ಇವರೂ ಕನ್ನಡಿಗರು!
ಬೆಳಗಾವಿಗೆ ಸಂಬಂಧಿಸಿದಂತೆ ಅಕ್ಟೋಬರ್ ೪ರಂದು ಕನ್ನಡ ಪರ ಸಂಘಟನೆಗಳು ನೀಡಿದ ಬಂದ್ ಕರೆ ರಾಜ್ಯದ ಎಲ್ಲೆಡೆ ಬಹು ಯಶಸ್ವಿಯಾಗಿ ನಡೆದರೂ, ಬುದ್ಧಿವಂತರ(?) ನಾಡು ಎಂದೆನಿಸಿಕೊಳ್ಳುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಂದ್-ಗೆ ಇದ್ದ ನೀರಸ ಪ್ರತಿಕ್ರಿಯೆ ಕಂಡು ಏನು ಎಂದುಕೊಳ್ಳಬೇಕೆಂದು ತಿಳಿಯಲಿಲ್ಲ. ನಟ ರಾಜ್ ತೀರಿಕೊಂಡಾಗ ಇಲ್ಲಿ ಯಾವುದೇ ಬಂದ್ ಇರಲಿಲ್ಲ. ಅದು ಸ್ವಾಗತಾರ್ಹ ಕೂಡಾ. ಒಬ್ಬ ವ್ಯಕ್ತಿ ತೀರಿಕೊಂಡ ಕಾರಣಕ್ಕಾಗಿ ಬಂದ್ ಮಾಡಿ ಏನೂ ಬೆಂಬಲಿಸಿದಂತಾಗುವುದಿಲ್ಲ.
- Read more about ಇವರೂ ಕನ್ನಡಿಗರು!
- 1 comment
- Log in or register to post comments