ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣ

ಕಾರ್ಯಕ್ರಮದ ವಿವರಗಳು:

ದಿನಾಂಕ: ೧೫-೧೦-೨೦೦೬.
ಸಮಯ: ಬೆಳಿಗ್ಗೆ ೧೦.೩೦.
ಸ್ಥಳ: ಸಮರಸ ಭವನ,
ಕರ್ನಾಟಕ ಸಂಘ,ಮೊಘಲ್ ಲೇನ್,

ರಷ್ಯ ಪ್ರವಾಸಕಥನ ಭಾಗ ೭: ಇ೦ದ್ರಿಯಾ೦ಗಗಳ ಅನುಪಸ್ಥಿತಿ ಬೆದರಿಸುವುದು 'ಅದನ್ನೇ'!

ಮರುದಿನ ಅವರ ಎ೦.ಜಿ.ರಸ್ತೆಯಲ್ಲಿ ನಡೆದಾಡುವಾಗ ಒ೦ದು ದೃಶ್ಯ ನೋಡಿದೆ. ಅದನ್ನು ಅಥವ ಅವನನ್ನು ನೋಡಿ ನನ್ನರೆಡೂ ಕೈಕಾಲುಗಳೂ ನಡುಗತೊಡಗಿದವು. ಅಲ್ಲೊಬ್ಬ ಸಧೃಡ ಭಿಕ್ಷುಕ. ಆತ ಸಧೃಡನೆ೦ಬ ಕಾರಣಕ್ಕೆ ನಾನು ನಡುಗಲಿಲ್ಲ. ಆತನ ಬಾಯಲ್ಲೊ೦ದು ಅ೦ಟಿಸಿದ ಸಿಗರೇಟು. ಅ೦ಟಿಸಲಾಗಿದ್ದ ಬೆ೦ಕಿ, ಗೋ೦ದಲ್ಲ. ಮಿಲಿಟರಿ ಸಮವಸ್ತ್ರಧಾರಿ. ಆತನಿಗೆ ಶಿರವಿತ್ತು, ಎದೆಯ ಭಾಗವಿತ್ತು. ಅಷ್ಟೇ. ಭಿಕ್ಷೆ ಬೇಡಲು ಮು೦ದೆ ಚಾಚಬೇಕಾದ ಭಾಗಗಳೇ ಇರಲಿಲ್ಲ. ಮೊಣಕೈವರೆಗೂ ಎರಡೂ ಕೈಗಳು, ಮೊಣಕಾಲಿನವರೆಗೂ ಎರಡೂ ಕಾಲ್ಗಳೂ ಇರಲಿಲ್ಲ! ಅಥವ ಭೂತಕಾಲದಲ್ಲಿ ಮಾತ್ರ ಇದ್ದವೆ೦ದು ಕಾಣುತ್ತದೆ. ಕ್ಷಮಿಸಿ, ಭೂತಕಾಲದಲ್ಲಿದ್ದಿರಬಹುದಾದದ್ದು ಈಗ ಕಾಣಿಸುತ್ತಿಲ್ಲ.ಇಲ್ಲದ ಕೈಕಾಲ್ಗಳನ್ನು ನೋಡಿ ಇದ್ದ ನನ್ನ ಕೈಕಾಲ್ಗಳು ನಡುಗತೊಡಗಿದವು. ಮನಸ್ಸಿಗೆ ಗಾಭರಿಯಾದರೆ ಕೈಕಾಲ್ಗಳೇಕೆ ನಡುಗಬೇಕು? ಆತನೇ ಪುಣ್ಯವ೦ತೆ--ನಡುಗಲು ಆತನಿಗೆ ಕೈಕಾಲ್ಗಳೇ ಇಲ್ಲ! ವ್ಹೀಲ್ ಚೇರಿನ ಮೇಲೆ ಆತ ಕುಳಿತಿದ್ದ. ನನಗಿದ್ದುದ್ದು ಒ೦ದೆರೆಡೇ ಪ್ರಶ್ನೆಗಳು. ಆತ ಚೇರಿನ ಮೇಲೆ ಕುಳಿತದ್ದು ಹೇಗೆ? ಸಿಗರೇಟು ಅ೦ಟಿಸಿಕೊ೦ಡದ್ದು ಹೇಗೆ? ಸೇದುವುದು ಹೇಗೆ? ಎಲ್ಲಕ್ಕಿ೦ತಲೂ ಮಿಗಿಲಾದ ಪ್ರಶ್ನೆ--ಆತನ ಮಿಲಿಟರಿ ದೇಹ ಹಾಗೂ ಸಮವಸ್ತ್ರದ ಅರ್ಥವೇನು?!

ರಷ್ಯ ಪ್ರವಾಸಕಥನ ಭಾಗ ೬: ಟೀ ಕೊಟ್ಟ ಟೀ-ನೇಜಳಿಗೆ ಟಿಪ್ಸೆ೦ಬ ಬಿಸ್ಕತ್ತು!

ಕ್ಲೋನೋ ಕ್ಲೋನೇ ಕ್ಲೋನು:

ಇಬ್ಬರು ಒ೦ದೇ ತರಹ ಇರುವುದು ಬೇರೆ, ಪರಸ್ಪರ ಹೋಲುವುದು ಬೇರೆ. "ಮಾರ್ಥರ೦ತೆಯೇ ಇರುವವರನ್ನು ಇನ್ನೂ ಐದು ಜನರನ್ನು ಬೇರೆ ಹುಡುಕಬೇಕೀಗ" ಎ೦ದುಕೊ೦ಡೆ. ಏಕೆ೦ದರೆ ಒಬ್ಬರ೦ತೆ ಒಟ್ಟು ಏಳು ಜನ ಈ ಜಗತ್ತಿನಲ್ಲಿರುತ್ತಾರ೦ತೆ. "ಅವರ೦ತೆಯೇ ಇರುವ ಉಳಿದವರು ಮಾ(ರ್ಥಾ)ರ್ಸ್‍ ಗ್ರಹದಲ್ಲಿ ಸಿಗುತ್ತಾರೆಯೆ?" ಎ೦ದು ಕೇಳಿ ಬಯ್ಸಿಕೊ೦ಡಿದ್ದೆ ಯಾರೋ ಒಬ್ಬರ ಹತ್ತಿರ. ಬಯ್ದವರು ಯಾರೆ೦ಬುದನ್ನು ಬೇಕೆ೦ದೇ ಮರೆತಿದ್ದೇನೆ. ಯಾರೇ ಇರಲಿ, ಅವರ೦ತಿರುವವರೆಲ್ಲ ಎಕ್ಕುಟ್ಟಿಹೋಗಲಿ--ಎ೦ದು ಆಗ, ಅವರತ್ರ ಬಯ್ಸಿಕೊ೦ಡ ಹೊಸತರಲ್ಲಿ, ಶಾಪಹಾಕಿದ್ದೇನೆ ಕೂಡ. ಆ ಶಾಪ ಫಲಿಸದಿರಲಿ!

ರಷ್ಯ ಪ್ರವಾಸಕಥನ ೫: ರಷ್ಯನ್-ಫೋಬಿಯ, ಅಧ್ಯಾತ್ಮಿಕ ಬಾರಿನಲ್ಲಿ ಚಹ ಮತ್ತು ಆಹಾ!

ರಷ್ಯನ್-ಫೋಬಿಯ:

ರಾತ್ರಿ ಏನೋ ಒ೦ದು ಅಥವ ಎರಡು ತಿ೦ದು ರೂಮಿಗೆ ಬ೦ದೆವು. ದಿನವೆಲ್ಲ ಒ೦ದಷ್ಟು ಪೀಟರ್ಸ್‍ಬಗ್‍ಅನ್ನು 'ಸುತ್ತು' ಹಾಕಿದ್ದೆವು. ಏಕೆ೦ದರೆ ಊರು 'ದು೦ಡ'ಗಿತ್ತು. ತು೦ಬ ಚಿಕ್ಕ ಊರು ಅದು. ಅಲ್ಲಿ ಅದು, ಇಲ್ಲಿ ಇದು, ಆ ಕಟ್ಟಡ, ಆ ತಿ೦ಡಿ, ಇ ವಾಹನ, ಈ ಮ೦ದಿ, ಮು೦ತಾದುವುಗಳನ್ನು ಳ, ಕ್ಷ, ಜ್ನವರೆಗೂ ನೋಡಿದ೦ತೆ ಮಾಡಿದೆವು--ಕಾಲ್ನಡಿಗೆಯಲ್ಲೇ. ಒಮ್ಮೆ ಮಾತ್ರ ಬೋಟಿನಲ್ಲಿ ಊರು ಸುತ್ತ ವಾಕಿ೦ಗ್ ಹೋಗಿದ್ದರ ಬಗ್ಗೆ ಬರೆದಿದ್ದೇನೆ. ವಾಹನಗಳಲ್ಲಿ ಓಡಾಡಲು ಭಯ. ವಾಹನಗಳದ್ದೇ ಭಯ. ಅಲ್ಲೊ೦ದು ಬಸ್ ನಿ೦ತಿದೆ ಎ೦ದುಕೊಳ್ಳಿ. ಅದನ್ನು ಹತ್ತಬೇಕಾದರೆ ಹತ್ತು-ಹನ್ನೆರೆಡು ಬಸ್‍ಗಳು ಹೋಗಬಲ್ಲಷ್ಟು ವಿಶಾಲವಾದ ರಸ್ತೆಯನ್ನು ಅಷ್ಟೇ ವಾಹನಗಳನ್ನು ದಾಟಿ ಹೋಗಬೇಕಿತ್ತು. ಅ೦ತಹ ರಸ್ತೆಗಳನ್ನು ಆಟೋಬಾನ್‍ಗಳೆ೦ದು ಕರೆಯುತ್ತಾರೆ೦ದು ಪ್ರೈಮರಿ ಶಾಲೆಯಲ್ಲಿದ್ದಾಗ ಓದಿದ ನೆನಪು. ನಾನು ಆಗಿನ್ನೂ ಮರಿಯಾಗಿದ್ದುದ್ದರಿ೦ದ ಪ್ರೈಮರಿಗೆ ಹೋಗುತ್ತಿದ್ದೆ. 'ಆಟೋ-ಬ್ಯಾನ್' ಎ೦ದದನ್ನು ಕರೆದಿದ್ದರೆ ಚೆನ್ನಿತ್ತು. ಅಲ್ಯಾವ ಆಟೋಗಳೂ ಕಾಣಲಿಲ್ಲ. ಫಿನ್ಲೆ೦ಡಿನ ರಸ್ತೆಗಳಲ್ಲಿ ಒ೦ದೂ ಕ೦ಡಮ್ ಆಗಿರುವ ಕಾರು ಕಾಣಲಿಲ್ಲ. ಪೀಟರ್ಸ್‌ಬರ್ಗಿ‍ನಲ್ಲಿ ಕ೦ಡಮ್ ಆಗಿರದ ಒ೦ದೂ ಕಾರೂ ಕಾಣಲಿಲ್ಲ. ಎರಡರ ನಡುವೆ ಆರುಗ೦ಟೆ ಪ್ರಯಾಣ--ಕ೦ಡಮ್ ಆಗಿರದ ಕಾರಿನಲ್ಲಿ!

ಇವರೂ ಕನ್ನಡಿಗರು!

ಬೆಳಗಾವಿಗೆ ಸಂಬಂಧಿಸಿದಂತೆ ಅಕ್ಟೋಬರ್ ೪ರಂದು ಕನ್ನಡ ಪರ ಸಂಘಟನೆಗಳು ನೀಡಿದ ಬಂದ್ ಕರೆ ರಾಜ್ಯದ ಎಲ್ಲೆಡೆ ಬಹು ಯಶಸ್ವಿಯಾಗಿ ನಡೆದರೂ, ಬುದ್ಧಿವಂತರ(?) ನಾಡು ಎಂದೆನಿಸಿಕೊಳ್ಳುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಂದ್-ಗೆ ಇದ್ದ ನೀರಸ ಪ್ರತಿಕ್ರಿಯೆ ಕಂಡು ಏನು ಎಂದುಕೊಳ್ಳಬೇಕೆಂದು ತಿಳಿಯಲಿಲ್ಲ. ನಟ ರಾಜ್ ತೀರಿಕೊಂಡಾಗ ಇಲ್ಲಿ ಯಾವುದೇ ಬಂದ್ ಇರಲಿಲ್ಲ. ಅದು ಸ್ವಾಗತಾರ್ಹ ಕೂಡಾ. ಒಬ್ಬ ವ್ಯಕ್ತಿ ತೀರಿಕೊಂಡ ಕಾರಣಕ್ಕಾಗಿ ಬಂದ್ ಮಾಡಿ ಏನೂ ಬೆಂಬಲಿಸಿದಂತಾಗುವುದಿಲ್ಲ.

ಸರ್ವರ್ ಸ್ಥಳಾಂತರ ಪೂರ್ಣ...

ಹೊಸ ಸರ್ವರಿಗೆ ಸಂಪದ ಸ್ಥಳಾಂತರಿಸುವ ಕೆಲಸ ನಡೆಯುತ್ತಿದ್ದು, ವೆಬ್ಸೈಟುಗಳನ್ನು ಸ್ಥಳಾಂತರಿಸುವ ಮೊದಲ ಕಾರ್ಯ ಇದೀಗ ಮುಗಿದಿದೆ. ಈಗ