ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬುದ್ಧ ಮತ್ತು ಬೆಂಕಿ- ಝೆನ್ ಕಥೆ

ಸಂಚಾರದಲ್ಲಿದ್ದ ಸನ್ಯಾಸಿ ಒಂದು ಬೌದ್ಧ ಮಂದಿರದಲ್ಲಿ ರಾತ್ರಿಗೆಂದು ಉಳಿದುಕೊಳ್ಳುತ್ತಾನೆ. ಚಳಿ ಬಹಳ ಇತ್ತು. ಅಗ್ಗಿಷ್ಟಿಕೆ ಬೆಂಕಿ ಆರತೊಡಗಿತ್ತು. ಅಲ್ಲಿ ಕಟ್ಟಿಗೆಯೂ ಇರಲಿಲ್ಲ . ಸನ್ಯಾಸಿ ಅಲ್ಲಿದ್ದ ಬುದ್ಧನ ಕಟ್ಟಿಗೆಯ ಮೂರ್ತಿಯೊಂದನ್ನು ತೆಗೆದುಕೊಂಡು ಬೆಂಕಿಗೆ ಚಾಚಿದ . ಇದನ್ನು ನೋಡಿದ ಮಂದಿರದ ಪೂಜಾರಿಗೆ ಅಘಾತವಾಯಿತು. ಸನ್ಯಾಸಿ ಅದನ್ನು ಗಮನಿಸಿದ. ಒಂದು ಕಡ್ಡಿಯನ್ನು ತೆಗೆದುಕೊಂಡು ಬೆಂಕಿಯನ್ನು ಕೆದರುತ್ತ ಏನನ್ನೊ ಹುಡುಕತೊಡಗಿದ ಪೂಜಾರಿ .ಕುತೂಹಲದಿಂದ 'ಏನನ್ನು ಹುಡುಕುತ್ತ ಇದ್ದೀರಿ?' ಎಂದು ಕೇಳಿದ.'ಹೌದು. ಭಗವಾನ್ ಬುದ್ದನ ಅಸ್ಥಿಗಳನ್ನು ಹುಡುಕುತ್ತ ಇದ್ದೇನೆ ' ಎಂದ. 'ಮರದ ಪ್ರತಿಮೆ ಸುಟ್ಟರೆ ಅಸ್ತಿ ಸಿಗುತ್ತದೆಯೆ?' ಎಂದು ನಕ್ಕ ಪೂಜಾರಿ . ಅದಕ್ಕೆ ಗುರು ಹೇಳಿದ. ' ಹೌದಲ್ಲವೆ?

ತಟ್ಟೆಯ ಮಾತು.- ಝೆನ್ ಕಥೆ

ಹೊಸಬನಾದ ಒಬ್ಬ ಭಿಕ್ಷು ಗುರುವಿನ ಹತ್ತಿರ ಬಂದ. ಹೇಳಿದ - "ಈಗಷ್ಟೆ ನಾನು ಸಂಘದಲ್ಲಿ ಸೇರಿಕೊಂಡಿದ್ದೇನೆ. ಜ಼ೆನ್ ನ್ ಪ್ರಥಮ ತತ್ವವನ್ನು ತಿಳಿಯಲು ಕಾತರನಾಗಿದ್ದೇನೆ. ನನಗೆ ಅದನ್ನು ಬೋಧಿಸುತ್ತೀರ, ಗುರುವೆ? "

ನಿತ್ಯ ಪವಾಡಗಳು-ಝೆನ್ ಕಥೆ

ಗುರುವಿನ ಪ್ರವಚನ ನಡೆದಿತ್ತು . ಬೇರೆ ಧರ್ಮದ ಪುರೋಹಿತನೊಬ್ಬ ನಡುವೆ ಬಾಯಿ ಹಾಕಿ ತನ್ನ ದರ್ಮಸಂಸ್ಥಾಪಕನ ಪವಾಡಗಳನ್ನು ಹೇಳಿ "ನೀವು ಅಂಥ ಪವಾಡ ಮಾಡಬಲ್ಲಿರ ?" ಎಂದು ಪ್ರಶ್ನಿಸಿದ.

ಪರಿಶುದ್ಧ ಚರಿತ್ರ-ಝೆನ್ ಕಥೆ

ಜ಼ೆನ್ ಗುರು ಹಕು‌ಇನ್ ಪರಿಶುದ್ಧ ಚರಿತ್ರನೆಂದು ಎಲ್ಲರೂ ಹೇಳುತ್ತಿದ್ದರು . ಹೀಗಿರುವಾಗ ಒಂದು ಘಟನೆ ನಡೆಯಿತು . ಸಮೀಪದಲ್ಲಿ ಇದ್ದ ಒಬ್ಬ ಎಳೆಯ ಅವಿವಾಹಿತ ಹುಡುಗಿ ಗರ್ಭಿಣಿಯಾದಳು . ತಂದೆ ತಾಯಿ ಅವಳನ್ನು ಅದಕ್ಕೆ ಕಾರಣ ಯಾರು ಎಂದು ತಿಳಿಯಲು ಪ್ರಯತ್ನಿಸಿದರು. ಆಕೆ ಮೊದಲು ಬಾಯಿ ಬಿಡಲಿಲ್ಲ . ಅವಳಿಗೆ ಹಿಂಸೆ ಕೊಟ್ಟಾಗ ಗುರು ಹಕು‌ಇನ್ ನ ಹೆಸರು ಹೇಳಿದಳು.

ಮುಂಬೈಯಲ್ಲಿ ಕನ್ನಡದ ಪ್ರಚಾರ!

ಇವತ್ತು ಮುಂಬೈಯಲ್ಲಿ ನಾನು ಮನೆ ಬಿಟ್ಟು ಹೊರಬೀಳುವಾಗ 'ಹೊಸಗನ್ನಡ ಸಾಹಿತ್ಯದ ಉದಯಕಾಲ( ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ)' ಎಂಬ ಪುಸ್ತಕವೊಂದನ್ನು ಇಟ್ಟುಕೊಂಡೆ. ಅದರಲ್ಲಿನ ಅನೇಕವಿಷಯಗಳು ಬಹುತೇಕ ಕನ್ನಡಿಗರಿಗೆ ಗೊತ್ತಿಲ್ಲ. ಅದನ್ನು ಸಂಪದದಲ್ಲಿ ಹಾಕಬೇಕೆಂದು ರೈಲಿನಲ್ಲಿ ಓದಲು ಹೊರತೆಗೆದೆ. ಅದರಲ್ಲಿ ಮುಖ್ಯವಾಗಿ ಕನ್ನಡ ಭಾಷೆಯ ಪ್ರಾರಂಭಿಕ ಬೆಳವಣಿಗೆಯ ಸಂಕ್ಷಿಪ್ತ ಪರಿಚಯದ ನಂತರ ೩-೪ ಶತಮಾನ ಹೇಗೆ ಕತ್ತಲಯುಗವನ್ನು ಕಂಡಿತು ( ವಿಶೇಷತ: ಉತ್ತರ ಕರ್ನಾಟಕದಲ್ಲಿ ) , ಅದರಿಂದ ಹೇಗೆ ಹೊರಬಂದು ಇಂದಿನ ಸ್ಥಿತಿ ತಲುಪಿತು . ಅದಕ್ಕೆ ಯಾರು ಯಾರು ಕೊಡುಗೆ ಸಲ್ಲಿಸಿದರು . ಎಂಬ ಬಗ್ಗೆ ಕುತೂಹಲಕರ ವಿವರಗಳಿವೆ. ಈ ಪುಸ್ತಕವನ್ನು ಶ್ರೀ ರಾ.ಯ.ಧಾರವಾಡಕರ ಅವರು ಬರೆದಿದ್ದು . ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆಯಾಗಿದೆ. ( ಈ ಪುಸ್ತಕ ಯಾರದೋ ಮನೆಯಲ್ಲಿ ಸುಮ್ಮನೆ ಬಿದ್ದಿತ್ತು. ಅವರು ನನ್ನ ಮೂಲಕ ಅನೇಕ ಪುಸ್ತಕಗಳನ್ನು ವಿಲೇವಾರಿ ಮಾಡುತ್ತಿದ್ದಾಗ ನಾನು ಎತ್ತಿಟ್ಟುಕೊಂಡಿದ್ದೇನೆ ಅಂದರೆ ಕದ್ದಿದ್ದೇನೆ. - ಬೆಗ್, ಬೈ , ಬಾರೋ ಆರ್ ಸ್ಟೀಲ್ ಎಂದು ನಾಣ್ಣುಡಿಯೇ ಇದೆಯಲ್ಲ?!) . ತುಂಬ ಅಮೂಲ್ಯ ಪುಸ್ತಕವೇ ಸರಿ.

ಗಾಳಿ ಮತ್ತು ಧ್ವಜ - ಒಂದು ಒಳ್ಳೆಯ ಝೆನ್ ಕಥೆ

ಗಾಳಿ ಬಲವಾಗಿ ಬೀಸುತ್ತಿತ್ತು. ದ್ವಜ ಗಾಳಿಗೆ ಪಟಪಟಿಸುತ್ತಿತ್ತು. ಅಲ್ಲಿ ಇಬ್ಬರು ಭಿಕ್ಷುಗಳು ನಿಂತಿದ್ದರು . ಒಬ್ಬ ಹೇಳಿದ. " ಚಲಿಸುತ್ತಿರುವದು ಗಾಳಿಯಲ್ಲ, ದ್ವಜ." .

ಆರೋಗ್ಯದ ಲೇಖನಗಳು

ನಾರು-ಬೇರುಗಳು

ಏನು ಈ ನಾರು-ಬೇರುಗಳು ? ಕಾರ್ಬೋಹೈಡ್ರೇಟ್ ನಲ್ಲಿ ಎರಡು ವಿಧ. ಒಂದು, ದೊರಕುವ ಕಾರ್ಬೋಹೈಡ್ರೇಟ್ (ಅವೈಲಬಲ್), ಮತ್ತೊಂದು, ದೊರಕದ ಕಾರ್ಬೋಹೈಡ್ರೇಟ್(ಅನ್ ಅವೈಲಬಲ್), ದೊರಕುವ ಕಾರ್ಬೋಹೈಡ್ರೇಟ್-ಶರ್ಕರ ಪಿಷ್ಟ, ನಾರು-ಬೇರುಗಳು ದೊರಕದ ಕಾರ್ಬೋಹೈಡ್ರೇಟ್ ಗಳು.

ಅನಂತಮೂರ್ತಿಯವರನ್ನು ಗೆಲ್ಲಿಸಬೇಕು

ರಾಜ್ಯಸಭೆ ಎಂದರೆ ರಾಜಕೀಯ ಪುನರ್ವಸತಿ ಎಂಬ ಮಾತಿಗೆ ಸಾಕ್ಷ್ಯಗಳು ಸಿಗುತ್ತಲೇ ಬಂದಿವೆ. ಸಾರ್ವತ್ರಿಕ ಚುನಾವಣೆಯ ಹೊತ್ತಲ್ಲಿ ಪಕ್ಷಕ್ಕಾಗಿ ದುಡಿದವರು, ಟಿಕೆಟ್‌ ಸಿಗದೇ ಅಸಮಾಧಾನಗೊಂಡವರು, ಮತ ದಾರರಿಂದ ತಿರಸ್ಕೃತಗೊಂಡವರು, ಪಾರ್ಟಿ ಫಂಡ್‌ಗೆ ದೊಡ್ಡ ಮೊತ್ತ ಚೆಲ್ಲಿದವರು, ಮುಂದೆ ಮತ್ತೂ ಕೊಡುವೆನೆಂದು ಭರವಸೆ ಕೊಟ್ಟವರು... ಇಂಥವರಿಗೆಲ್ಲ ರಾಜಕೀಯ ಪುನರ್ವಸತಿ, ಪ್ರವೇಶ ತಾಣಗಳೆಂದರೆ ವಿಧಾನ ಪರಿಷತ್‌, ರಾಜ್ಯಸಭೆಗಳು. ಇದು ಎಲ್ಲರಿಗೂ ಗೊತ್ತಿರುವ ಸತ್ಯ.