ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

೨೦೦೫ ರಲ್ಲಿ ದೆಹಲಿಯಲ್ಲಿ ನಾವು ಕಳೆದ 'ದೀಪಾವಳಿ' ನಿಜಕ್ಕೂ ಅತ್ಯಂತ ದುರದೃಷ್ಟಕರ !

ಹೋದ ವರ್ಷ ಏಕೋ ದೀಪಾವಳಿಗೆ ದಿಲ್ಲೀಗೆ ಹೋಗೋಣ ಅನ್ನಿಸಿತ್ತು. ಇದುವರ್ಗೂ ಹೇಗೊ ಪ್ರತಿ ಬೇಸ್ಗೆ ಮತ್ತು ಕ್ರಿಸ್ಮಸ್ ರಜೆಯಲ್ಲಿ ಊರು ಮತ್ತೆ ನಮ್ಮೂರಿಗೆ (ಮುಂಬೈ) ವಾಪಸ್ ಹೀಗೇ ನಡೆದಿತ್ತು. ಹೇಗಿದ್ದರೂ ರವಿಗೆ ಇದು ಅವನ M.B.A; ಡಿಗ್ರಿ ಯ ಕೊನೆಯ ವರ್ಷ ತಾನೆ. ಹೋದ ಸಾರಿ ಬಂದಾಗ್ಲೂ 'ಒಮ್ಮೆ ಬಂದು ಹೋಗಿ' ಅಂದಿದ್ದ. ಚಿಕ್ಕ ಮಗ ಪ್ರಕಾಶ ಈಗ * ನಲ್ಲಿದಾನೆ. ಮನೆಯಲ್ಲಿ ನಾವಿಬ್ಬರೆ. ಇಲ್ಲಿದ್ರೇನು, ಡೆಲ್ಲಿಗ್ ಹೋದ್ರೇನು ಎಲ್ಲಾ ಒಂದೆ. ೧೭ ನೆಯ ಅಕ್ಟೋಬರ್, ಬೆಳಗಿನ 'ಸ್ಪೈಸ್ ಜೆಟ್ 'ನಲ್ಲಿ ಹೊರಟೇ ಬಿಟ್ಟೆವು.

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೨: ಭಾರತದ ಇನ್ನೊಬ್ಬನ್ಯಾವನ್ಯಾವನದ್ದೋ ಫಿನಿಶ್ಡ್ ಅಲ್ಲದ ಆತ್ಮಚರಿತ್ರೆಗಳು

ಹೆಲ್ಸಿ೦ಕಿಯ ಮ್ಯೊಸಿಯ೦ ಆಫ್ ಮಾಡರ್ನ್ ಆರ್ಟ್ನಲ್ಲಿ ('ಕಿಯಾಸ್ಮ') ಕಾಫಿ ಕುಡಿವುದು ಆಗಾಗ ನನ್ನ ದಿನನಿತ್ಯದ ರೂಢಿಯಾಗಿರುತ್ತಿತ್ತು. ಭಾರತದಲ್ಲಿ ನಾನು ಕಾಫಿ ಕುಡಿವುದು ಕೋಶಿಸ್‍ನಲ್ಲಿ ಮಾತ್ರ. ಕಾರಣ: ನನಗೆ ಗೊತ್ತಿಲ್ಲ! ಕಾಫಿಯ ಕ್ವಾಲಿಟಿಗೂ ನಾನಲ್ಲಿ ಅದನ್ನು ಕುಡಿವುದಕ್ಕೂ ಸ೦ಬ೦ಧವೇ ಇಲ್ಲ. ನನಗೊ೦ದು ಟೇಸ್ಟ್ ಇರುವುದರಿ೦ದ ಅಲ್ಲಿ ಕಾಫಿ ಕುಡಿಯುತ್ತೇನೆ೦ದರೆ ಆ ಕಾಫಿ ಗ್ಯಾರ೦ಟಿ ನಿಮಗೆ ಕುಡಿಯಲು ಯೋಗ್ಯವಲ್ಲ ಎ೦ದೇ ಅರ್ಥ. ಅಷ್ಟು ಗ್ಯಾರ೦ಟಿ ನನ್ನ ಟೇಸ್ಟ್-ಲೆಸ್‍ನೆಸ್ ಬಗ್ಗೆ, ನನಗೇ!

ರಷ್ಯ ಪ್ರವಾಸಕಥನ ಭಾಗ ೧೧: ಕಣ್-ಫ್ಯೂಸ್ಡ್ ಆದರ್ಶ, ಬಹುರಾಷ್ಟ್ರೀಯ ಪಾಯಖಾನೆ! ಅಲೆಮಾರಿ ರಷ್ಯವೆ೦ಬ ಜಿಪ್ಸಿ!

(೧)ಕಣ್-ಫ್ಯೂಸ್ಡ್ ಆದರ್ಶಗಳು:

ರಷ್ಯನ್ ಕಲಾವಿದರನ್ನು ಮತ್ತೆ ನಾವು ನಮ್ಮ ಜೀವನದಲ್ಲಿ ನೋಡುವುದಿಲ್ಲ ಎ೦ದುಕೊ೦ಡಿದ್ದೆವು. ಆದರೆ ಮಾರನೇ ದಿನ ಅಚಾನಕ್ ಸಿಕ್ಕಿಬಿಟ್ಟರು. ನಾವೆಲ್ಲ ಕಲಾವೆದರೇ ಆದರೂ ಗ್ರೂಪ್ ಫೋಟೋ ಮಾತ್ರ ಟೂರಿಸ್ಟ್-ಗಳ೦ತೆ ತೆಗೆಸಿಕೊ೦ಡೆವು. ನಮ್ಮ ಕಸುಬಿಗೆ ಅದೊ೦ದು ಅಪಚಾರವೆನ್ನಿ. ನೂರೈವತ್ತು ವರ್ಷಗಳಿ೦ದಲೂ ಕಲಾವಿದರನ್ನು ಕಾಡುತ್ತಿರುವುದು ಈ ಶತೃ. ಕ್ರೈಸ್ತನಿಗೆ ಸೈತಾನನಿದ್ದ೦ತೆ, ಬುದ್ಧನಿಗೆ ಮಾರನಿದ್ದ೦ತೆ ಕಲಾವಿದರಿಗೆ ಕ್ಯಾಮರ!--ಅನ್ನುವುದು ಒ೦ದು ರೂಢಿಗತ ನ೦ಬಿಕೆ. ಹರ್ಮಿಟಾಜ್ ಮ್ಯೊಸಿಯ೦ ಹೊರಗೆ ರಷ್ಯನ್ ರಾಜ, ರಾಣಿಯರ ನೈಜ ಅಳತೆಯ ಒ೦ದೊ೦ದು ಕಟೌಟ್ಗಳು. ಮುಖದ ಭಾಗ ಮಾತ್ರ ಖಾಲಿ. ಯಾರು ಬೇಕಾದರೂ ಅಲ್ಲಿ ಹೋಗಿ ಫೋಟೋ ತೆಗೆಸಿಕೊಳ್ಳಬಹುದು. ಅದಕ್ಕೊ೦ದಿಪ್ಪತ್ತು ರೂಬೆಲ್. ಕ್ಯಾಮರ ಮಾತ್ರ ನಮ್ಮದೇ! ಜೊತೆಗೆ ರಾಜ, ರಾಣಿಯರ ಅಸಲಿ ಪೋಷಾಕು ಸಹ ರೆಡಿ. ಅದನ್ನು ತೊಟ್ಟಿಕೊ೦ಡೂ ಸಹ ಫೋಟೋ ತೆಗೆದುಕೊಳ್ಳಬಹುದು, ಹೆಚ್ಚು ಬೆಲೆಗೆ. ಕೊನೆಗೆ ದೊರೆ-ದೊರೆಸಾನಿಯ ಪೋಷಾಕು ತೆಗೆದಿರಿಸಲೇಬೇಕು. ಅದು ಕ೦ಡೀಷನ್ನು!

ದಿಟವೋ? ಸುಳ್ಳೋ?!!!

 ಮಧ್ಯಮ ವರ್ಗ ಅಥವಾ ಬಡವರಾಗಿದ್ದು  ಅಶಿಕ್ಷಿತರಾಗೆದ್ದಾದಲ್ಲಿ ಅವರಲ್ಲಿ ಹೆಚ್ಚಿನವರು ಉದ್ಯೋಗಿಗಳಾಗಿರುತ್ತಾರೆ. ಅದೇ ಸುಶಿಕ್ಷಿತರಾದಲ್ಲಿ ಹೆಚ್ಚಿನವರು ನಿರುದ್ಯೋಗಿ ಅಥವಾ ಉದ್ಯೋಗದ ಹುಡುಕಾಟದಲ್ಲಿ ಇರುತ್ತ್ತಾರೆ. ಇದಕ್ಕ್ಕೆ ನಮ್ಮ ಸಮಾಜ(society)ದ ವ್ಯವಸ್ಥೆ ಕಾರಣವೋ ಅಥವಾ ನಮ್ಮ ಶಿಕ್ಷಣ ಪಧ್ದ್ಝತಿ ಸುಶಿಕ್ಷಿತರಿಗೆ ಉದ್ಯೋಗ ದೊರಕಿಸಿಕೊಡುವಲ್ಲ್ಲಿ ಸಹಾಯಕವಾಗಿಲ್ಲವೋ......

ನಮ್ಮ ಪಾ(ತ)ಕಿ ಮಿತ್ರ ಪರೀಕ್ಷೆಯಲ್ಲಿ ಪಾಸಾಗಲಿ

(ಬೊಗಳೂರು ಭಯೋತ್ಪಾದನಾ ಬ್ಯುರೋದಿಂದ)
ಬೊಗಳೂರು, ಅ.19- ಪಾತಕಿಸ್ತಾನಕ್ಕೆ ಪರೀಕ್ಷೆ ನಡೆಸುವುದಾಗಿ ನಿಧಾನಿ ಮನಮೋಹಕ ಸಂಗ್ ಮತ್ತೆ ಮತ್ತೆ ಘೋಷಿಸಿದ್ದಾರೆ.

ರಾಜ್ಯೋತ್ಸವಕ್ಕೆ 'ಸಂಪದ'ದ ಇ-ಪುಸ್ತಕ

ನವೆಂಬರ್ ೧ ಹತ್ತಿರ ಬರುತ್ತಿದೆ.

ಈ ವರುಷ ಸಂಪದದಲ್ಲಿ ಮಾಡಬೇಕು ಎಂದು ನಾವಂದುಕೊಂಡ ಸಾಕಷ್ಟು ಕೆಲಸಗಳು ನೆರವೇರಲಿಲ್ಲ. ಆದರೂ ಸಂಪವನ್ನೋದುವವರು ದಿನೇ ದಿನೇ ಕಡಿಮೆಯಾಗದೇ ಹೆಚ್ಚುತ್ತಿರುವುದು ಸಂತಸದ ಮತ್ತು ಹೆಮ್ಮೆಯ ವಿಷಯ. ಬರುವ ದಿನಗಳಲ್ಲಿ ಸಂಪದದಲ್ಲಿ ಆಗಬೇಕೆಂದುಕೊಂಡ ಹಲವು ಕೆಲಸಗಳನ್ನು ನಾವೆಲ್ಲರೂ ಕೈಗೆತ್ತಿಕೊಂಡು ಮುಂದುಹೋಗುವುದರ ಪ್ರಾರಂಭವೆಂಬಂತೆ ಈ ಸಲದ ರಾಜ್ಯೋತ್ಸವಕ್ಕೆ 'ಸಂಪದ'ದಲ್ಲಿ ಇಲ್ಲಿಯವರೆಗೂ ಸೇರಿಸಲ್ಪಟ್ಟಿರುವ ಉತ್ತಮ ಲೇಖನಗಳ ಒಂದು ಇ-ಪುಸ್ತಕ ಮಾಡಿ ನವೆಂಬರ್ ಒಂದರಂದು ಹಂಚೋಣ ಎಂಬ ಸಲಹೆಗಳು ಮೂಡಿಬಂದವು.

ಸಲಹೆ ಉತ್ತಮವಾದುದೆಂದು ತಿಳಿದು ಎಲ್ಲ ಸದಸ್ಯರಿಗೂ ಈ ಇ-ಪುಸ್ತಕ ಜೋಡಣೆಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳಲು ಇದನ್ನು ಬರೆಯುತ್ತಿರುವೆ. ನೀವು ಇದುವರೆಗೂ ಸಂಪದದಲ್ಲಿ ಓದಿದ, ಮೆಚ್ಚಿದ ಲೇಖನಗಳ URLಗಳನ್ನು ನಮಗೆ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಿ:

webmaster AT sampada DOT net

ಓದುಗರಿಂದ ಹೆಚ್ಚು ಸೂಚಿಸಲ್ಪಟ್ಟ ಲೇಖನಗಳನ್ನು ಸಂಪದ ಬಳಗದ ಹಿರಿಯ ಲೇಖಕರ ಸಂಪಾದಕತ್ವದಲ್ಲಿ ಇ-ಪುಸ್ತಕಕ್ಕೆ ಸೇರಿಸಲಾಗುವುದು.

* ನಿಮ್ಮ ಮೆಚ್ಚಿನ ಪುಟಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ ೨೮ರ ಶನಿವಾರ.
* ಸದಸ್ಯರು ಎಷ್ಟು ಬೇಕಾದರೂ ಲೇಖನಗಳನ್ನು ಸೂಚಿಸಬಹುದು.
* ಸದಸ್ಯರು ತಾವೇ ಬರೆದ ಲೇಖನಗಳನ್ನು ಸೂಚಿಸಕೂಡದು.

ಎಲ್ಲರಿಗೂ ವ್ಯಯ ಸಂವತ್ಸರದ 'ದೀಪಾವಳಿ'ಯ ಹಾರ್ದಿಕ ಶುಭಾಷಯಗಳು !

ನಮ್ಮ 'ಸಂಪದ ಸೈಟ್' ನ ಎಲ್ಲಾ ಸದಸ್ಯರಿಗೂ ದೀಪಾವಳಿಯ ಹಾರ್ದಿಕ ಶುಭಾಷಯಗಳು.

೧೯-೧೦-೨೦೦೬, ಗುರುವಾರ, ಅಭ್ಯಂಜನ

ಅಡಿಗರ ಮೋಹನ ಮುರಲಿ

ಫ್ರಿಯ ಮಿತ್ರರೇ,

ಗೋಪಾಲಕೃಷ್ಣ ಅಡಿಗರ 'ಯಾವ ಮೋಹನ ಮುರಲಿ ಕರೆಯಿತು' ಕೇಳದ ಕನ್ನಡ ರಸಿಕರಿದ್ದಾರೆಯೇ? ಅದರ ಸವಿಯೂಟ ಮಾಡಿ ನಿಮ್ಮೊಡನೆ ಹಂಚಿಕೊಳ್ಳಲು ಆ ಕವನದ ರಸಾನುಭವ ಬರೆದಿದ್ದೇನೆ, http://kannada-nudi.blogspot.com/2006/10/adigas-flute-poem.html. ಈ ಲಿಂಕ್ ಕ್ಲಿಕ್ ಯಿಸಿ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.