ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕರ್ಮಯೋಗ - ರಬೀ೦ದ್ರ ನಾಥ ಠಾಗೂರ್ - ಅನುವಾದ ಶ೦ಕರಾನ೦ದ ಸರಸ್ವತಿ

ಕರ್ಮಯೋಗ - ರಬೀ೦ದ್ರ ನಾಥ ಠಾಗೂರ್ - ಅನುವಾದ ಶ೦ಕರಾನ೦ದ ಸರಸ್ವತಿ (ಪುಸ್ತಕ ನಿಭ೦ಧಮಾಲ - ೧ , ಸಾಹಿತ್ಯ ಅಕಾಡಮಿ ಪ್ರಕಟನೆ)

೧೮ ನೇ ವಿಶ್ವ ಫುಟ್ ಬಾಲ್ ಕಪ್- ಜರ್ಮನಿಯಲ್ಲಿ, ಇಂದು ರಾತ್ರಿ ೯-೩೦ ಕ್ಕೆ ! !

ವಿಶ್ವದ ಮಿಲಿಯಗಟ್ಟಲೆ ಕ್ರೀಡಾಪ್ರೇಮಿಗಳು ಕ್ಷಣಗಣತಿ ಮಾಡಿ ಕಾಯುತ್ತಿರುವ, "೧೮ ನೆ ವಿಶ್ವಫುಟ್ ಬಾಲ್ ಕಪ್ ಸಮರ" ಇಂದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ ೯-೩೦ ಕ್ಕೆ ಸರಿಯಾಗಿ ತೆರೆ ಸರಿದು ಪ್ರದರ್ಶನ ಕಾಣಲಿದೆ ! ಮೊಟ್ಟಮೊದಲನೆಯದಾಗಿ 'ಎ' ಗ್ರೂಪಿನ ತಂಡಗಳು ಸೆಣಸಾಟಕ್ಕೆ ತಯಾರಿ ನಡೆಸಿವೆ.ಅತಿಥೇಯ ಜರ್ಮನಿ ವಿರುದ್ಧ ಕೋಸ್ಟರಿಕ ತಂಡ ಆಡುತ್ತಿದೆ.ಇದು ಮ್ಯುನಿಕ್ ನಲ್ಲಿ ನಡೆಯುತ್ತದೆ.'ಎ" ಗ್ರೂಪಿನ ಇನ್ನೊಂದು ತಂಡ ರಾತ್ರಿ ೧೨-೨೦ ಕ್ಕೆ ಪೋಲೆಂಡ್ ವಿರುದ್ಧ ಇಕ್ವೆಡಾರ್ ದೇಶದ ತಂಡ ಸೆಣೆಸಲಿದೆ.ಈ ಸಂದರ್ಭದಲ್ಲಿ ಜರ್ಮನಿಯ 'ಸಾಂಸ್ಕೃತಲೋಕದ' ದರ್ಶನವನ್ನು ಮಾಡಿಸುವ ವ್ಯವಸ್ಥೆ ಇದೆ. ಈ ವರೆಗೆ ವಿಶ್ವ ಫುಟ್ ಬಾಲ್ ಟೋರ್ನಿಯಲ್ಲಿ ಜಯಗಳಿಸಿದ ವಿವಿಧ ರಾಶ್ಟ್ರಗಳ ೧೭೦ ಮಂದಿ ಕ್ರೀಡಾಳುಗಳು ಉದ್ಘಾಟನಾ ಸಮಾರಂಭ ದಲ್ಲಿ ಜಗತ್ತಿನ ಶ್ರೇಷ್ಟ ಫುಟ್ ಬಾಲ್ ತಾರೆ,'ಪಿಲೆ'ಯವರೊಂದಿಗೆ "ಪಥಸಂಚಲನ" ದಲ್ಲಿ ತಮ್ಮ ಬಾವುಟಗಳನ್ನು ಹಿಡಿದು ಹೆಜ್ಜೆ ಹಾಕುವರು. ಜರ್ಮನಿಯಲ್ಲಿ ಈಗ ತಾನೆ ಚಳಿಗಾಲ ಕಳೆದು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡಲು ಹಾತೊರೆಯುವ ಜನರಿಗೆ ಮುದನೀಡುವ ಸಮಯ ದಲ್ಲಿ 'ಸಾಕರ್ ಕಪ್' ನಡೆಯುತ್ತಿರುವುದು ಸರಿಯಾಗಿದೆ ! ಸುರಕ್ಷೆಯ ಬಗ್ಯೆ ಎಲ್ಲ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.ಸುಮಾರು ೨,೮೦,೦೦೦ ಪೋಲೀಸರು ಪರಿಸ್ತಿತಿಯನ್ನು ನಿಯಂತ್ರಿಸಲು ನೇಮಿಸಲ್ಪಟ್ಟಿದ್ದಾರೆ.ವಿಶ್ವಕಪ್ಪಿನ ಅನೇಕ ವಿಶೇಷತೆಗಳಲ್ಲಿ ಒಂದು ಎಂದರೆ, 'ಫುಟ್ಬಾಲ್ ನ ವಿನ್ಯಾಸ'! ಪ್ರಖ್ಯಾತ ಆಟದ ಸಾಮಗ್ರಿಗಳ ತಯಾರಕರಾದ, ಮೆ.ಆಡಿಡಾಸ್ ಅವರ ಚಿಂಡಿಗೆ ' ಟೀಮ್ ಗೆಸ್ಟ್' ಎಂದು ಹೆಸರಿಟ್ಟಿದ್ದಾರೆ. ಇದರ ಅರ್ಥ 'ಟೀಮ್ ಸ್ಪಿರಿಟ್' ಎಂದು, ಹಳೆಯ ಬಾಲಿನಂತೆ ಇದರಲ್ಲಿ ೩೨ ಪದರಗಳಿಲ್ಲದೆ ಕೇವಲ ೧೪ ಮಾತ್ರ ಇದೆ.ಚೆಂಡಿನ ಹೊರಮೈ ಪೂರ್ತಿ ಗೋಳಾಕಾರ ವಾಗಿದ್ದು ಸರಿಸಮಾನವಾಗಿರುವುದರಿಂದ ಹೊಡೆತದ ಸಮಯದಲ್ಲೇ ಆಟಗಾರನಿಗೆ ಅದರ ಜಾಡನ್ನು ನಿಖರವಾಗಿ ಹಿಡಿಯಲು ಸಹಾಯ ವಾಗುತ್ತದೆ.ಒದ್ದೆಯಾದ ಬಾಲಿನಲ್ಲು ಆಡಬಹುದು.ಬಾಲಿನ ವೇಗ ಹಿಂದೆ ೮೦ ಮೈಲಿ /ಪ್ರತಿ ಘಂಟೆಗೆ ಇದ್ದು, ಈಗಿನ ವೇಗಿಗಳಾದ 'ಬೆಕ್ ಹ್ಯಾಂ' ನಂಥವರು ಹೊಡೆದ ಬಾಲು ೧೧೫ ಮೈಲಿ/ಘಂಟೆಗೆ ಇದ್ದು ಸುಮಾರು ೧೨ ಅಡಿ ಎತ್ತರಕ್ಕೆ ಹೊಡೆದಾಗಲೂ ಯಾವ ತೊಂದರೆಯೂ ಆಗುವುದಿಲ್ಲ. ಬಾಲಿನ ಒಳ ಭಾಗದಲ್ಲಿ "ಕಂಪ್ಯೂಟರ್ ಚಿಪ್" ಅಳವಡಿಸಲಾಗಿದ್ದು ಬಾಲ್, ಗೋಲ್ ಲೈನಿನಿಂದ ದಾಟಿ ಎಷ್ಟು ಸಮಯ ಹೋಯಿತು, ಬೌಂಡರಿ ಲೈನಿನಿಂದ ಹೊರಗೆ ಹೋದ ವಿವಿರಗಳನ್ನು ಮತ್ತು ಅನೇಕ ಉಪಯುಕ್ತ ಮಾಹಿತಿಗಳನ್ನು 'ರೆಫರಿ' ಗಳಿಗೆ ಒದಗಿಸುತ್ತದೆ.ಇಲ್ಲಿಂದ ಪ್ರಸಾರವಾಗುವ ರೇಡಿಯೋ ತರಂಗಗಳನ್ನು ಲಿನಕ್ಸ್ ಸರ್ವ್ ರ್ ಗಳು ಸೆರೆಹಿಡಿದು, ಆ 'ಡಾಟಾ' ಗಳು, ಗಣಕ ಯಂತ್ರದ ಮುಖಾಂತರ ವಿಶ್ಲೇಷಿಸಲ್ಪಟ್ಟು, ವಿವಿಧ ಮಾಹಿತಿಗಳು ಲಭ್ಯವಾಗುತ್ತವೆ.

ಈ-ಮೈಲ್ ನಿಂದ ಬ್ಲಾಗ್ ಪ್ರಕಟಣೆ!!!

ಈ ಪ್ರಶ್ನೆಯನ್ನು feedback section ನಲ್ಲಿ ಕೇಳಬೇಕೆಂದುಕೊಂಡೆ. ಆದರೆ, ಅದೇ ಪ್ರಶ್ನೆಯನ್ನು ಇಲ್ಲಿ ಕೇಳಿದರೆ ಎಲ್ಲ ಸದಸ್ಯರೂ ಭಾಗವಹಿಸುತ್ತಾರೇನೋ ಎಂದುಕೊಂಡು ಇಲ್ಲಿಡುತ್ತಿದ್ದೇನೆ.

ಕಂದಮ್ಮ.

ಕಂದಮ್ಮ

ಅಳಬೇಡ ಕಂದಮ್ಮ
ನಗುನಗುತಾ ಮಲಗಮ್ಮ
ಕಣ್ಣ ಮುಚ್ಚು ಕಣ್ಣಮ್ಮ
ಸುಖದ ಸ್ವಪ್ನ ಕಾಣಮ್ಮ
ಚಂದಮಾಮ ಬರುವನು
ತಾರೆಗಳ ತೋರುವನು
ತಾರೆಗಳ ತೋಟದಲಿ
ಬಾಲಕೃಷ್ಣನಿರುವನು
ನಿನ್ನೊಡನೆ ಆಡುವನು
ನಿನ್ನ ಹಾಡ ಕೇಳುವನು
ಮಾಧವನು ಹತ್ತಿರ
ಮುರಳಿಗಾನ ಸುಮಧುರ
ಆಡಿನಲಿದ ನಂತರ
ಆಗುವುದು ಎಚ್ಚರ.

ಸಂಪದ *ಏನಲ್ಲ* - What Sampada is *not*

ಶೇಖರ್ ಪೂರ್ಣರವರು ತಮ್ಮ ಸಂಪಾದಕೀಯದಲ್ಲಿ ಸಂಪದವನ್ನು blogspotಗೆ ಹೋಲಿಸಿ 'ಸಂಪದದ ದೌರ್ಬಲ್ಯಗಳ' ಬಗ್ಗೆ ಬರೆದಿರುವುದು ನನಗೆ ಅಚ್ಚರಿ ತಂದಿತು.

ಕೆಲವು ವಿಚಾರಗಳು:
೧) ಸಂಪದವನ್ನು blogspotಗೆ ಹೋಲಿಸುವುದು ತೀರ ತಮಾಷೆಯ ಸಂಗತಿ, ಅಜ-ಗಜ ಹೋಲಿಕೆಯಂತೆ! ನೂರಾರು [w:Data center|Data center]ಗಳನ್ನಿಟ್ಟುಕೊಂಡು ನಡೆಸಲಾಗುವ blogspot ಎಲ್ಲಿ, ಇನ್ನೂ [w:Shared web hosting service|shared hostingನ] ಕೆಲವೇ ಕೆಲವು MB ಜಾಗದಲ್ಲಿ ಕೊಳೆಯುತ್ತಿರುವ ಸಂಪದ ಎಲ್ಲಿ!

೨) ಸಂಪದದಲ್ಲಿ Individualistic ಬ್ಲಾಗುಗಳಿಗೆ ಹೆಚ್ಚು ಒತ್ತು ನೀಡದೇ ಇರುವುದಕ್ಕೆ, ಭಿನ್ನವಾದ ಟೆಂಪ್ಲೇಟುಗಳನ್ನು ಹಾಕುವ ಸೌಲಭ್ಯ ಇಲ್ಲದೇ ಇರುವುದಕ್ಕೆ ಕಾರಣಗಳಿವೆ - ನಮಗೆ ಸದ್ಯದ ಪರಿಸ್ಥಿತಿಯಲ್ಲಿ blogspotನಷ್ಟು ಬ್ಲಾಗುಗಳನ್ನು ನೀಡುವುದು ಸಾಧ್ಯವೇ ಇಲ್ಲ. ಅದನ್ನು ಸಾಧ್ಯವಾಗಿಸಬೇಕೆಂದಲ್ಲಿ ನಮ್ಮದೇ ಆದ ಒಂದಷ್ಟು infrastructure ಆದರೂ ಇರಬೇಕು! ಕನಿಷ್ಠ ಪಕ್ಷ ಒಬ್ಬರು ಇಬ್ಬರಾದರೂ 'full-time' ಇದರ ಮೇಲೆ ಕೆಲಸ ನಿರ್ವಹಿಸುವಂತವರು ಇರಬೇಕು.

೩) ಕನ್ನಡದಲ್ಲಿ blogspotನಂತಹ ಒಂದು ಪ್ರಯತ್ನ 'ಸಾಧ್ಯವಾಗದು' ಎಂಬುದಿಲ್ಲ. ಆದರೆ ಸಂಪದ ಖಂಡಿತವಾಗಿ ಅಂತಹ ಒಂದು ಪ್ರಯತ್ನವಲ್ಲ!

ಸಂಪದ ಪ್ರಾರಂಭಿಸಿದ್ದಾಗ ಹೆಚ್ಚು ಕನ್ನಡ ಕಂಟೆಂಟ್ ಅಂತರ್ಜಾಲದಲ್ಲಿರಲಿಲ್ಲ. ಕನ್ನಡ ವಿಕಿಪೀಡಿಯ ಬಿಟ್ಟರೆ ಈಗಲೂ ಯೂನಿಕೋಡ್ ನಲ್ಲಿ ಹೆಚ್ಚು ಕಂಟೆಂಟ್ ಇರುವುದು ಸಂಪದದಲ್ಲೇ.
ಸಂಪದ ಪ್ರಾರಂಭವಾದ ನಂತರ ಕನ್ನಡದಲ್ಲಿ ಯೂನಿಕೋಡ್ ಬಳಸಿ ಮಾಹಿತಿ ಪೇರಿಸುವ ಹಲವು ಬ್ಲಾಗುಗಳು ಪ್ರಾರಂಭವಾದವು. ಈ ರೀತಿಯ ಬಳಕೆ ಹೆಚ್ಚಬೇಕೆಂದೇ ಪ್ರಾರಂಭವಾದದ್ದು ಸಂಪದ. ಸಂಪದ ಪ್ರಾರಂಭವಾಗಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ಇದು ಬಡಿದೆಬ್ಬಿಸಿದ ಚಟುವಟಿಕೆ ಸಂಪದದ ಸದಸ್ಯರೆಲ್ಲರಿಗೂ ಹೆಮ್ಮೆ ಮೂಡಿಸುವಂತ ವಿಷಯವೇ.

ತಾಂತ್ರಿಕತೆಯ ಬಗ್ಗೆ ನಾವು ನೋಡಿಕೊಳ್ಳುವೆವು... ಸಂಪದಕ್ಕೆ [:Donate|ನಿಮ್ಮೆಲ್ಲರ ಪ್ರೋತ್ಸಾಹ ನೀಡಿ]... ನಿಮ್ಮ ಸಹಾಯ, ಪ್ರೋತ್ಸಾಹದಿಂದ ಖಂಡಿತವಾಗಿ ಸಂಪದವನ್ನು ಇನ್ನಷ್ಟು ಚೆಂದಗೊಳಿಸಬಹುದು, ಬೃಹತ್ ಸಮುದಾಯವನ್ನಾಗಿ ಮಾಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಡೆಡಿಕೇಟೆಡ್ ಸರ್ವರ್ ಗೆ ಸಂಪದವನ್ನು ಸ್ಥಳಾಂತರಿಸುವವರೆಗೂ ಸಂಪದದಲ್ಲಿ ಏನೊಂದೂ ಹೊಸ ಫೀಚರ್ ಸೇರಿಸುವುದು ಸಾಧ್ಯವಿಲ್ಲ - ತಾನಿರುವ shared serverನಲ್ಲಿ ಈಗಾಗಲೇ ಸಾಕಷ್ಟು ಸಂಪನ್ಮೂಲಗಳನ್ನು ಸಂಪದವೇ ಬಳಸಿಕೊಂಡು ಅದರೊಂದಿಗುರುವ ಇತರ ತಾಣಗಳಿಗೂ ತೊಂದರೆಯಾಗುತ್ತಿದೆ.

ವಿ. ಸೂ: ಈ‌ ಬಾರಿ ಡೆಡಿಕೇಟೆಡ್ ಸರ್ವರ್ ಕೊಳ್ಳಲು [:Donate|ನಿಮ್ಮೆಲ್ಲರ ಸಹಾಯ ಬೇಕೇಬೇಕಾಗಿದೆ]. ಎಲ್ಲರೂ ಸಾಧ್ಯವಾದಷ್ಟು ಸಹಾಯ ಮಾಡಬೇಕೆಂದು ಕೋರುತ್ತೇನೆ. ಗಮನಿಸಿ:
೧) ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ಸಂಪದದಲ್ಲಿ ಒಂದೊಂದು e-mail id ನೀಡಲಾಗುವುದು. ಉದಾ: yourname@sampada.net.
೨) $20 ಕ್ಕೂ ಹೆಚ್ಚು ದೇಣಿಗೆ ನೀಡುವ ಸದಸ್ಯರಿಗೆ ತಮ್ಮದೇ ಆದ ಹೊಸ ಬ್ಲಾಗು ([:http://rujuvathu.sampada.net|ಅನಂತಮೂರ್ತಿಯವರ] ಹಾಗೂ [:http://ismail.sampada.net|ಇಸ್ಮಾಯಿಲ್ ರವರ] ಬ್ಲಾಗಿರುವಂತೆ) ನೀಡಲಾಾಗುವುದು* - ತಮಗೆ ಬೇಕಾದ ಥೀಮ್ ಬಳಸುವಂತಹ, ಸಂಪದದ ಎಲ್ಲ ಓದುಗರು ಸಂಪದದ ಐಡಿ ಬಳಸಿಯೇ ಪ್ರತಿಕ್ರಿಯೆ ಸೇರಿಸಲು ಸಾಧ್ಯವಾಗುವಂತಹ ಸವಲತ್ತು ಆ ಬ್ಲಾಗಿನಲ್ಲಿ ನಿಮಗೆ ಲಭ್ಯವಾಗುವುದು.

ಲೆಂಕನೆಂತಾಗುವೆನು ಕನ್ನಡಕೆ ನಾನು

( ದಾಸನೆಂತಾಗುವೆನು ಧರೆಯೊಳಗೆ ನಾನು ಎಂಬಂತೆ)

ಲೆಂಕನೆಂತಾಗುವೆನು ಕನ್ನಡಕೆ ನಾನು
ಮಂಕುಮತಿ ನಾನು ಲೇಶ ಯೋಗ್ಯತೆ ಕಾಣೆ

ದಾರಿ ತಪ್ಪಿದ ಮಕ್ಕಳು!

ನಿಮಗೆ ನೆನಪಿರಬಹುದು, 1997ರಲ್ಲಿ ಕರ್ನಾಟಕದಲ್ಲಿ ಅಂದಿನ ಜೆ.ಎಚ್. ಪಟೇಲ್ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದ ಬಿ.ಟಿ ಲಲಿತಾನಾಯಕ್ ಅವರ ಪುತ್ರ ವಿಶ್ವಜಿತ್, ಮದ್ಯದ ಅಮಲಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮದ್ಯಾಭಿಷೇಕ ಮಾಡಿದ್ದು. ಈ ಘಟನೆ ಇಡೀ ರಾಜ್ಯಾದ್ಯಂತ ಭಾರಿ ಕೋಲಾಹಲವನ್ನೇ ಎಬ್ಬಿಸಿತ್ತು. ತಾಯಿ ಲಲಿತಾ ನಾಯಕ್ ರಾಜೀನಾಮೆ ಕೊಡುವುದರೊಂದಿಗೆ ಈ ಪ್ರಕರಣ ಅಂತ್ಯ ಕಂಡಿತ್ತು.

ಬಡವರ ನಿರ್ಮೂಲನೆಯೇ UPA ಗುರಿ: ನಿಧಾನಿ

(ಬೊಗಳೂರು ಜನಪರ ಬ್ಯುರೋದಿಂದ)
ಬೊಗಳೂರು, ಜೂ.6- ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಬಗ್ಗೆ ಕೇಂದ್ರದಲ್ಲಿರುವ Unprecedented Price Agenda ಸರಕಾರ ಸ್ಪಷ್ಟನೆ ನೀಡಿದ್ದು, ಕೃಷಿ ಆಧಾರಿತ ರಾಷ್ಟ್ರವಾದ ಭಾರತದಲ್ಲಿ ಕೃಷಿ ಸಂಪನ್ಮೂಲ ರಕ್ಷಣೆಗೆ ಇದು ಪೂರಕ ಎಂದು ಸ್ಪಷ್ಟಪಡಿಸಿದೆಯಲ್ಲದೆ ಬಡವರ ನಿರ್ಮೂಲನೆಯೇ ಸರಕಾರದ ಗುರಿ ಎಂದು (ಜನಸಾಮಾನ್ಯರನ್ನು ಕಾಲಿನಿಂದ) ಒತ್ತಿ ಒತ್ತಿ ಹೇಳಿದೆ.

ನಿಮಗಿದು ಗೊತ್ತೆ?

* ಜನಪ್ರಿಯ ಮೊಬೈಲ್ ಫೋನು ಕಂಪೆನಿ ನೋಕಿಯ ಪ್ರಾರಂಭದಲ್ಲಿ ಪೇಪರ್ ತಯಾರಿಕೆಯಲ್ಲಿ ತೊಡಗಿದ್ದ ಕಂಪೆನಿಯಾಗಿತ್ತಂತೆ. ಮಹಾಯುದ್ಧದ ಸಮಯದಲ್ಲಿ ಮಿಲಿಟರಿಗೆ ಬೂಟುಗಳನ್ನೂ ತಯಾರಿಸುತ್ತಿತ್ತಂತೆ! [:http://www.zfone.com/articles/a_id/54/history-of-nokia|(೧)]