ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪುಸ್ತಕ ನಿಧಿ (೧೦) - ಕಂಪ್ಯೂಟರ್ ಕುರಿತು ಅದ್ಭುತ ಪುಸ್ತಕ

ಕಂಪ್ಯೂಟರ್ ತಜ್ಞರೂ ಸಾಹಿತ್ಯಾಸಕ್ತರೂ ಕವಿಯೂ ಆಗಿರುವವರೊಬ್ಬರು ಕಂಪ್ಯೂಟರ್ ಕುರಿತು ಬರೆದ ಅದ್ಭುತ ಪುಸ್ತಕ ಇಲ್ಲಿದೆ . (ಪುಸ್ತಕ - ಕಂಪ್ಯೂಟರ್‌ಗೊಂದು ಕನ್ನಡಿ , ಲೇಖಕರು ಡಾ. ಸಿ. ಪಿ. ರವಿಕುಮಾರ್ ) ಪರಿವಿಡಿ ನೋಡಿದರೇ ನಿಮಗೆ ಪುಸ್ತಕ ಹೇಗಿದ್ದೀತು ಎಂಬ ಕಲ್ಪನೆ ಬಂದೀತು.

ವೇಗದ ಬೆನ್ನೇರಿ ಬಂತು ಗಣಕವಿಲಾಸ .

ಬ್ರಹ್ಮ ಬರೆದಿದ್ದೇನು ನಿಮ್ಮ ಜಿನೋಮ್‌ನಲ್ಲಿ

ಅಕ್ಕ ತಮ್ಮರ ಅನುಬಂದದ ಗೀತೆ

ತವರು ಮನೆಗೆ ಬಾರೆ ನನ್ನ ಅಕ್ಕಯ್ಯ   

ತಂದು  ನಿಂತಿರುವ ಗಾಡಿಯ ನಿನ್ನ ತಮ್ಮಯ್ಯ

ಅಕ್ಕಯ್ಯ ನನ್ನ ಅಕ್ಕಯ್ಯ   ಅಪ್ಪ ಅಮ್ಮ ನಿಲ್ಲದ ನನ್ನ

ತುಪ್ಪ ಅನ್ನ ಹಾಕಿ ಸಾಕಿದೆ ಅಕ್ಕಯ್ಯ "ಪಲ್ಲವಿ"

ನಾಲ್ಕು ಜನ ಮಕ್ಕಳಲ್ಲ ಕೇಳು ಅಕ್ಕಯ್ಯಅವರೊಳಗೆ

 ನಾ ಮಗನಾಗೆ ನಾಲ್ಕು ದಿನ ನಿನ್ನ ಸೇವೆ ಮಾಡುವೆ ನಿನಗೆ

ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)

ದಾಸ ಸಾಹಿತ್ಯದಲ್ಲಿ , ಭಜನೆ ಕೀರ್ತನೆಗಳಲ್ಲಿ ಅಸಕ್ತಿ ಉಳ್ಳವರಿಗೆ ಇಲ್ಲಿ ನಿಧಿಯೇ ಇದೆ ಎನ್ನಬಹುದು. ಅನೇಕ ಕೀರ್ತನೆಗಳು , ಭಜನೆಗಳು , ಉಗಾಭೋಗಾದಿಗಳು , ಇನ್ನೂ ಏನೇನೋ ಇಲ್ಲಿ ವಿವರಣೆ ಸಹಿತ ವಿಂಗಡಣೆಯೊಂದಿಗೆ ಸುಮಾರು ೧೫೦೦ ಪುಟಗಳಷ್ಟು ಇದೆ. ನಿಮಗೆ ಆಸಕ್ತಿ ಇದ್ದಲ್ಲಿ . ಈ ಲಿಂಕುಗಳನ್ನು ನೋಡಿ . ಆಸಕ್ತರಿಗೂ ತಿಳಿಸಿ. ಭಜನಕೌಸ್ತುಭ ಭಾಗ - ೧, ೩, ೪ ಇಲ್ಲಿವೆ .

ಪುಸ್ತಕನಿಧಿ - ಕನ್ನಡದ ಬಾವುಟ

ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನದು . ಬೆಲೆ ಸುಮಾರು ೧೫ ರೂಪಾಯಿ ಇದ್ದು ಚಾಮರಾಜಪೇಟೆಯ ಸಾಹಿತ್ಯಪರಿಷತ್ ಕಛೇರಿಯಲ್ಲಿ ಸಿಗುತ್ತದೆ. ಅಂತರ್ಜಾಲದಲ್ಲಿ ಇಲ್ಲಿ ಇದೆ.

ಎಲ್ಲಿಯವರೆಗೆ?

ಎಲ್ಲಿಯವರೆಗೆ ಶಾಂಪೂ ಮತ್ತು ಸೋಪುಗಳ ಕಂಪೆನಿಗಳು 'ಇದರಲ್ಲಿ ಪ್ರೊಟೀನ್ ಇದೆ, ನಿಮ್ಮ ಕೂದಲನ್ನು ಬಲಗೊಳಿಸಿ ಚರ್ಮಕ್ಕೆ ಕಾಂತಿ ನೀಡುತ್ತದೆ' ಎಂದು ಆಶ್ವಾಸನೆ ನೀಡುತ್ತಾ ಮಾರಾಟ ಮಾಡ್ತವೆ?

ಭೂತಕ್ಕೆ ಆರು ಕಾಲು ಅರ್ಧ ಕೈ

ಮೊನ್ನೆ ನಡು ಹಗಲೇ ಮನೆಯ ಪಕ್ಕದ ಓಣಿಯಲ್ಲಿ ಒಂದು ಬೆಳ್ಳನೆಯ ಭೂತಾಕೃತಿ ಕಂಡಿತು. ಎಲೆಯಡಿಕೆ ಅಗಿಯುತ್ತಾ ಹಿಂದುಮುಂದು ನೋಡುತ್ತಾ ಹೆದರಿ, ಹೆದರಿ ಹೆಜ್ಜೆ ಹಾಕುತ್ತಿತ್ತು. ಸುಮ್ಮನೆ ಹತ್ತಿರ ಹೋಗಿ ಕಿಚಾಯಿಸುವ ಬದಲು ದೂರದಿಂದಲೇ ಏನು ಮಾಡುತ್ತದೆ ಎಂದು ನೋಡುತ್ತಾ ನಿಂತೆ.
ಭೂತದ ಕೈ ಸ್ವಲ್ಪ ಗಿಡ್ಡವಾಗಿತ್ತು. ಅದರ ಹಸ್ತಗಳು ಕೈತುದಿಯಲ್ಲಿರುವ ಬದಲು ಮೊಣಕೈಯಿಂದ ಹೊರಬಂದಿರುವುದು ಕಂಡಿತು. ಹಸ್ತ ಇರಬೇಕಾದಲ್ಲಿ ಕತ್ತರಿಸಿ ಹಾಕಿದ ಹಾಗೆ ಮೂಳೆ ಮಾಂಸ ಹಸಿಹಸಿಯಾಗಿ ನೇತಾಡುತ್ತಾ ರಕ್ತ ಒಸರುತ್ತಿತ್ತು. ಮೊಣಕೈ ಜಾಗದಿಂದ ಹೊರಚಾಚಿದ ಹಸ್ತದ ನಡುವೆ ಅಗಲವಾದ ತೂತಿದ್ದು, ಹಸ್ತದ ತುದಿಗೆ ಒಂದೇ ಗೆಣ್ಣಿರುವ ಒಂದಷ್ಟು ಬೆರಳುಗಳು ಸೆಟೆದುಕೊಂಡಿದ್ದವು. ಆದ್ದರಿಂದ ಅದಕ್ಕೆ ಮೂಗೊರೆಸಿಕೊಳ್ಳುವಂಥ ಸುಲಭದ ಕೆಲಸವೂ ಕಷ್ಟವಾಗುತ್ತಿತ್ತು. ನೆಗಡಿಯಿಂದ ಸೊರಸೊರ ಎನ್ನುತ್ತಿದ್ದ ಮೂಗನ್ನು ಒರೆಸಿಕೊಳ್ಳಲು ಹೆಣಗುತ್ತಿತ್ತು. ಅದರ ಹೆಣಗಾಟದ ನೋಡಿದಾಗಲೇ ಅದಕ್ಕೆ ಕತ್ತು ಕೊಂಕಿಸಲು ಆಗುವುದಿಲ್ಲ ಎಂಬುದೂ ಗೊತ್ತಾಯಿತು. ಕತ್ತನ್ನು ಕೋಲಿಗೆ ಸಿಕ್ಕಿಸಿದ ಮಡಕೆಯಂತೆ ಅತ್ತಿತ್ತ ತಿರುಗಿಸಲು ಮಾತ್ರ ಆಗುವಂತಿತ್ತು. ಮಡಕೆಗೆ ತೂತು ಮಾಡಿದಂತೆ ಎರಡು ಮೂಗಿನ ಹೊಳ್ಳೆಗಳು. ಮೂಗೇ ಇಲ್ಲ ಎಂಬಷ್ಟು ಅಪ್ಪಚ್ಚಿ. ಆದರೂ ನೆಗಡಿಯಾಗಿದ್ದರಿಂದ ಮೂಗಿನಿಂದ ಸಣ್ಣಗೆ ನೀರು ಸೋರುತ್ತಿತ್ತು. ಒರೆಸಿಕೊಳ್ಳಲು ಆಗದೆ ಹೆಣಗಾಡುತ್ತಿತ್ತು. ಮೂಗಿನಿಂದ ಸೋರಿದ್ದು ಮೈ ಮೇಲೆ ಬೀಳದೆ, ಅದರ ಮೂಲಕ ನೆಲಕ್ಕೆ ಬಿದ್ದು ಅರೆಕ್ಷಣ ಹೊಳೆದು ಮಾಯವಾಗುತಿತ್ತು.

ಸವಿನೆನಪುಗಳು ಬೇಕು ... ಸವಿಯಲೇ ಬದುಕು...

ಮಲೆನಾಡು ಅರಣ್ಯ ಪ್ರದೇಶ . ಗುಂಡಿನ ಸದ್ದು . ಹಕ್ಕಿಗಳು ಹಾರಿ ಹೋಗುವವು . ಒಂದು ಹೆಣ ನೋಡಿದೆ ಎಂದು ಗುಲ್ಲಾಗಿ ಪೋಲಿಸರು ಬಂದು ನೋಡುತ್ತಾರೆ . ಹೆಣ ನಾಪತ್ತೆ . ಮುಂದೆ ?

ಇನ್ನೂ ಒಂದು ರಜಾದಿನ

ನಮಗೆ ಇರುವ ರಜಾದಿನಗಳ ಪಟ್ಟಿ ಇನ್ನೂ ಉದ್ದವಾಗುವುದರಲ್ಲಿದೆ. ಮುಖ್ಯಮಂತ್ರಿಗಳು ಡಾ.ರಾಜ್ ಜನ್ಮದಿನವನ್ನೂ ರಜಾದಿನವಾಗಿ ಘೋಷಿಸುವ ಭರವಸೆ ನೀಡಿದ್ದಾರೆ.ಹೇಗನ್ನಿಸುತ್ತೆ ನಿಮಗೆ?

ವಸುಧೈವ ಕುಟುಂಬಕಂ

ಶ್ರೀವತ್ಸ ಜೋಷಿಯವರು "ವಿಚಿತ್ರಾನ್ನ"ದಲ್ಲಿ ಭೂಮಿಯೆಷ್ಟು ಕಿರಿದು ಎಂಬುದನ್ನು ಚರ್ಚಿಸಿದ್ದಾರೆ. ಷಟ್ಪದ ಸಾಮೀಪ್ಯ, ಯಾದೃಚ್ಛಿಕ ಮುಂತಾದ ಪದಗಳನ್ನು ಕೇಳದಿದ್ದರೆ, ಅದೇನೆಂದು ತಿಳಿಯಲು ಲೇಖನ ಓದಿ. ಇವುಗಳಿಗೆ ಪರ್ಯಾಯ ಪದಗಳನ್ನು ಸೂಚಿಸುತ್ತೀರಾ?

ಕನ್ನಡ ಜನಪದ - ನೃಪತುಂಗ

ಪುಸ್ತಕದಿಂದ ಬರೆದುಕೊಂಡಿದ್ದ ಒಂದು ವಿಳಾಸ ಹುಡುಕುತ್ತಿದ್ದಾಗ `ಕನ್ನಡ ಜನಪದ' ಪದ್ಯ ಸಿಕ್ಕಿತು. ಯಾವ ಪುಸ್ತಕದಿಂದ ಬರೆದುಕೊಂಡಿದ್ದೆ ತಿಳಿದಿಲ್ಲ. ಅದನ್ನು ಯಥಾವತ್ತಾಗಿ ಟೈಪಿಸಿದ್ದೇನೆ. ತಪ್ಪುಗಳಿದ್ದರೆ ತಿಳಿಸಿ.

ಚಂದ್ರು
೨೪.೦೪.೨೦೦೭