ಗೋ ಸಮ್ಮೇಳನ
ಪಾಳೇಕರ್ ರಿಂದ ಕಂಡ "ಗೋಮಾತೆ" ಮತ್ತು ವಿಶ್ವ ಗೋ ಸಮ್ಮೇಳನ.
- Read more about ಗೋ ಸಮ್ಮೇಳನ
- 1 comment
- Log in or register to post comments
ಪಾಳೇಕರ್ ರಿಂದ ಕಂಡ "ಗೋಮಾತೆ" ಮತ್ತು ವಿಶ್ವ ಗೋ ಸಮ್ಮೇಳನ.
"ತುಂಗಾ ಮೂಲ ಚಳುವಳಿ"ಯ ಕೆಲವು ಸಂಗತಿಗಳು:
" ತುಂಗಾ ಮೂಲ ಚಳುವಳಿ" ಕುರಿತಾಗಿ ದಿನಾಂಕ ೧/೭/೨೦೦೭ ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಹಳ ಲಘುವಾಗಿ ಬರೆದಿದ್ದಾರೆ. ಅದು ಶ್ರೀ. ಅನಂತಮೂರ್ತಿಯವರನ್ನು ಲೇವಡಿ ಮಾಡಲು ಬರೆದದ್ದು. ಇದು ಅತ್ಯಂತ ಬೇಜವಾಬ್ದಾರಿ ನಡುವಳಿಕೆಯಾಗಿದ್ದು ಇದನ್ನು ನಾವು ಖಂಡಿಸುತ್ತಿದ್ದೇವೆ. 'ತುಂಗಾ ಮೂಲ ಉಳಿಸಿ ಹೋರಾಟ' ಈ ನಾಡಿನ ಕೋಟ್ಯಾಂತರ ಜನರ, ರೈತರ ಬದುಕಿನಮೇಲೆ ನೇರವಾಗಿ ಪರಿಣಾಮ ಬೀರುವ ತುಂಗಾ- ಭದ್ರಾ ನದಿಗಳ ಉಳಿವಿನ ಹೋರಾಟವದು. ಈ ಅಹಿಂಸಾತ್ಮಕ ಆಂದೋಳನಕ್ಕೆ ಜನಕೋಟಿಯ ಮನಸ್ಸು- ಹೃದಯದ ಬೆಂಬಲ ದೊರಕುವಂತೆ ಮಾಡಿ ಸರ್ಕಾರವನ್ನು ಮಣಿಸಿದ್ದು ಅನಂತಮೂರ್ತಿಯವರ ನಾಯಕತ್ವ. ನಮ್ಮ ಕಾಲದ ಈ ಮಹತ್ವದ ಘಟನೆಯ ಹಿಂದಿನ ಸಂಗತಿಗಳನ್ನು ತಿಳಿಸದೇ ಹೋದರೆ ಹೀನ ಮನಸ್ಸಿನ ಜನ ಸತ್ಯವನ್ನೇ ತಿರುಚಿಬಿಡುತ್ತಾರೆಂದು ಈ ಕೆಳಗಿನ ಮಾಹಿತಿಗಳನ್ನು ನಾವು ನೀಡಬೇಕಾಗಿದೆ.
ಯಾವುದೇ ಚಳುವಳಿಗಳಿರಲಿ ಅದೊಂದು ರೀತಿಯಲ್ಲಿ ರಿಲೇ ಓಟದಂತೆ. ಕೊನೆಯ ಹಂತದ 'ಲ್ಯಾಪಿ'ನಲ್ಲಿ ಗುರಿಮುಟ್ಟುವವನು ಹಿಂದಿನವರ ಎಲ್ಲಾ ಸರಿ-ತಪ್ಪುಗಳನ್ನೂ ಹೆಗಲಮೇಲೆ ಹೊತ್ತು-ಬಳಸಿಕೊಂಡು ಗೆಲುವನ್ನು ಸಾಧಿಸಬೇಕು. ನಮ್ಮ ದೇಶದ ಸ್ವಾತಂತ್ರ ಹೋರಾಟವನ್ನೂ ಹೀಗೇ ನೋಡಿದರೆ ಗಾಂಧೀಜಿಯವರ ನಾಯಕತ್ವ ಕೊನೆಯಲ್ಲಿ ನಮಗೆ ಬಿಡುಗಡೆಯನ್ನು ನೀಡಿತು. ಈ ಕೊನೆಯ ಹಂತವೇ ಬಹಳ ಸೂಕ್ಷ್ಮ ಮತ್ತು ಆತಂಕಭರಿತವಾದದ್ದು. ಏಕೆಂದರೆ ನಿಜಕ್ಕೂ ನಮಗೆ ಯಶಸ್ಸು ಸಿಗಬಹುದೆಂಬ ಸಂಪೂರ್ಣ ನಂಬಿಕೆ ಹೋರಾಟಗಾರರಲ್ಲಿ ಇರುವುದಿಲ್ಲ. ಇಲ್ಲಿ ಸಿನಿಕತನ, ಅನುಮಾನಗಳೆಲ್ಲಾ ಇದ್ದೇ ಇರುತ್ತವೆ. ನಾವೇನು ನೂರಕ್ಕೆ ನೂರು ದೇವರನ್ನು ನಂಬುವವರೇ? ಈ ರೀತಿಯ ಅಂತಿಮ ಗಳಿಗೆಯ ಮನಸ್ಸಿನ ಸ್ಥಿತಿ ಹೋರಾಟವನ್ನು ಹಿಂಸಾ ಮಾರ್ಗದತ್ತ ತಳ್ಳುವುದನ್ನು ನಾವು ನೋಡುತ್ತಲೇ ಇರುತ್ತೇವೆ. ನಿಜಕ್ಕೂ ಅಹಿಂಸಾ ಮಾರ್ಗದಿಂದಲೇ ಕೊನೆಯ ಹಂತದ ಜಯವನ್ನು ಸಾಧಿಸಬೇಕೆಂದರೆ ನಾಯಕತ್ವದಲ್ಲಿ ಅಸೀಮ ಜಾಣತನ, ಚಾಲೂಕುತನ,ಯಾರನ್ನೂ ದ್ವೇಶಿಸದೇ ಎಲ್ಲರ ಮನಸ್ಸನ್ನು ತಟ್ಟುವ ಪ್ರಾಮಾಣಿಕತೆ- ಇವೆಲ್ಲವೂ ಮೇಳೈಸಿರಬೇಕಾಗುತ್ತದೆ. ಗಾಂಧೀಜಿ ಇದರಲ್ಲಿ ನಿಪುಣರಾಗಿದ್ದರಿಂದಲೇ ರಕ್ತಪಾತವಿಲ್ಲದೇ ಸ್ವಾತಂತ್ರ ದೊರಕಿತು.
ಬುದ್ಧ ಮತ್ತು ಹಿಂದೂ ಧರ್ಮ: ಕೆಲವು ಚಿಂತನೆಗಳು
ಅನುವಾದ ಕಾರ್ಯದಲ್ಲಿ ನಿಘಂಟುಗಳ ಮರೆಹೊಗುವುದು (ಮರೆಹೊಗು = ಪುಟ್ಟಮಗು ಬೆದರಿದಾಗ ತಾಯಿಯ ನಿರಿಗೆಯ ಮರೆ ಹೊಕ್ಕು ಅಲ್ಲಿಂದ ಇಣುಕಿ ನೋಡುತ್ತದೆ) ಅನಿವಾರ್ಯ. ಪದಶಃ ಅನುವಾದಗಳು ಹಾಗೂ ನಮ್ಮ ಪರಿಕಲ್ಪನೆಯ ಇತಿಮಿತಿಗಳು ಅನುವಾದಕ್ಕೆ ನ್ಯಾಯ ಒದಗಿಸುವುದಿಲ್ಲ. ಜನಪ್ರಿಯ ಪತ್ರಿಕೆಯೊಂದರಲ್ಲಿ ವಿದೇಶದ ಪ್ರಸಿದ್ಧ ಕ್ರಿಕೆಟಿಗನೊಬ್ಬ (ಲಕ್ನೋ ಬಳಿ) ತಾನು ಹುಟ್ಟಿದ ಆಸ್ಪತ್ರೆಯನ್ನೂ ಅದರಲ್ಲಿನ ಕಾರ್ಮಿಕರ ಕೋಣೆಯನ್ನೂ ಸಂದರ್ಶಿಸಿದನೆಂದು ವರದಿಯಾಗಿತ್ತು. ಈ ಕಾರ್ಮಿಕರ ಕೋಣೆಯೆಂಬುದು Labour Ward ಎಂಬುದರ ಪದಶಃ ಅನುವಾದ. ವಾಸ್ತವವಾಗಿ ಲೇಬರ್ ವಾರ್ಡನ್ನು ಕನ್ನಡದಲ್ಲಿ ಹೆರಿಗೆ ಕೋಣೆ ಅಥವಾ ಸಂಸ್ಕೃತದಲ್ಲಿ ಪ್ರಸೂತಿಗೃಹ ಎನ್ನಲಾಗುತ್ತದೆ.
ಈ ಪ್ರಸೂತಿಗೃಹವೆಂಬುದು ಕನ್ನಡದ್ದೇ ಎನ್ನುವಷ್ಟು ಬಳಕೆಯಲ್ಲಿ ಬಂದುಬಿಟ್ಟಿದೆ. ಮೂಡಣ ಪಡುವಣವೆಂಬ ಕನ್ನಡ ಪದಗಳು ಇಂದು ಮಾಯವಾಗಿ ಪೂರ್ವ ಪಶ್ಚಿಮವೆಂಬ ಸಂಸ್ಕೃತ ಪದಗಳು ರಾರಾಜಿಸುತ್ತಿವೆ. ಪದಾರ್ಥ (ಪದ + ಅರ್ಥ) ತೋಚದಾಗ ಹಿಂದೀಯಿಂದಲೋ ಸಂಸ್ಕೃತದಿಂದಲೋ ಅನಾಮತ್ತಾಗಿ ಎತ್ತಿಕೊಂಡುಬಿಡುವುದು ಅನುವಾದ ಕಾರ್ಯದ ಒಂದು ದೋಷ. ಇಂಜಿನಿಯರ್ ಎಂಬ ಪದಕ್ಕೆ ಸಂಸ್ಕೃತದಲ್ಲಿ ಅಭಿಯಂತಾ ಎಂಬ ಪದವಿದೆ. ಕನ್ನಡದಲ್ಲಿ ಅದು ಅಪರಿಚಿತ ಮಾತ್ರವಲ್ಲ ಅದೇ ಅಪಭ್ರಂಶವನ್ನು ಅಭಿಯಂತರು / ಅಭಿಯಂತರರು ಎಂದು ಬಳಸುವ ಪರಿಪಾಠವಿತ್ತು. ಅದೇ ರೀತಿ ಪೊಲೀಸ್ ಎಂಬ ಪದವನ್ನು ಆರಕ್ಷಕ / ಅರಕ್ಷಕ ಇತ್ಯಾದಿಯಾಗಿ ಬಳಸಿದ ಉದಾಹರಣೆಯಿದೆ.
ನಾನು ಕೆಲಸ ಮಾಡುವ ಎಚ್ ಎ ಎಲ್ ಕಾರ್ಖಾನೆಯಲ್ಲಿ Test Bed ಎಂಬ ಪದವನ್ನು ಒಬ್ಬರು ಪರೀಕ್ಷಾ ತಲ್ಪ ಎಂಬುದಾಗಿ ತರ್ಜುಮೆ ಮಾಡಿದ್ದರು. ವಿಮಾನದ ಇಂಜಿನ್ ಅನ್ನು ವಿಮಾನಕ್ಕೆ ಅಳವಡಿಸುವ ಮುನ್ನ ನೆಲದ ಮೇಲೆಯೇ ಅದನ್ನು ಪರೀಕ್ಷಿಸಿ ಎಲ್ಲ ಮಾನಕ ಅಂಶಗಳನ್ನೂ ಅದು ಪೂರೈಸುತ್ತಿದೆಯೇ ಎಂದು ಒರೆಗೆ ಹಚ್ಚಿ ನೋಡಲು ಒಂದು ವೇದಿಕೆ ಸ್ಥಾಪಿಸಿ ಉಡ್ಡಯನ, ಹಾರಾಟ, ಏರಿಳಿತಗಳ ಸಹಜ ಸನ್ನಿವೇಶದಲ್ಲಿ ಇಂಜಿನ್ ಹೇಗೆ ಪ್ರವರ್ತಿಸುತ್ತದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅಂದರೆ ಚಿನ್ನ ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಒರೆಗೆ ಹಚ್ಚಿ ನೋಡುವುದಿಲ್ಲವೇ ಹಾಗೆ. ಅಂತೆಯೇ ಟೆಸ್ಟ್ ಬೆಡ್ ಅನ್ನು ಒರೆಗೆ ಹಚ್ಚುವ ವೇದಿಕೆ ಅರ್ಥಾತ್ ಒರೆಪೀಠ ಎನ್ನಬಹುದಲ್ಲದೆ ಪರೀಕ್ಷಾತಲ್ಪ ಅರ್ಥಾತ್ ಪರೀಕ್ಷಾ ಹಾಸಿಗೆ ಎನ್ನುವುದು ಎಷ್ಟು ಸರಿ?
ಹೂವು ಮುಳ್ಳಿನ ನಂಟು
ಒಂದೆ ಗಿಡದಲಿ ಉಂಟು
ಹಗಲು ರಾತ್ರಿಯ ಗುಟ್ಟು
ಒಂದಿರದು ಇನ್ನೊಂದ ಬಿಟ್ಟು
ಕಷ್ಟವೆಂದರೆ ಬಾಳು
ನೋವು ನಲಿವಿನ ನೆರಳು
ಇಷ್ಟವೆಂದು ಬಗೆಯಲು
ನಲಿವು ತಾ ನೋವಿನ ಗೆಲುವು..
--------------------------------------------
ನನ್ನದು ಕವಿ ಹೃದಯವಲ್ಲ ಆದರೂ ಗೀಚಿದ್ದೀನಿ.. ಹೇಗಿದೆಯೆಂದು ತಿಳಿಸಿದರೆ.. ಸಂತೋಷ
ಇನ್ನೇನು ಮಳೆ ಬರುವ ಸೂಚನೆಯಲ್ಲಿ ಕಪ್ಪುಗಟ್ಟಿದ ಮೋಡ, ಇನ್ನೆಲ್ಲೋ ಮಳೆಬಿದ್ದ ಕುರುಹಾಗಿ ತೀಡಿ ಬಂದ ತಂಗಾಳಿಯ ಆ ಸಂಜೆ ನಾನು ಮತ್ತು ತಮ್ಮ ಗಾಂಧಿ ಬಜಾರಿಗೆ ಹೊರಟಿದ್ದೆವು. ಊರಿಗೆ ಹೊರಟ ಅವನಿಗೆ ಅಲ್ಲಿರುವ ಪುಟ್ಟ ಮಕ್ಕಳಿಗೆ ಆಟ ಸಾಮಾನು, ಕತೆ ಪುಸ್ತಕ ಕೊಳ್ಳಬೇಕಿತ್ತು.
ನೆನೆಯುವುದು ಎಲ್ಲರಿಗೂ ಇಷ್ಟ! ಮನಸ್ಸಿಗೆ ಹತ್ತಿರವಾದವರನ್ನು ನೆನೆಯುವುದಾದರೂ ಇರಬಹುದು.. ಮಳೆಯಲ್ಲಿ ನೆನೆಯುವುದಾದರೂ ಆಗಬಹುದು.. ಒಟ್ಟಿನಲ್ಲಿ ನೆನೆಯುವ ಪ್ರಕ್ರಿಯೆಯಲ್ಲಿ ಏನೋ ಒಂದು ಸುಖವಿದೆ. ಸುಖದ ಜೊತೆಗೆ ಸ್ವಾರಸ್ಯವೂ ಇದೆ.
ದೂರದರ್ಶನದ ’ಚಂದನ’ ವಾಹಿನಿಯಲ್ಲಿ ಪ್ರತಿದಿನ ಮುಂಜಾನೆ ೬.೩೦ ಕ್ಕೆ ಸರಿಯಾಗಿ ವಚನ ಕುರಿತಾದ ಕಾರ್ಯಕ್ರಮ ಬರುತ್ತಿದೆ. ಒಳ್ಳೆಯ ಹಾಡುಗಾರಿಕೆ , ಹಿನ್ನೆಲೆಯಲ್ಲಿ ಸುಂದರ ದೃಶ್ಯಗಳು ಇವೆ . ನಂತರ ಅದರ ವಿವರಣೆ .
ಆಸಕ್ತರು ನೋಡಬೇಕು.
೧. "ಕಡಿದಾಳ್ ಮತ್ತು ಚೆನ್ನಿ ಅಂತಹವರನ್ನು ನಕ್ಸಲ್ ಹಿತೈಷಿ ಅಂತ ಘೋಷಿಸಿದ ರಾಜ್ಯದ ಪೋಲಿಸ್ ಇಲಾಖೆ ಒಂದು ದೊಡ್ಡ ಜೋಕ್"
೨. "ಈ ಬೆಂಬಲಿಗರ ಪಟ್ಟಿಯ ಕ್ರಮ ಪೋಲಿಸ್ ಇಲಾಖೆಯ ವೃತ್ತಿ ದಾರಿದ್ರ್ಯಕ್ಕೆ ಹಿಡಿದ ಕೈಗನ್ನಡಿ"
೩. "ಕೋಮುವಾದಿ ಸರ್ಕಾರದ ಫ್ಯಾಸಿಸ್ಟ್ ಮನೋಭಾವಕ್ಕೆ ಇದೊಂದು ಉದಾಹರಣೆ"
೪. "ಅಭಿಪ್ರಾಯ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಫ್ಯಾಸಿಸ್ಟ್ ಧೋರಣೆ"