ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಗೈವೆ ಮುತ್ತಿನಾರತಿ ದೇವಾ'

'ಗೈವೆ ಮುತ್ತಿನಾರತಿ ದೇವಾ' --ಇದು ಒಂದು ಆರತಿಹಾಡು.
ಇಲ್ಲಿ ಗೈವೆ ಶಬ್ದ ಕ್ರಿಯಾಪದವಾಗಿ ಒಂಟಿಯಾಗಿ ಪ್ರಯೋಗವಾಗಿದೆ. ಈ ರೀತಿ ಮೊದಲ ಬಾರಿಗೆ ನೋಡಿದ್ದು. 'ಸೇವೆಗೈ' ಸಾಮಾನ್ಯವಾಗಿ ನೋಡುವ ಶಬ್ದ.

ನಮ್ಮ ಸೈನಿಕರ ರಕ್ತಕ್ಕೆ ಬೆಲೆಯಿಲ್ಲವೇ?

ಭಾರತೀಯ ಸೈನಿಕರ ವಿಷಯ ಬಂದಾಗ ಅವರ ತ್ಯಾಗ ಬಲಿದಾನಗಳನ್ನು ಗೌರವಿಸುವ ವಿಷಯದಲ್ಲಿ ಭಾರತೀಯರಾದ ನಾವು ಎಂದೂ ಹಿಂದೆ ಬಿದ್ದಿಲ್ಲ. ಪಾಕ್ ದಾಳಿಕಾರರಿಂದ ಲಡಾಖನ್ನು ಉಳಿಸುವಲ್ಲಿ ಹೆಚ್ಚುಗಾರಿಕೆಯ ಪಾತ್ರ ವಹಿಸಿದ ಮೇ. ಸೋಮನಾಥ್ ಶರ್ಮಾ, ೧೯೪೮ರಲ್ಲಿ ಲೆಹ್ ನಂತಹ ತುಂಬಾ ಎದುರಿಸಲಾಗದ ಕಾಳಗ ಭೂಮಿಯಲ್ಲಿ ವಿಮಾನವನ್ನು ಇಳಿಸುವುದರ ಮೂಲಕ ತನ್ನ ಕೆಚ್ಚು ಮೆರೆದ ಏರ್ ಕಮಾಂಡರ್ ಮೆಹರ್ ಸಿಂಗ್ - ಇಂತಹ ಸೈನಿಕರನ್ನು ದೇಶಭಕ್ತನೊಬ್ಬ ಮರೆಯಲು ಹೇಗೆ ತಾನೇ ಆಗುತ್ತದೆ? ಕಾರ್ಗಿಲ್ ನಂತಹ ಕಾಳಗ ನಡೆದಾಗ ಸೈನಿಕರ ಕಲ್ಯಾಣ ನಿಧಿಗೆ ಸಾರ್ವಜನಿಕರಿಂದ ಹರಿದು ಬಂದ ಹಣವೇ, ಸೈನಿಕರ ಬಗ್ಗೆ ನಮಗೆ ಇರುವ ಗೌರವ ಎಂತಹುದು ಎಂಬುದನ್ನು ಹೇಳುತ್ತದೆ. ಆದರೆ, ನಮ್ಮ ಸರ್ಕಾರಗಳಿಗೆ ಸೈನಿಕರ ಬಾಳಿನ ಬಗ್ಗೆ ನಿಜವಾಗಿಯೂ ಕಾಳಜಿ ಇದೆಯೇ ಎಂಬುದು ಇಂದಿನ ದೊಡ್ಡ ಪ್ರಶ್ನೆ........

ತುಘಲಕ್ ನೆನಪು

ಇಂದಿನ [http://www.nytimes.com/2006/12/14/business/14pennies.html?_r=1&ref=business&oref=slogin|ಸುದ್ದಿ] ಓದುತ್ತಿದ್ದೆ. ಅದರಲ್ಲಿ ಹೆಚ್ಚುತ್ತಿರುವ ಲೋಹಗಳ ಬೆಲೆಯ ಬಗ್ಗೆ ಉಲ್ಲೇಖವಿದೆ. ಅಮೆರಿಕದಲ್ಲಿ 5 ಸೆಂಟ್ ನಾಣ್ಯದಲ್ಲಿ ಬಳಸಲಾಗುವ ಒಟ್ಟಾರೆ ತಾಮ್ರದ ಮೌಲ್ಯ 7 ಸೆಂಟ್ ಅಂತೆ. ಹೀಗಾಗಿ ನಾಣ್ಯಗಳನ್ನು ಕರಗಿಸುವುದನ್ನು ಅಥವಾ ರಫ್ತು ಮಾಡುವುದನ್ನು ತಡೆಯುವದಕ್ಕಾಗಿ ಕಾನೂನು ಜಾರಿಗೆ ತರಲಿದ್ದಾರೆ. ಇದಕ್ಕೆ ಮೊದಲು ನಾಣ್ಯಗಳನ್ನು ಅದರಲ್ಲಿರುವ ಲೋಹಕ್ಕಾಗಿ ಕರಗಿಸುವುದು ಅಪರಾಧವೆಂದೇ ತಿಳಿದಿದ್ದೆ.

ರಾಷ್ಟ್ರಕವಿ ಶ್ರೀ ಜಿ ಎಸ್ ಶಿವರುದ್ರಪ್ಪನವರಿಂದ ಕನ್ನಡಸಾಹಿತ್ಯ.ಕಾಂ ಪ್ರಾರಂಭಿಸಿದ ಸಹಿ-ಸಂಗ್ರಹಣಾ ಅಭಿಯಾನಕ್ಕೆ ಬೆಂಬಲ

ಕನ್ನಡಕ್ಕೆ ಶಕ್ತಿ ಎಂದರೆ, ನವ ವಿಚಾರಗಳಿಗೆ ಮನಸ್ಸುಗಳನ್ನು ತೆರೆದಿಟ್ಟಿರುವ, ವಿನೂತನವಾಗಿ ಯೋಚಿಸುವ, ಆಲೋಚನೆಗಳನ್ನು ಕ್ರಿಯಾಶೀಲತೆಯ ಮೂಲಕ ಸಾಕಾರಗೊಳಿಸುವ, ಕನ್ನಡಿಗರ ಧನಾತ್ಮಕ ಗುಣಗಳು.

ಕನ್ನಡಿಗರಿಗೆ ತ್ರಿಭಾಷಾ ಸೂತ್ರ ಬೇಕೇ??

ಗಾಂಧೀಜಿ ಅವರನ್ನು ರೈಲಿನಿಂದ ಕೆಳಗಿಳಿಸಿದಂತೆ ಕನ್ನಡವನ್ನು ಕೆಳಗಿಳಿಸಿರುವುದು ಈಗಿನ ಸುದ್ದಿ. ಈಗ ನಾವು ಗಾಂಧೀಗಿರಿ ಅನುಸರಿಸಬೇಕೇ? ಅಥವಾ ಪೆರಿಯಾರ್ ಹಾದಿ ತುಳಿಯಬೇಕೇ?

ದುಡ್ಡು.

ದುಡ್ಡು.

ದಡ್ಡ ಕಟುಕ ಅಂದ ಮಂದಿ
ದುಡ್ಡ ಹಿಂದೆ ಹಂದಿಯಂದಿ
ಕಾಂತಕಂಡ ಉಕ್ಕಿನಂದಿ
ಯಾವತ್ಜೀವವೆಲ್ಲ ಬಂಧಿ//