ಸ್ನಾನ ಚಾ ಆಗಿ ಅಡಿಕೆ ಕುಟ್ಟಿಕೊಂಡು ಎಲೆ ನೀವಿ ಸುಣ್ಣ ಹಚ್ಚುವಾಗ ಗೊತ್ತಾಗದಂಗೆ ಜೀವ ಹೋಗುವುದೋ.. ನೇರವಾಗಿ ಹೀಗೇ ಆಗಲಿ ಎನ್ನುವ ಧೈರ್ಯವಿಲ್ಲವಾದರೂ ಅವಳ ಮನಸ್ಸಿನ ತುಂಬ ಕಾಡಿನಿಂತ ಆಸೆ ಅದೇ.. ಚಿಕ್ಕಂದಿನ ನೆನಪುಗಳಿಂದ ಹಿಡಿದು ಇವತ್ತಿನ ಮಾತ್ರೆಗಳು, ಡಾಕ್ಟರವರೆಗೆ, ಎಲ್ಲ ಮಾತಾಡುತ್ತ ಕೂತೆವು. ನಾಲ್ಕೈದು ಲೋಡು ಕವಳ ಖರ್ಚಾಯಿತು. ಅಂಗಳದಲ್ಲಿ ಮಳೆ ನಮ್ಮ ಮಾತಿಗೆ ಹನಿ ಹಾಕುತ್ತಿತ್ತು.ನಾನು ವಿಮಾನದಲ್ಲ್ ಊರುಗಳಿಗೆ ಹೋಗುವುದನ್ನು ಮತ್ತೆ ಮತ್ತೆ ಕೇಳಿದಳು. ಅವಳಿಗೆ ವಿಮಾನದಲ್ಲಿ ಹೋಗಿನೋಡಬೇಕೆಂಬಾಸೆ ಆದರೆ ಭಯ :)

ಪ್ರೀತಿಎಂಬ ಬೆಳಕು

ಪ್ರೀತಿ ಎಂಬ ಬೆಳಕು ಕಂಡೆ ನಿನ್ನ ಕಣ್ಣಲಿ
ಬೀರಿದೆ ಇಂದು ಕಿರಣವಾಗಿ ನನ್ನ ಜೀವನದಲ್ಲಿ
ಬೆಳಗಿದೆ ದೀಪವಾಗಿ ನನ್ನ ಮನದಲ್ಲಿ
ಮಸುಕದಿರಲಿ ಕಿರಣ,ಆರದಿರಲಿ ಬೆಳಕು ಎಂದು
ಬೇಡುವೆ ಆ ದೇವರಲ್ಲಿ..
ನಮ್ಮ ಪ್ರೀತಿಯು ಆಗಲಿ ಜೀವನಕೆ ದಾರಿದೀಪವಾಗಿ
ಬೆಳಗಲಿ ಶಾಶ್ವತವಾಗಿ.

ಸಂಪದ ಕ್ಕೆ ...ಜೈ!

ಈವತ್ತಿಂದ ನಾನು ಬರೀಬೇಕು ಅಂದುಕೊಡಿದೀನಿ. ಅದೂ ಕನ್ನಡದಲ್ಲಿ. ಅದೂ.......ಸಂಪದದಲ್ಲಿ.

ಕನ್ನಡದ ಬಗ್ಗೆ ನನ್ನ ಓದು ತುಂಬಾ ಮುಂಚೆನೇ ನಿಂತು ಹೋಗಿತ್ತು. ಈಗ ಮತ್ತೆ ಆಸಕ್ತಿ ಬಂದಿದೆ.. ಸಂಪದದ ಕಾರಣ! ಸಂಪದ ಕ್ಕೆ ಒಂದು ದೊಡ್ಡ ಜೈ!

ಮಳೆ ನಿಂತು ಹೋದ ಮೇಲೆ..

"ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ..
ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ..
ಹೇಳುವುದು ಏನೋ ಉಳಿದು ಹೋಗಿದೆ..
ಹೇಳಲಿ ಹೇಗೆ ತಿಳಿಯದಾಗಿದೆ.."

ಹೇಗಿದೆ ನಂ ದೇಶ?

"ವಿಚಿತ್ರಾನ್ನ" ಅಂಕಣ..ಶ್ರೀವತ್ಸ ಜೋಷಿ----ಓದಿ------>

'ಹೇಗಿದೆ ನಮ್‌ದೇಶ ಹೇಗಿದೆ ನಮ್‌ಭಾಷೆ... ಹೇಗಿದೆ ಕನ್ನಡ, ಹೇಗಿದೆ ಕರ್ನಾಟಕ... ಈಗ ಹೇಗಿದ್ದಾರೆ, ನಮ್ ಕನ್ನಡಜನ?'ಪ್ರಶ್ನೆಗೆ ಉತ್ತರ; ಈ ವಾರದ ವಿಚಿತ್ರಾನ್ನ.

ಡಾ|| ಹೆಚ್. ನರಸಿಂಹಯ್ಯನವರು - ನಂ ಗುರುಗಳು

ಡಾ|| ಹೆಚ್. ನರಸಿಂಹಯ್ಯನವರು ಒಬ್ಬ ವ್ಯಕ್ತಿ , ಶಕ್ತಿ !!! .  ನಮಗೆಲ್ಲ ವೈಜ್ನಾನಿಕವಾಗಿ ಚಿಂತನೆಯನ್ನು ಮಾಡುವುದರ ಬಗ್ಗೆ ಹೇಳಿಕೊಟ್ಟವರು.